<p>ದಾನೇ ತಪಸಿ ಸತ್ಯೇ ವಾ ಯಸ್ಯ ನೋಚ್ಚರಿತಂ ಯಶಃ ।</p>.<p>ವಿದ್ಯಾಯಾಮರ್ಥಲಾಭೇ ವಾ ಮಾತುರುಚ್ಚಾರ ಏವ ಸಃ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ದಾನ, ತಪಸ್ಸು, ಸತ್ಯ, ವಿದ್ಯೆ, ಧನಾರ್ಜನೆ – ಇವುಗಳಲ್ಲಿ ಯಾವುದರಲ್ಲಿ ಒಂದರಲ್ಲಾದರೂಯಾವನು ಹೆಸರನ್ನು ಸಂಪಾದಿಸಿಲ್ಲವೋ ಅಂಥವನು ತಾಯಿಯ ಮಲವೇ ಸರಿ.‘</p>.<p>ಹೆತ್ತವರಿಗೆ ನಮ್ಮಿಂದ ಯಾವಾಗ ಸಂತೋಷವಾಗುತ್ತದೆ? ಸುಭಾಷಿತ ಅಂಥ ಸಂದರ್ಭಗಳನ್ನು ಇಲ್ಲಿ ಪಟ್ಟಿ ಹೇಳಿದೆ. ನಾವು ಕೀರ್ತಿವಂತರಾದಾಗ ಅವರು ಸಂತೋಷ ಪಡುತ್ತಾರೆ. ಕೀರ್ತಿವಂತರಾದ ಮಕ್ಕಳನ್ನು ನೋಡಿ ತಾಯಿ ಹೆಚ್ಚು ಸಂತೋಷಪಡುತ್ತಾಳೆ ಎನ್ನುವುದನ್ನೂ ಅದು ಹೇಳುತ್ತಿದೆ.</p>.<p>ಯಾವ ಮಾರ್ಗದಿಂದ ಕೀರ್ತಿಯನ್ನು ಸಂಪಾದಿಸಬೇಕು ಎನ್ನುವುದನ್ನೂ ಸುಭಾಷಿತ ಹೇಳಿದೆ.</p>.<p>ದಾನ, ತಪಸ್ಸು, ಸತ್ಯ, ವಿದ್ಯೆ, ಧನಾರ್ಜನೆ – ಇವುಗಳ ಮೂಲಕ ಕೀರ್ತಿಯನ್ನು ಸಂಪಾದಿಸಬೇಕು. ಇವೆಲ್ಲವೂ ಸಾಧನೆಗಳೇ ಹೌದು. ಎಲ್ಲವೂ ಕಷ್ಟಕರವಾದ ಸಾಧನೆಗಳೇ.</p>.<p>ನಾವು ಎಷ್ಟೆಲ್ಲ ರೀತಿಯಲ್ಲಿ ಹೆಸರನ್ನು ಸಂಪಾದಿಸಬಹುದು ಎನ್ನುವುದಕ್ಕೂ ಸುಭಾಷಿತ ಮಾರ್ಗದರ್ಶಕವಾಗಿದೆ.</p>.<p>ದಾನವನ್ನು ನಮ್ಮ ಸಂಸ್ಕೃತಿಯಲ್ಲಿ ತುಂಬ ಗೌರವದಿಂದ ಕಾಣಲಾಗಿದೆ. ಸಮಾಜವನ್ನು ನಮ್ಮ ಮನೆಯ ಒಂದು ಭಾಗವಾಗಿಯೇ ಸ್ವೀಕರಿಸುವಂಥ ಭಾವವೈಶಾಲ್ಯವೇ ದಾನಬುದ್ಧಿಯಲ್ಲಿ ಕಾಣುವುದು. ಹೀಗೆ ಸಮಾಜಕ್ಕೆ ಕೊಡುಗೆ ನೀಡಿದವರನ್ನು ಸಹಜವಾಗಿಯೇ ಅದು ಸ್ಮರಿಸಿಕೊಳ್ಳುತ್ತದೆ.</p>.<p>ನಮ್ಮ ಆತ್ಮಸಂಸ್ಕಾರದ ಸಾಧನೆಯ ರೂಪವೇ ತಪಸ್ಸು. ಇದರಲ್ಲೂ ಹಲವು ವಿಧದ ತಪಸ್ಸುಗಳಿವೆ. ಇದು ನಮ್ಮ ಭಾವ–ಬುದ್ಧಿ–ಶರೀರಗಳನ್ನು ಎಂಥ ಪರಿಸ್ಥಿತಿಗೂ ಸಿದ್ಧಗೊಳಿಸುತ್ತದೆ. ತಪಸ್ವಿಗಳನ್ನು ಲೋಕ ಖಂಡಿತವಾಗಿಯೂ ಕೊಂಡಾಡುತ್ತದೆ.</p>.<p>ಸತ್ಯಸಂಧನನ್ನು ಜಗತ್ತು ಹೊಗಳುವುದು ಸಹಜ. ಸತ್ಯವನ್ನು ಹೇಳುವ ವ್ರತವನ್ನು ಹಿಡಿಯವುದೂ ಅದನ್ನು ಅನುಷ್ಠಾನಕ್ಕೆ ತರುವುದೂ ಸುಲಭವಲ್ಲ. ಸತ್ಯವನ್ನು ಹೇಳುವುದು ಕೂಡ ತಪಸ್ಸಿನ ಒಂದು ರೀತಿಯೇ.</p>.<p>ನಾವು ವಿದ್ಯಾವಂತರಾದಾಗಲೂ ಹೆತ್ತವರು ಸಂಭ್ರಮಿಸುತ್ತಾರೆ. ವಿದ್ಯೆ ನಮಗೆ ಗಟ್ಟಿಯಾದ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ಇಂಥ ವ್ಯಕ್ತಿತ್ವವನ್ನು ಸಮಾಜ ಗುರುತಿಸಿ ಗೌರವಿಸುತ್ತದೆ.</p>.<p>ಧನಾರ್ಜನೆಯನ್ನು ಸುಭಾಷಿತ ಸಾಧನೆ ಎಂದು ಗುರುತಿಸಿದೆ. ಹೌದು, ಸರಿಯಾದ ಮಾರ್ಗದಲ್ಲಿ ಧನವಂತರಾಗುವುದು ಕೂಡ ಸಾಧನೆಯೇ ಆಗುತ್ತದೆ. ನಮ್ಮಲ್ಲಿ ಹಣ ಸೇರಿದ ಮಾತ್ರಕ್ಕೆ ಕೀರ್ತಿ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ; ಹಣವನ್ನು ನಾವು ನ್ಯಾಯಮಾರ್ಗದಲ್ಲಿಯೇ ಸಂಪಾದಿಸಬೇಕು. ಆಗ ಸಮಾಜ ನಮ್ಮನ್ನು ಗೌರವದಿಂದ ಕಾಣುತ್ತದೆ.</p>.<p>ನಾಲ್ಕು ಜನರು ನಮ್ಮ ಸಾಧನೆಯನ್ನು ಗುರುತಿಸಿ, ಹೊಗಳುವಂಥ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವುದು ಕಷ್ಟಸಾಧ್ಯವಾದುದು. ಇಂಥ ಸಾಧನೆಯನ್ನು ಮಾಡಿದಾಗಲೇ ಕೀರ್ತಿ ನಮ್ಮ ಕೈಹಿಡಿಯುವುದು. ಕೀರ್ತಿವಂತರಾಗುವ ಸಂಕಲ್ಪವನ್ನು ಇಂದೇ ಮಾಡೋಣ. ತಾಯಿಯ ಋಣವನ್ನು ತೀರಿಸುವ ಸಂಕಲ್ಪವನ್ನೂ ಮಾಡೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾನೇ ತಪಸಿ ಸತ್ಯೇ ವಾ ಯಸ್ಯ ನೋಚ್ಚರಿತಂ ಯಶಃ ।</p>.<p>ವಿದ್ಯಾಯಾಮರ್ಥಲಾಭೇ ವಾ ಮಾತುರುಚ್ಚಾರ ಏವ ಸಃ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ದಾನ, ತಪಸ್ಸು, ಸತ್ಯ, ವಿದ್ಯೆ, ಧನಾರ್ಜನೆ – ಇವುಗಳಲ್ಲಿ ಯಾವುದರಲ್ಲಿ ಒಂದರಲ್ಲಾದರೂಯಾವನು ಹೆಸರನ್ನು ಸಂಪಾದಿಸಿಲ್ಲವೋ ಅಂಥವನು ತಾಯಿಯ ಮಲವೇ ಸರಿ.‘</p>.<p>ಹೆತ್ತವರಿಗೆ ನಮ್ಮಿಂದ ಯಾವಾಗ ಸಂತೋಷವಾಗುತ್ತದೆ? ಸುಭಾಷಿತ ಅಂಥ ಸಂದರ್ಭಗಳನ್ನು ಇಲ್ಲಿ ಪಟ್ಟಿ ಹೇಳಿದೆ. ನಾವು ಕೀರ್ತಿವಂತರಾದಾಗ ಅವರು ಸಂತೋಷ ಪಡುತ್ತಾರೆ. ಕೀರ್ತಿವಂತರಾದ ಮಕ್ಕಳನ್ನು ನೋಡಿ ತಾಯಿ ಹೆಚ್ಚು ಸಂತೋಷಪಡುತ್ತಾಳೆ ಎನ್ನುವುದನ್ನೂ ಅದು ಹೇಳುತ್ತಿದೆ.</p>.<p>ಯಾವ ಮಾರ್ಗದಿಂದ ಕೀರ್ತಿಯನ್ನು ಸಂಪಾದಿಸಬೇಕು ಎನ್ನುವುದನ್ನೂ ಸುಭಾಷಿತ ಹೇಳಿದೆ.</p>.<p>ದಾನ, ತಪಸ್ಸು, ಸತ್ಯ, ವಿದ್ಯೆ, ಧನಾರ್ಜನೆ – ಇವುಗಳ ಮೂಲಕ ಕೀರ್ತಿಯನ್ನು ಸಂಪಾದಿಸಬೇಕು. ಇವೆಲ್ಲವೂ ಸಾಧನೆಗಳೇ ಹೌದು. ಎಲ್ಲವೂ ಕಷ್ಟಕರವಾದ ಸಾಧನೆಗಳೇ.</p>.<p>ನಾವು ಎಷ್ಟೆಲ್ಲ ರೀತಿಯಲ್ಲಿ ಹೆಸರನ್ನು ಸಂಪಾದಿಸಬಹುದು ಎನ್ನುವುದಕ್ಕೂ ಸುಭಾಷಿತ ಮಾರ್ಗದರ್ಶಕವಾಗಿದೆ.</p>.<p>ದಾನವನ್ನು ನಮ್ಮ ಸಂಸ್ಕೃತಿಯಲ್ಲಿ ತುಂಬ ಗೌರವದಿಂದ ಕಾಣಲಾಗಿದೆ. ಸಮಾಜವನ್ನು ನಮ್ಮ ಮನೆಯ ಒಂದು ಭಾಗವಾಗಿಯೇ ಸ್ವೀಕರಿಸುವಂಥ ಭಾವವೈಶಾಲ್ಯವೇ ದಾನಬುದ್ಧಿಯಲ್ಲಿ ಕಾಣುವುದು. ಹೀಗೆ ಸಮಾಜಕ್ಕೆ ಕೊಡುಗೆ ನೀಡಿದವರನ್ನು ಸಹಜವಾಗಿಯೇ ಅದು ಸ್ಮರಿಸಿಕೊಳ್ಳುತ್ತದೆ.</p>.<p>ನಮ್ಮ ಆತ್ಮಸಂಸ್ಕಾರದ ಸಾಧನೆಯ ರೂಪವೇ ತಪಸ್ಸು. ಇದರಲ್ಲೂ ಹಲವು ವಿಧದ ತಪಸ್ಸುಗಳಿವೆ. ಇದು ನಮ್ಮ ಭಾವ–ಬುದ್ಧಿ–ಶರೀರಗಳನ್ನು ಎಂಥ ಪರಿಸ್ಥಿತಿಗೂ ಸಿದ್ಧಗೊಳಿಸುತ್ತದೆ. ತಪಸ್ವಿಗಳನ್ನು ಲೋಕ ಖಂಡಿತವಾಗಿಯೂ ಕೊಂಡಾಡುತ್ತದೆ.</p>.<p>ಸತ್ಯಸಂಧನನ್ನು ಜಗತ್ತು ಹೊಗಳುವುದು ಸಹಜ. ಸತ್ಯವನ್ನು ಹೇಳುವ ವ್ರತವನ್ನು ಹಿಡಿಯವುದೂ ಅದನ್ನು ಅನುಷ್ಠಾನಕ್ಕೆ ತರುವುದೂ ಸುಲಭವಲ್ಲ. ಸತ್ಯವನ್ನು ಹೇಳುವುದು ಕೂಡ ತಪಸ್ಸಿನ ಒಂದು ರೀತಿಯೇ.</p>.<p>ನಾವು ವಿದ್ಯಾವಂತರಾದಾಗಲೂ ಹೆತ್ತವರು ಸಂಭ್ರಮಿಸುತ್ತಾರೆ. ವಿದ್ಯೆ ನಮಗೆ ಗಟ್ಟಿಯಾದ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ಇಂಥ ವ್ಯಕ್ತಿತ್ವವನ್ನು ಸಮಾಜ ಗುರುತಿಸಿ ಗೌರವಿಸುತ್ತದೆ.</p>.<p>ಧನಾರ್ಜನೆಯನ್ನು ಸುಭಾಷಿತ ಸಾಧನೆ ಎಂದು ಗುರುತಿಸಿದೆ. ಹೌದು, ಸರಿಯಾದ ಮಾರ್ಗದಲ್ಲಿ ಧನವಂತರಾಗುವುದು ಕೂಡ ಸಾಧನೆಯೇ ಆಗುತ್ತದೆ. ನಮ್ಮಲ್ಲಿ ಹಣ ಸೇರಿದ ಮಾತ್ರಕ್ಕೆ ಕೀರ್ತಿ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ; ಹಣವನ್ನು ನಾವು ನ್ಯಾಯಮಾರ್ಗದಲ್ಲಿಯೇ ಸಂಪಾದಿಸಬೇಕು. ಆಗ ಸಮಾಜ ನಮ್ಮನ್ನು ಗೌರವದಿಂದ ಕಾಣುತ್ತದೆ.</p>.<p>ನಾಲ್ಕು ಜನರು ನಮ್ಮ ಸಾಧನೆಯನ್ನು ಗುರುತಿಸಿ, ಹೊಗಳುವಂಥ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವುದು ಕಷ್ಟಸಾಧ್ಯವಾದುದು. ಇಂಥ ಸಾಧನೆಯನ್ನು ಮಾಡಿದಾಗಲೇ ಕೀರ್ತಿ ನಮ್ಮ ಕೈಹಿಡಿಯುವುದು. ಕೀರ್ತಿವಂತರಾಗುವ ಸಂಕಲ್ಪವನ್ನು ಇಂದೇ ಮಾಡೋಣ. ತಾಯಿಯ ಋಣವನ್ನು ತೀರಿಸುವ ಸಂಕಲ್ಪವನ್ನೂ ಮಾಡೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>