<p><strong>ಲೋಭಮೂಲಾನಿ ಪಾಪಾನಿ ವ್ಯಾಧಯೋ ರಸಮೂಲಕಾಃ ।</strong></p>.<p><strong>ಸ್ನೇಹಮೂಲಾನಿ ದುಃಖಾನಿ ತ್ರೀಣಿ ತ್ಯಕ್ತ್ವಾ ಸುಖೀ ಭವೇತ್ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಪಾಪಗಳಿಗೆ ಆಸೆ ಮೂಲ; ರೋಗಗಳಿಗೆ ರಸವೇ ಮೂಲ; ದುಃಖಕ್ಕೆ ಸ್ನೇಹವೇ ಮೂಲ. ಆದುದರಿಂದ ಈ ಮೂರನ್ನು ತ್ಯಜಿಸಿ, ಸುಖಿಯಾಗಬೇಕು.’</p>.<p>ಕಾರಣವಿಲ್ಲದೆ ಕಾರ್ಯವಿಲ್ಲ. ಅದು ರೋಗ ಇರಲಿ, ಭೋಗ ಇರಲಿ; ಕಾರಣ ಇದ್ಧೇ ಇರುತ್ತದೆ. ಪಾಪಕ್ಕೂ ಕಾರಣ ಇರುತ್ತದೆ, ಪುಣ್ಯಕ್ಕೂ ಕಾರಣ ಇರುತ್ತದೆ. ಕೊರೊನಾ ಬಂದಿರುವುದಕ್ಕೂ ಕಾರಣ ಇರುತ್ತದೆ; ಅದು ಹೋಗುವುದಕ್ಕೂ ಕಾರಣ ಇರುತ್ತದೆ. ನಮಗೆ ಕಾರಣ ತಿಳಿಯುತ್ತಿಲ್ಲ ಎಂದ ಮಾತ್ರಕ್ಕೆ ಯಾವ ವಿದ್ಯಮಾನಕ್ಕೂ ಕಾರಣವೇ ಇರುವುದಿಲ್ಲ ಎಂದು ತೀರ್ಮಾನಿಸಲಾಗದು. ನಮ್ಮ ದುಃಖದ ಮೂಲಗಳನ್ನೂ ಅದರ ಕಾರಣಗಳನ್ನೂ ಸುಭಾಷಿತ ಇಲ್ಲಿ ಹೇಳುತ್ತಿದೆ.</p>.<p>ಆಸೆಯೇ ಪಾಪಗಳಿಗೆ ಮೂಲ ಎನ್ನುತ್ತಿದೆ ಸುಭಾಷಿತ. ಆಸೆ ಎಂಬುದು ಮನಸ್ಸಿನ ಆಕರ್ಷಣೆ. ಈ ಆಕರ್ಷಣೆಯ ಸೆಳೆತಕ್ಕೆ ಕೊನೆ ಎಂಬುದೇ ಇರದು. ಒಂದಾದ ಮೇಲೆ ಇನ್ನೊಂದು ಆಸೆ ಹುಟ್ಟುತ್ತಲೇ ಇರುತ್ತದೆ. ಹೀಗೆ ಹುಟ್ಟುವ ಆಸೆಗಳನ್ನು ಪೂರೈಸಿಕೊಳ್ಳಲು ಅಡ್ಡದಾರಿಗಳನ್ನೂ ಹಿಡಿಯುತ್ತೇವೆ. ಇದೇ ಪಾಪಗಳಿಗೆ ಕಾರಣವಾಗುತ್ತದೆ.</p>.<p>ರಸ ಎಂದರೆ ರುಚಿಗೆ ಕಾರಣವಾಗುವ ವಿವರ. ಉಪ್ಪು, ಹುಳಿ, ಖಾರ – ಇವೆಲ್ಲ ರಸಗಳೇ. ಎಂದರೆ ನಾಲಗೆಯ ರುಚಿಗೆ ಸಂಬಂಧಿಸಿದ ಸಂಗತಿಗಳು ಇವು. ನಾಲಗೆಯನ್ನು ಹತೋಟಿಯಲ್ಲಿಡುವುದು ಸುಲಭವಲ್ಲ. ರುಚಿಗೆ ಬಲಿಯಾದರೆ ‘ಅದು ತಿನ್ನೋಣ, ಇದು ತಿನ್ನೋಣ’ – ಎಂಬ ಬಯಕೆ ಸದಾ ಒಸರುತ್ತಲೇ ಇರುತ್ತದೆ. ನಾವು ತಿನ್ನುವುದೆಲ್ಲವೂ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಎಂದು ಹೇಳಲಾಗದಷ್ಟೆ! ಅದು, ಇದು ಎಂದು ಏನೇನೋ ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತೇವೆ. ಸುಭಾಷಿತ ಇದನ್ನೇ ಹೇಳುತ್ತಿರುವುದು ರಸವೇ ರೋಗಗಳಿಗೆ ಮೂಲ ಎಂದು.</p>.<p>ಮನುಷ್ಯ ಒಂಟಿಜೀವಿ ಅಲ್ಲ, ಸಂಘಜೀವಿ. ಇದು ಅವನ ಸಂತೋಷಕ್ಕೆ ಕಾರಣವಾಗುವಂತೆ ದುಃಖಕ್ಕೂ ಕಾರಣವಾಗುತ್ತದೆ. ಸಹಮಾನವರ ಸ್ನೇಹವನ್ನು ಬಯಸುವುದು ನಮ್ಮ ಸಹಜಸ್ವಭಾವ. ಆದರೆ ಕೆಲವೊಮ್ಮೆ ಸ್ನೇಹ ಅತಿಯಾಗುತ್ತದೆ; ಅದೇ ರಾಗವಾಗುತ್ತದೆ; ತುಂಬ ಹಚ್ಚಿಕೊಳ್ಳುತ್ತೇವೆ. ಸ್ನೇಹ ಚೆನ್ನಾಗಿ ಮುಂದುವರಿಯುತ್ತಿರುವಾಗ ಸಂತೋಷವಾಗಿಯೇ ಇರುತ್ತೇವೆ. ಆದರೆ ಯಾವುದೋ ಕಾರಣದಿಂದ ಆ ಸ್ನೇಹ ಮುರಿದು ಬಿದ್ದರೆ ಆಗ ದುಃಖದಲ್ಲಿ ಬೀಳುತ್ತೇವೆ.</p>.<p>ಹೀಗಾಗಿಯೇ ಸುಭಾಷಿತ ಹೇಳುತ್ತಿದೆ: ಆಸೆ, ರಸ ಮತ್ತು ಸ್ನೇಹ – ಈ ಮೂರನ್ನೂ ತ್ಯಜಿಸಿ ಸುಖವಾಗಿರಿ. ಪ್ರಯತ್ನ ಪಡಬಹುದು, ಅಲ್ಲವೆ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲೋಭಮೂಲಾನಿ ಪಾಪಾನಿ ವ್ಯಾಧಯೋ ರಸಮೂಲಕಾಃ ।</strong></p>.<p><strong>ಸ್ನೇಹಮೂಲಾನಿ ದುಃಖಾನಿ ತ್ರೀಣಿ ತ್ಯಕ್ತ್ವಾ ಸುಖೀ ಭವೇತ್ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಪಾಪಗಳಿಗೆ ಆಸೆ ಮೂಲ; ರೋಗಗಳಿಗೆ ರಸವೇ ಮೂಲ; ದುಃಖಕ್ಕೆ ಸ್ನೇಹವೇ ಮೂಲ. ಆದುದರಿಂದ ಈ ಮೂರನ್ನು ತ್ಯಜಿಸಿ, ಸುಖಿಯಾಗಬೇಕು.’</p>.<p>ಕಾರಣವಿಲ್ಲದೆ ಕಾರ್ಯವಿಲ್ಲ. ಅದು ರೋಗ ಇರಲಿ, ಭೋಗ ಇರಲಿ; ಕಾರಣ ಇದ್ಧೇ ಇರುತ್ತದೆ. ಪಾಪಕ್ಕೂ ಕಾರಣ ಇರುತ್ತದೆ, ಪುಣ್ಯಕ್ಕೂ ಕಾರಣ ಇರುತ್ತದೆ. ಕೊರೊನಾ ಬಂದಿರುವುದಕ್ಕೂ ಕಾರಣ ಇರುತ್ತದೆ; ಅದು ಹೋಗುವುದಕ್ಕೂ ಕಾರಣ ಇರುತ್ತದೆ. ನಮಗೆ ಕಾರಣ ತಿಳಿಯುತ್ತಿಲ್ಲ ಎಂದ ಮಾತ್ರಕ್ಕೆ ಯಾವ ವಿದ್ಯಮಾನಕ್ಕೂ ಕಾರಣವೇ ಇರುವುದಿಲ್ಲ ಎಂದು ತೀರ್ಮಾನಿಸಲಾಗದು. ನಮ್ಮ ದುಃಖದ ಮೂಲಗಳನ್ನೂ ಅದರ ಕಾರಣಗಳನ್ನೂ ಸುಭಾಷಿತ ಇಲ್ಲಿ ಹೇಳುತ್ತಿದೆ.</p>.<p>ಆಸೆಯೇ ಪಾಪಗಳಿಗೆ ಮೂಲ ಎನ್ನುತ್ತಿದೆ ಸುಭಾಷಿತ. ಆಸೆ ಎಂಬುದು ಮನಸ್ಸಿನ ಆಕರ್ಷಣೆ. ಈ ಆಕರ್ಷಣೆಯ ಸೆಳೆತಕ್ಕೆ ಕೊನೆ ಎಂಬುದೇ ಇರದು. ಒಂದಾದ ಮೇಲೆ ಇನ್ನೊಂದು ಆಸೆ ಹುಟ್ಟುತ್ತಲೇ ಇರುತ್ತದೆ. ಹೀಗೆ ಹುಟ್ಟುವ ಆಸೆಗಳನ್ನು ಪೂರೈಸಿಕೊಳ್ಳಲು ಅಡ್ಡದಾರಿಗಳನ್ನೂ ಹಿಡಿಯುತ್ತೇವೆ. ಇದೇ ಪಾಪಗಳಿಗೆ ಕಾರಣವಾಗುತ್ತದೆ.</p>.<p>ರಸ ಎಂದರೆ ರುಚಿಗೆ ಕಾರಣವಾಗುವ ವಿವರ. ಉಪ್ಪು, ಹುಳಿ, ಖಾರ – ಇವೆಲ್ಲ ರಸಗಳೇ. ಎಂದರೆ ನಾಲಗೆಯ ರುಚಿಗೆ ಸಂಬಂಧಿಸಿದ ಸಂಗತಿಗಳು ಇವು. ನಾಲಗೆಯನ್ನು ಹತೋಟಿಯಲ್ಲಿಡುವುದು ಸುಲಭವಲ್ಲ. ರುಚಿಗೆ ಬಲಿಯಾದರೆ ‘ಅದು ತಿನ್ನೋಣ, ಇದು ತಿನ್ನೋಣ’ – ಎಂಬ ಬಯಕೆ ಸದಾ ಒಸರುತ್ತಲೇ ಇರುತ್ತದೆ. ನಾವು ತಿನ್ನುವುದೆಲ್ಲವೂ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಎಂದು ಹೇಳಲಾಗದಷ್ಟೆ! ಅದು, ಇದು ಎಂದು ಏನೇನೋ ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತೇವೆ. ಸುಭಾಷಿತ ಇದನ್ನೇ ಹೇಳುತ್ತಿರುವುದು ರಸವೇ ರೋಗಗಳಿಗೆ ಮೂಲ ಎಂದು.</p>.<p>ಮನುಷ್ಯ ಒಂಟಿಜೀವಿ ಅಲ್ಲ, ಸಂಘಜೀವಿ. ಇದು ಅವನ ಸಂತೋಷಕ್ಕೆ ಕಾರಣವಾಗುವಂತೆ ದುಃಖಕ್ಕೂ ಕಾರಣವಾಗುತ್ತದೆ. ಸಹಮಾನವರ ಸ್ನೇಹವನ್ನು ಬಯಸುವುದು ನಮ್ಮ ಸಹಜಸ್ವಭಾವ. ಆದರೆ ಕೆಲವೊಮ್ಮೆ ಸ್ನೇಹ ಅತಿಯಾಗುತ್ತದೆ; ಅದೇ ರಾಗವಾಗುತ್ತದೆ; ತುಂಬ ಹಚ್ಚಿಕೊಳ್ಳುತ್ತೇವೆ. ಸ್ನೇಹ ಚೆನ್ನಾಗಿ ಮುಂದುವರಿಯುತ್ತಿರುವಾಗ ಸಂತೋಷವಾಗಿಯೇ ಇರುತ್ತೇವೆ. ಆದರೆ ಯಾವುದೋ ಕಾರಣದಿಂದ ಆ ಸ್ನೇಹ ಮುರಿದು ಬಿದ್ದರೆ ಆಗ ದುಃಖದಲ್ಲಿ ಬೀಳುತ್ತೇವೆ.</p>.<p>ಹೀಗಾಗಿಯೇ ಸುಭಾಷಿತ ಹೇಳುತ್ತಿದೆ: ಆಸೆ, ರಸ ಮತ್ತು ಸ್ನೇಹ – ಈ ಮೂರನ್ನೂ ತ್ಯಜಿಸಿ ಸುಖವಾಗಿರಿ. ಪ್ರಯತ್ನ ಪಡಬಹುದು, ಅಲ್ಲವೆ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>