<p><strong>ಯದ್ಯದಾಲಿಖತಿ ಮನ ಆಶಾವರ್ತಿಕಾಭಿಃ ಹೃದಯಫಲಕೇ ।<br />ತತ್ತಾದ್ಬಾಲ ಇವ ವಿಧಿರ್ನಿಭೃತಂ ಹಸಿತ್ವಾ ಪ್ರೋಂಛತಿ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಮನಸ್ಸು ಆಸೆ ಎಂಬ ಕುಂಚದಿಂದ ಹೃದಯಫಲಕದ ಮೇಲೆ ಏನೇನನ್ನು ಬರೆಯುತ್ತದೆಯೋ, ಅವೆಲ್ಲವನ್ನೂ ವಿಧಿಯು ಮಗುವಿನಂತೆ ನಗುತ್ತಾ ಅಳಸಿಹಾಕುತ್ತಾನೆ.’</p>.<p>ನಾವು ಅಂದುಕೊಂಡದ್ದೆಲ್ಲವೂ ಜೀವನದಲ್ಲಿ ನಡೆಯುವುದಿಲ್ಲ ಎಂಬುದನ್ನು ಸುಭಾಷಿತ ಇಲ್ಲಿ ಹೇಳುತ್ತಿದೆ. ಹೀಗೆ ಹೇಳುವಾಗ ಅದು ಬಳಸಿಕೊಂಡಿರುವ ಉದಾಹರಣೆಯೂ ಸೊಗಸಾಗಿದೆ.</p>.<p>ನಾವೆಲ್ಲರೂ ಪೇಟಿಂಗ್ ನೋಡಿದ್ದೇವೆ. ನಮ್ಮಲ್ಲಿ ಕೆಲವರು ಸ್ವತಃ ವರ್ಚಿಣತ್ರವನ್ನು ರಚಿಸಬಲ್ಲವರು ಇದ್ದಾರೆ. ಪೇಟಿಂಗನ್ನು ಹೇಗೆ ರಚಿಸುತ್ತಾರೆ?</p>.<p>ಮೊದಲಿಗೆ ಭಿತ್ತಿಯೊಂದು ಬೇಕಾಗುತ್ತದೆ. ಇದನ್ನೇ ಇಲ್ಲಿ ಸುಭಾಷಿತ ಫಲಕ ಎಂದಿರುವುದು. ಇದೇ ಕ್ಯಾನವಾಸ್.</p>.<p>ಕ್ಯಾನ್ವಾಸ್ ಮಾತ್ರ ಇದ್ದರಷ್ಟೆ ಸಾಲದು; ಅದರ ಮೇಲೆ ಚಿತ್ರವನ್ನು ರಚಿಸಲು ಕುಂಚ, ಎಂದರೆ ಬ್ರಶ್ ಕೂಡ ಬೇಕು.</p>.<p>ಕ್ಯಾನ್ವಾಸ್ ಮತ್ತು ಬ್ರಶ್ – ಇವೆರಡು ಇದ್ದಮಾತ್ರಕ್ಕೆ ಚಿತ್ರವೇನೂ ಸಿದ್ಧವಾಗದು. ಜೊತೆಗೆ ಬಣ್ಣಗಳು ಬೇಕು; ಅದಕ್ಕಿಂತಲೂ ಮುಖ್ಯವಾಗಿ ಏನನ್ನು ರಚಿಸಬೇಕೆಂಬ ಸಂಕಲ್ಪ ಮನಸ್ಸಿನಲ್ಲಿ ಸ್ಪಷ್ಟವಾಗಿ ಮೂಡಿರಬೇಕಾಗುತ್ತದೆ. ನಮ್ಮ ಮನಸ್ಸಿನಲ್ಲಿರುವ ಚಿತ್ರವನ್ನು ಅನಂತರ ನಾವು ಕ್ಯಾನ್ವಾಸ್ನ ಮೇಲೆ ಬಣ್ಣಗಳ ಉಪಯೋಗಿಸಿಕೊಂಡು, ಕುಂಚದಿಂದ ರಚಿಸುತ್ತೇವೆ.</p>.<p>ಸುಭಾಷಿತ ಚಿತ್ರರಚನೆಯ ಈ ಪ್ರಕ್ರಿಯೆಯನ್ನೇ ಉಪಯೋಗಿಸಿಕೊಂಡು ನಮ್ಮ ಜೀವನದ ಕ್ಷಣಿಕತೆಯನ್ನೂ ಆಸೆ–ನಿರಾಸೆಗಳ ಆಟವನ್ನೂ ಹೇಳುತ್ತಿದೆ.</p>.<p>ನಮ್ಮ ಹೃದಯವೇ ಜೀವನಕಲೆಯ ಚಿತ್ರವನ್ನು ಬರೆಯಲು ಒದಗಿರುವ ಕ್ಯಾನ್ವಾಸ್. ಮನಸ್ಸು ಎಂಬುದೇ ಚಿತ್ರವನ್ನು ರಚಿಸಲು ಉಪಯೋಗಿಸುವ ಬ್ರಶ್. ಆಸೆ, ಎಂದರೆ ಬಯಕೆಗಳೇ ಬಣ್ಣಗಳು.</p>.<p>ಜೀವನದಲ್ಲಿ ಏನೇನೋ ಬಯಕೆಗಳ ಬಣ್ಣಗಳನ್ನು ನಮ್ಮ ಮನಸ್ಸಿನಲ್ಲಿ ಅದ್ದಿಕೊಂಡು, ಅದನ್ನು ಹೃದಯದ ಮೇಲೆ ಚಿತ್ರಿಸುತ್ತಿರುತ್ತೇವೆ, ಕ್ಯಾನ್ವಾಸ್ ಮೇಲೆ ಚಿತ್ರವನ್ನು ರಚಿಸುವಂತೆ.</p>.<p>ನಾವು ಕ್ಯಾನ್ವಾಸ್ನ ಮೇಲೆ ತುಂಬ ಆಸೆಯಿಂದ, ಏಕಾಗ್ರವಾಗಿ ವರ್ಣಚಿತ್ರವನ್ನು ರಚಿಸುತ್ತಿರುತ್ತೇವೆ. ಆಗ ಅಲ್ಲಿಗೆ ಮಗುವೊಂದು ಬರುತ್ತದೆ. ಪಾಪ! ಅದಕ್ಕೇನು ಗೊತ್ತು, ನಾವು ಎಷ್ಟು ಹೊತ್ತಿನಿಂದ, ಎಷ್ಟೊಂದು ಎಚ್ಚರಿಕೆಯನ್ನು ವಹಿಸಿ, ನಮ್ಮ ಕೌಶಲವನ್ನೆಲ್ಲ ಸುರಿದು ಆ ಚಿತ್ರರಚನೆಯಲ್ಲಿ ತೊಡಗಿದ್ದೇವೆ ಎಂದು!! ನಗುನಗುತ್ತ ಬಂದು ಅದು ಕ್ಷಣಾರ್ಧದಲ್ಲಿ ಆ ಚಿತ್ರವನ್ನು ಅಳಸಿಹಾಕಿ ಸಂಭ್ರಮಿಸುತ್ತದೆ!!!</p>.<p>ನಮ್ಮ ಜೀವನದಲ್ಲಿಯೂ ಹೀಗೆಯೇ ಆಗುತ್ತಿರುತ್ತದೆ. ನಮ್ಮ ಏನೆಲ್ಲ ಆಸೆಗಳು ಕ್ಷಣಾರ್ಧದಲ್ಲಿ ಅಳಸಿಹೋಗುತ್ತಿರುತ್ತವೆ. ಅವನ್ನು ಅಳಿಸುವ ಮಗು ಯಾವುದು ಎಂದರೆ, ಅದುವೇ ವಿಧಿ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯದ್ಯದಾಲಿಖತಿ ಮನ ಆಶಾವರ್ತಿಕಾಭಿಃ ಹೃದಯಫಲಕೇ ।<br />ತತ್ತಾದ್ಬಾಲ ಇವ ವಿಧಿರ್ನಿಭೃತಂ ಹಸಿತ್ವಾ ಪ್ರೋಂಛತಿ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಮನಸ್ಸು ಆಸೆ ಎಂಬ ಕುಂಚದಿಂದ ಹೃದಯಫಲಕದ ಮೇಲೆ ಏನೇನನ್ನು ಬರೆಯುತ್ತದೆಯೋ, ಅವೆಲ್ಲವನ್ನೂ ವಿಧಿಯು ಮಗುವಿನಂತೆ ನಗುತ್ತಾ ಅಳಸಿಹಾಕುತ್ತಾನೆ.’</p>.<p>ನಾವು ಅಂದುಕೊಂಡದ್ದೆಲ್ಲವೂ ಜೀವನದಲ್ಲಿ ನಡೆಯುವುದಿಲ್ಲ ಎಂಬುದನ್ನು ಸುಭಾಷಿತ ಇಲ್ಲಿ ಹೇಳುತ್ತಿದೆ. ಹೀಗೆ ಹೇಳುವಾಗ ಅದು ಬಳಸಿಕೊಂಡಿರುವ ಉದಾಹರಣೆಯೂ ಸೊಗಸಾಗಿದೆ.</p>.<p>ನಾವೆಲ್ಲರೂ ಪೇಟಿಂಗ್ ನೋಡಿದ್ದೇವೆ. ನಮ್ಮಲ್ಲಿ ಕೆಲವರು ಸ್ವತಃ ವರ್ಚಿಣತ್ರವನ್ನು ರಚಿಸಬಲ್ಲವರು ಇದ್ದಾರೆ. ಪೇಟಿಂಗನ್ನು ಹೇಗೆ ರಚಿಸುತ್ತಾರೆ?</p>.<p>ಮೊದಲಿಗೆ ಭಿತ್ತಿಯೊಂದು ಬೇಕಾಗುತ್ತದೆ. ಇದನ್ನೇ ಇಲ್ಲಿ ಸುಭಾಷಿತ ಫಲಕ ಎಂದಿರುವುದು. ಇದೇ ಕ್ಯಾನವಾಸ್.</p>.<p>ಕ್ಯಾನ್ವಾಸ್ ಮಾತ್ರ ಇದ್ದರಷ್ಟೆ ಸಾಲದು; ಅದರ ಮೇಲೆ ಚಿತ್ರವನ್ನು ರಚಿಸಲು ಕುಂಚ, ಎಂದರೆ ಬ್ರಶ್ ಕೂಡ ಬೇಕು.</p>.<p>ಕ್ಯಾನ್ವಾಸ್ ಮತ್ತು ಬ್ರಶ್ – ಇವೆರಡು ಇದ್ದಮಾತ್ರಕ್ಕೆ ಚಿತ್ರವೇನೂ ಸಿದ್ಧವಾಗದು. ಜೊತೆಗೆ ಬಣ್ಣಗಳು ಬೇಕು; ಅದಕ್ಕಿಂತಲೂ ಮುಖ್ಯವಾಗಿ ಏನನ್ನು ರಚಿಸಬೇಕೆಂಬ ಸಂಕಲ್ಪ ಮನಸ್ಸಿನಲ್ಲಿ ಸ್ಪಷ್ಟವಾಗಿ ಮೂಡಿರಬೇಕಾಗುತ್ತದೆ. ನಮ್ಮ ಮನಸ್ಸಿನಲ್ಲಿರುವ ಚಿತ್ರವನ್ನು ಅನಂತರ ನಾವು ಕ್ಯಾನ್ವಾಸ್ನ ಮೇಲೆ ಬಣ್ಣಗಳ ಉಪಯೋಗಿಸಿಕೊಂಡು, ಕುಂಚದಿಂದ ರಚಿಸುತ್ತೇವೆ.</p>.<p>ಸುಭಾಷಿತ ಚಿತ್ರರಚನೆಯ ಈ ಪ್ರಕ್ರಿಯೆಯನ್ನೇ ಉಪಯೋಗಿಸಿಕೊಂಡು ನಮ್ಮ ಜೀವನದ ಕ್ಷಣಿಕತೆಯನ್ನೂ ಆಸೆ–ನಿರಾಸೆಗಳ ಆಟವನ್ನೂ ಹೇಳುತ್ತಿದೆ.</p>.<p>ನಮ್ಮ ಹೃದಯವೇ ಜೀವನಕಲೆಯ ಚಿತ್ರವನ್ನು ಬರೆಯಲು ಒದಗಿರುವ ಕ್ಯಾನ್ವಾಸ್. ಮನಸ್ಸು ಎಂಬುದೇ ಚಿತ್ರವನ್ನು ರಚಿಸಲು ಉಪಯೋಗಿಸುವ ಬ್ರಶ್. ಆಸೆ, ಎಂದರೆ ಬಯಕೆಗಳೇ ಬಣ್ಣಗಳು.</p>.<p>ಜೀವನದಲ್ಲಿ ಏನೇನೋ ಬಯಕೆಗಳ ಬಣ್ಣಗಳನ್ನು ನಮ್ಮ ಮನಸ್ಸಿನಲ್ಲಿ ಅದ್ದಿಕೊಂಡು, ಅದನ್ನು ಹೃದಯದ ಮೇಲೆ ಚಿತ್ರಿಸುತ್ತಿರುತ್ತೇವೆ, ಕ್ಯಾನ್ವಾಸ್ ಮೇಲೆ ಚಿತ್ರವನ್ನು ರಚಿಸುವಂತೆ.</p>.<p>ನಾವು ಕ್ಯಾನ್ವಾಸ್ನ ಮೇಲೆ ತುಂಬ ಆಸೆಯಿಂದ, ಏಕಾಗ್ರವಾಗಿ ವರ್ಣಚಿತ್ರವನ್ನು ರಚಿಸುತ್ತಿರುತ್ತೇವೆ. ಆಗ ಅಲ್ಲಿಗೆ ಮಗುವೊಂದು ಬರುತ್ತದೆ. ಪಾಪ! ಅದಕ್ಕೇನು ಗೊತ್ತು, ನಾವು ಎಷ್ಟು ಹೊತ್ತಿನಿಂದ, ಎಷ್ಟೊಂದು ಎಚ್ಚರಿಕೆಯನ್ನು ವಹಿಸಿ, ನಮ್ಮ ಕೌಶಲವನ್ನೆಲ್ಲ ಸುರಿದು ಆ ಚಿತ್ರರಚನೆಯಲ್ಲಿ ತೊಡಗಿದ್ದೇವೆ ಎಂದು!! ನಗುನಗುತ್ತ ಬಂದು ಅದು ಕ್ಷಣಾರ್ಧದಲ್ಲಿ ಆ ಚಿತ್ರವನ್ನು ಅಳಸಿಹಾಕಿ ಸಂಭ್ರಮಿಸುತ್ತದೆ!!!</p>.<p>ನಮ್ಮ ಜೀವನದಲ್ಲಿಯೂ ಹೀಗೆಯೇ ಆಗುತ್ತಿರುತ್ತದೆ. ನಮ್ಮ ಏನೆಲ್ಲ ಆಸೆಗಳು ಕ್ಷಣಾರ್ಧದಲ್ಲಿ ಅಳಸಿಹೋಗುತ್ತಿರುತ್ತವೆ. ಅವನ್ನು ಅಳಿಸುವ ಮಗು ಯಾವುದು ಎಂದರೆ, ಅದುವೇ ವಿಧಿ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>