ಅಧ್ಯಾತ್ಮದ ಸಾಧನೆಯಲ್ಲಿ ಗುರುವಿನ ಪಾತ್ರ ದೊಡ್ಡದು. ಒಳ್ಳೆಯ ವಿದ್ವಾಂಸ ಎಂದರೆ ಶಾಸ್ತ್ರಗಳು ನಿರೂಪಿಸುವ ಮೋಕ್ಷಮಾರ್ಗವನ್ನು ನಮಗೆ ಮನದಟ್ಟುಮಾಡಿಸುವವನು. ಪಾದುಕೆಗಳ ಸೇವನೆ ಎಂದರೆ ನಿರ್ಗುಣತತ್ತ್ವದ ಮೊದಲ ಹಂತ; ಉಪಾಸನೆ. ಇದಾದ ಬಳಿಕ ವೇದಾಂತವಾಕ್ಯಗಳನ್ನು ಚೆನ್ನಾಗಿ ಶ್ರವಣ, ಮನನಗಳನ್ನು ಮಾಡಬೇಕು. ಬಳಿಕ ಶಾಸ್ತ್ರಗಳು ಹೇಳುವ ಬ್ರಹ್ಮವಸ್ತುವನ್ನು ಹುಡುಕಬೇಕು.