ಅತಿಥಿಯಾದವನು ದೇವರೇ ಆದಮೇಲೆ ಅವನು ಯಾವ ರೂಪದಲ್ಲಿ ಬಂದರೇನು? ಅದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು. ಮನೆಗೆ ಬಂದ ಅತಿಥಿ ಅಥವಾ ಅಭ್ಯಾಗತ, ಅವರು ವಯಸ್ಸಿನಲ್ಲಿ ಚಿಕ್ಕವರಿಲಿ, ದೊಡ್ಡವರಿರಲಿ ಅವರನ್ನು ಸರಿಯಾಗಿ ಸತ್ಕರಿಸಬೇಕು ಎಂಬುದು ಇಲ್ಲಿಯ ನಿಲವು. ‘ಮನೆಗೆ ಬಂದವನು ಬಾಲನಾಗಿರಲಿ, ವೃದ್ಧನಾಗಿರಲಿ, ಯುವಕನಾಗಿರಲಿ – ಅವನಿಗೆ ಸತ್ಕಾರವನ್ನು ಮಾಡಬೇಕು. ಯಾವಾಗಲೂ ಅಭ್ಯಾಗತನಾದವನು ಗುರುಸಮಾನ’ ಎಂದಿದೆ, ಸುಭಾಷಿತ.