<p>ಯೌವನಂ ಧನಸಂಪತ್ತಿಃ ಪ್ರಭುತ್ವಮವಿವೇಕಿತಾ ।</p>.<p>ಏಕೈಕಮಪ್ಯನರ್ಥಾಯ ಕಿಮು ಯತ್ರ ಚತುಷ್ಟಯಮ್ ।।</p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>’ತಾರುಣ್ಯ, ಹಣ, ಅಧಿಕಾರ ಮತ್ತು ಅವಿವೇಕ – ಇವುಗಳಲ್ಲಿ ಯಾವುದಾದರೂ ಒಂದೇ ಸಾಕು ಅನರ್ಥಕ್ಕೆ. ಇವು ನಾಲ್ಕೂ ಒಂದೇ ಕಡೆ ಸೇರಿತೆಂದರೆ ಆಗ ಏನೆಂದು ಹೇಳಲಾದೀತು?’</p>.<p>ಮನುಷ್ಯನಿಂದ ಯಾವ ಯಾವ ಸಂದರ್ಭದಲ್ಲಿ ಅನರ್ಥಗಳು ನಡೆಯುತ್ತವೆ ಎಂಬುದನ್ನು ಸುಭಾಷಿತ ಹೇಳುತ್ತಿದೆ.</p>.<p>ನಮ್ಮ ಶಕ್ತಿ ನಮಗೆ ಒಳಿತನ್ನು ಮಾಡುವಂತೆ ಕೆಡುಕನ್ನೂ ಮಾಡಬಲ್ಲದು. ಶಕ್ತಿಗೆ ಸಂಕೇತವಾಗಿ ಇಲ್ಲಿ ತಾರುಣ್ಯವನ್ನು ಹೇಳಲಾಗಿದೆ. ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಉಪಯೋಗಿಸಿಕೊಳ್ಳದಿದ್ದರೆ ಆಗ ಅನಾಹುತ ನಡೆಯವುದು ನಿಶ್ಚಿತ. ಇಲ್ಲಿ ಶಕ್ತಿಯನ್ನು ತಾರುಣ್ಯದೊಂದಿಗೆ ಜೋಡಿಸಿರುವುದಕ್ಕೂ ಕಾರಣವಿದೆ. ತಾರುಣ್ಯದಲ್ಲಿ ಅನುಭವದ ಪಾಕವನ್ನು ಕಾಣಲಾರೆವು; ಅಲ್ಲಿ ಬುದ್ಧಿಗಿಂತಲೂ ಶಕ್ತಿಯದ್ದೇ ಮೇಲಾಟ ಎನ್ನುವ ಕಾರಣದಿಂದ. ಹೀಗಾಗಿ ತಿಳಿವಳಿಕೆಯ ಜೊತೆಯಲ್ಲಿ ಇಲ್ಲದ ಶಕ್ತಿ ಎಂದಿಗೂ ಅಪಾಯವೇ ಹೌದು.</p>.<p>ಹಣ. ಇಂದು ನಮ್ಮ ಎಲ್ಲ ಆಲೋಚನೆಗಳ ಕೇಂದ್ರವಸ್ತುವೇ ದುಡ್ಡು. ಹಣ ಇದ್ದರೆ ಏನನ್ನೂ ಮಾಡಬಹುದು, ಏನನ್ನೂ ಕೊಳ್ಳಬಹುದು ಎಂಬ ಅಹಂಕಾರ ನಮ್ಮನ್ನು ಆವರಿಸಿದೆ. ಹೀಗಾಗಿಯೇ ಹಣದ ಹಿಂದೆ ಎಲ್ಲರೂ ಓಡುತ್ತಿರುವುದು.</p>.<p>ಅಧಿಕಾರ ಏನೆಲ್ಲ ಅನರ್ಥಗಳನ್ನು ಮಾಡಬಲ್ಲದು ಎಂಬುದನ್ನು ನಿತ್ಯ ನಾವು ಸಮಾಜದಲ್ಲಿ ನೋಡುತ್ತಿರುತ್ತೇವೆ. ಜನರ ಮೇಲೆ ದಬ್ಬಾಳಿಕೆ ನಡೆಸಲು, ತಮಗೆ ಬೇಕಾದ್ದನ್ನು ಕಬಳಿಸಲು ಅಧಿಕಾರದ ದುರುಪಯೋಗ ನಡೆಯುತ್ತದೆ. ನಮ್ಮ ದೇಶದಲ್ಲಂತೂ ಅಧಿಕಾರಕ್ಕೂ ಭ್ರಷ್ಟಾಚಾರಕ್ಕೂ ಇರುವ ಅಕ್ರಮಸಂಬಂಧ ನಮಗೆ ಗೊತ್ತಿರುವಂಥದ್ದೇ.</p>.<p>ಸುಭಾಷಿತ ಹೇಳುತ್ತಿರುವ ಕೊನೆಯ ಸಂಗತಿ ಅವಿವೇಕ. ಯಾವುದು ಸರಿ, ಯಾವುದು ತಪ್ಪು – ಎಂಬ ವಿಮರ್ಶೆಯನ್ನು ಕಳೆದುಕೊಂಡಿರುವ ಮಾನಸಿಕಸ್ಥಿತಿಯೇ ಅವಿವೇಕ. ಇದರ ಕಾರಣದಿಂದ ಏನೆಲ್ಲ ಅನರ್ಥಗಳು ನಡೆಯಬಹುದು ಎನ್ನುವುದು ನಮ್ಮ ಕಲ್ಪನೆಯನ್ನೂ ಮೀರಿರುವಂಥದ್ದು.</p>.<p>ಮೇಲೆ ಹೇಳಿರುವ ನಾಲ್ಕು ಸಂಗತಿಗಳೂ ಅನರ್ಥಪರಂಪರೆಗೆ ಕಾರಣವಾಗಬಲ್ಲದು. ಈ ಒಂದೊಂದರಿಂದ ಎದುರಾಗುವ ಅನಾಹುತಗಳನ್ನು ಎದುರಿಸುವುದೇ ಕಷ್ಟ; ಇನ್ನು ಈ ನಾಲ್ಕು ಒಂದೇ ಜಾಗದಲ್ಲಿ ಸೇರಿಕೊಂಡರೆ ಆಗ ಆಗುವ ಅನಾಹುತಗಳಿಗೆ ಕೊನೆಯೇ ಇರದು ಎಂಬ ಆತಂಕವನ್ನು ಸುಭಾಷಿತ ವ್ಯಕ್ತಪಡಿಸುತ್ತಿದೆ. ಇಂದಿನ ಹಲವರು ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು – ಸುಭಾಷಿತದ ಆತಂಕವನ್ನು ನಿಜಮಾಡುತ್ತಿರುವುದನ್ನು ನಾವು ಕೂಡ ಅನುಭವಿಸುತ್ತಲೇ ಇರುತ್ತೇವೆ, ಅಲ್ಲವೆ?</p>.<p>ಇನ್ನೊಂದು ಸಂಸ್ಕೃತಸುಭಾಷಿತ ಈ ದುಷ್ಟಕೂಟವನ್ನು ಇನ್ನೊಂದು ಉದಾಹರಣೆಯ ಮೂಲಕ ಕಟ್ಟಿಕೊಟ್ಟಿದೆ. ಅದರ ತಾತ್ಪರ್ಯ ಹೀಗೆ:</p>.<p>‘ಮೊದಲೇ ಕೋತಿ; ಈಗ ಅದು ಹೆಂಡವನ್ನೂ ಕುಡಿದಿದೆಯಂತೆ; ಅದರಳೊಗೆ ಭೂತವೂ ಪ್ರವೇಶ ಮಾಡಿತಂತೆ. ಅಷ್ಟರಲ್ಲಿ ಅದನ್ನು ಚೇಳೊಂದು ಕುಟುಕಿತು. ಆಗ ಆ ಕೋತಿಯ ಚೇಷ್ಟೆಯನ್ನು ಏನೆಂದು ವರ್ಣಿಸುವುದು?‘</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯೌವನಂ ಧನಸಂಪತ್ತಿಃ ಪ್ರಭುತ್ವಮವಿವೇಕಿತಾ ।</p>.<p>ಏಕೈಕಮಪ್ಯನರ್ಥಾಯ ಕಿಮು ಯತ್ರ ಚತುಷ್ಟಯಮ್ ।।</p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>’ತಾರುಣ್ಯ, ಹಣ, ಅಧಿಕಾರ ಮತ್ತು ಅವಿವೇಕ – ಇವುಗಳಲ್ಲಿ ಯಾವುದಾದರೂ ಒಂದೇ ಸಾಕು ಅನರ್ಥಕ್ಕೆ. ಇವು ನಾಲ್ಕೂ ಒಂದೇ ಕಡೆ ಸೇರಿತೆಂದರೆ ಆಗ ಏನೆಂದು ಹೇಳಲಾದೀತು?’</p>.<p>ಮನುಷ್ಯನಿಂದ ಯಾವ ಯಾವ ಸಂದರ್ಭದಲ್ಲಿ ಅನರ್ಥಗಳು ನಡೆಯುತ್ತವೆ ಎಂಬುದನ್ನು ಸುಭಾಷಿತ ಹೇಳುತ್ತಿದೆ.</p>.<p>ನಮ್ಮ ಶಕ್ತಿ ನಮಗೆ ಒಳಿತನ್ನು ಮಾಡುವಂತೆ ಕೆಡುಕನ್ನೂ ಮಾಡಬಲ್ಲದು. ಶಕ್ತಿಗೆ ಸಂಕೇತವಾಗಿ ಇಲ್ಲಿ ತಾರುಣ್ಯವನ್ನು ಹೇಳಲಾಗಿದೆ. ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಉಪಯೋಗಿಸಿಕೊಳ್ಳದಿದ್ದರೆ ಆಗ ಅನಾಹುತ ನಡೆಯವುದು ನಿಶ್ಚಿತ. ಇಲ್ಲಿ ಶಕ್ತಿಯನ್ನು ತಾರುಣ್ಯದೊಂದಿಗೆ ಜೋಡಿಸಿರುವುದಕ್ಕೂ ಕಾರಣವಿದೆ. ತಾರುಣ್ಯದಲ್ಲಿ ಅನುಭವದ ಪಾಕವನ್ನು ಕಾಣಲಾರೆವು; ಅಲ್ಲಿ ಬುದ್ಧಿಗಿಂತಲೂ ಶಕ್ತಿಯದ್ದೇ ಮೇಲಾಟ ಎನ್ನುವ ಕಾರಣದಿಂದ. ಹೀಗಾಗಿ ತಿಳಿವಳಿಕೆಯ ಜೊತೆಯಲ್ಲಿ ಇಲ್ಲದ ಶಕ್ತಿ ಎಂದಿಗೂ ಅಪಾಯವೇ ಹೌದು.</p>.<p>ಹಣ. ಇಂದು ನಮ್ಮ ಎಲ್ಲ ಆಲೋಚನೆಗಳ ಕೇಂದ್ರವಸ್ತುವೇ ದುಡ್ಡು. ಹಣ ಇದ್ದರೆ ಏನನ್ನೂ ಮಾಡಬಹುದು, ಏನನ್ನೂ ಕೊಳ್ಳಬಹುದು ಎಂಬ ಅಹಂಕಾರ ನಮ್ಮನ್ನು ಆವರಿಸಿದೆ. ಹೀಗಾಗಿಯೇ ಹಣದ ಹಿಂದೆ ಎಲ್ಲರೂ ಓಡುತ್ತಿರುವುದು.</p>.<p>ಅಧಿಕಾರ ಏನೆಲ್ಲ ಅನರ್ಥಗಳನ್ನು ಮಾಡಬಲ್ಲದು ಎಂಬುದನ್ನು ನಿತ್ಯ ನಾವು ಸಮಾಜದಲ್ಲಿ ನೋಡುತ್ತಿರುತ್ತೇವೆ. ಜನರ ಮೇಲೆ ದಬ್ಬಾಳಿಕೆ ನಡೆಸಲು, ತಮಗೆ ಬೇಕಾದ್ದನ್ನು ಕಬಳಿಸಲು ಅಧಿಕಾರದ ದುರುಪಯೋಗ ನಡೆಯುತ್ತದೆ. ನಮ್ಮ ದೇಶದಲ್ಲಂತೂ ಅಧಿಕಾರಕ್ಕೂ ಭ್ರಷ್ಟಾಚಾರಕ್ಕೂ ಇರುವ ಅಕ್ರಮಸಂಬಂಧ ನಮಗೆ ಗೊತ್ತಿರುವಂಥದ್ದೇ.</p>.<p>ಸುಭಾಷಿತ ಹೇಳುತ್ತಿರುವ ಕೊನೆಯ ಸಂಗತಿ ಅವಿವೇಕ. ಯಾವುದು ಸರಿ, ಯಾವುದು ತಪ್ಪು – ಎಂಬ ವಿಮರ್ಶೆಯನ್ನು ಕಳೆದುಕೊಂಡಿರುವ ಮಾನಸಿಕಸ್ಥಿತಿಯೇ ಅವಿವೇಕ. ಇದರ ಕಾರಣದಿಂದ ಏನೆಲ್ಲ ಅನರ್ಥಗಳು ನಡೆಯಬಹುದು ಎನ್ನುವುದು ನಮ್ಮ ಕಲ್ಪನೆಯನ್ನೂ ಮೀರಿರುವಂಥದ್ದು.</p>.<p>ಮೇಲೆ ಹೇಳಿರುವ ನಾಲ್ಕು ಸಂಗತಿಗಳೂ ಅನರ್ಥಪರಂಪರೆಗೆ ಕಾರಣವಾಗಬಲ್ಲದು. ಈ ಒಂದೊಂದರಿಂದ ಎದುರಾಗುವ ಅನಾಹುತಗಳನ್ನು ಎದುರಿಸುವುದೇ ಕಷ್ಟ; ಇನ್ನು ಈ ನಾಲ್ಕು ಒಂದೇ ಜಾಗದಲ್ಲಿ ಸೇರಿಕೊಂಡರೆ ಆಗ ಆಗುವ ಅನಾಹುತಗಳಿಗೆ ಕೊನೆಯೇ ಇರದು ಎಂಬ ಆತಂಕವನ್ನು ಸುಭಾಷಿತ ವ್ಯಕ್ತಪಡಿಸುತ್ತಿದೆ. ಇಂದಿನ ಹಲವರು ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು – ಸುಭಾಷಿತದ ಆತಂಕವನ್ನು ನಿಜಮಾಡುತ್ತಿರುವುದನ್ನು ನಾವು ಕೂಡ ಅನುಭವಿಸುತ್ತಲೇ ಇರುತ್ತೇವೆ, ಅಲ್ಲವೆ?</p>.<p>ಇನ್ನೊಂದು ಸಂಸ್ಕೃತಸುಭಾಷಿತ ಈ ದುಷ್ಟಕೂಟವನ್ನು ಇನ್ನೊಂದು ಉದಾಹರಣೆಯ ಮೂಲಕ ಕಟ್ಟಿಕೊಟ್ಟಿದೆ. ಅದರ ತಾತ್ಪರ್ಯ ಹೀಗೆ:</p>.<p>‘ಮೊದಲೇ ಕೋತಿ; ಈಗ ಅದು ಹೆಂಡವನ್ನೂ ಕುಡಿದಿದೆಯಂತೆ; ಅದರಳೊಗೆ ಭೂತವೂ ಪ್ರವೇಶ ಮಾಡಿತಂತೆ. ಅಷ್ಟರಲ್ಲಿ ಅದನ್ನು ಚೇಳೊಂದು ಕುಟುಕಿತು. ಆಗ ಆ ಕೋತಿಯ ಚೇಷ್ಟೆಯನ್ನು ಏನೆಂದು ವರ್ಣಿಸುವುದು?‘</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>