<p>ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ವನೇಃ ।</p>.<p>ವಿಕ್ರಮಾರ್ಜಿತಸತ್ತ್ವಸ್ಯ ಸ್ವಯಮೇವ ಮೃಗೇಂದ್ರತಾ ।।</p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಕಾಡಿನಲ್ಲಿ ಸಿಂಹಕ್ಕೆ ಯಾರೂ ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ; ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸತ್ತ್ವದಿಂದ ತಾನೇ ತಾನಾಗಿ ಮೃಗರಾಜ ಎಂಬ ಪದವಿ ದಕ್ಕುತ್ತದೆ.’</p>.<p>ಇಂದಿನ ಸನ್ನಿವೇಶಕ್ಕೆ ಚೆನ್ನಾಗಿ ಹೊಂದಾಣಿಕೆಯಾಗುತ್ತದೆ, ಈ ಸುಭಾಷಿತ.</p>.<p>ಇಂದಿನ ರಾಜಕಾರಣದ ಪರಿಸ್ಥಿತಿಯನ್ನೇ ಅವಲೋಕಿಸಬಹುದು. ಮಂತ್ರಿಯ ಮಗನನ್ನು ಮಂತ್ರಿಯನ್ನಾಗಿಸಬೇಕೆಂಬ ಹವಣು ಇಂದಿನ ರಾಜಕಾರಣದ ಮೂಲಧ್ಯೇಯ. ಆ ಮಗನಿಗೆ ಇರುವ ಅರ್ಹತೆಯಾದರೂ ಏನು? ಅವನು ಮಂತ್ರಿಯ ಮಗ, ರಾಜಕಾರಣಿಯ ಮಗ – ಇದಿಷ್ಟೇ ಅವನಿಗಿರುವ ಅರ್ಹತೆ. ರಾಜನೀತಿಯ ಬಗ್ಗೆ ಅರಿವಾಗಲೀ, ಕಾನೂನು–ಸಂವಿಧಾನಗಳ ಅಧ್ಯಯನವಾಗಲೀ, ಸಮಾಜಸೇವೆಯ ತುಡಿತವಾಗಲೀ ಇವರಲ್ಲಿ ಕಾಣದು. ಆದರೂ ಮಂತ್ರಿಯ ಮಗ ಮಂತ್ರಿಯೇ ಆಗುತ್ತಾನೆ. ಕಾರಣ ಸ್ಪಷ್ಟ: ಅವನು ಮಂತ್ರಿಯ ಮಗ ಎಂಬ ಮಾನದಂಡವೇ ಈ ಪದವಿಪ್ರಾಪ್ತಿಗೆ ಕಾರಣ. ಅರ್ಹತೆಯೊಂದೇ, ಸಾಮರ್ಥ್ಯವೊಂದೇ ಮಾನದಂಡವಾದರೆ ಬಹುಪಾಲು ಈ ’ಮಕ್ಕಳು‘ ರಾಜಕೀಯವಾಗಿ ನೆಲೆಗೊಳ್ಳಲಾರರು; ಯಾವ ಪದವಿಯನ್ನೂ ಪಡೆಯಲಾರರು. ಆದರೆ ಅವರು ಮಂತ್ರಿಯ ಮಕ್ಕಳು ಎಂಬ ಏಕೈಕ ಕಾರಣದಿಂದಲೇ ಅಧಿಕಾರವನ್ನು ಅನುಭವಿಸುತ್ತಿರುತ್ತಾರೆ. ಹೀಗಾಗಿ ಎಷ್ಟೋ ಜನರು, ಪ್ರಾಮಾಣಿಕರು, ಅರ್ಹರು, ಸಮರ್ಥರು ಅಧಿಕಾರದಿಂದ ವಂಚಿತರಾಗುತ್ತಲೇ ಇರುತ್ತಾರೆ. ಜೊಳ್ಳುಗಳು, ಭ್ರಷ್ಟರು ಅಧಿಕಾರವನ್ನು ಅನುಭವಿಸುತ್ತಿರುತ್ತಾರೆ. ಇದರ ಫಲವನ್ನು ಸಮಾಜ ಅನುಭವಿಸುತ್ತಿರುತ್ತದೆ.</p>.<p>ಸುಭಾಷಿತ ಸೊಗಸಾದ ಉದಾಹರಣೆಯ ಮೂಲಕ ಸ್ವಸಾಮರ್ಥ್ಯ ಎಂದರೆ ಏನು ಎಂಬುದನ್ನು ನಿರೂಪಿಸಿದೆ.</p>.<p>ಕಾಡಿನಲ್ಲಿ ಹಲವು ಪ್ರಾಣಿಗಳು ಇರುತ್ತವೆ. ಆದರೆ ನಾವು ಸಿಂಹವನ್ನು ಮೃಗರಾಜ ಎಂದು ಕರೆಯುತ್ತೇವೆ. ನಾವಷ್ಟೇ ಅಲ್ಲ, ಕಾಡಿನ ಇತರ ಪ್ರಾಣಿಗಳು ಕೂಡ ಸಿಂಹವನ್ನು ರಾಜನಂತೆಯೇ ಸ್ವೀಕರಿಸಿರುವುದು ಎದ್ದುಕಾಣುತ್ತದೆ. ಸಿಂಹಕ್ಕೆ ಈ ಮೃಗರಾಜ ಎಂಬ ಪದವಿ ಹೇಗೆ ಲಭಿಸಿತು? ಅಪ್ಪಸಿಂಹ ಮೃಗರಾಜ, ಹೀಗಾಗಿ ಮರಿಸಿಂಹವೂ ಮುಂದೆ ಮೃಗರಾಜ ಆಯಿತು ಎನ್ನುವಂತಿಲ್ಲ. ಈ ರೀತಿಯ ಹಿಂಬಾಗಿಲ ಪ್ರವೇಶ ಮನುಷ್ಯರಲ್ಲಿ, ಎಂದರೆ ನಾಡಿನಲ್ಲಿ ಇದೆಯೇ ಹೊರತು ಕಾಡಿನಲ್ಲಿ ಇರುವುದಿಲ್ಲ. ಸಿಂಹಕ್ಕಿರುವ ಸಹಜಬಲದಿಂದಲೇ ಅದು ಮೃಗರಾಜನಾಗಿದೆ.</p>.<p>ಸುಭಾಷಿತದ ತಾತ್ಪರ್ಯ: ನಾವು ನಮ್ಮ ಸಾಮರ್ಥ್ಯದಿಂದಲೇ ಪದವಿ–ಅಧಿಕಾರಗಳನ್ನು ಪಡೆಯಬೇಕೆ ಹೊರತು, ಬೇರೊಬ್ಬರ ಆಶ್ರಯದಿಂದ, ಬೆಂಬಲದಿಂದ ಪಡೆಯಬಾರದು. ಅಧಿಕಾರ–ಪದವಿಗಳಿಗೆ ಅರ್ಹತೆಯೊಂದೇ ಮಾನದಂಡವಾದಾಗ ಮಾತ್ರ ಆ ಪದವಿಗೂ ಮರ್ಯಾದೆ ದಕ್ಕುವುದು, ಮಾತ್ರವಲ್ಲ ಆಗ ಸಮಾಜವೂ ಸದೃಢವಾಗಿರುತ್ತದೆ; ಭ್ರಷ್ಟಾಚಾರಗಳಿಂದ ಮುಕ್ತವಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ವನೇಃ ।</p>.<p>ವಿಕ್ರಮಾರ್ಜಿತಸತ್ತ್ವಸ್ಯ ಸ್ವಯಮೇವ ಮೃಗೇಂದ್ರತಾ ।।</p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಕಾಡಿನಲ್ಲಿ ಸಿಂಹಕ್ಕೆ ಯಾರೂ ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ; ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸತ್ತ್ವದಿಂದ ತಾನೇ ತಾನಾಗಿ ಮೃಗರಾಜ ಎಂಬ ಪದವಿ ದಕ್ಕುತ್ತದೆ.’</p>.<p>ಇಂದಿನ ಸನ್ನಿವೇಶಕ್ಕೆ ಚೆನ್ನಾಗಿ ಹೊಂದಾಣಿಕೆಯಾಗುತ್ತದೆ, ಈ ಸುಭಾಷಿತ.</p>.<p>ಇಂದಿನ ರಾಜಕಾರಣದ ಪರಿಸ್ಥಿತಿಯನ್ನೇ ಅವಲೋಕಿಸಬಹುದು. ಮಂತ್ರಿಯ ಮಗನನ್ನು ಮಂತ್ರಿಯನ್ನಾಗಿಸಬೇಕೆಂಬ ಹವಣು ಇಂದಿನ ರಾಜಕಾರಣದ ಮೂಲಧ್ಯೇಯ. ಆ ಮಗನಿಗೆ ಇರುವ ಅರ್ಹತೆಯಾದರೂ ಏನು? ಅವನು ಮಂತ್ರಿಯ ಮಗ, ರಾಜಕಾರಣಿಯ ಮಗ – ಇದಿಷ್ಟೇ ಅವನಿಗಿರುವ ಅರ್ಹತೆ. ರಾಜನೀತಿಯ ಬಗ್ಗೆ ಅರಿವಾಗಲೀ, ಕಾನೂನು–ಸಂವಿಧಾನಗಳ ಅಧ್ಯಯನವಾಗಲೀ, ಸಮಾಜಸೇವೆಯ ತುಡಿತವಾಗಲೀ ಇವರಲ್ಲಿ ಕಾಣದು. ಆದರೂ ಮಂತ್ರಿಯ ಮಗ ಮಂತ್ರಿಯೇ ಆಗುತ್ತಾನೆ. ಕಾರಣ ಸ್ಪಷ್ಟ: ಅವನು ಮಂತ್ರಿಯ ಮಗ ಎಂಬ ಮಾನದಂಡವೇ ಈ ಪದವಿಪ್ರಾಪ್ತಿಗೆ ಕಾರಣ. ಅರ್ಹತೆಯೊಂದೇ, ಸಾಮರ್ಥ್ಯವೊಂದೇ ಮಾನದಂಡವಾದರೆ ಬಹುಪಾಲು ಈ ’ಮಕ್ಕಳು‘ ರಾಜಕೀಯವಾಗಿ ನೆಲೆಗೊಳ್ಳಲಾರರು; ಯಾವ ಪದವಿಯನ್ನೂ ಪಡೆಯಲಾರರು. ಆದರೆ ಅವರು ಮಂತ್ರಿಯ ಮಕ್ಕಳು ಎಂಬ ಏಕೈಕ ಕಾರಣದಿಂದಲೇ ಅಧಿಕಾರವನ್ನು ಅನುಭವಿಸುತ್ತಿರುತ್ತಾರೆ. ಹೀಗಾಗಿ ಎಷ್ಟೋ ಜನರು, ಪ್ರಾಮಾಣಿಕರು, ಅರ್ಹರು, ಸಮರ್ಥರು ಅಧಿಕಾರದಿಂದ ವಂಚಿತರಾಗುತ್ತಲೇ ಇರುತ್ತಾರೆ. ಜೊಳ್ಳುಗಳು, ಭ್ರಷ್ಟರು ಅಧಿಕಾರವನ್ನು ಅನುಭವಿಸುತ್ತಿರುತ್ತಾರೆ. ಇದರ ಫಲವನ್ನು ಸಮಾಜ ಅನುಭವಿಸುತ್ತಿರುತ್ತದೆ.</p>.<p>ಸುಭಾಷಿತ ಸೊಗಸಾದ ಉದಾಹರಣೆಯ ಮೂಲಕ ಸ್ವಸಾಮರ್ಥ್ಯ ಎಂದರೆ ಏನು ಎಂಬುದನ್ನು ನಿರೂಪಿಸಿದೆ.</p>.<p>ಕಾಡಿನಲ್ಲಿ ಹಲವು ಪ್ರಾಣಿಗಳು ಇರುತ್ತವೆ. ಆದರೆ ನಾವು ಸಿಂಹವನ್ನು ಮೃಗರಾಜ ಎಂದು ಕರೆಯುತ್ತೇವೆ. ನಾವಷ್ಟೇ ಅಲ್ಲ, ಕಾಡಿನ ಇತರ ಪ್ರಾಣಿಗಳು ಕೂಡ ಸಿಂಹವನ್ನು ರಾಜನಂತೆಯೇ ಸ್ವೀಕರಿಸಿರುವುದು ಎದ್ದುಕಾಣುತ್ತದೆ. ಸಿಂಹಕ್ಕೆ ಈ ಮೃಗರಾಜ ಎಂಬ ಪದವಿ ಹೇಗೆ ಲಭಿಸಿತು? ಅಪ್ಪಸಿಂಹ ಮೃಗರಾಜ, ಹೀಗಾಗಿ ಮರಿಸಿಂಹವೂ ಮುಂದೆ ಮೃಗರಾಜ ಆಯಿತು ಎನ್ನುವಂತಿಲ್ಲ. ಈ ರೀತಿಯ ಹಿಂಬಾಗಿಲ ಪ್ರವೇಶ ಮನುಷ್ಯರಲ್ಲಿ, ಎಂದರೆ ನಾಡಿನಲ್ಲಿ ಇದೆಯೇ ಹೊರತು ಕಾಡಿನಲ್ಲಿ ಇರುವುದಿಲ್ಲ. ಸಿಂಹಕ್ಕಿರುವ ಸಹಜಬಲದಿಂದಲೇ ಅದು ಮೃಗರಾಜನಾಗಿದೆ.</p>.<p>ಸುಭಾಷಿತದ ತಾತ್ಪರ್ಯ: ನಾವು ನಮ್ಮ ಸಾಮರ್ಥ್ಯದಿಂದಲೇ ಪದವಿ–ಅಧಿಕಾರಗಳನ್ನು ಪಡೆಯಬೇಕೆ ಹೊರತು, ಬೇರೊಬ್ಬರ ಆಶ್ರಯದಿಂದ, ಬೆಂಬಲದಿಂದ ಪಡೆಯಬಾರದು. ಅಧಿಕಾರ–ಪದವಿಗಳಿಗೆ ಅರ್ಹತೆಯೊಂದೇ ಮಾನದಂಡವಾದಾಗ ಮಾತ್ರ ಆ ಪದವಿಗೂ ಮರ್ಯಾದೆ ದಕ್ಕುವುದು, ಮಾತ್ರವಲ್ಲ ಆಗ ಸಮಾಜವೂ ಸದೃಢವಾಗಿರುತ್ತದೆ; ಭ್ರಷ್ಟಾಚಾರಗಳಿಂದ ಮುಕ್ತವಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>