ನಮಗೆ ಸಮತೋಲನ ಬೇಕು, ಆಂತರಿಕ ಸಮನ್ವಯ ಬೇಕು, ನಮ್ಮ ಬಗ್ಗೆ, ಪ್ರಪಂಚದ ಬಗ್ಗೆ ನಮ್ಮ ದೃಷ್ಟಿಕೋನ ಬದಲಾಗಬೇಕು. ಜೀವನದ ಕಷ್ಟಗಳು ನಿಜವಾಗಿಯೂ ನಮಗೆ ಸಹಾಯಮಾಡುತ್ತವೆ. ಸೋಲನ್ನೇ ವಿಜಯವನ್ನಾಗಿ ಪರಿವರ್ತಿಸಲು ಪ್ರಯತ್ನಿಸಿ. ಪ್ರಪಂಚಕ್ಕೆ ನಾವು ಅಂಟಿಕೊಂಡರೆ ಅದನ್ನು ನಾವು ಮೀರಿ ಹೋಗಲಾರೆವು. ಶಕ್ತಿಯೊಡನೆ ದಯೆ ಮತ್ತು ಸಹಾನುಭೂತಿ ಇರಬೇಕು. ನಿಜವಾದ ಶಕ್ತಿ ಶಾಲಿಗಳು ದಯೆ ಮತ್ತು ಸಹಾನುಭೂತಿ ಉಳ್ಳವರಾಗಿರುತ್ತಾರೆ.