<p>ಸಾವಿರಾರು ಸೂರ್ಯಚಂದ್ರರು ಹುಟ್ಟಿಬಂದರೂ ಕೂಡ ಹೃದಯದ ಒಳಗಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ. ಇದು ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ತೊಡೆದು ಹಾಕುತ್ತದೆ</p>.<p>‘ಗು’ ಎಂದರೆ ಅಂಧಕಾರ, ‘ರು’ ಎಂದರೆ ನಾಶಪಡಿಸುವವನು. ಅಂದರೆ, ಅಂಧಕಾರವನ್ನು ನಾಶಪಡಿಸುವವನು ಎಂದು. ಉಪನಿಷತ್ ಪ್ರಕಾರ ‘ಗುರು’ ಎಂದರೆ ಲೌಕಿಕ ಅಂಧಕಾರವನ್ನು ಆಧ್ಯಾತ್ಮಿಕ ಬೆಳಕಿನಿಂದ ತೊಲಗಿಸುವ ವ್ಯಕ್ತಿ ಎಂದು ನಿರೂಪಿಸಲ್ಪಡುತ್ತಾನೆ.</p>.<p>‘ಗುರು’ ಶಬ್ದದ ಮತ್ತೊಂದು ಅರ್ಥವನ್ನು ಗುರು ಗೀತಾದಲ್ಲಿ ‘ಗು’ ಅನ್ನು ‘ಗುಣಗಳನ್ನು ಮೀರಿ’ ಮತ್ತು ‘ರು’ ಅನ್ನು ‘ಆಕಾರ ರಹಿತ’ ಅಂದರೆ, ಗುಣಗಳನ್ನು ಅತಿಶಯಿಸುವ ಪ್ರವೃತ್ತಿಯನ್ನು ಅನುಗ್ರಹಿಸುವವನೇ ಗುರು ಎಂಬುದಾಗಿ ಹೇಳಲಾಗಿದೆ.<br /><br />ಜಗತ್ತು ಕಂಡ ಶ್ರೇಷ್ಠ ಗುರು ಶ್ರೀ ರಾಮಕೃಷ್ಣರ ಪರಮಹಂಸರು. ಅವರ ಕೃಪೆಯಿಂದ ಕುರಿ ಕಾಯುವ ಅನಕ್ಷರಸ್ಥ ಹುಡುಗ ‘ಲಾಟು’ ಉನ್ನತಮಟ್ಟದ ಆಧ್ಯಾತ್ಮಿಕ ಸಾಧಕ ಸ್ವಾಮಿ ಅದ್ಭುತಾನಂದರಾದರು.</p>.<p>‘ನಾನು ಕುಡಿದ ಸಾರಾಯಿ ಬಾಟಲಿಗಳನ್ನು ಪೇರಿಸಿದರೆ ಗೌರಿಶಂಕರ ಶಿಖರವನ್ನು ಮೀರಿಸುತ್ತಿತು’ ಎಂದು ನಿರ್ಲಜ್ಜನಾಗಿ ಹೇಳುತ್ತಿದ್ದ ಗಿರೀಶ್ಚಂದ್ರಘೋಷ್ ಮುಂದೆ ಪರಮ ಸಂತನಾದ.</p>.<p>ತನ್ನ ಗುರುವಿನ ಮೇಲಿನ ಶ್ರದ್ಧಾಭಕ್ತಿಯಿಂದ ಏಕಲವ್ಯ ಬಿಲ್ಲು ವಿದ್ಯೆಯಲ್ಲಿ ಪರಿಣಿತನಾದ, ಕನಕದಾಸರು ಗುರುಗಳು ಕೊಟ್ಟ ‘ಕೋಣ ಮಂತ್ರ’ವನ್ನು ಜಪಿಸಿ ದಿವ್ಯ ಕೋಣನ ದರ್ಶನ ಪಡೆದರು.</p>.<p>ಕ್ರೂರಿಯಾದ ರತ್ನಾಕರ ನಾರದಮುನಿಯಿಂದ ‘ಮರಾ ಮಂತ್ರ’ವನ್ನು ಜಪಿಸಿ ರಾಮಾಯಣ ರಚಿಸಿ ವಾಲ್ಮೀಕಿ ಮುನಿಯಾದರು. ಗುರುವಾದವನು ಶಿಷ್ಯನಲ್ಲಿ ಎಂತಹ ಪರಿವರ್ತನೆಯನ್ನು ಮಾಡಬಲ್ಲ ಎಂಬುದಕ್ಕೆ ಇವರೆಲ್ಲರೂ ನಮ್ಮ ಮುಂದೆ ನಿದರ್ಶನವಾಗಿ ನಿಂತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾವಿರಾರು ಸೂರ್ಯಚಂದ್ರರು ಹುಟ್ಟಿಬಂದರೂ ಕೂಡ ಹೃದಯದ ಒಳಗಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ. ಇದು ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ತೊಡೆದು ಹಾಕುತ್ತದೆ</p>.<p>‘ಗು’ ಎಂದರೆ ಅಂಧಕಾರ, ‘ರು’ ಎಂದರೆ ನಾಶಪಡಿಸುವವನು. ಅಂದರೆ, ಅಂಧಕಾರವನ್ನು ನಾಶಪಡಿಸುವವನು ಎಂದು. ಉಪನಿಷತ್ ಪ್ರಕಾರ ‘ಗುರು’ ಎಂದರೆ ಲೌಕಿಕ ಅಂಧಕಾರವನ್ನು ಆಧ್ಯಾತ್ಮಿಕ ಬೆಳಕಿನಿಂದ ತೊಲಗಿಸುವ ವ್ಯಕ್ತಿ ಎಂದು ನಿರೂಪಿಸಲ್ಪಡುತ್ತಾನೆ.</p>.<p>‘ಗುರು’ ಶಬ್ದದ ಮತ್ತೊಂದು ಅರ್ಥವನ್ನು ಗುರು ಗೀತಾದಲ್ಲಿ ‘ಗು’ ಅನ್ನು ‘ಗುಣಗಳನ್ನು ಮೀರಿ’ ಮತ್ತು ‘ರು’ ಅನ್ನು ‘ಆಕಾರ ರಹಿತ’ ಅಂದರೆ, ಗುಣಗಳನ್ನು ಅತಿಶಯಿಸುವ ಪ್ರವೃತ್ತಿಯನ್ನು ಅನುಗ್ರಹಿಸುವವನೇ ಗುರು ಎಂಬುದಾಗಿ ಹೇಳಲಾಗಿದೆ.<br /><br />ಜಗತ್ತು ಕಂಡ ಶ್ರೇಷ್ಠ ಗುರು ಶ್ರೀ ರಾಮಕೃಷ್ಣರ ಪರಮಹಂಸರು. ಅವರ ಕೃಪೆಯಿಂದ ಕುರಿ ಕಾಯುವ ಅನಕ್ಷರಸ್ಥ ಹುಡುಗ ‘ಲಾಟು’ ಉನ್ನತಮಟ್ಟದ ಆಧ್ಯಾತ್ಮಿಕ ಸಾಧಕ ಸ್ವಾಮಿ ಅದ್ಭುತಾನಂದರಾದರು.</p>.<p>‘ನಾನು ಕುಡಿದ ಸಾರಾಯಿ ಬಾಟಲಿಗಳನ್ನು ಪೇರಿಸಿದರೆ ಗೌರಿಶಂಕರ ಶಿಖರವನ್ನು ಮೀರಿಸುತ್ತಿತು’ ಎಂದು ನಿರ್ಲಜ್ಜನಾಗಿ ಹೇಳುತ್ತಿದ್ದ ಗಿರೀಶ್ಚಂದ್ರಘೋಷ್ ಮುಂದೆ ಪರಮ ಸಂತನಾದ.</p>.<p>ತನ್ನ ಗುರುವಿನ ಮೇಲಿನ ಶ್ರದ್ಧಾಭಕ್ತಿಯಿಂದ ಏಕಲವ್ಯ ಬಿಲ್ಲು ವಿದ್ಯೆಯಲ್ಲಿ ಪರಿಣಿತನಾದ, ಕನಕದಾಸರು ಗುರುಗಳು ಕೊಟ್ಟ ‘ಕೋಣ ಮಂತ್ರ’ವನ್ನು ಜಪಿಸಿ ದಿವ್ಯ ಕೋಣನ ದರ್ಶನ ಪಡೆದರು.</p>.<p>ಕ್ರೂರಿಯಾದ ರತ್ನಾಕರ ನಾರದಮುನಿಯಿಂದ ‘ಮರಾ ಮಂತ್ರ’ವನ್ನು ಜಪಿಸಿ ರಾಮಾಯಣ ರಚಿಸಿ ವಾಲ್ಮೀಕಿ ಮುನಿಯಾದರು. ಗುರುವಾದವನು ಶಿಷ್ಯನಲ್ಲಿ ಎಂತಹ ಪರಿವರ್ತನೆಯನ್ನು ಮಾಡಬಲ್ಲ ಎಂಬುದಕ್ಕೆ ಇವರೆಲ್ಲರೂ ನಮ್ಮ ಮುಂದೆ ನಿದರ್ಶನವಾಗಿ ನಿಂತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>