<p>ಕಿಂ ನು ಮೇ ಸ್ಯಾದಿದಂ ಕೃತ್ವಾ ಕಿಂ ನು ಮೇ ಸ್ಯಾದಕುರ್ವತಃ ।</p>.<p>ಇತಿ ಸಂಚಿಂತ್ಯ ಮನಸಾ ಪ್ರಾಜ್ಞಃ ಕುರ್ವಿತ ವಾ ನವಾ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಈ ಕಾರ್ಯವನ್ನು ಮಾಡಿದರೆ ನನಗೆ ಯಾವ ಪ್ರಯೋಜನ ಆದೀತು? ಇದನ್ನು ಮಾಡದಿದ್ದರೆ ಏನಾಗುವುದು? – ಎಂದು ವಿಮರ್ಶಿಸಿ, ಆಮೇಲೆ ಪ್ರಾಜ್ಞನಾದವನು ಅದನ್ನು ಮಾಡಬೇಕು, ಇಲ್ಲವೆ ಬಿಟ್ಟುಬಿಡಬೇಕು.’</p>.<p>ಆತುರಗಾರನಿಗೆ ಬುದ್ಧಿ ಮಟ್ಟ – ಎಂಬ ಗಾದೆಯನ್ನು ನಾವೆಲ್ಲರೂ ಬಲ್ಲೆವು. ಸುಭಾಷಿತದ ಉದ್ದೇಶ ಕೂಡ ಈ ಗಾದೆಯ ವಿಷಯವನ್ನು ಹೇಳುವುದೇ ಹೌದು.</p>.<p>ನಾವೆಲ್ಲರೂ ಪ್ರತಿ ಕ್ಷಣವೂ ಒಂದಲ್ಲ ಒಂದು ಕೆಲಸವನ್ನು ಮಾಡುತ್ತಲೇ ಇರುತ್ತೇವೆ. ಆದರೆ ಆ ಕೆಲಸವನ್ನು ಮಾಡುವುದರಿಂದ ಮುಂದೆ ಏನಾಗುವುದು ಎಂಬ ಆಲೋಚನೆಯನ್ನು ಮಾಡುವುದಿಲ್ಲ. ಸುಭಾಷಿತ ಅದನ್ನೇ ಇಲ್ಲಿ ಹೇಳುತ್ತಿರುವುದು. ಇಂಥ ಪ್ರವೃತ್ತಿ ನಮ್ಮ ಕಾಲಕ್ಕೆ ಅಥವಾ ನಮ್ಮ ಜನಾಂಗಕ್ಕೆ ಮಾತ್ರ ಸೇರಿದ ನಡೆವಳಿಕೆ ಅಲ್ಲ; ಇತಿಹಾಸದುದ್ದಕ್ಕೂ ನಾವು ಇಂಥದೇ ಮನೋಧರ್ಮವನ್ನು ನೋಡುತ್ತೇವೆ.</p>.<p>ನಮ್ಮ ದೇಶದ ಇತಿಹಾಸವನ್ನೇ ನೋಡಬಹುದು. ನಮ್ಮ ರಾಜರು ಪರಸ್ಪರ ಜಗಳದಲ್ಲಿದ್ದರು. ಈ ಆವಕಾಶವನ್ನು ಬಳಸಿಕೊಂಡು ಹೊರಗಿನ ಆಕ್ರಮಣಕಾರರು ದೇಶದೊಳಕ್ಕೆ ನುಸುಳಿದರು. ನಮ್ಮ ರಾಜರೂ ಕೆಲವರು ಅವರ ಪರವಾಗಿಯೇ ನಿಂತರು. ಅವರು ಆಗ ಯೋಚಿಸಬೇಕಿತ್ತು, ‘ನಾಳೆ ಈ ಆಕ್ರಮಣಕಾರರು ಈ ನೆಲವನ್ನು ಏನು ಮಾಡುತ್ತಾರೆ‘ ಎಂದು. ಆದರೆ ಅವರು ಹಾಗೆ ಯೋಚಿಸಲಿಲ್ಲ. ನಮ್ಮ ದೇಶ ಹಂತಹಂತವಾಗಿ ಸ್ವಾತಂತ್ರ್ಯವನ್ನೇ ಕಳೆದುಕೊಂಡಿತು.</p>.<p>ಇವತ್ತು ನಾವು ಪಕ್ಕದ ಮನೆಯವರೊಂದಿಗೆ ಹಗೆಯನ್ನು ಸಾಧಿಸಿ ಮೂರನೆಯ ವ್ಯಕ್ತಿಯನ್ನು ಅವರ ಮೇಲೆ ಛೂ ಬಿಡುತ್ತೇವೆ ಎಂದು ಇಟ್ಟುಕೊಳ್ಳಿ. ನಾಳೆ ಆ ಮೂರನೆಯ ವ್ಯಕ್ತಿ ನಮ್ಮ ಮೇಲೂ ದಾಳಿ ಮಾಡಬಹುದು. ಏಕೆಂದರೆ ಅವನಿಗೆ ಗೊತ್ತು, ಪಕ್ಕದ ಮನೆಯವರು ಇವರೊಂದಿಗೆ ಸೌಹಾರ್ದವಾಗಿಲ್ಲ; ಅವರು ಇವನ ಸಹಾಯಕ್ಕೆ ಬರುವುದಿಲ್ಲ ಎಂದು.</p>.<p>ಹೀಗಾಗಿ ನಾವು ಈ ಕ್ಷಣದ ಬಗ್ಗೆ ಮಾತ್ರ ಯೋಚಿಸದೆ, ಮುಂದೆ ಏನಾಗುತ್ತದೆ ಎಂದು ಸಮಾಧಾನದಿಂದ ಯೋಚಿಸಿ, ಆ ಬಳಿಕವಷ್ಟೆ ಆ ಕೆಲಸದಲ್ಲಿ ತೊಡಗಬೇಕು.</p>.<p>ಇಂದು ಕೋವಿಡ್ನ ಹಾವಳಿ ಕಡಿಮೆ ಇದೆ ಎಂದು ಎಚ್ಚರಿಕೆಯಿಲ್ಲದೆ ನಡೆದುಕೊಂಡರೆ ನಾಳೆ ಅನಾಹುತ ಹೆಚ್ಚಾಗಬಹುದಲ್ಲವೆ – ಎಂಬ ಆಲೋಚನೆ ನಮಗೆ ಬರಬೇಕು. ಇದೇ ವಿವೇಕದ ಲಕ್ಷಣ.</p>.<p>ಇನ್ನೊಂದು ಸುಭಾಷಿತ ಪಾತ್ರ–ಆಪಾತ್ರಗಳ ಬಗ್ಗೆ ಸೊಗಸಾಗಿ ಹೇಳಿದೆ, ಹೀಗೆ:</p>.<p>ಪಾತ್ರಾಪಾತ್ರವಿವೋಕೋsಸ್ತಿ ಧೇನುಪನ್ನಗಯೋರಿವ ।</p>.<p>ತೃಣಾತ್ ಸಂಜಾಯತೇ ಕ್ಷೀರಂ ಕ್ಷೀರಾತ್ ಸಂಜಾಯತೇ ವಿಷಮ್ ।।</p>.<p>ಎಂದರೆ, ‘ಇದು ಪಾತ್ರ, ಇದು ಅಪಾತ್ರ – ಎಂಬ ವಿವೇಕ ಇರಬೇಕು. ಹಸು, ಹಾವುಗಳೇ ಇದಕ್ಕೆ ಉದಾಹರಣೆ. ಹಸುವಿಗೆ ಹುಲ್ಲನ್ನು ತಿನಿಸಿದರೆ ಹುಲ್ಲಿನಿಂದ ಹಾಲು ಬರುತ್ತದೆ; ಹಾಲನ್ನು ಹಾವಿಗೆ ಕೊಟ್ಟರೆ ಹಾಲಿನಿಂದ ವಿಷ ಹುಟ್ಟುತ್ತದೆ.’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಿಂ ನು ಮೇ ಸ್ಯಾದಿದಂ ಕೃತ್ವಾ ಕಿಂ ನು ಮೇ ಸ್ಯಾದಕುರ್ವತಃ ।</p>.<p>ಇತಿ ಸಂಚಿಂತ್ಯ ಮನಸಾ ಪ್ರಾಜ್ಞಃ ಕುರ್ವಿತ ವಾ ನವಾ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಈ ಕಾರ್ಯವನ್ನು ಮಾಡಿದರೆ ನನಗೆ ಯಾವ ಪ್ರಯೋಜನ ಆದೀತು? ಇದನ್ನು ಮಾಡದಿದ್ದರೆ ಏನಾಗುವುದು? – ಎಂದು ವಿಮರ್ಶಿಸಿ, ಆಮೇಲೆ ಪ್ರಾಜ್ಞನಾದವನು ಅದನ್ನು ಮಾಡಬೇಕು, ಇಲ್ಲವೆ ಬಿಟ್ಟುಬಿಡಬೇಕು.’</p>.<p>ಆತುರಗಾರನಿಗೆ ಬುದ್ಧಿ ಮಟ್ಟ – ಎಂಬ ಗಾದೆಯನ್ನು ನಾವೆಲ್ಲರೂ ಬಲ್ಲೆವು. ಸುಭಾಷಿತದ ಉದ್ದೇಶ ಕೂಡ ಈ ಗಾದೆಯ ವಿಷಯವನ್ನು ಹೇಳುವುದೇ ಹೌದು.</p>.<p>ನಾವೆಲ್ಲರೂ ಪ್ರತಿ ಕ್ಷಣವೂ ಒಂದಲ್ಲ ಒಂದು ಕೆಲಸವನ್ನು ಮಾಡುತ್ತಲೇ ಇರುತ್ತೇವೆ. ಆದರೆ ಆ ಕೆಲಸವನ್ನು ಮಾಡುವುದರಿಂದ ಮುಂದೆ ಏನಾಗುವುದು ಎಂಬ ಆಲೋಚನೆಯನ್ನು ಮಾಡುವುದಿಲ್ಲ. ಸುಭಾಷಿತ ಅದನ್ನೇ ಇಲ್ಲಿ ಹೇಳುತ್ತಿರುವುದು. ಇಂಥ ಪ್ರವೃತ್ತಿ ನಮ್ಮ ಕಾಲಕ್ಕೆ ಅಥವಾ ನಮ್ಮ ಜನಾಂಗಕ್ಕೆ ಮಾತ್ರ ಸೇರಿದ ನಡೆವಳಿಕೆ ಅಲ್ಲ; ಇತಿಹಾಸದುದ್ದಕ್ಕೂ ನಾವು ಇಂಥದೇ ಮನೋಧರ್ಮವನ್ನು ನೋಡುತ್ತೇವೆ.</p>.<p>ನಮ್ಮ ದೇಶದ ಇತಿಹಾಸವನ್ನೇ ನೋಡಬಹುದು. ನಮ್ಮ ರಾಜರು ಪರಸ್ಪರ ಜಗಳದಲ್ಲಿದ್ದರು. ಈ ಆವಕಾಶವನ್ನು ಬಳಸಿಕೊಂಡು ಹೊರಗಿನ ಆಕ್ರಮಣಕಾರರು ದೇಶದೊಳಕ್ಕೆ ನುಸುಳಿದರು. ನಮ್ಮ ರಾಜರೂ ಕೆಲವರು ಅವರ ಪರವಾಗಿಯೇ ನಿಂತರು. ಅವರು ಆಗ ಯೋಚಿಸಬೇಕಿತ್ತು, ‘ನಾಳೆ ಈ ಆಕ್ರಮಣಕಾರರು ಈ ನೆಲವನ್ನು ಏನು ಮಾಡುತ್ತಾರೆ‘ ಎಂದು. ಆದರೆ ಅವರು ಹಾಗೆ ಯೋಚಿಸಲಿಲ್ಲ. ನಮ್ಮ ದೇಶ ಹಂತಹಂತವಾಗಿ ಸ್ವಾತಂತ್ರ್ಯವನ್ನೇ ಕಳೆದುಕೊಂಡಿತು.</p>.<p>ಇವತ್ತು ನಾವು ಪಕ್ಕದ ಮನೆಯವರೊಂದಿಗೆ ಹಗೆಯನ್ನು ಸಾಧಿಸಿ ಮೂರನೆಯ ವ್ಯಕ್ತಿಯನ್ನು ಅವರ ಮೇಲೆ ಛೂ ಬಿಡುತ್ತೇವೆ ಎಂದು ಇಟ್ಟುಕೊಳ್ಳಿ. ನಾಳೆ ಆ ಮೂರನೆಯ ವ್ಯಕ್ತಿ ನಮ್ಮ ಮೇಲೂ ದಾಳಿ ಮಾಡಬಹುದು. ಏಕೆಂದರೆ ಅವನಿಗೆ ಗೊತ್ತು, ಪಕ್ಕದ ಮನೆಯವರು ಇವರೊಂದಿಗೆ ಸೌಹಾರ್ದವಾಗಿಲ್ಲ; ಅವರು ಇವನ ಸಹಾಯಕ್ಕೆ ಬರುವುದಿಲ್ಲ ಎಂದು.</p>.<p>ಹೀಗಾಗಿ ನಾವು ಈ ಕ್ಷಣದ ಬಗ್ಗೆ ಮಾತ್ರ ಯೋಚಿಸದೆ, ಮುಂದೆ ಏನಾಗುತ್ತದೆ ಎಂದು ಸಮಾಧಾನದಿಂದ ಯೋಚಿಸಿ, ಆ ಬಳಿಕವಷ್ಟೆ ಆ ಕೆಲಸದಲ್ಲಿ ತೊಡಗಬೇಕು.</p>.<p>ಇಂದು ಕೋವಿಡ್ನ ಹಾವಳಿ ಕಡಿಮೆ ಇದೆ ಎಂದು ಎಚ್ಚರಿಕೆಯಿಲ್ಲದೆ ನಡೆದುಕೊಂಡರೆ ನಾಳೆ ಅನಾಹುತ ಹೆಚ್ಚಾಗಬಹುದಲ್ಲವೆ – ಎಂಬ ಆಲೋಚನೆ ನಮಗೆ ಬರಬೇಕು. ಇದೇ ವಿವೇಕದ ಲಕ್ಷಣ.</p>.<p>ಇನ್ನೊಂದು ಸುಭಾಷಿತ ಪಾತ್ರ–ಆಪಾತ್ರಗಳ ಬಗ್ಗೆ ಸೊಗಸಾಗಿ ಹೇಳಿದೆ, ಹೀಗೆ:</p>.<p>ಪಾತ್ರಾಪಾತ್ರವಿವೋಕೋsಸ್ತಿ ಧೇನುಪನ್ನಗಯೋರಿವ ।</p>.<p>ತೃಣಾತ್ ಸಂಜಾಯತೇ ಕ್ಷೀರಂ ಕ್ಷೀರಾತ್ ಸಂಜಾಯತೇ ವಿಷಮ್ ।।</p>.<p>ಎಂದರೆ, ‘ಇದು ಪಾತ್ರ, ಇದು ಅಪಾತ್ರ – ಎಂಬ ವಿವೇಕ ಇರಬೇಕು. ಹಸು, ಹಾವುಗಳೇ ಇದಕ್ಕೆ ಉದಾಹರಣೆ. ಹಸುವಿಗೆ ಹುಲ್ಲನ್ನು ತಿನಿಸಿದರೆ ಹುಲ್ಲಿನಿಂದ ಹಾಲು ಬರುತ್ತದೆ; ಹಾಲನ್ನು ಹಾವಿಗೆ ಕೊಟ್ಟರೆ ಹಾಲಿನಿಂದ ವಿಷ ಹುಟ್ಟುತ್ತದೆ.’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>