<p>ಶಕ್ತಿಗೆ ಹಲವು ರೂಪಗಳು, ಹಲವು ನೆಲೆಗಳು. ವಿದ್ಯೆ, ಬುದ್ಧಿ, ಬಲ, ಬೆಳೆ – ಎಲ್ಲವೂ ಶಕ್ತಿಯ ರೂಪಗಳೇ. ಶಕ್ತಿಯನ್ನು ಮಾತೃಸ್ವರೂಪದಲ್ಲಿ ಪೂಜಿಸುತ್ತೇವೆ; ಅವಳ ನೆಲೆಯನ್ನು ಸಂಪತ್ತಿನ ಮೂಲಗಳಲ್ಲಿ ಕಾಣುತ್ತೇವೆ; ಎಲ್ಲ ಸಂಪತ್ತುಗಳ ಒಡತಿಯಾಗಿ ಅವಳನ್ನು ಲಕ್ಷ್ಮಿಯ ಸ್ವರೂಪದಲ್ಲಿ ಆರಾಧಿಸುತ್ತೇವೆ. ನಮ್ಮ ಜೀವನದ ಸುಖ–ನೆಮ್ಮದಿಗಳು ಈ ಸಂಪತ್ತುಗಳನ್ನು ಆಶ್ರಯಿಸಿರುವುದರಿಂದ ಅವಳಲ್ಲಿ ವರಗಳನ್ನು ಬೇಡುತ್ತೇವೆ. ಅಂತೆಯೇ ವರಮಹಾಲಕ್ಷ್ಮಿಯ ವ್ರತವನ್ನೂ ಆಚರಿಸುತ್ತೇವೆ.</p><p>ಲಕ್ಷ್ಮಿಯ ಕಲ್ಪನೆ ಬಹಳ ಪ್ರಾಚೀನವಾದುದು. ನಮಗೆ ಇಂದು ಲಕ್ಷ್ಮಿ ಎಂದರೆ ಕೇವಲ ದುಡ್ಡು, ಸಂಪತ್ತು – ಎಂದಷ್ಟೆ ಆಗಿದೆ. ಆದರೆ ನಮ್ಮ ಪೂರ್ವಜರು ಅವಳನ್ನು ಹಲವು ರೂಪಗಳಲ್ಲಿ ಸಾಕ್ಷಾತ್ಕರಿಸಿಕೊಂಡಿದ್ದಾರೆ. ಮನುಷ್ಯನ ಮೊದಲ ಸಂಪತ್ತು ಎಂದರೆ ಅದು ‘ಮಾತು’. ಹೀಗಾಗಿ ಮಾತನ್ನು ಕೂಡ ನಮ್ಮವರು ಲಕ್ಷ್ಮಿಯನ್ನಾಗಿಯೇ ಆರಾಧಿಸಿದ್ದಾರೆ. ಮಾತಿನ ಸಂಪತ್ತು ಮನುಷ್ಯನಿಗೆ ದಕ್ಕದೆ ಇದ್ದಿದ್ದರೆ ಆಗ ಅವನ ಜೀವನ ಹೇಗಿರುತ್ತಿತ್ತು ಎಂದು ಒಮ್ಮೆ ಊಹಿಸಿಕೊಂಡರೆ ತಿಳಿದೀತು, ಮಾತಿನ ಶಕ್ತಿ.</p>.<p>ವರಮಹಾಲಕ್ಷ್ಮಿಯನ್ನು ಪೂಜಿಸಲು ಸಂಪ್ರದಾಯದಲ್ಲಿ ನಿರ್ದಿಷ್ಟ ದಿನವನ್ನು ಆರಿಸಿಕೊಳ್ಳಲಾಗಿದೆ. ಹೀಗೆಂದು ವರ್ಷದಲ್ಲಿ ಒಂದು ದಿನ ಮಾತ್ರ ಅವಳನ್ನು ಪೂಜಿಸಬೇಕು ಎಂದು ಅರ್ಥವಲ್ಲ. ಪ್ರತಿದಿನದ ಪೂಜೆಯ ಸಾರ್ಥಕತೆ ಈ ದಿನದ ಆಚರಣೆಯಲ್ಲಿ ಅಭಿವ್ಯಕ್ತವಾಗಬೇಕು ಎಂಬುದು ಇದರ ಆಶಯ. ಶ್ರಾವಣಮಾಸದಲ್ಲಿ ಯಾವ ಶುಕ್ರವಾರವು ಹುಣ್ಣಿಮೆಗೆ ಸಮೀಪದಲ್ಲಿ ಇರುತ್ತದೆಯೋ ಅಂದು ವರಮಹಾಲಕ್ಷ್ಮಿಯ ವ್ರತವನ್ನು ಆಚರಿಸುವುದು ರೂಢಿ.</p><p>ವ್ರತಾಚರಣೆಗೆ ನಿರ್ದಿಷ್ಟ ವಿಧಿ–ವಿಧಾನಗಳು ಇವೆ. ಆದರೆ ಇವು ಕಾಲ–ದೇಶಗಳನ್ನು ಅವಲಂಬಿಸಿರುತ್ತವೆ. ಪೂಜೆಯನ್ನು ಹೀಗೇ ಮಾಡಬೇಕೆಂಬ ಹಟದಲ್ಲಿಯೋ ನೆಪದಲ್ಲಿಯೋ ಅದನ್ನು ಮಾಡದಿರುವುದಕ್ಕಿಂತಲೂ, ನಮಗೆ ಆ ಸಮಯಕ್ಕೆ ಸಿಕ್ಕುವ ದ್ರವ್ಯಗಳಿಂದ ಪೂಜೆಯನ್ನು ಮಾಡುವುದು ಬಹಳ ಮುಖ್ಯ. ಪೂಜೆಗೆ ಪ್ರಧಾನವಾಗಿ ಬೇಕಾಗಿರುವುದು ನಮ್ಮ ಶ್ರದ್ಧೆ. ಎಲ್ಲ ಇದ್ದೂ ಶ್ರದ್ಧೆ ಇಲ್ಲದಿದ್ದಾಗ ನಾವು ಪೂಜೆಯನ್ನು ಎಷ್ಟು ವೈಭವದಿಂದ ಮಾಡಿದರೂ ಅದು ವ್ಯರ್ಥವೇ ಆಗುತ್ತದೆ; ಅಂತೆಯೇ ಯಾವ ಸಲಕರಣೆ ಇಲ್ಲದಿದ್ದರೂ ಶ್ರದ್ಧೆಯಿಂದ ಮಹಾಲಕ್ಷ್ಮಿಗೆ ನಮಿಸುವುದೇ ವ್ರತಕ್ಕೆ ಸಮ ಎನಿಸಿಕೊಳ್ಳುತ್ತದೆ. ಆದುದರಿಂದ ವ್ರತಾಚರಣೆಗಳು ನಮ್ಮ ಸಂಪತ್ತಿನ ಪ್ರದರ್ಶನಕ್ಕೆ ವೇದಿಕೆಯಾಗದೆ, ಶ್ರದ್ಧಾ–ಭಕ್ತಿಗಳ ದರ್ಶನಕ್ಕೆ ಅಧಿಷ್ಠಾನವಾಗಬೇಕು.</p><p>ಸಾಮಾನ್ಯವಾಗಿ ಹೆಣ್ಣುಮಕ್ಕಳೇ ವರಮಹಾಲಕ್ಷ್ಮಿಯ ವ್ರತವನ್ನು ಆಚರಿಸುವುದು. ಹಬ್ಬದ ದಿನ ಪ್ರಾತಃಕಾಲದಲ್ಲಿಯೇ ಶುಚಿರ್ಭೂತರಾಗಿ ವ್ರತಾಚರಣೆಗೆ ಬೇಕಾದ ಎಲ್ಲ ವಸ್ತುಗಳನ್ನು ಸಿದ್ಧಮಾಡಿಕೊಳ್ಳಬೇಕು. ಕಳಶವನ್ನು ಸ್ಥಾಪಿಸಿ ದೇವಿಯನ್ನು ಆಹ್ವಾನಿಸಿ, ಪ್ರಾಣಪ್ರತಿಷ್ಠಾಪನೆಯನ್ನು ನೆರವೇರಿಸಿ, ವಿಧಿವತ್ತಾಗಿ ಪೂಜಾಕಲಪಗಳನ್ನು ನಡೆಸಬೇಕು. ಕಳಶಪೂಜೆಯ ಸಂಪ್ರದಾಯವಿಲ್ಲದವರು, ಮಹಾಲಕ್ಷ್ಮಿಯ ಪಟವನ್ನಿಟ್ಟೂ ಪೂಜಿಸಬಹುದು. ಆಚಾರ್ಯರ ನೆರವಿನಿಂದ ಪೂಜಾವಿಧಿಗಳನ್ನು ನೆರವೇರಿಸಬಹುದು; ಅಥವಾ ದೇವಿಯ ಸ್ತೋತ್ರಗಳನ್ನು ಪಠಿಸುತ್ತ, ಹಾಡುಗಳನ್ನು ಹಾಡುತ್ತಲೂ ಅವಳನ್ನು ಅರ್ಚಿಸಬಹುದು. ಗುರು–ಹಿರಿಯರ ಮಾರ್ಗದರ್ಶನಲ್ಲಿ ನೆರವೇರಿಸುವ ಪೂಜಾಕಲಾಪಗಳಿಗೆ ಹೆಚ್ಚಿನ ಕಳೆ ಒದಗುತ್ತದೆ; ಮನೆಯವರೆಲ್ಲರೂ ಒಂದಾಗಿ ಸೇರಿ ಆಚರಿಸುವ ಹಬ್ಬಕ್ಕೆ ಬಲ ಬರುತ್ತದೆ.</p><p>ಇಂದು ನಾವು ಎಲ್ಲ ಸಂಪತ್ತನ್ನೂ ಹಣದ ರೂಪದಲ್ಲಿಯೇ ಕಾಣುತ್ತಿದ್ದೇವೆ. ವಿವೇಕಲಕ್ಷ್ಮಿಯು ನಮಗೆ ಒಲಿಯದೆ, ದೂರ ಸರಿದಿರುವುದೇ ಇದಕ್ಕೆ ಕಾರಣ. ಹೀಗಾಗಿ ನಾವು ವರಮಹಾಲಕ್ಷ್ಮಿಯ ಹಬ್ಬದಂದು ದೇವಿಯನ್ನು ಕೇಳಿಕೊಳ್ಳುವ ವರಗಳಲ್ಲಿ ಬದಲಾವಣೆಯಾಗಬೇಕು. ಜೀವನದ ಸಮಗ್ರತೆಗೆ ಬೇಕಾದ ಎಲ್ಲ ಸಂಪತ್ತುಗಳನ್ನೂ ಅನುಗ್ರಹಿಸುವಂತೆ ಅವಳನ್ನು ಪ್ರಾರ್ಥಿಸಬೇಕು. ಐಶ್ವರ್ಯಲಕ್ಷ್ಮಿಗೂ ಮೊದಲು ವಿದ್ಯಾಲಕ್ಷ್ಮಿ, ವಿಜಯಲಕ್ಷ್ಮಿಗೂ ಮೊದಲು ಧೈರ್ಯಲಕ್ಷ್ಮಿಯ ಅನುಗ್ರಹವನ್ನು ಕೇಳಿಕೊಳ್ಳಬೇಕು. ಶ್ರೀಲಕ್ಷ್ಮಿ ಮತ್ತು ಮೋಕ್ಷಲಕ್ಷ್ಮಿಗಳಿಬ್ಬರೂ ಒಂದೇ ತತ್ತ್ವದ ಎರಡು ಸ್ವರೂಪಗಳು ಎಂಬ ಅರಿವಿನಿಂದ ಆಚರಿಸುವ ಹಬ್ಬಕ್ಕೆ ಆನಂದಲಕ್ಷ್ಮಿಯ ಅಭಯ ಇದ್ದೇ ಇರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಕ್ತಿಗೆ ಹಲವು ರೂಪಗಳು, ಹಲವು ನೆಲೆಗಳು. ವಿದ್ಯೆ, ಬುದ್ಧಿ, ಬಲ, ಬೆಳೆ – ಎಲ್ಲವೂ ಶಕ್ತಿಯ ರೂಪಗಳೇ. ಶಕ್ತಿಯನ್ನು ಮಾತೃಸ್ವರೂಪದಲ್ಲಿ ಪೂಜಿಸುತ್ತೇವೆ; ಅವಳ ನೆಲೆಯನ್ನು ಸಂಪತ್ತಿನ ಮೂಲಗಳಲ್ಲಿ ಕಾಣುತ್ತೇವೆ; ಎಲ್ಲ ಸಂಪತ್ತುಗಳ ಒಡತಿಯಾಗಿ ಅವಳನ್ನು ಲಕ್ಷ್ಮಿಯ ಸ್ವರೂಪದಲ್ಲಿ ಆರಾಧಿಸುತ್ತೇವೆ. ನಮ್ಮ ಜೀವನದ ಸುಖ–ನೆಮ್ಮದಿಗಳು ಈ ಸಂಪತ್ತುಗಳನ್ನು ಆಶ್ರಯಿಸಿರುವುದರಿಂದ ಅವಳಲ್ಲಿ ವರಗಳನ್ನು ಬೇಡುತ್ತೇವೆ. ಅಂತೆಯೇ ವರಮಹಾಲಕ್ಷ್ಮಿಯ ವ್ರತವನ್ನೂ ಆಚರಿಸುತ್ತೇವೆ.</p><p>ಲಕ್ಷ್ಮಿಯ ಕಲ್ಪನೆ ಬಹಳ ಪ್ರಾಚೀನವಾದುದು. ನಮಗೆ ಇಂದು ಲಕ್ಷ್ಮಿ ಎಂದರೆ ಕೇವಲ ದುಡ್ಡು, ಸಂಪತ್ತು – ಎಂದಷ್ಟೆ ಆಗಿದೆ. ಆದರೆ ನಮ್ಮ ಪೂರ್ವಜರು ಅವಳನ್ನು ಹಲವು ರೂಪಗಳಲ್ಲಿ ಸಾಕ್ಷಾತ್ಕರಿಸಿಕೊಂಡಿದ್ದಾರೆ. ಮನುಷ್ಯನ ಮೊದಲ ಸಂಪತ್ತು ಎಂದರೆ ಅದು ‘ಮಾತು’. ಹೀಗಾಗಿ ಮಾತನ್ನು ಕೂಡ ನಮ್ಮವರು ಲಕ್ಷ್ಮಿಯನ್ನಾಗಿಯೇ ಆರಾಧಿಸಿದ್ದಾರೆ. ಮಾತಿನ ಸಂಪತ್ತು ಮನುಷ್ಯನಿಗೆ ದಕ್ಕದೆ ಇದ್ದಿದ್ದರೆ ಆಗ ಅವನ ಜೀವನ ಹೇಗಿರುತ್ತಿತ್ತು ಎಂದು ಒಮ್ಮೆ ಊಹಿಸಿಕೊಂಡರೆ ತಿಳಿದೀತು, ಮಾತಿನ ಶಕ್ತಿ.</p>.<p>ವರಮಹಾಲಕ್ಷ್ಮಿಯನ್ನು ಪೂಜಿಸಲು ಸಂಪ್ರದಾಯದಲ್ಲಿ ನಿರ್ದಿಷ್ಟ ದಿನವನ್ನು ಆರಿಸಿಕೊಳ್ಳಲಾಗಿದೆ. ಹೀಗೆಂದು ವರ್ಷದಲ್ಲಿ ಒಂದು ದಿನ ಮಾತ್ರ ಅವಳನ್ನು ಪೂಜಿಸಬೇಕು ಎಂದು ಅರ್ಥವಲ್ಲ. ಪ್ರತಿದಿನದ ಪೂಜೆಯ ಸಾರ್ಥಕತೆ ಈ ದಿನದ ಆಚರಣೆಯಲ್ಲಿ ಅಭಿವ್ಯಕ್ತವಾಗಬೇಕು ಎಂಬುದು ಇದರ ಆಶಯ. ಶ್ರಾವಣಮಾಸದಲ್ಲಿ ಯಾವ ಶುಕ್ರವಾರವು ಹುಣ್ಣಿಮೆಗೆ ಸಮೀಪದಲ್ಲಿ ಇರುತ್ತದೆಯೋ ಅಂದು ವರಮಹಾಲಕ್ಷ್ಮಿಯ ವ್ರತವನ್ನು ಆಚರಿಸುವುದು ರೂಢಿ.</p><p>ವ್ರತಾಚರಣೆಗೆ ನಿರ್ದಿಷ್ಟ ವಿಧಿ–ವಿಧಾನಗಳು ಇವೆ. ಆದರೆ ಇವು ಕಾಲ–ದೇಶಗಳನ್ನು ಅವಲಂಬಿಸಿರುತ್ತವೆ. ಪೂಜೆಯನ್ನು ಹೀಗೇ ಮಾಡಬೇಕೆಂಬ ಹಟದಲ್ಲಿಯೋ ನೆಪದಲ್ಲಿಯೋ ಅದನ್ನು ಮಾಡದಿರುವುದಕ್ಕಿಂತಲೂ, ನಮಗೆ ಆ ಸಮಯಕ್ಕೆ ಸಿಕ್ಕುವ ದ್ರವ್ಯಗಳಿಂದ ಪೂಜೆಯನ್ನು ಮಾಡುವುದು ಬಹಳ ಮುಖ್ಯ. ಪೂಜೆಗೆ ಪ್ರಧಾನವಾಗಿ ಬೇಕಾಗಿರುವುದು ನಮ್ಮ ಶ್ರದ್ಧೆ. ಎಲ್ಲ ಇದ್ದೂ ಶ್ರದ್ಧೆ ಇಲ್ಲದಿದ್ದಾಗ ನಾವು ಪೂಜೆಯನ್ನು ಎಷ್ಟು ವೈಭವದಿಂದ ಮಾಡಿದರೂ ಅದು ವ್ಯರ್ಥವೇ ಆಗುತ್ತದೆ; ಅಂತೆಯೇ ಯಾವ ಸಲಕರಣೆ ಇಲ್ಲದಿದ್ದರೂ ಶ್ರದ್ಧೆಯಿಂದ ಮಹಾಲಕ್ಷ್ಮಿಗೆ ನಮಿಸುವುದೇ ವ್ರತಕ್ಕೆ ಸಮ ಎನಿಸಿಕೊಳ್ಳುತ್ತದೆ. ಆದುದರಿಂದ ವ್ರತಾಚರಣೆಗಳು ನಮ್ಮ ಸಂಪತ್ತಿನ ಪ್ರದರ್ಶನಕ್ಕೆ ವೇದಿಕೆಯಾಗದೆ, ಶ್ರದ್ಧಾ–ಭಕ್ತಿಗಳ ದರ್ಶನಕ್ಕೆ ಅಧಿಷ್ಠಾನವಾಗಬೇಕು.</p><p>ಸಾಮಾನ್ಯವಾಗಿ ಹೆಣ್ಣುಮಕ್ಕಳೇ ವರಮಹಾಲಕ್ಷ್ಮಿಯ ವ್ರತವನ್ನು ಆಚರಿಸುವುದು. ಹಬ್ಬದ ದಿನ ಪ್ರಾತಃಕಾಲದಲ್ಲಿಯೇ ಶುಚಿರ್ಭೂತರಾಗಿ ವ್ರತಾಚರಣೆಗೆ ಬೇಕಾದ ಎಲ್ಲ ವಸ್ತುಗಳನ್ನು ಸಿದ್ಧಮಾಡಿಕೊಳ್ಳಬೇಕು. ಕಳಶವನ್ನು ಸ್ಥಾಪಿಸಿ ದೇವಿಯನ್ನು ಆಹ್ವಾನಿಸಿ, ಪ್ರಾಣಪ್ರತಿಷ್ಠಾಪನೆಯನ್ನು ನೆರವೇರಿಸಿ, ವಿಧಿವತ್ತಾಗಿ ಪೂಜಾಕಲಪಗಳನ್ನು ನಡೆಸಬೇಕು. ಕಳಶಪೂಜೆಯ ಸಂಪ್ರದಾಯವಿಲ್ಲದವರು, ಮಹಾಲಕ್ಷ್ಮಿಯ ಪಟವನ್ನಿಟ್ಟೂ ಪೂಜಿಸಬಹುದು. ಆಚಾರ್ಯರ ನೆರವಿನಿಂದ ಪೂಜಾವಿಧಿಗಳನ್ನು ನೆರವೇರಿಸಬಹುದು; ಅಥವಾ ದೇವಿಯ ಸ್ತೋತ್ರಗಳನ್ನು ಪಠಿಸುತ್ತ, ಹಾಡುಗಳನ್ನು ಹಾಡುತ್ತಲೂ ಅವಳನ್ನು ಅರ್ಚಿಸಬಹುದು. ಗುರು–ಹಿರಿಯರ ಮಾರ್ಗದರ್ಶನಲ್ಲಿ ನೆರವೇರಿಸುವ ಪೂಜಾಕಲಾಪಗಳಿಗೆ ಹೆಚ್ಚಿನ ಕಳೆ ಒದಗುತ್ತದೆ; ಮನೆಯವರೆಲ್ಲರೂ ಒಂದಾಗಿ ಸೇರಿ ಆಚರಿಸುವ ಹಬ್ಬಕ್ಕೆ ಬಲ ಬರುತ್ತದೆ.</p><p>ಇಂದು ನಾವು ಎಲ್ಲ ಸಂಪತ್ತನ್ನೂ ಹಣದ ರೂಪದಲ್ಲಿಯೇ ಕಾಣುತ್ತಿದ್ದೇವೆ. ವಿವೇಕಲಕ್ಷ್ಮಿಯು ನಮಗೆ ಒಲಿಯದೆ, ದೂರ ಸರಿದಿರುವುದೇ ಇದಕ್ಕೆ ಕಾರಣ. ಹೀಗಾಗಿ ನಾವು ವರಮಹಾಲಕ್ಷ್ಮಿಯ ಹಬ್ಬದಂದು ದೇವಿಯನ್ನು ಕೇಳಿಕೊಳ್ಳುವ ವರಗಳಲ್ಲಿ ಬದಲಾವಣೆಯಾಗಬೇಕು. ಜೀವನದ ಸಮಗ್ರತೆಗೆ ಬೇಕಾದ ಎಲ್ಲ ಸಂಪತ್ತುಗಳನ್ನೂ ಅನುಗ್ರಹಿಸುವಂತೆ ಅವಳನ್ನು ಪ್ರಾರ್ಥಿಸಬೇಕು. ಐಶ್ವರ್ಯಲಕ್ಷ್ಮಿಗೂ ಮೊದಲು ವಿದ್ಯಾಲಕ್ಷ್ಮಿ, ವಿಜಯಲಕ್ಷ್ಮಿಗೂ ಮೊದಲು ಧೈರ್ಯಲಕ್ಷ್ಮಿಯ ಅನುಗ್ರಹವನ್ನು ಕೇಳಿಕೊಳ್ಳಬೇಕು. ಶ್ರೀಲಕ್ಷ್ಮಿ ಮತ್ತು ಮೋಕ್ಷಲಕ್ಷ್ಮಿಗಳಿಬ್ಬರೂ ಒಂದೇ ತತ್ತ್ವದ ಎರಡು ಸ್ವರೂಪಗಳು ಎಂಬ ಅರಿವಿನಿಂದ ಆಚರಿಸುವ ಹಬ್ಬಕ್ಕೆ ಆನಂದಲಕ್ಷ್ಮಿಯ ಅಭಯ ಇದ್ದೇ ಇರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>