<p><em><strong>ವ್ಯಸನೇsನುದ್ವಿಗ್ನಾ ವಿಭವೇsಗರ್ವಿತಾ ಭಯೇ ಧೀರಾಃ ।</strong></em></p>.<p><em><strong>ಭವಂತ್ಯಭಿನ್ನಸ್ವಭಾವಾಃ ಸಮೇಷು ವಿಷಮೇಷು ಸತ್ಪುರುಷಾಃ ।।</strong></em></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಸಂಕಟದಲ್ಲಿ ಬೇಸರಪಡುವುದಿಲ್ಲ; ಹಣವಿದ್ದರೆ ಗರ್ವಪಡುವುದಿಲ್ಲ; ಭಯದಲ್ಲಿ ಧೈರ್ಯ – ಹೀಗೆ ಕಷ್ಟಸುಖಗಳಲ್ಲಿ ಸಜ್ಜನರು ಒಂದೇ ಸ್ವಭಾವದಿಂದಿರುತ್ತಾರೆ'.</p>.<p>ನಾವು ಗಟ್ಟಿಯಾಗಿದ್ದೇವೆ, ದೃಢವಾಗಿದ್ದೇವೆ, ನಿಶ್ಚಯವಾಗಿದ್ದೇವೆ – ಎಂದು ಯಾವಾಗ ತಿಳಿಯುತ್ತದೆ? ಬಿರುಗಾಳಿ ಬಂದಾಗಲೇ ಅಲ್ಲವೆ? ಅದನ್ನೇ ಸುಭಾಷಿತ ಹೇಳುತ್ತಿರುವುದು.</p>.<p>ಈಗ ಯಾರನ್ನಾದರೂ 'ಏನಯ್ಯಾ! ಹೇಗಿದ್ದೀಯಾ?'ಎಂದು ಕೇಳುತ್ತೇವೆ. ಅವರು 'ಅಯ್ಯೋ! ಈ ದುರಿತಕಾಲದಲ್ಲಿ ಹೇಗಿರುವುದು, ಭಯದಿಂದ ಬದುಕುತ್ತಿದ್ದೇನೆ'ಎನ್ನುವುದು ಸಹಜವಷ್ಟೆ! ಆದರೆ ಸುಭಾಷಿತ ಈ ಧೋರಣೆಯನ್ನು ಒಪ್ಪುವುದಿಲ್ಲ. 'ಅಲ್ಲಯ್ಯಾ! ಸುಖ ಇರುವಾಗ ಸಂತೋಷದಲ್ಲಿರುವುದು ಏನು ವಿಶೇಷ; ಸಂಕಟ ಬಂದಾಗಲೂ ಮನಸ್ಸನ್ನು ಧೈರ್ಯವಾಗಿ, ಸ್ವಾಸ್ಥ್ಯದಿಂದ ಕಾಪಾಡಿಕೊಳ್ಳುವುದೇ ದಿಟವಾದ ವ್ಯಕ್ತಿತ್ವದ ಲಕ್ಷಣ'ಎನ್ನುತ್ತಿದೆ ಅದು.</p>.<p>ಯಾವ ಯಾವ ಸಂದರ್ಭದಲ್ಲಿ ನಾವು ಯಾವ ಯಾವ ರೀತಿಯ ವಿಷಮ ಪರಿಸ್ಥಿತಿಗಳನ್ನು ಎದುರಿಸುತ್ತೇವೆ – ಎನ್ನುವುದನ್ನು ಸುಭಾಷಿತ ಹೇಳುತ್ತಿದೆ.</p>.<p>ಸಂಕಟ ಎದುರಾದಾಗ ಬೇಸರ ಮೂಡುತ್ತದೆ; ಹಣ ಸೇರಿದಾಗ ಗರ್ವ ಹೆಗಲೇರುತ್ತದೆ; ಭಯ ಎನ್ನುವುದೇ ಧೈರ್ಯದ ಅಭಾವ.</p>.<p>ಆದರೆ ಇಂಥ ಪರಿಸ್ಥಿತಿಗಳಲ್ಲಿ ಸಜ್ಜನ, ಎಂದರೆ ಸುಸಂಸ್ಕೃತನು ಹೇಗಿರುತ್ತಾನೆ? ಸುಭಾಷಿತ ಹೇಳುತ್ತಿದೆ:</p>.<p>ಸಂಕಟದಲ್ಲಿ ಅವನು ಬೇಸರ ಪಡುವುದಿಲ್ಲ. ಕಷ್ಟ ಬಂದಾಗ ಮನಸ್ಸು ಕಳವಳಕ್ಕೆ ತುತ್ತಾಗುತ್ತದೆ; ಆಗ ಬೇಸರವೂ ಮೂಡುತ್ತದೆ. ಆದರೆ ಸಜ್ಜನ ಹಾಗೆ ವಿಷಾದಕ್ಕೆ ತುತ್ತಾಗಲಾರ; ವಿಚಾರವಂತಿಕೆಯನ್ನು ಕಳೆದುಕೊಳ್ಳುವುದಿಲ್ಲ.</p>.<p>ಹಣ ಸೇರುತ್ತಿದ್ದಂತೆ ಅಲ್ಪನಲ್ಲಿ ಗರ್ವವೂ ಸಂಗ್ರಹವಾಗುತ್ತಿರುತ್ತದೆ. ಆದರೆ ಸಜ್ಜನನಲ್ಲಿ ಐಶ್ವರ್ಯದ ಜೊತೆಗೆ ಸಂಯಮವೂ ಹೆಚ್ಚಾಗುತ್ತದೆಯೇ ಹೊರತು ಅವನಲ್ಲಿ ಬುದ್ಧಿನಾಶ ಆಗದು.</p>.<p>ಜೀವನದಲ್ಲಿ ಹಲವು ಸಂದರ್ಭಗಳಲ್ಲಿ ಭಯ, ಆತಂಕಗಳು ಎದುರಾಗುತ್ತಲೇ ಇರುತ್ತವೆ. ಸದ್ಯದ ಪರಿಸ್ಥಿತಿಯನ್ನೇ ನೋಡಿ – ಕೊರೊನಾ ಹುಟ್ಟಿಸಿರುವ ಆತಂಕವೇನು ಕಡಿಮೆ ಸ್ವರೂಪದ್ದೇ? ಆದರೆ ಸಜ್ಜನ ಎಂಥ ಸಂದರ್ಭದಲ್ಲೂ ಧೃತಿಗೆಡುವುದಿಲ್ಲ; ಸಂದರ್ಭವನ್ನು ವಿವೇಕದಿಂದ ನಿರ್ವಹಿಸುತ್ತಾನೆ.</p>.<p>ಎಂಥ ಸಂದರ್ಭದಲ್ಲೂ ಸಜ್ಜನರು ಸಮಭಾವದಲ್ಲಿ, ಸಮತೋಲನದಲ್ಲಿ, ಸ್ವಸ್ಥಸ್ಥಿತಿಯಲ್ಲಿ ಇರುತ್ತಾರೆ, ಎನ್ನುವುದು ಸುಭಾಷಿತದ ಗಟ್ಟಿಯಾದ ನಂಬಿಕೆ.</p>.<p>ಇಲ್ಲಿ ಶಿವನ ಕಲ್ಪನೆ ಕಣ್ಣಿನ ಮುಂದೆ ಬರುತ್ತದೆ. ಅವನು ಎಲ್ಲರೂ ಹೆದರುವಂಥ ಹಾವನ್ನು ಧರಿಸಿದ್ದಾನೆ; ಆದರೆ ಅವನಿಗೆ ಭಯವಿಲ್ಲ. ಎಲ್ಲರೂ ಇಷ್ಟಪಡುವಂಥ ಚಂದ್ರನನ್ನು ತಲೆಯ ಮೇಲೆ ಧರಿಸಿಕೊಂಡಿದ್ದಾನೆ; ಆದರೆ ಅದರಿಂದ ಅವನಿಗೆ ಗರ್ವವೇನಿಲ್ಲ. ಅವನು ರುಂಡಮಾಲೆಯನ್ನು ಧರಿಸಿದ್ದಾನೆ; ಹಾಗೆಂದು ಅವನಿಗೆ ಮೈಲಿಗೆಯಿಲ್ಲ. ಜಟೆಯಲ್ಲಿ ಗಂಗೆಯಿದ್ದಾಳೆ; ಆದರೆ ಪಾವಿತ್ರ್ಯದ ಭಾರ ಅವನಿಗಿಲ್ಲ. ಮೈಗೆಲ್ಲ ಬೂದಿಯನ್ನು ಲೇಪಿಸಿಕೊಂಡಿದ್ದಾನೆ; ಆದರೆ ಜುಗುಪ್ಸೆಯಿಲ್ಲ. ಪಾರ್ವತಿಯನ್ನು ಶರೀರದಲ್ಲಿಯೇ ಹೊಂದಿದ್ದಾನೆ; ಅದರಿಂದ ಮೈ ಪುಳಕವೇನೂ ಇರದು. ಹಿತವನ್ನೂ ಅಹಿತವನ್ನೂ ಹೀಗೆ ಸಮಾನವಾಗಿ ಕಾಣಬಲ್ಲವನು ಶಿವ.</p>.<p>ಸುಭಾಷಿತ ಹೇಳುತ್ತಿರುವುದು ಇಂಥ ಸ್ಥಿತಿಯನ್ನೇ ಸಜ್ಜನನೂ ಸಾಧಿಸಿರುತ್ತಾನೆ ಎಂದು.</p>.<p>ಈ ಪದ್ಯ ಹಾಲನ ಗಾಥಾಸಪ್ತಶತಿಪದ್ಯದ ಸಂಸ್ಕೃತರೂಪ.</p>.<p><strong>ಪಾಡ್ಕಾಸ್ಟ್ ಕೇಳಲು ಇಲ್ಲಿ<a href="https://www.prajavani.net/op-ed/podcast/prajavani-podcast-for-motivation-741452.html" target="_blank">ಕ್ಲಿಕ್</a> ಮಾಡಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ವ್ಯಸನೇsನುದ್ವಿಗ್ನಾ ವಿಭವೇsಗರ್ವಿತಾ ಭಯೇ ಧೀರಾಃ ।</strong></em></p>.<p><em><strong>ಭವಂತ್ಯಭಿನ್ನಸ್ವಭಾವಾಃ ಸಮೇಷು ವಿಷಮೇಷು ಸತ್ಪುರುಷಾಃ ।।</strong></em></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಸಂಕಟದಲ್ಲಿ ಬೇಸರಪಡುವುದಿಲ್ಲ; ಹಣವಿದ್ದರೆ ಗರ್ವಪಡುವುದಿಲ್ಲ; ಭಯದಲ್ಲಿ ಧೈರ್ಯ – ಹೀಗೆ ಕಷ್ಟಸುಖಗಳಲ್ಲಿ ಸಜ್ಜನರು ಒಂದೇ ಸ್ವಭಾವದಿಂದಿರುತ್ತಾರೆ'.</p>.<p>ನಾವು ಗಟ್ಟಿಯಾಗಿದ್ದೇವೆ, ದೃಢವಾಗಿದ್ದೇವೆ, ನಿಶ್ಚಯವಾಗಿದ್ದೇವೆ – ಎಂದು ಯಾವಾಗ ತಿಳಿಯುತ್ತದೆ? ಬಿರುಗಾಳಿ ಬಂದಾಗಲೇ ಅಲ್ಲವೆ? ಅದನ್ನೇ ಸುಭಾಷಿತ ಹೇಳುತ್ತಿರುವುದು.</p>.<p>ಈಗ ಯಾರನ್ನಾದರೂ 'ಏನಯ್ಯಾ! ಹೇಗಿದ್ದೀಯಾ?'ಎಂದು ಕೇಳುತ್ತೇವೆ. ಅವರು 'ಅಯ್ಯೋ! ಈ ದುರಿತಕಾಲದಲ್ಲಿ ಹೇಗಿರುವುದು, ಭಯದಿಂದ ಬದುಕುತ್ತಿದ್ದೇನೆ'ಎನ್ನುವುದು ಸಹಜವಷ್ಟೆ! ಆದರೆ ಸುಭಾಷಿತ ಈ ಧೋರಣೆಯನ್ನು ಒಪ್ಪುವುದಿಲ್ಲ. 'ಅಲ್ಲಯ್ಯಾ! ಸುಖ ಇರುವಾಗ ಸಂತೋಷದಲ್ಲಿರುವುದು ಏನು ವಿಶೇಷ; ಸಂಕಟ ಬಂದಾಗಲೂ ಮನಸ್ಸನ್ನು ಧೈರ್ಯವಾಗಿ, ಸ್ವಾಸ್ಥ್ಯದಿಂದ ಕಾಪಾಡಿಕೊಳ್ಳುವುದೇ ದಿಟವಾದ ವ್ಯಕ್ತಿತ್ವದ ಲಕ್ಷಣ'ಎನ್ನುತ್ತಿದೆ ಅದು.</p>.<p>ಯಾವ ಯಾವ ಸಂದರ್ಭದಲ್ಲಿ ನಾವು ಯಾವ ಯಾವ ರೀತಿಯ ವಿಷಮ ಪರಿಸ್ಥಿತಿಗಳನ್ನು ಎದುರಿಸುತ್ತೇವೆ – ಎನ್ನುವುದನ್ನು ಸುಭಾಷಿತ ಹೇಳುತ್ತಿದೆ.</p>.<p>ಸಂಕಟ ಎದುರಾದಾಗ ಬೇಸರ ಮೂಡುತ್ತದೆ; ಹಣ ಸೇರಿದಾಗ ಗರ್ವ ಹೆಗಲೇರುತ್ತದೆ; ಭಯ ಎನ್ನುವುದೇ ಧೈರ್ಯದ ಅಭಾವ.</p>.<p>ಆದರೆ ಇಂಥ ಪರಿಸ್ಥಿತಿಗಳಲ್ಲಿ ಸಜ್ಜನ, ಎಂದರೆ ಸುಸಂಸ್ಕೃತನು ಹೇಗಿರುತ್ತಾನೆ? ಸುಭಾಷಿತ ಹೇಳುತ್ತಿದೆ:</p>.<p>ಸಂಕಟದಲ್ಲಿ ಅವನು ಬೇಸರ ಪಡುವುದಿಲ್ಲ. ಕಷ್ಟ ಬಂದಾಗ ಮನಸ್ಸು ಕಳವಳಕ್ಕೆ ತುತ್ತಾಗುತ್ತದೆ; ಆಗ ಬೇಸರವೂ ಮೂಡುತ್ತದೆ. ಆದರೆ ಸಜ್ಜನ ಹಾಗೆ ವಿಷಾದಕ್ಕೆ ತುತ್ತಾಗಲಾರ; ವಿಚಾರವಂತಿಕೆಯನ್ನು ಕಳೆದುಕೊಳ್ಳುವುದಿಲ್ಲ.</p>.<p>ಹಣ ಸೇರುತ್ತಿದ್ದಂತೆ ಅಲ್ಪನಲ್ಲಿ ಗರ್ವವೂ ಸಂಗ್ರಹವಾಗುತ್ತಿರುತ್ತದೆ. ಆದರೆ ಸಜ್ಜನನಲ್ಲಿ ಐಶ್ವರ್ಯದ ಜೊತೆಗೆ ಸಂಯಮವೂ ಹೆಚ್ಚಾಗುತ್ತದೆಯೇ ಹೊರತು ಅವನಲ್ಲಿ ಬುದ್ಧಿನಾಶ ಆಗದು.</p>.<p>ಜೀವನದಲ್ಲಿ ಹಲವು ಸಂದರ್ಭಗಳಲ್ಲಿ ಭಯ, ಆತಂಕಗಳು ಎದುರಾಗುತ್ತಲೇ ಇರುತ್ತವೆ. ಸದ್ಯದ ಪರಿಸ್ಥಿತಿಯನ್ನೇ ನೋಡಿ – ಕೊರೊನಾ ಹುಟ್ಟಿಸಿರುವ ಆತಂಕವೇನು ಕಡಿಮೆ ಸ್ವರೂಪದ್ದೇ? ಆದರೆ ಸಜ್ಜನ ಎಂಥ ಸಂದರ್ಭದಲ್ಲೂ ಧೃತಿಗೆಡುವುದಿಲ್ಲ; ಸಂದರ್ಭವನ್ನು ವಿವೇಕದಿಂದ ನಿರ್ವಹಿಸುತ್ತಾನೆ.</p>.<p>ಎಂಥ ಸಂದರ್ಭದಲ್ಲೂ ಸಜ್ಜನರು ಸಮಭಾವದಲ್ಲಿ, ಸಮತೋಲನದಲ್ಲಿ, ಸ್ವಸ್ಥಸ್ಥಿತಿಯಲ್ಲಿ ಇರುತ್ತಾರೆ, ಎನ್ನುವುದು ಸುಭಾಷಿತದ ಗಟ್ಟಿಯಾದ ನಂಬಿಕೆ.</p>.<p>ಇಲ್ಲಿ ಶಿವನ ಕಲ್ಪನೆ ಕಣ್ಣಿನ ಮುಂದೆ ಬರುತ್ತದೆ. ಅವನು ಎಲ್ಲರೂ ಹೆದರುವಂಥ ಹಾವನ್ನು ಧರಿಸಿದ್ದಾನೆ; ಆದರೆ ಅವನಿಗೆ ಭಯವಿಲ್ಲ. ಎಲ್ಲರೂ ಇಷ್ಟಪಡುವಂಥ ಚಂದ್ರನನ್ನು ತಲೆಯ ಮೇಲೆ ಧರಿಸಿಕೊಂಡಿದ್ದಾನೆ; ಆದರೆ ಅದರಿಂದ ಅವನಿಗೆ ಗರ್ವವೇನಿಲ್ಲ. ಅವನು ರುಂಡಮಾಲೆಯನ್ನು ಧರಿಸಿದ್ದಾನೆ; ಹಾಗೆಂದು ಅವನಿಗೆ ಮೈಲಿಗೆಯಿಲ್ಲ. ಜಟೆಯಲ್ಲಿ ಗಂಗೆಯಿದ್ದಾಳೆ; ಆದರೆ ಪಾವಿತ್ರ್ಯದ ಭಾರ ಅವನಿಗಿಲ್ಲ. ಮೈಗೆಲ್ಲ ಬೂದಿಯನ್ನು ಲೇಪಿಸಿಕೊಂಡಿದ್ದಾನೆ; ಆದರೆ ಜುಗುಪ್ಸೆಯಿಲ್ಲ. ಪಾರ್ವತಿಯನ್ನು ಶರೀರದಲ್ಲಿಯೇ ಹೊಂದಿದ್ದಾನೆ; ಅದರಿಂದ ಮೈ ಪುಳಕವೇನೂ ಇರದು. ಹಿತವನ್ನೂ ಅಹಿತವನ್ನೂ ಹೀಗೆ ಸಮಾನವಾಗಿ ಕಾಣಬಲ್ಲವನು ಶಿವ.</p>.<p>ಸುಭಾಷಿತ ಹೇಳುತ್ತಿರುವುದು ಇಂಥ ಸ್ಥಿತಿಯನ್ನೇ ಸಜ್ಜನನೂ ಸಾಧಿಸಿರುತ್ತಾನೆ ಎಂದು.</p>.<p>ಈ ಪದ್ಯ ಹಾಲನ ಗಾಥಾಸಪ್ತಶತಿಪದ್ಯದ ಸಂಸ್ಕೃತರೂಪ.</p>.<p><strong>ಪಾಡ್ಕಾಸ್ಟ್ ಕೇಳಲು ಇಲ್ಲಿ<a href="https://www.prajavani.net/op-ed/podcast/prajavani-podcast-for-motivation-741452.html" target="_blank">ಕ್ಲಿಕ್</a> ಮಾಡಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>