<p>ನಮಸ್ತೇ ಶಾರದಾದೇವಿ</p>.<p>ಕಾಶ್ಮೀರಪುರವಾಸಿನಿ |</p>.<p>ತ್ವಾಮಹಂ ಪ್ರಾರ್ಥಯೇ ನಿತ್ಯಂ</p>.<p>ವಿದ್ಯಾಂ ಬುದ್ಧಿಂ ಚ ದೇಹಿ ಮೇ ||</p>.<p>(ಕಾಶ್ಮೀರಪುರದಲ್ಲಿ ವಾಸಿಸುತ್ತಿರುವ ಶಾರದಾದೇವಿಯೇ ನಿನಗೆ ನಮಸ್ಕಾರ. ನನಗೆ ವಿದ್ಯೆಯನ್ನೂ ಬುದ್ಧಿಯನ್ನೂ ಕೊಡು ಎಂದು ನಿತ್ಯವೂ ನಿನ್ನನ್ನು ಪ್ರಾರ್ಥಿಸುತ್ತೇನೆ.)</p>.<p>ನವರಾತ್ರಿಯಲ್ಲಿ ಆಚರಿಸುವ ಮುಖ್ಯವಾದ ಆರಾಧನೆಗಳಲ್ಲಿ ಸರಸ್ವತೀಪೂಜೆಯೂ ಒಂದು. ಒಂಬತ್ತು ದಿನಗಳಲ್ಲಿ ಮೂರು ದಿನಗಳನ್ನು ಶಕ್ತಿದೇವತೆಯನ್ನು ಸರಸ್ವತೀಸ್ವರೂಪದಲ್ಲಿಯೇ ಆಚರಿಸಲಾಗುತ್ತದೆ. ಮೂಲಾನಕ್ಷತ್ರದಲ್ಲಿ ಸರಸ್ವತಿಯನ್ನು ಆವಾಹಿಸಿಪೂಜೆಮಾಡುವುದು ಕ್ರಮ.</p>.<p>ಸರಸ್ವತಿ ಎಂದರೆ ವಿದ್ಯೆಗೆ ಒಡತಿ;ಅರಿವಿನತಾಯಿ; ತಿಳಿವಳಿಕೆಯ ಮೂಲ.</p>.<p>ಸರಸ್ವತಿಯ ಪೂಜೆಯನ್ನು ನಾವು ನವರಾತ್ರಿಯಲ್ಲಿ ಹೇಗೆ ಮಾಡುತ್ತಿದ್ದೇವೆ? ನಮ್ಮ ಇದುವರೆಗೂ ಓದುತ್ತಬಂದಿರುವ ಪುಸ್ತಕಗಳಿಗೇ ಪೂಜೆಯನ್ನು ಸಲ್ಲಿಸುವುದು ಪದ್ಧತಿ.</p>.<p>ಇಲ್ಲೊಂದು ಪ್ರಶ್ನೆ ಏಳುತ್ತದೆ. ಸರಸ್ವತಿಯ ಪೂಜೆಯ ದಿನ ಪುಸ್ತಕವನ್ನು ಓದುವುದು ಹೆಚ್ಚು ಸಾರ್ಥಕವಾಗಬಹುದು. ಆದರೆ ಪುಸ್ತಕಗಳನ್ನು ಓದುವುದಕ್ಕೆ ಅವಕಾಶ ಇಲ್ಲದಂತೆ ಪೂಜೆಗೆ ಅವನ್ನು ಬಳಸುವುದರ ಉದ್ದೇಶವಾದರೂ ಏನು?</p>.<p>ನಮ್ಮ ಸಂಸ್ಕೃತಿಯಲ್ಲಿ ಅಧ್ಯಯನಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದಾರೆ; ಮಾತ್ರವಲ್ಲ, ಅದಕ್ಕೊಂದು ಬಲವಾದ ಕ್ರಮವನ್ನೂ ರೂಪಿಸಲಾಗಿದೆ. ನಾವು ವಿದ್ಯೆಯನ್ನು ಮೂರು ಹಂತಗಳಲ್ಲಿ ದಕ್ಕಿಸಿಕೊಳ್ಳಬೇಕು ಎಂಬುದು ಈ ಕ್ರಮಗಳಲ್ಲಿ ಒಂದು; ಶ್ರವಣ, ಮನನ ಮತ್ತು ನಿದಿಧ್ಯಾಸನ – ಇವೇ ಆ ಮೂರು ಹಂತಗಳು.</p>.<p>ಶ್ರವಣ. ಇದು ಮೊದಲನೆಯ ಹಂತ. ಇಲ್ಲಿ ನಾವು ಓದುವುದು, ಕೇಳುವುದು – ಇಂಥ ಪ್ರಕ್ರಿಯೆಗಳ ಮೂಲಕ ಅರಿವಿನಆಕರಗಳನ್ನು ನಮ್ಮಲ್ಲಿ ತುಂಬಿಸಿಕೊಳ್ಳುತ್ತೇವೆ. ಹೀಗೆ ತುಂಬಿಸಿಕೊಂಡುದನ್ನು ನಮ್ಮ ವಿಚಾರಶಕ್ತಿಯಿಂದ ವಿಶ್ಲೇಷಣೆಗೆ ಒಳಪಡಿಸಬೇಕು; ಅವುಗಳ ಸಾರ್ಥಕತೆ–ನಿರರ್ಥಕತೆಗಳ ಬಗ್ಗೆ ಮೌಲ್ಯಮಾಪನವನ್ನು ನಡೆಸಬೇಕು. ಇದೇ ಮನನ; ಎರಡನೆಯ ಹಂತ. ಮೂರನೆಯ ಹಂತವೇ ನಿದಿಧ್ಯಾಸನ; ಎಂದರೆ ನಮಗೆ ಒಗ್ಗುವಂಥ ತಿಳಿವಳಿಕೆ ಯಾವುದೆಂದುನಮ್ಮ ವಿಚಾರಶಕ್ತಿಯಿಂದ ನಿರ್ಧಾರ ಮಾಡಿಕೊಂಡ ಮೇಲೆ ಅದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳುವುದು.</p>.<p>ನವರಾತ್ರಿಯ ಸಂದರ್ಭದಲ್ಲಿ ನಾವು ಪುಸ್ತಕಗಳಿಗೆ ’ವಿಶ್ರಾಂತಿ’ಯನ್ನು ಕೊಡುತ್ತಿರುವ ಸಾಂಕೇತಿಕತೆ ಏನು ಎಂದರೆ ನಾವು ಇದುವರೆಗೂ ಓದಿರುವುದನ್ನು ಮನನ ಮಾಡಬೇಕೆಂದು. ನಮ್ಮ ಅಧ್ಯಯನದಲ್ಲಿ ಮನನ ಎನ್ನುವುದು ತುಂಬ ಮುಖ್ಯವಾದ ವಿವರ ಎನ್ನುವುದನ್ನು ಸರಸ್ವತಿಯಪೂಜೆಎತ್ತಿಹಿಡಿಯುತ್ತಿದೆ.</p>.<p>ನಮ್ಮ ಸಂಸ್ಕೃತಿಯಲ್ಲಿ ಕಾಶ್ಮೀರವನ್ನು ಶಾರದೆಯ ನೆಲೆ ಎಂದು ಕಾಣಲಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ; ಭಾರತೀಯ ವಿದ್ಯಾಪರಂಪರೆಗೆ ಕಾಶ್ಮೀರ ನೀಡಿರುವ ಕೊಡುಗೆ ಅಪೂರ್ವವಾದುದು. ಕಾಶ್ಮೀರವನ್ನು ’ಶಾರದಾಪೀಠ’ ಎಂದೇ ಕರೆಯವುದು ವಾಡಿಕೆ. ಅಲ್ಲಿಯೇ ಸರ್ವಜ್ಞಪೀಠ ಇರುವುದು ಎಂಬುದೂ ನಮ್ಮ ನಂಬಿಕೆ. ಎಲ್ಲ ವಿದ್ಯೆಗಳ ಶಿಖರವೇ ಸರ್ವಜ್ಞತ್ವ. ಅದರ ನೆಲೆ ಕಾಶ್ಮೀರ ಎಂಬುದು ಈ ನಂಬಿಕೆಯ ಹಿಂದಿರುವ ಧ್ವನಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಮಸ್ತೇ ಶಾರದಾದೇವಿ</p>.<p>ಕಾಶ್ಮೀರಪುರವಾಸಿನಿ |</p>.<p>ತ್ವಾಮಹಂ ಪ್ರಾರ್ಥಯೇ ನಿತ್ಯಂ</p>.<p>ವಿದ್ಯಾಂ ಬುದ್ಧಿಂ ಚ ದೇಹಿ ಮೇ ||</p>.<p>(ಕಾಶ್ಮೀರಪುರದಲ್ಲಿ ವಾಸಿಸುತ್ತಿರುವ ಶಾರದಾದೇವಿಯೇ ನಿನಗೆ ನಮಸ್ಕಾರ. ನನಗೆ ವಿದ್ಯೆಯನ್ನೂ ಬುದ್ಧಿಯನ್ನೂ ಕೊಡು ಎಂದು ನಿತ್ಯವೂ ನಿನ್ನನ್ನು ಪ್ರಾರ್ಥಿಸುತ್ತೇನೆ.)</p>.<p>ನವರಾತ್ರಿಯಲ್ಲಿ ಆಚರಿಸುವ ಮುಖ್ಯವಾದ ಆರಾಧನೆಗಳಲ್ಲಿ ಸರಸ್ವತೀಪೂಜೆಯೂ ಒಂದು. ಒಂಬತ್ತು ದಿನಗಳಲ್ಲಿ ಮೂರು ದಿನಗಳನ್ನು ಶಕ್ತಿದೇವತೆಯನ್ನು ಸರಸ್ವತೀಸ್ವರೂಪದಲ್ಲಿಯೇ ಆಚರಿಸಲಾಗುತ್ತದೆ. ಮೂಲಾನಕ್ಷತ್ರದಲ್ಲಿ ಸರಸ್ವತಿಯನ್ನು ಆವಾಹಿಸಿಪೂಜೆಮಾಡುವುದು ಕ್ರಮ.</p>.<p>ಸರಸ್ವತಿ ಎಂದರೆ ವಿದ್ಯೆಗೆ ಒಡತಿ;ಅರಿವಿನತಾಯಿ; ತಿಳಿವಳಿಕೆಯ ಮೂಲ.</p>.<p>ಸರಸ್ವತಿಯ ಪೂಜೆಯನ್ನು ನಾವು ನವರಾತ್ರಿಯಲ್ಲಿ ಹೇಗೆ ಮಾಡುತ್ತಿದ್ದೇವೆ? ನಮ್ಮ ಇದುವರೆಗೂ ಓದುತ್ತಬಂದಿರುವ ಪುಸ್ತಕಗಳಿಗೇ ಪೂಜೆಯನ್ನು ಸಲ್ಲಿಸುವುದು ಪದ್ಧತಿ.</p>.<p>ಇಲ್ಲೊಂದು ಪ್ರಶ್ನೆ ಏಳುತ್ತದೆ. ಸರಸ್ವತಿಯ ಪೂಜೆಯ ದಿನ ಪುಸ್ತಕವನ್ನು ಓದುವುದು ಹೆಚ್ಚು ಸಾರ್ಥಕವಾಗಬಹುದು. ಆದರೆ ಪುಸ್ತಕಗಳನ್ನು ಓದುವುದಕ್ಕೆ ಅವಕಾಶ ಇಲ್ಲದಂತೆ ಪೂಜೆಗೆ ಅವನ್ನು ಬಳಸುವುದರ ಉದ್ದೇಶವಾದರೂ ಏನು?</p>.<p>ನಮ್ಮ ಸಂಸ್ಕೃತಿಯಲ್ಲಿ ಅಧ್ಯಯನಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದಾರೆ; ಮಾತ್ರವಲ್ಲ, ಅದಕ್ಕೊಂದು ಬಲವಾದ ಕ್ರಮವನ್ನೂ ರೂಪಿಸಲಾಗಿದೆ. ನಾವು ವಿದ್ಯೆಯನ್ನು ಮೂರು ಹಂತಗಳಲ್ಲಿ ದಕ್ಕಿಸಿಕೊಳ್ಳಬೇಕು ಎಂಬುದು ಈ ಕ್ರಮಗಳಲ್ಲಿ ಒಂದು; ಶ್ರವಣ, ಮನನ ಮತ್ತು ನಿದಿಧ್ಯಾಸನ – ಇವೇ ಆ ಮೂರು ಹಂತಗಳು.</p>.<p>ಶ್ರವಣ. ಇದು ಮೊದಲನೆಯ ಹಂತ. ಇಲ್ಲಿ ನಾವು ಓದುವುದು, ಕೇಳುವುದು – ಇಂಥ ಪ್ರಕ್ರಿಯೆಗಳ ಮೂಲಕ ಅರಿವಿನಆಕರಗಳನ್ನು ನಮ್ಮಲ್ಲಿ ತುಂಬಿಸಿಕೊಳ್ಳುತ್ತೇವೆ. ಹೀಗೆ ತುಂಬಿಸಿಕೊಂಡುದನ್ನು ನಮ್ಮ ವಿಚಾರಶಕ್ತಿಯಿಂದ ವಿಶ್ಲೇಷಣೆಗೆ ಒಳಪಡಿಸಬೇಕು; ಅವುಗಳ ಸಾರ್ಥಕತೆ–ನಿರರ್ಥಕತೆಗಳ ಬಗ್ಗೆ ಮೌಲ್ಯಮಾಪನವನ್ನು ನಡೆಸಬೇಕು. ಇದೇ ಮನನ; ಎರಡನೆಯ ಹಂತ. ಮೂರನೆಯ ಹಂತವೇ ನಿದಿಧ್ಯಾಸನ; ಎಂದರೆ ನಮಗೆ ಒಗ್ಗುವಂಥ ತಿಳಿವಳಿಕೆ ಯಾವುದೆಂದುನಮ್ಮ ವಿಚಾರಶಕ್ತಿಯಿಂದ ನಿರ್ಧಾರ ಮಾಡಿಕೊಂಡ ಮೇಲೆ ಅದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳುವುದು.</p>.<p>ನವರಾತ್ರಿಯ ಸಂದರ್ಭದಲ್ಲಿ ನಾವು ಪುಸ್ತಕಗಳಿಗೆ ’ವಿಶ್ರಾಂತಿ’ಯನ್ನು ಕೊಡುತ್ತಿರುವ ಸಾಂಕೇತಿಕತೆ ಏನು ಎಂದರೆ ನಾವು ಇದುವರೆಗೂ ಓದಿರುವುದನ್ನು ಮನನ ಮಾಡಬೇಕೆಂದು. ನಮ್ಮ ಅಧ್ಯಯನದಲ್ಲಿ ಮನನ ಎನ್ನುವುದು ತುಂಬ ಮುಖ್ಯವಾದ ವಿವರ ಎನ್ನುವುದನ್ನು ಸರಸ್ವತಿಯಪೂಜೆಎತ್ತಿಹಿಡಿಯುತ್ತಿದೆ.</p>.<p>ನಮ್ಮ ಸಂಸ್ಕೃತಿಯಲ್ಲಿ ಕಾಶ್ಮೀರವನ್ನು ಶಾರದೆಯ ನೆಲೆ ಎಂದು ಕಾಣಲಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ; ಭಾರತೀಯ ವಿದ್ಯಾಪರಂಪರೆಗೆ ಕಾಶ್ಮೀರ ನೀಡಿರುವ ಕೊಡುಗೆ ಅಪೂರ್ವವಾದುದು. ಕಾಶ್ಮೀರವನ್ನು ’ಶಾರದಾಪೀಠ’ ಎಂದೇ ಕರೆಯವುದು ವಾಡಿಕೆ. ಅಲ್ಲಿಯೇ ಸರ್ವಜ್ಞಪೀಠ ಇರುವುದು ಎಂಬುದೂ ನಮ್ಮ ನಂಬಿಕೆ. ಎಲ್ಲ ವಿದ್ಯೆಗಳ ಶಿಖರವೇ ಸರ್ವಜ್ಞತ್ವ. ಅದರ ನೆಲೆ ಕಾಶ್ಮೀರ ಎಂಬುದು ಈ ನಂಬಿಕೆಯ ಹಿಂದಿರುವ ಧ್ವನಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>