<p><em><strong>ಪ್ರಾತರ್ದ್ಯೂತಪ್ರಸಂಗೇನ ಮಧ್ಯಾಹ್ನೇ ಸ್ತ್ರೀಪ್ರಸಂಗತಃ ।</strong></em><br /><em><strong>ರಾತ್ರೌ ಚೌರ್ಯಪ್ರಸಂಗೇನ ಕಾಲೋ ಗಚ್ಛತಿ ಧೀಮತಾಮ್ ।।</strong></em></p>.<p><strong>ಇದರ ತಾತ್ಪರ್ಯ ಹೀಗೆ:</strong>‘ಬುದ್ಧಿವಂತರು ಬೆಳಗಿನ ಹೊತ್ತನ್ನು ಜೂಜಾಡುವುದರಿಂದಲೂ, ಮಧ್ಯಾಹ್ನವನ್ನು ಸ್ತ್ರೀಸಂಬಂಧಿಯಾದ ವ್ಯವಹಾರದಿಂದಲೂ, ರಾತ್ರಿಯಲ್ಲಿ ಕಳ್ಳತನದ ಚರ್ಚೆಗಳಿಂದಲೂ ಅವರ ಕಾಲವನ್ನು ಕಳೆಯುತ್ತಾರೆ.’</p>.<p>ಇದೊಂದು ಚಮತ್ಕಾರದ ಶ್ಲೋಕ, ಮೇಲ್ನೋಟಕ್ಕೆ ಕಾಣುವಂಥ ಅರ್ಥಕ್ಕಿಂತಲೂ ಭಿನ್ನವಾದ ಅರ್ಥವನ್ನು ಹೊಂದಿರುವ ಶ್ಲೋಕ. ಇದರ ವಾಚ್ಯಾರ್ಥವನ್ನಷ್ಟೆ ಸ್ವೀಕರಿಸಬಾರದು. ನಾವು ಮಾಡಬಾರದ ಸಂಗತಿಗಳನ್ನೇ ‘ಮಾಡಿರಿ’ ಎಂದು ಈ ವಾಚ್ಯಾರ್ಥ ಹೇಳುತ್ತಿದೆ. ಜೂಜಾಡುವುದರಿಂದ ನಾವು ನಮ್ಮ ಆಸ್ತಿಯನ್ನೂ ಕೀರ್ತಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ.</p>.<p>ಹೀಗಾಗಿ ಜೂಜಾಡುವುದು ತಪ್ಪು. ಸ್ತ್ರೀಸಂಬಂಧ ವ್ಯವಹಾರ ಕೂಡ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ. ಹೀಗಾಗಿ ಅಂಥ ವ್ಯವಹಾರಗಳಿಂದಲೂ ದೂರ ಇರಬೇಕು. ಇನ್ನು ಕಳ್ಳತನ. ಕಳ್ಳತನ ನಮ್ಮ ಮಾನಹಾನಿಗೂ ಕಾರಣವಾಗುತ್ತದೆ; ಮಾತ್ರವಲ್ಲ, ಸೆರೆಮನೆಯ ರುಚಿಯನ್ನೂ ನೋಡಬೇಕಾಗುತ್ತದೆ. ಹೀಗಾಗಿ ಕಳ್ಳತನದಲ್ಲಿ ತೊಡಗದಿರುವುದೇ ಬುದ್ಧಿವಂತಿಕೆಯ ಲಕ್ಷಣ. ಆದರೆ ಈ ಸುಭಾಷಿತ ಮಾತ್ರ ಜೂಜನ್ನೂ ಸ್ತ್ರೀವ್ಯವಹಾರವನ್ನೂ ಕಳ್ಳತನವನ್ನೂ ಮಾಡಲು ಉತ್ತೇಜಿಸುತ್ತಿದೆ; ಅದಕ್ಕೆ ತಕ್ಕ ಕಾಲವನ್ನು ಕೂಡ ಸೂಚಿಸುತ್ತಿದೆ. ಹಾಗಾದರೆ ಇದರ ಸ್ವಾರಸ್ಯವೇನು?</p>.<p>ಜೂಜಾಟದ ಮೂಲಕ ಈ ಶ್ಲೋಕ ಸೂಚಿಸುತ್ತಿರುವುದು ಮಹಾಭಾರತವನ್ನು. ಮಹಾಭಾರತದಲ್ಲಿ ತುಂಬ ಮುಖ್ಯವಾದ ಪ್ರಸಂಗವೇ ಕೌರವರು–ಪಾಂಡವರು ಜೂಜಾಡಿದ ಪ್ರಸಂಗ. ಸ್ತ್ರೀಸಂಬಂಧವ್ಯವಹಾರ ಎಂದರೆ ರಾಮಾಯಣದ ಕಥೆಯ ಸೂಚನೆ; ಸೀತೆಯನ್ನು ರಾವಣ ಅಪಹರಿಸಿದದ್ದನ್ನು ಇದು ಹೇಳುತ್ತಿದೆ. ಕಳ್ಳತನದ ಪ್ರಸಂಗ ಎಂದರೆ ಭಾಗವತ; ಶ್ರೀಕೃಷ್ಣನು ಬೆಣ್ಣೆಯನ್ನು ಕದ್ದ ಪ್ರಸಂಗ ಅಲ್ಲಿ ಪ್ರಸಿದ್ಧವಾಗಿದೆಯಷ್ಟೆ. ಆದುದರಿಂದ ನಾವು ಬೆಳಗ್ಗೆ ಮಹಾಭಾರತವನ್ನೂ, ಮಧ್ಯಾಹ್ನ ರಾಮಾಯಣವನ್ನೂ, ರಾತ್ರಿ ಭಾಗವತವನ್ನೂ ಓದಬೇಕು, ಅಧ್ಯಯನ ಮಾಡಬೇಕು; ಅವುಗಳ ಶ್ರವಣ–ಮನನಗಳನನ್ನು ಮಾಡಬೇಕು ಎಂದು ಸುಭಾಷಿತ ಸೂಚಿಸುತ್ತಿದೆ.</p>.<p>ರಾಮಾಯಣ, ಮಹಾಭಾರತ ಮತ್ತು ಭಾಗವತ – ಇವು ನಮ್ಮ ಸಂಸ್ಕೃತಿಯ ಸ್ವರೂಪವನ್ನು ತಿಳಿಸಿಕೊಂಡುವಂಥವು; ನಮ್ಮ ವ್ಯಕ್ತಿತ್ವಮಿರ್ಮಾಣಕ್ಕೂ ಕಾರಣವಾಗುವಂಥವು; ಪುರುಷಾರ್ಥಗಳನ್ನು ತಿಳಿಸಿಕೊಡುವಂಥವು. ಇವುಗಳ ನಿರಂತರ ಅನುಸಂಧಾನವೇ ನಮ್ಮ ನಿತ್ಯದ ಚಟುವಟಿಕೆ ಆಗಬೇಕು ಎಂಬುದು ಸುಭಾಷಿತದ ನಿಲವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಪ್ರಾತರ್ದ್ಯೂತಪ್ರಸಂಗೇನ ಮಧ್ಯಾಹ್ನೇ ಸ್ತ್ರೀಪ್ರಸಂಗತಃ ।</strong></em><br /><em><strong>ರಾತ್ರೌ ಚೌರ್ಯಪ್ರಸಂಗೇನ ಕಾಲೋ ಗಚ್ಛತಿ ಧೀಮತಾಮ್ ।।</strong></em></p>.<p><strong>ಇದರ ತಾತ್ಪರ್ಯ ಹೀಗೆ:</strong>‘ಬುದ್ಧಿವಂತರು ಬೆಳಗಿನ ಹೊತ್ತನ್ನು ಜೂಜಾಡುವುದರಿಂದಲೂ, ಮಧ್ಯಾಹ್ನವನ್ನು ಸ್ತ್ರೀಸಂಬಂಧಿಯಾದ ವ್ಯವಹಾರದಿಂದಲೂ, ರಾತ್ರಿಯಲ್ಲಿ ಕಳ್ಳತನದ ಚರ್ಚೆಗಳಿಂದಲೂ ಅವರ ಕಾಲವನ್ನು ಕಳೆಯುತ್ತಾರೆ.’</p>.<p>ಇದೊಂದು ಚಮತ್ಕಾರದ ಶ್ಲೋಕ, ಮೇಲ್ನೋಟಕ್ಕೆ ಕಾಣುವಂಥ ಅರ್ಥಕ್ಕಿಂತಲೂ ಭಿನ್ನವಾದ ಅರ್ಥವನ್ನು ಹೊಂದಿರುವ ಶ್ಲೋಕ. ಇದರ ವಾಚ್ಯಾರ್ಥವನ್ನಷ್ಟೆ ಸ್ವೀಕರಿಸಬಾರದು. ನಾವು ಮಾಡಬಾರದ ಸಂಗತಿಗಳನ್ನೇ ‘ಮಾಡಿರಿ’ ಎಂದು ಈ ವಾಚ್ಯಾರ್ಥ ಹೇಳುತ್ತಿದೆ. ಜೂಜಾಡುವುದರಿಂದ ನಾವು ನಮ್ಮ ಆಸ್ತಿಯನ್ನೂ ಕೀರ್ತಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ.</p>.<p>ಹೀಗಾಗಿ ಜೂಜಾಡುವುದು ತಪ್ಪು. ಸ್ತ್ರೀಸಂಬಂಧ ವ್ಯವಹಾರ ಕೂಡ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ. ಹೀಗಾಗಿ ಅಂಥ ವ್ಯವಹಾರಗಳಿಂದಲೂ ದೂರ ಇರಬೇಕು. ಇನ್ನು ಕಳ್ಳತನ. ಕಳ್ಳತನ ನಮ್ಮ ಮಾನಹಾನಿಗೂ ಕಾರಣವಾಗುತ್ತದೆ; ಮಾತ್ರವಲ್ಲ, ಸೆರೆಮನೆಯ ರುಚಿಯನ್ನೂ ನೋಡಬೇಕಾಗುತ್ತದೆ. ಹೀಗಾಗಿ ಕಳ್ಳತನದಲ್ಲಿ ತೊಡಗದಿರುವುದೇ ಬುದ್ಧಿವಂತಿಕೆಯ ಲಕ್ಷಣ. ಆದರೆ ಈ ಸುಭಾಷಿತ ಮಾತ್ರ ಜೂಜನ್ನೂ ಸ್ತ್ರೀವ್ಯವಹಾರವನ್ನೂ ಕಳ್ಳತನವನ್ನೂ ಮಾಡಲು ಉತ್ತೇಜಿಸುತ್ತಿದೆ; ಅದಕ್ಕೆ ತಕ್ಕ ಕಾಲವನ್ನು ಕೂಡ ಸೂಚಿಸುತ್ತಿದೆ. ಹಾಗಾದರೆ ಇದರ ಸ್ವಾರಸ್ಯವೇನು?</p>.<p>ಜೂಜಾಟದ ಮೂಲಕ ಈ ಶ್ಲೋಕ ಸೂಚಿಸುತ್ತಿರುವುದು ಮಹಾಭಾರತವನ್ನು. ಮಹಾಭಾರತದಲ್ಲಿ ತುಂಬ ಮುಖ್ಯವಾದ ಪ್ರಸಂಗವೇ ಕೌರವರು–ಪಾಂಡವರು ಜೂಜಾಡಿದ ಪ್ರಸಂಗ. ಸ್ತ್ರೀಸಂಬಂಧವ್ಯವಹಾರ ಎಂದರೆ ರಾಮಾಯಣದ ಕಥೆಯ ಸೂಚನೆ; ಸೀತೆಯನ್ನು ರಾವಣ ಅಪಹರಿಸಿದದ್ದನ್ನು ಇದು ಹೇಳುತ್ತಿದೆ. ಕಳ್ಳತನದ ಪ್ರಸಂಗ ಎಂದರೆ ಭಾಗವತ; ಶ್ರೀಕೃಷ್ಣನು ಬೆಣ್ಣೆಯನ್ನು ಕದ್ದ ಪ್ರಸಂಗ ಅಲ್ಲಿ ಪ್ರಸಿದ್ಧವಾಗಿದೆಯಷ್ಟೆ. ಆದುದರಿಂದ ನಾವು ಬೆಳಗ್ಗೆ ಮಹಾಭಾರತವನ್ನೂ, ಮಧ್ಯಾಹ್ನ ರಾಮಾಯಣವನ್ನೂ, ರಾತ್ರಿ ಭಾಗವತವನ್ನೂ ಓದಬೇಕು, ಅಧ್ಯಯನ ಮಾಡಬೇಕು; ಅವುಗಳ ಶ್ರವಣ–ಮನನಗಳನನ್ನು ಮಾಡಬೇಕು ಎಂದು ಸುಭಾಷಿತ ಸೂಚಿಸುತ್ತಿದೆ.</p>.<p>ರಾಮಾಯಣ, ಮಹಾಭಾರತ ಮತ್ತು ಭಾಗವತ – ಇವು ನಮ್ಮ ಸಂಸ್ಕೃತಿಯ ಸ್ವರೂಪವನ್ನು ತಿಳಿಸಿಕೊಂಡುವಂಥವು; ನಮ್ಮ ವ್ಯಕ್ತಿತ್ವಮಿರ್ಮಾಣಕ್ಕೂ ಕಾರಣವಾಗುವಂಥವು; ಪುರುಷಾರ್ಥಗಳನ್ನು ತಿಳಿಸಿಕೊಡುವಂಥವು. ಇವುಗಳ ನಿರಂತರ ಅನುಸಂಧಾನವೇ ನಮ್ಮ ನಿತ್ಯದ ಚಟುವಟಿಕೆ ಆಗಬೇಕು ಎಂಬುದು ಸುಭಾಷಿತದ ನಿಲವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>