<p><strong>ಯಜ್ಞಾಧ್ಯಯನದಾನಾನಿ ತಪಃ ಸತ್ಯಂ ಧೃತಿಃ ಕ್ಷಮಾ ।</strong></p>.<p><strong>ಅಲೋಭ ಇತಿ ಮಾರ್ಗೋಯಂ ಧರ್ಮಸ್ಯಾಷ್ಟವಿಧಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಯಜ್ಞ, ಅಧ್ಯಯನ, ದಾನ, ತಪಸ್ಸು, ಸತ್ಯ, ಧೈರ್ಯ, ಕ್ಷಮೆ, ಲೋಭವಿಲ್ಲದಿರುವಿಕೆ – ಈ ರೀತಿಯಲ್ಲಿ ಧರ್ಮದ ಮಾರ್ಗ ಎಂಟು ವಿಧ.’</p>.<p>ನಮ್ಮ ಜೀವನವನ್ನು ಧರ್ಮಮಾರ್ಗದಲ್ಲಿ ಮುನ್ನಡೆಸಬೇಕು ಎಂಬುದನ್ನು ಆಗಾಗ ಕೇಳುತ್ತಿರುತ್ತೇವೆ; ನಮ್ಮ ದೇಶದ ಆದರ್ಶ ಕೂಡ ಇದೆ ಆಗಿದೆ ಎಂಬುದು ನಮ್ಮ ನಂಬಿಕೆ ಕೂಡ. ಹೀಗಿದ್ದರೂ ಧರ್ಮ ಎಂದರೆ ಏನು ಎಂದು ವಿವರಿಸುವುದು ಸುಲಭವಲ್ಲ. ಆದರೆ ಸುಭಾಷಿತ ಇಲ್ಲಿ ಧರ್ಮ ಎಲ್ಲೆಲ್ಲಿ ಇದೆ ಎಂಬುದನ್ನು ತೋರಿಸಿಕೊಟ್ಟಿದೆ.</p>.<p>ಯಜ್ಞ ಎಂದರೆ ಹಂಚಿಕೊಂಡು ತಿನ್ನುವುದು, ಸಾಮೂಹಿಕ ವಿತರಣೆ, ಕೃತಜ್ಞತೆ; ಅಧ್ಯಯನ ಎಂದರೆ ತಿಳಿವಳಿಕೆಯನ್ನು ಸಂಪಾದಿಸುವುದು; ಯಾರು ಅಬಲರೋ ಅವರ ಸಹಾಯಕ್ಕೆ ಒದಗವುದೇ ದಾನ; ನಮ್ಮ ಮನಸ್ಸು, ಬುದ್ಧಿ, ಶರೀರಗಳನ್ನು ನಮ್ಮ ವಶದಲ್ಲಿಟ್ಟುಕೊಳ್ಳಲು ನಡೆಸುವ ಸಾಧನೆಯೇ ತಪಸ್ಸು; ಸತ್ಯವನ್ನು ಹೇಳುವುದು, ಸತ್ಯವನ್ನು ಕೇಳುವುದು, ಸತ್ಯದ ನೆರವಿನಿಂದ ಜೀವನವನ್ನು ರೂಪಿಸಿಕೊಳ್ಳುವುದು; ಧರ್ಮಮಾರ್ಗದಲ್ಲಿ ನಡೆಯುವಾಗ ಎದುರಾಗುವ ಎಲ್ಲ ವಿಧದ ಆತಂಕಗಳನ್ನು ಎದುರಿಸಬಲ್ಲ ನಿಲುವೇ ಧೈರ್ಯ; ನಮಗಿಂತಲೂ ಬಲಹೀನರು ತಪ್ಪು ಮಾಡಿದಾಗ ಅದನ್ನು ಕ್ಷಮಿಸಬಲ್ಲ ಔದಾರ್ಯವೇ ಕ್ಷಮೆ; ಹಿತವಾದ ಮತ್ತು ಮಿತವಾದ ಜೀವನಕ್ರಮವನ್ನು ರೂಪಿಸಿಕೊಳ್ಳುವುದು, ಅತಿಯಾದ ಆಸೆಗೆ ವಶನಾಗದಿರುವುದೇ ಲೋಭ ಇಲ್ಲದಿರುವಿಕೆ – ಇವೇ ಧರ್ಮದ ಹೆಜ್ಜೆಗಳು ಎಂದು ಸುಭಾಷಿತ ನಿರೂಪಿಸಿದೆ.</p>.<p>ಈ ಧರ್ಮಮಾರ್ಗದಲ್ಲಿ ಏಕೆ ನಡೆಯಬೇಕು ಎಂದರೆ, ಈ ಮಾರ್ಗದಲ್ಲಿ ನಡೆಯುವವನು,</p>.<p><strong>ಧರ್ಮೇಣ ಹಿ ಸಹಾಯೇನ ತಮಸ್ತರತಿ ದುಸ್ತರಮ್ ।</strong></p>.<p>’ದಾಟಲು ಅಸಾಧ್ಯವಾದ ಕತ್ತಲೆಯನ್ನು ಕೂಡ ಧರ್ಮದ ಸಹಾಯದಿಂದ ದಾಟಿಬಿಡುತ್ತಾನೆ’ ಎಂದಿದೆ ಇನ್ನೊಂದು ಸುಭಾಷಿತ.</p>.<p>ಧರ್ಮಮಾರ್ಗದ ಈ ವಿವರಗಳನ್ನು ಹಲವು ಶಾಸ್ತ್ರಗಳಲ್ಲಿ ಕಾಣಬಹುದು; ಉದಾಹರಣೆಗೆ ಈ ಶ್ಲೋಕವನ್ನು ನೋಡಿ:</p>.<p><strong>ಧೃತಿ ಕ್ಞಮಾ ದಮೋsಸ್ತೇಯಂ ಶೌಚಮಿಂದ್ರಿಯನಿಗ್ರಹಃ ।</strong></p>.<p><strong>ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಮ್ ।।</strong></p>.<p>‘ಧೈರ್ಯ, ಕ್ಷಮೆ, ಬಹಿರಿಂದ್ರಿಯ ನಿಗ್ರಹ, ಕದಿಯದಿರುವುದು, ಶುಚಿತ್ವ, ಇಂದ್ರಿಯಜಯ, ಬುದ್ಧಿ, ವಿದ್ಯೆ, ಸತ್ಯ, ಕೋಪ ಇಲ್ಲದಿರುವುದು – ಇವು ಹತ್ತು ಧರ್ಮದ ಲಕ್ಷಣ.’</p>.<p>ಧರ್ಮವೊಂದೇ ನಮ್ಮನ್ನು ಎಂದಿಗೂ ಎಲ್ಲೆಲ್ಲಿಯೂ ಕಾಪಾಡಬಲ್ಲ ಶಕ್ತಿ ಎಂಬುದು ನಮ್ಮ ಸಂಸ್ಕೃತಿಯ ನಿಲವು:</p>.<p><strong>ನಾಮುತ್ರ ಹಿ ಸಹಾಯಾರ್ಥಂ ಪಿತಾ ಮಾತಾ ಚ ತಿಷ್ಠತಿ ।</strong></p>.<p><strong>ನ ಪುತ್ರದಾರಾ ನ ಜ್ಞಾತಿರ್ಧರ್ಮಸ್ತಿಷ್ಠತಿ ಕೇವಲಃ ।।</strong><br /><br />‘ಪರಲೋಕದಲ್ಲಿ ಸಹಾಯಕ್ಕಾಗಿ ತಂದೆಯಾಗಲೀ ತಾಯಿಯಾಗಲೀ ನಿಲ್ಲುವುದಿಲ್ಲ. ಮಕ್ಕಳು ಮಡದಿ ಅಥವಾ ಜ್ಞಾತಿಗಳು ಕೂಡ ನಿಲ್ಲುವುದಿಲ್ಲ. ಅಲ್ಲಿ ಸಹಾಯಕ್ಕೆ ಒದಗುವುದು ಕೇವಲ ಧರ್ಮ ಒಂದೇ’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಜ್ಞಾಧ್ಯಯನದಾನಾನಿ ತಪಃ ಸತ್ಯಂ ಧೃತಿಃ ಕ್ಷಮಾ ।</strong></p>.<p><strong>ಅಲೋಭ ಇತಿ ಮಾರ್ಗೋಯಂ ಧರ್ಮಸ್ಯಾಷ್ಟವಿಧಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಯಜ್ಞ, ಅಧ್ಯಯನ, ದಾನ, ತಪಸ್ಸು, ಸತ್ಯ, ಧೈರ್ಯ, ಕ್ಷಮೆ, ಲೋಭವಿಲ್ಲದಿರುವಿಕೆ – ಈ ರೀತಿಯಲ್ಲಿ ಧರ್ಮದ ಮಾರ್ಗ ಎಂಟು ವಿಧ.’</p>.<p>ನಮ್ಮ ಜೀವನವನ್ನು ಧರ್ಮಮಾರ್ಗದಲ್ಲಿ ಮುನ್ನಡೆಸಬೇಕು ಎಂಬುದನ್ನು ಆಗಾಗ ಕೇಳುತ್ತಿರುತ್ತೇವೆ; ನಮ್ಮ ದೇಶದ ಆದರ್ಶ ಕೂಡ ಇದೆ ಆಗಿದೆ ಎಂಬುದು ನಮ್ಮ ನಂಬಿಕೆ ಕೂಡ. ಹೀಗಿದ್ದರೂ ಧರ್ಮ ಎಂದರೆ ಏನು ಎಂದು ವಿವರಿಸುವುದು ಸುಲಭವಲ್ಲ. ಆದರೆ ಸುಭಾಷಿತ ಇಲ್ಲಿ ಧರ್ಮ ಎಲ್ಲೆಲ್ಲಿ ಇದೆ ಎಂಬುದನ್ನು ತೋರಿಸಿಕೊಟ್ಟಿದೆ.</p>.<p>ಯಜ್ಞ ಎಂದರೆ ಹಂಚಿಕೊಂಡು ತಿನ್ನುವುದು, ಸಾಮೂಹಿಕ ವಿತರಣೆ, ಕೃತಜ್ಞತೆ; ಅಧ್ಯಯನ ಎಂದರೆ ತಿಳಿವಳಿಕೆಯನ್ನು ಸಂಪಾದಿಸುವುದು; ಯಾರು ಅಬಲರೋ ಅವರ ಸಹಾಯಕ್ಕೆ ಒದಗವುದೇ ದಾನ; ನಮ್ಮ ಮನಸ್ಸು, ಬುದ್ಧಿ, ಶರೀರಗಳನ್ನು ನಮ್ಮ ವಶದಲ್ಲಿಟ್ಟುಕೊಳ್ಳಲು ನಡೆಸುವ ಸಾಧನೆಯೇ ತಪಸ್ಸು; ಸತ್ಯವನ್ನು ಹೇಳುವುದು, ಸತ್ಯವನ್ನು ಕೇಳುವುದು, ಸತ್ಯದ ನೆರವಿನಿಂದ ಜೀವನವನ್ನು ರೂಪಿಸಿಕೊಳ್ಳುವುದು; ಧರ್ಮಮಾರ್ಗದಲ್ಲಿ ನಡೆಯುವಾಗ ಎದುರಾಗುವ ಎಲ್ಲ ವಿಧದ ಆತಂಕಗಳನ್ನು ಎದುರಿಸಬಲ್ಲ ನಿಲುವೇ ಧೈರ್ಯ; ನಮಗಿಂತಲೂ ಬಲಹೀನರು ತಪ್ಪು ಮಾಡಿದಾಗ ಅದನ್ನು ಕ್ಷಮಿಸಬಲ್ಲ ಔದಾರ್ಯವೇ ಕ್ಷಮೆ; ಹಿತವಾದ ಮತ್ತು ಮಿತವಾದ ಜೀವನಕ್ರಮವನ್ನು ರೂಪಿಸಿಕೊಳ್ಳುವುದು, ಅತಿಯಾದ ಆಸೆಗೆ ವಶನಾಗದಿರುವುದೇ ಲೋಭ ಇಲ್ಲದಿರುವಿಕೆ – ಇವೇ ಧರ್ಮದ ಹೆಜ್ಜೆಗಳು ಎಂದು ಸುಭಾಷಿತ ನಿರೂಪಿಸಿದೆ.</p>.<p>ಈ ಧರ್ಮಮಾರ್ಗದಲ್ಲಿ ಏಕೆ ನಡೆಯಬೇಕು ಎಂದರೆ, ಈ ಮಾರ್ಗದಲ್ಲಿ ನಡೆಯುವವನು,</p>.<p><strong>ಧರ್ಮೇಣ ಹಿ ಸಹಾಯೇನ ತಮಸ್ತರತಿ ದುಸ್ತರಮ್ ।</strong></p>.<p>’ದಾಟಲು ಅಸಾಧ್ಯವಾದ ಕತ್ತಲೆಯನ್ನು ಕೂಡ ಧರ್ಮದ ಸಹಾಯದಿಂದ ದಾಟಿಬಿಡುತ್ತಾನೆ’ ಎಂದಿದೆ ಇನ್ನೊಂದು ಸುಭಾಷಿತ.</p>.<p>ಧರ್ಮಮಾರ್ಗದ ಈ ವಿವರಗಳನ್ನು ಹಲವು ಶಾಸ್ತ್ರಗಳಲ್ಲಿ ಕಾಣಬಹುದು; ಉದಾಹರಣೆಗೆ ಈ ಶ್ಲೋಕವನ್ನು ನೋಡಿ:</p>.<p><strong>ಧೃತಿ ಕ್ಞಮಾ ದಮೋsಸ್ತೇಯಂ ಶೌಚಮಿಂದ್ರಿಯನಿಗ್ರಹಃ ।</strong></p>.<p><strong>ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಮ್ ।।</strong></p>.<p>‘ಧೈರ್ಯ, ಕ್ಷಮೆ, ಬಹಿರಿಂದ್ರಿಯ ನಿಗ್ರಹ, ಕದಿಯದಿರುವುದು, ಶುಚಿತ್ವ, ಇಂದ್ರಿಯಜಯ, ಬುದ್ಧಿ, ವಿದ್ಯೆ, ಸತ್ಯ, ಕೋಪ ಇಲ್ಲದಿರುವುದು – ಇವು ಹತ್ತು ಧರ್ಮದ ಲಕ್ಷಣ.’</p>.<p>ಧರ್ಮವೊಂದೇ ನಮ್ಮನ್ನು ಎಂದಿಗೂ ಎಲ್ಲೆಲ್ಲಿಯೂ ಕಾಪಾಡಬಲ್ಲ ಶಕ್ತಿ ಎಂಬುದು ನಮ್ಮ ಸಂಸ್ಕೃತಿಯ ನಿಲವು:</p>.<p><strong>ನಾಮುತ್ರ ಹಿ ಸಹಾಯಾರ್ಥಂ ಪಿತಾ ಮಾತಾ ಚ ತಿಷ್ಠತಿ ।</strong></p>.<p><strong>ನ ಪುತ್ರದಾರಾ ನ ಜ್ಞಾತಿರ್ಧರ್ಮಸ್ತಿಷ್ಠತಿ ಕೇವಲಃ ।।</strong><br /><br />‘ಪರಲೋಕದಲ್ಲಿ ಸಹಾಯಕ್ಕಾಗಿ ತಂದೆಯಾಗಲೀ ತಾಯಿಯಾಗಲೀ ನಿಲ್ಲುವುದಿಲ್ಲ. ಮಕ್ಕಳು ಮಡದಿ ಅಥವಾ ಜ್ಞಾತಿಗಳು ಕೂಡ ನಿಲ್ಲುವುದಿಲ್ಲ. ಅಲ್ಲಿ ಸಹಾಯಕ್ಕೆ ಒದಗುವುದು ಕೇವಲ ಧರ್ಮ ಒಂದೇ’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>