<p><strong>ಕಿಂ ತಯಾ ಕ್ರಿಯತೇ ಧೇನ್ವಾ ಯಾ ನ ಸೂತೇ ನ ದುಗ್ಧದಾ ।</strong></p>.<p><strong>ಕೋsರ್ಥಃ ಪುತ್ರೇಣ ಜಾತೇನ ಯೋ ನ ವಿದ್ವನ್ನ ಭಕ್ತಿಮಾನ್ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಕರುವನ್ನು ಹಾಕದ ಅಥವಾ ಹಾಲನ್ನು ಕೊಡದ ಹಸುವಿನಿಂದ ಏನು ತಾನೇ ಮಾಡಲಾದೀತು? ಇತ್ತ ವಿದ್ವಾಂಸನೂ ಆಗಿರದೆ, ಅತ್ತ ಭಕ್ತಿವಂತನೂ ಆಗದ ಮಗನು ಹುಟ್ಟಿದರೆ ಅವನಿಂದ ಏನು ತಾನೆ ಸಾರ್ಥಕ?‘</p>.<p>ನಾವು ಹುಟ್ಟಿದ ಮೇಲೆ ಪ್ರಯೋಜಕರು ಆಗಬೇಕು; ಪ್ರಯೋಜಕರಾಗದವರ ಹುಟ್ಟೇ ವ್ಯರ್ಥ ಎಂದು ಸುಭಾಷಿತ ಹೇಳುತ್ತಿದೆ.</p>.<p>ಹಸುವನ್ನು ಸಾಕುವುದು ನಾವು ಏಕೆ? ಅದು ನಮಗೆ ಪ್ರಯೋಜನಕಾರಿ ಎಂದು ತಾನೆ? ಹಸುವು ಕರುವನ್ನು ಹಾಕುತ್ತದೆ; ಅ ಬಳಿಕ ಅದು ನಮಗೆ ಹಾಲನ್ನು ಕೊಡುತ್ತದೆ; ಸಗಣಿಯನ್ನೂ ಕೊಡುತ್ತಲೇ ಇರುತ್ತದೆ. ಈ ಎಲ್ಲ ಕಾರಣಗಳಿಂದಲೇ ನಾವು ಅದನ್ನು ಪೋಷಿಸುವುದು ತಾನೆ? ಹೀಗಲ್ಲದೆ ನಾವು ಹಸು ಒಂದು ಸಾಧುಪ್ರಾಣಿ; ಅದನ್ನು ಸಾಕುವುದು ನಮ್ಮ ಧರ್ಮ ಎಂದು ಸಾಕುತ್ತಿಲ್ಲವಲ್ಲವೆ?</p>.<p>ಇದು ಕೇವಲ ಹಸುವಿನ ವಿಷಯದಲ್ಲಿ ಮಾತ್ರವಲ್ಲ, ನಮ್ಮ ಎಲ್ಲ ಚುವಟಿಕೆಗಳಲ್ಲೂ ಈ ಮನೋಧರ್ಮವನ್ನೇ ಕಾಣುವಂಥದ್ದು.</p>.<p>ನಾವು ಒಂದು ಗಿಡವನ್ನು ನಾಟಿದರೂ, ಅದರಿಂದ ನಮಗೆ ಪ್ರಯೋಜನ ಇದೆ – ಎಂಬ ಚಿಂತನೆಯೇ ಕೆಲಸಮಾಡಿರುತ್ತದೆ. ಅಷ್ಟೇಕೆ, ಆ ಗಿಡವನ್ನು ಕಿತ್ತು ಒಂದು ಜಾಗದಲ್ಲಿ ಸಂಗ್ರಹಿಸುವಾಗಲೂ ಇಂಥ ಚಿಂತನೆಯೇ ನಮ್ಮಲ್ಲಿ ಎಚ್ಚರವಾಗಿರುತ್ತದೆ. ಗಿಡ ಬೆಳೆದಾಗ ಫಲ ಕೊಡುತ್ತದೆ; ಗಿಡ ಕೊಳೆತಾಗ ಗೊಬ್ಬರವಾಗುತ್ತದೆ. ಇದು ನಮ್ಮ ಲೆಕ್ಕಾಚಾರ.</p>.<p>ಹೀಗೆಂದು ಈ ಲೆಕ್ಕಾಚಾರ ತಪ್ಪೆಂದು ಹೇಳಲೂ ಆಗದು. ಈ ಲೆಕ್ಕಾಚಾರ ತಪ್ಪಿದರೆ ಆಗ ಜಗತ್ತಿನ ಚಟುವಟಿಕೆಗಳೇ ಸ್ತಬ್ಧವಾಗಿಬಿಡುತ್ತವೆ. ‘ಪ್ರಯೋಜನಮನುದ್ದಿಶ್ಯ ನ ಮಂದೋಪಿ ಪ್ರವರ್ತತೇ‘ ಎಂಬ ಮಾತೊಂದು ಇದೆ. ಪ್ರಯೋಜನವನ್ನು ಉದ್ದೇಶದಲ್ಲಿಟ್ಟುಕೊಳ್ಳದೆ ದಡ್ಡ ಕೂಡ ಕೆಲಸದಲ್ಲಿ ತೊಡಗುವುದಿಲ್ಲ – ಎಂಬುದು ಇದರ ತಾತ್ಪರ್ಯ.</p>.<p>ಹೀಗೆ ಜಗತ್ತಿನ ಎಲ್ಲ ವಿದ್ಯಮಾನಗಳೂ ಪ್ರಯೋಜನದ ಕಡೆಗೇ ಹೆಜ್ಜೆಹಾಕುತ್ತಿರುವಾಗ ನಾವು ಮಾತ್ರ ಅದಕ್ಕಿಂತಲೂ ವಿರುದ್ಧ ದಿಕ್ಕಿನಲ್ಲಿ ನಡೆಯಲು ಸಾಧ್ಯವೆ? ಅಂತೆಯೇ, ನಮ್ಮ ಮಕ್ಕಳು ಕೂಡ ಪ್ರಯೋಜಕರಾಗಬೇಕು ಎಂದು ನಾವು ಬಯಸುವುದು ತಪ್ಪಲ್ಲವಷ್ಟೆ. ಅದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.</p>.<p>ನಮ್ಮ ಮಕ್ಕಳು ವಿದ್ಯಾವಂತರಾಗಬೇಕು; ಅದರಿಂದ ಕುಟುಂಬಕ್ಕೂ ಸಮಾಜಕ್ಕೂ ಒಳಿತಾಗುತ್ತದೆ. ಅದಿಲ್ಲದಿದ್ದರೆ ಅವರಿಗೆ ಕುಟುಂಬದ ಬಗ್ಗೆಯಾದರೂ ಅಪರಿಮಿತ ಪ್ರೀತಿ ಇರಬೇಕು; ಇದನ್ನೇ ಸುಭಾಷಿತ ಇಲ್ಲಿ ಭಕ್ತಿ ಎಂದು ಕರೆದಿರುವುದು. ಹೀಗಲ್ಲದೆ ಯಾವುದಕ್ಕೂ ಯಾರಿಗೂ ಪ್ರಯೋಜನಕ್ಕೆ ಬಾರದ ಮಕ್ಕಳು, ಅವರು ಹುಟ್ಟಿಯೂ ವ್ಯರ್ಥವಷ್ಟೆ ಎಂದು ಅದು ಘೋಷಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಿಂ ತಯಾ ಕ್ರಿಯತೇ ಧೇನ್ವಾ ಯಾ ನ ಸೂತೇ ನ ದುಗ್ಧದಾ ।</strong></p>.<p><strong>ಕೋsರ್ಥಃ ಪುತ್ರೇಣ ಜಾತೇನ ಯೋ ನ ವಿದ್ವನ್ನ ಭಕ್ತಿಮಾನ್ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಕರುವನ್ನು ಹಾಕದ ಅಥವಾ ಹಾಲನ್ನು ಕೊಡದ ಹಸುವಿನಿಂದ ಏನು ತಾನೇ ಮಾಡಲಾದೀತು? ಇತ್ತ ವಿದ್ವಾಂಸನೂ ಆಗಿರದೆ, ಅತ್ತ ಭಕ್ತಿವಂತನೂ ಆಗದ ಮಗನು ಹುಟ್ಟಿದರೆ ಅವನಿಂದ ಏನು ತಾನೆ ಸಾರ್ಥಕ?‘</p>.<p>ನಾವು ಹುಟ್ಟಿದ ಮೇಲೆ ಪ್ರಯೋಜಕರು ಆಗಬೇಕು; ಪ್ರಯೋಜಕರಾಗದವರ ಹುಟ್ಟೇ ವ್ಯರ್ಥ ಎಂದು ಸುಭಾಷಿತ ಹೇಳುತ್ತಿದೆ.</p>.<p>ಹಸುವನ್ನು ಸಾಕುವುದು ನಾವು ಏಕೆ? ಅದು ನಮಗೆ ಪ್ರಯೋಜನಕಾರಿ ಎಂದು ತಾನೆ? ಹಸುವು ಕರುವನ್ನು ಹಾಕುತ್ತದೆ; ಅ ಬಳಿಕ ಅದು ನಮಗೆ ಹಾಲನ್ನು ಕೊಡುತ್ತದೆ; ಸಗಣಿಯನ್ನೂ ಕೊಡುತ್ತಲೇ ಇರುತ್ತದೆ. ಈ ಎಲ್ಲ ಕಾರಣಗಳಿಂದಲೇ ನಾವು ಅದನ್ನು ಪೋಷಿಸುವುದು ತಾನೆ? ಹೀಗಲ್ಲದೆ ನಾವು ಹಸು ಒಂದು ಸಾಧುಪ್ರಾಣಿ; ಅದನ್ನು ಸಾಕುವುದು ನಮ್ಮ ಧರ್ಮ ಎಂದು ಸಾಕುತ್ತಿಲ್ಲವಲ್ಲವೆ?</p>.<p>ಇದು ಕೇವಲ ಹಸುವಿನ ವಿಷಯದಲ್ಲಿ ಮಾತ್ರವಲ್ಲ, ನಮ್ಮ ಎಲ್ಲ ಚುವಟಿಕೆಗಳಲ್ಲೂ ಈ ಮನೋಧರ್ಮವನ್ನೇ ಕಾಣುವಂಥದ್ದು.</p>.<p>ನಾವು ಒಂದು ಗಿಡವನ್ನು ನಾಟಿದರೂ, ಅದರಿಂದ ನಮಗೆ ಪ್ರಯೋಜನ ಇದೆ – ಎಂಬ ಚಿಂತನೆಯೇ ಕೆಲಸಮಾಡಿರುತ್ತದೆ. ಅಷ್ಟೇಕೆ, ಆ ಗಿಡವನ್ನು ಕಿತ್ತು ಒಂದು ಜಾಗದಲ್ಲಿ ಸಂಗ್ರಹಿಸುವಾಗಲೂ ಇಂಥ ಚಿಂತನೆಯೇ ನಮ್ಮಲ್ಲಿ ಎಚ್ಚರವಾಗಿರುತ್ತದೆ. ಗಿಡ ಬೆಳೆದಾಗ ಫಲ ಕೊಡುತ್ತದೆ; ಗಿಡ ಕೊಳೆತಾಗ ಗೊಬ್ಬರವಾಗುತ್ತದೆ. ಇದು ನಮ್ಮ ಲೆಕ್ಕಾಚಾರ.</p>.<p>ಹೀಗೆಂದು ಈ ಲೆಕ್ಕಾಚಾರ ತಪ್ಪೆಂದು ಹೇಳಲೂ ಆಗದು. ಈ ಲೆಕ್ಕಾಚಾರ ತಪ್ಪಿದರೆ ಆಗ ಜಗತ್ತಿನ ಚಟುವಟಿಕೆಗಳೇ ಸ್ತಬ್ಧವಾಗಿಬಿಡುತ್ತವೆ. ‘ಪ್ರಯೋಜನಮನುದ್ದಿಶ್ಯ ನ ಮಂದೋಪಿ ಪ್ರವರ್ತತೇ‘ ಎಂಬ ಮಾತೊಂದು ಇದೆ. ಪ್ರಯೋಜನವನ್ನು ಉದ್ದೇಶದಲ್ಲಿಟ್ಟುಕೊಳ್ಳದೆ ದಡ್ಡ ಕೂಡ ಕೆಲಸದಲ್ಲಿ ತೊಡಗುವುದಿಲ್ಲ – ಎಂಬುದು ಇದರ ತಾತ್ಪರ್ಯ.</p>.<p>ಹೀಗೆ ಜಗತ್ತಿನ ಎಲ್ಲ ವಿದ್ಯಮಾನಗಳೂ ಪ್ರಯೋಜನದ ಕಡೆಗೇ ಹೆಜ್ಜೆಹಾಕುತ್ತಿರುವಾಗ ನಾವು ಮಾತ್ರ ಅದಕ್ಕಿಂತಲೂ ವಿರುದ್ಧ ದಿಕ್ಕಿನಲ್ಲಿ ನಡೆಯಲು ಸಾಧ್ಯವೆ? ಅಂತೆಯೇ, ನಮ್ಮ ಮಕ್ಕಳು ಕೂಡ ಪ್ರಯೋಜಕರಾಗಬೇಕು ಎಂದು ನಾವು ಬಯಸುವುದು ತಪ್ಪಲ್ಲವಷ್ಟೆ. ಅದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.</p>.<p>ನಮ್ಮ ಮಕ್ಕಳು ವಿದ್ಯಾವಂತರಾಗಬೇಕು; ಅದರಿಂದ ಕುಟುಂಬಕ್ಕೂ ಸಮಾಜಕ್ಕೂ ಒಳಿತಾಗುತ್ತದೆ. ಅದಿಲ್ಲದಿದ್ದರೆ ಅವರಿಗೆ ಕುಟುಂಬದ ಬಗ್ಗೆಯಾದರೂ ಅಪರಿಮಿತ ಪ್ರೀತಿ ಇರಬೇಕು; ಇದನ್ನೇ ಸುಭಾಷಿತ ಇಲ್ಲಿ ಭಕ್ತಿ ಎಂದು ಕರೆದಿರುವುದು. ಹೀಗಲ್ಲದೆ ಯಾವುದಕ್ಕೂ ಯಾರಿಗೂ ಪ್ರಯೋಜನಕ್ಕೆ ಬಾರದ ಮಕ್ಕಳು, ಅವರು ಹುಟ್ಟಿಯೂ ವ್ಯರ್ಥವಷ್ಟೆ ಎಂದು ಅದು ಘೋಷಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>