ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 16-5-2021ರಿಂದ 22-5-2021ರ ವರೆಗೆ

ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

***

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ಆರ್ಥಿಕ ಸಂಕಷ್ಟಗಳು ದೂರವಾಗಿ ಸ್ವಲ್ಪ ನೆಮ್ಮದಿಯನ್ನು ಕಾಣುವಿರಿ. ಹೊಸ ರೀತಿಯ ಸಂಪಾದನೆಯ ಮೂಲದತ್ತ ಗಮನ ಹರಿಸುವಿರಿ. ಹಿರಿಯ ಅಧಿಕಾರಿಗಳ ಭೇಟಿಯಿಂದ ಕೆಲಸಗಳಲ್ಲಿ ಇದ್ದ ಅಡಚಣೆಗಳು ನಿವಾರಣೆಯಾಗಿ ಕೆಲಸಗಳು ಮುನ್ನಡೆಯುತ್ತವೆ. ಕುಶಲಕರ್ಮಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ನುರಿತ ತಂತ್ರಜ್ಞರಿಗೆ ಬೇಡಿಕೆ ಬಂದು ಹೆಚ್ಚಿನ ಸಂಭಾವನೆ ಸಹ ದೊರೆಯುತ್ತದೆ. ಹೆಣ್ಣು ಮಕ್ಕಳಿಗೆ ತವರಿನಿಂದ ಉಡುಗೊರೆ ದೊರೆಯುವ ಸಾಧ್ಯತೆ ಇದೆ. ಕೆಲವೊಂದು ವಿಚಾರಗಳಿಗೆ ಸಂಸಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಇರಿಸುಮುರುಸುನಿಂದ ತಪ್ಪಿಸಿಕೊಳ್ಳಲು ಮೌನವಾಗಿರುವುದು ಒಳ್ಳೆಯದು. ಧನಾದಾಯವು ನಿರೀಕ್ಷೆಗೆ ತಕ್ಕಂತೆ ಇರುತ್ತದೆ.

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಬಹಳ ಪರಿಶ್ರಮ ವಹಿಸಿದ್ದ ಕೆಲಸಗಳಲ್ಲಿ ಈಗ ಫಲಿತಾಂಶಗಳು ಬರಲಾರಂಭಿಸುತ್ತವೆ. ವ್ಯವಹಾರದಲ್ಲಿ ಇದ್ದ ಅವಿಶ್ವಾಸಗಳು ನಿವಾರಣೆಯಾಗಿ ಪರಸ್ಪರ ವಿಶ್ವಾಸ ವೃದ್ಧಿಯಾಗುತ್ತದೆ. ಅನಿರೀಕ್ಷಿತ ಬೆಳವಣಿಗೆಗಳಿಂದ ವ್ಯವಹಾರದ ವಿಸ್ತರಣೆ ಆಗುವ ಸಂದರ್ಭಗಳಿವೆ. ನಾಸ್ತಿಕ ಸ್ವಭಾವದಿಂದ ಆಸ್ತಿಕ ಸ್ವಭಾವಕ್ಕೆ ಬದಲಾಗಲು ಯತ್ನಿಸುವುವಿರಿ. ಧಾರ್ಮಿಕ ಮುಖಂಡರಿಂದ ಹೊಗಳಿಕೆಯನ್ನು ಪಡೆಯುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಉಪಾಧ್ಯಾಯರಿಗೆ ಉತ್ತಮ ಗೌರವ ದೊರೆಯುವ ಸಂದರ್ಭವಿದೆ. ಕಾದಂಬರಿಕಾರರಿಗೆ ಬಹಳಷ್ಟು ಗೌರವ ಸಿಗುವ ಸಾಧ್ಯತೆ ಇದೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಮನಸ್ಸಿನಲ್ಲಿ ಬಹಳ ಹುಮ್ಮಸ್ಸು ಇರುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ನಿಮ್ಮ ಮೇಲೆ ವಿಶೇಷ ಮಮಕಾರ ಹೊಂದಿರುವವರು ಅಧಿಕ ಸಹಾಯ ಮಾಡುತ್ತಾರೆ. ಭೂಮಿಯ ವ್ಯವಹಾರಕ್ಕೆ ಸಂಬಂಧಪಟ್ಟ ಕೆಲಸಗಳು ಶೀಘ್ರ ಗತಿಯಲ್ಲಿ ಆಗುತ್ತವೆ. ಹೆಣ್ಣು ಮಕ್ಕಳ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ ಅತ್ಯಗತ್ಯ. ಕೋರ್ಟ್‌ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆಯನ್ನು ಕಾಣಬಹುದು. ನಿಸರ್ಗ ಪ್ರೇಮಿಗಳಿಗೆ ಮತ್ತು ವೃಕ್ಷ ರಕ್ಷಕರಿಗೆ ಸರ್ಕಾರದಿಂದ ಅಥವಾ ಸಂಸ್ಥೆಗಳಿಂದ ಮನ್ನಣೆ ದೊರೆಯುತ್ತದೆ. ರತ್ನದ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಸ್ವಲ್ಪ ಹಿನ್ನಡೆ ಆಗಬಹುದು. ಯಂತ್ರಾಗಾರಗಳಲ್ಲಿ ಅಗ್ನಿಯೊಂದಿಗೆ ಕೆಲಸ ಮಾಡುವವರು ಎಚ್ಚರ ವಹಿಸುವುದು ಅಗತ್ಯ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಕಲಾತ್ಮಕ ಜೀವನವನ್ನು ರೂಢಿಸಿಕೊಳ್ಳಲು ಈಗ ಉತ್ತಮಕಾಲ. ಕೃಷಿಕರಿಗೆ ಆದಾಯದಷ್ಟೇ ಖರ್ಚು ಇರುತ್ತದೆ. ಪತ್ರಿಕಾ ಪ್ರತಿನಿಧಿಗಳಿಗೆ ಸಾಮಾಜಿಕ ಸಂಸ್ಥೆಗಳಿಂದ ಗೌರವ ಪ್ರಾಪ್ತಿ ಆಗುತ್ತದೆ. ತಂತ್ರಜ್ಞರು ವಿವಿಧ ಪ್ರಯೋಗಗಳಲ್ಲಿ ಪ್ರಗತಿಯನ್ನು ಸಾಧಿಸುವರು. ನಿರೀಕ್ಷಿತ ಮಟ್ಟದ ಸಾಧನೆಯನ್ನ ಮಾಡಿ ಹಣವನ್ನು ಉಳಿತಾಯ ಮಾಡುವಿರಿ. ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆಯನ್ನು ಕಾಣಬಹುದು. ಉದ್ಯೋಗ ಸ್ಥಳದಲ್ಲಿ ಹಿತಶತ್ರುಗಳ ಬಗ್ಗೆ ಎಚ್ಚರವಾಗಿರಿ. ಕೆಲವು ಸ್ತ್ರೀಯರಿಗೆ ಉದ್ಯೋಗದ ಒತ್ತಡದಿಂದ ಮೂಳೆ ನೋವು ಅಥವಾ ಬೆನ್ನುನೋವು ಕಾಣಿಸಬಹುದು. ಸಂಸಾರದಲ್ಲಿ ಕಾವೇರಿದ ವಾತಾವರಣ ಕಾಣಿಸಬಹುದು, ಶಾಂತಿಯಿಂದ ಇದ್ದಲ್ಲಿ ಎಲ್ಲವೂ ಸರಿಯಾಗುವುದು.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ವೃತ್ತಿಯಲ್ಲಿ ಪ್ರತಿಸ್ಪರ್ಧಿಗಳ ಸವಾಲನ್ನು ಎದುರಿಸಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಹಳೆಯ ವೈಷಮ್ಯಗಳು ಗರಿಗೆದರುವ ಸಾಧ್ಯತೆಗಳಿವೆ ಎಚ್ಚರವಾಗಿರಿ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡುವುದು ಉತ್ತಮ. ಕೆಲವು ಸತ್ಕಾರ್ಯಗಳಲ್ಲಿ ಭಾಗವಹಿಸುವಿರಿ. ಹಿರಿಯರ ಮಾತನ್ನು ದಿಕ್ಕರಿಸುವುದು ನಿಮಗೆ ತೊಂದರೆ ತರಬಹುದು. ಸಂಗಾತಿಯ ಸಂಪಾದನೆಯಲ್ಲಿ ಏರಿಕೆಯನ್ನು ಕಾಣಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ಕೆಲವು ಸರ್ಕಾರಿ ನೌಕರರಿಗೆ ಉದ್ಯೋಗ ಸ್ಥಳದಲ್ಲಿ ಅನುಕೂಲಕರ ವಾತಾವರಣ ಒದಗಿಬರುತ್ತದೆ. ಆಸ್ತಿಯನ್ನು ಖರೀದಿ ಮಾಡಲು ಈಗ ಸಕಾಲವಲ್ಲ. ನಿಮ್ಮ ಶತ್ರುಗಳನ್ನು ಎದುರಿಸಲು ಮಾಡುವ ಉಪಾಯಗಳು ಫಲ ಕೊಡುತ್ತವೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ದುಃಖ ದುಮ್ಮಾನಗಳು ಮರುಕಳಿಸುವ ಸಾಧ್ಯತೆಗಳಿವೆ. ಮನಸ್ಸಿಗೆ ಸಂಬಂಧಪಟ್ಟ ವಿಷಯಗಳಾದರೂ ದೇಹ ಆರೋಗ್ಯದ ಕಡೆ ಗಮನ ಇರಲಿ. ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿರಿ. ಆರ್ಥಿಕ ರಂಗದಲ್ಲಿ ಬಹಳ ನಿಧಾನ ಚೇತರಿಕೆಯನ್ನು ಕಾಣಬಹುದು. ಅದಿರು ವ್ಯಾಪಾರಸ್ಥರಿಗೆ ಉತ್ತಮ ಲಾಭವಿರುತ್ತದೆ. ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನಿರೀಕ್ಷಿತ ಲಾಭವಿರುತ್ತದೆ. ಯಾವುದೇ ಕೆಲಸ ಕಾರ್ಯಗಳನ್ನು ವಹಿಸಿಕೊಳ್ಳುವಾಗ ನಿಮ್ಮ ಶಕ್ತಿ ಸಾಮರ್ಥ್ಯದ ಬಗ್ಗೆ ಅವಲೋಕನ ಮಾಡಿರಿ. ಹೈನುಗಾರಿಕೆಯನ್ನು ಮಾಡುವವರಿಗೆ ಅಧಿಕ ಲಾಭವಿರುತ್ತದೆ. ಇದರ ವಿರುದ್ಧ ನೀವು ಮಾಡುವ ಆರೋಪಗಳು ನಿಮಗೆ ತಿರುಗುಬಾಣವಾಗುವ ಸಾಧ್ಯತೆಗಳಿವೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಮಕ್ಕಳಿಂದ ನಿಮಗೆ ಸಹಾಯ ದೊರೆಯುತ್ತದೆ. ಔಷಧಿ ತೆಗೆದುಕೊಳ್ಳುವಾಗ ಮುಂಜಾಗ್ರತೆ ಅಗತ್ಯ. ಭವಿಷ್ಯದ ಬಗ್ಗೆ ಅತಿಯಾದ ಚಿಂತನೆ ಹಾಗೂ ಅತಿಯಾಗಿ ಹಣಕೂಡಿಡುವುದು ನಿಮಗೆ ತಲೆನೋವು ತರಬಹುದು. ಕುಟುಂಬ ಸದಸ್ಯರೊಡನೆ ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ನಿಮಗೆ ಅನುಕೂಲ ತರುತ್ತದೆ. ಪತ್ರಿಕಾ ವರದಿಗಾರರು ಉತ್ಪ್ರೇಕ್ಷಿತ ವರದಿಯನ್ನು ಮಾಡದಿರುವುದು ಉತ್ತಮ. ಖಾಸಗಿ ನೌಕರರಿಗೆ ವೃತ್ತಿಯಲ್ಲಿ ಪ್ರಗತಿ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಯನ್ನು ಮಾಡಲು ಬೇಕಾದ ಅನುಕೂಲತೆಗಳು ದೊರೆಯುತ್ತವೆ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ಹಿರಿಯ ಅಧಿಕಾರಿಗಳ ಸಹಾಯದಿಂದ ಕೆಲಸಕಾರ್ಯಗಳಲ್ಲಿ ಪ್ರಗತಿಯಾಗಲಿದೆ. ನಿಮ್ಮ ಪಾಡಿಗೆ ನೀವು ಇದ್ದರೂ ಸಹ ವಿವಾದಗಳು ನಿಮ್ಮನ್ನು ಸುತ್ತುವರಿಯುತ್ತವೆ, ಈ ಬಗ್ಗೆ ಎಚ್ಚರದಿಂದಿರಿ. ಆದರೆ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ಸ್ವಲ್ಪಕಾಲದ ನಂತರ ಎಲ್ಲವೂ ಸರಿಯಾಗುತ್ತದೆ. ವಾಹನ ಚಾಲಕರು ಸ್ವಲ್ಪ ಜಾಗ್ರತೆ ವಹಿಸಬೇಕಾಗುತ್ತದೆ. ಬಹಳ ದಿನಗಳಿಂದ ಎಳೆದಾಡುತ್ತಿದ್ದ ಆಸ್ತಿ ಸಮಸ್ಯೆಯು ಇತ್ಯರ್ಥವಾಗುವ ಸಂದರ್ಭವಿದೆ. ಲೇವಾದೇವಿ ವ್ಯವಹಾರಗಳು ಬೇಡವೇ ಬೇಡ. ಯಾವುದಾದರೂ ದೈವತಾ ದರ್ಶನಕ್ಕೆ ಕುಟುಂಬ ಸಮೇತರಾಗಿ ಹೋಗುವ ಸಂದರ್ಭವಿದೆ. ಸರ್ಕಾರಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ಕ್ರೀಡಾ ಸ್ಪರ್ಧಿಗಳಿಗೆ ಸರ್ಕಾರದಿಂದ ಸೂಕ್ತ ಸಹಾಯ ಮತ್ತು ತರಬೇತಿ ದೊರೆಯುತ್ತದೆ. ಬ್ಯಾಂಕ್ ಸಾಲಕ್ಕಾಗಿ ಓಡಾಡುತ್ತಿದ್ದವರಿಗೆ ಈಗ ಸಾಲ ಸಿಗುವ ಸಾಧ್ಯತೆಗಳಿವೆ. ಹೊಸ ಪಾಲುದಾರಿಕೆ ವ್ಯವಹಾರಕ್ಕಾಗಿ ಆಹ್ವಾನ ಬರುತ್ತದೆ. ಅದರ ಆಗುಹೋಗುಗಳನ್ನು ಪರಿಶೀಲಿಸಿ ಮುನ್ನಡೆಯಿರಿ. ಉದ್ಯೋಗದಲ್ಲಿ ಸ್ಥಿರತೆಯನ್ನು ಕಾಣಬಹುದು. ಕಲಾವಿದರಿಗೆ ಅನುಕೂಲಕರವಾದ ವಾತಾವರಣ ದೊರೆಯುತ್ತದೆ. ಗುಡಿಕೈಗಾರಿಕೆಯನ್ನು ಮಾಡುವವರಿಗೆ ಸಾಕಷ್ಟು ಸಹಾಯಧನ ಒದಗಿಬರುತ್ತದೆ. ಹಿರಿಯರು ವಿನಾಕಾರಣ ಇತರ ವಿಷಯದಲ್ಲಿ ಮೂಗು ತೂರಿಸುವುದು ಅವರಿಗೆ ತೊಂದರೆ ತರಬಹುದು. ಧನಾದಾಯ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣಧನಿಷ್ಠ 1.2)

ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನಹರಿಸುವಿರಿ. ಹಣಕಾಸಿನ ಬಗ್ಗೆ ಅತಿಯಾದ ಚಿಂತೆ ಬೇಡ. ಕೈಗಾರಿಕೋದ್ಯಮಿಗಳಿಗೆ ಇದ್ದ ಕಾರ್ಮಿಕರ ಸಮಸ್ಯೆಗಳು ದೂರವಾಗುತ್ತವೆ. ಹದಗೆಟ್ಟ ಹಿರಿಯರ ಆರೋಗ್ಯ ಸುಧಾರಿಸುತ್ತದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸರಿಯಾಗಿ ಆಲೋಚನೆ ಮಾಡಿರಿ. ಕೆಲವು ಹಿರಿಯರಿಗೆ ಬೆನ್ನುನೋವು ಕಾಡಬಹುದು. ವೃತ್ತಿಯಲ್ಲಿ ನಿಮ್ಮ ಪರಿಶ್ರಮಕ್ಕೆ ಬೆಲೆ ದೊರೆಯುತ್ತದೆ. ಸಂಗೀತವನ್ನು ಕಲಿಯುತ್ತಿರುವವವರಿಗೆ ಉತ್ತಮ ಗುರುಗಳು ದೊರೆಯುತ್ತಾರೆ. ಮಕ್ಕಳಿಂದ ನಿಮಗೆ ಧನಸಹಾಯ ಒದಗಿಬರುತ್ತದೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಹಿರಿಯರಿಗೆ ಗೌರವ ಸನ್ಮಾನಗಳು ದೊರೆಯುವ ಸಾಧ್ಯತೆಗಳಿವೆ. ಹೋಟೆಲ್ ಉದ್ಯಮಿಗಳಿಗೆ ನಿಧಾನವಾಗಿ ವ್ಯಾಪಾರ ಹೆಚ್ಚುತ್ತದೆ. ಯುವಕರು ಹಣ ಸಂಪಾದನೆಗಾಗಿ ಅಡ್ಡದಾರಿ ಹಿಡಿಯುವುದು ಬೇಡ. ವಸ್ತ್ರ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಸಿ ಲಾಭ ಬರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಸಾಕಷ್ಟು ಸಹಾಯಗಳು ಹರಿದು ಬರುತ್ತವೆ. ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಸಹಕಾರ ಮತ್ತು ಸಹಾಯ ಇಲಾಖೆಗಳಿಂದ ದೊರೆಯುತ್ತದೆ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಇರಲಿ. ಅರಸಿ ಬಂದ ಕಾರ್ಯವನ್ನು ಮುಂದೂಡುವುದು ಬೇಡ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಹಿರಿಯರ ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ. ಅನಿರೀಕ್ಷಿತ ಧನಾಗಮನದ ಸಾಧ್ಯತೆ ಇದೆ. ತೈಲ ವ್ಯಾಪಾರಿಗಳಿಗೆ ವ್ಯವಹಾರ ವಿಸ್ತರಣೆಯಾಗುವ ಸಾಧ್ಯತೆಗಳಿವೆ. ಕೌಟುಂಬಿಕ ಬಿಕ್ಕಟ್ಟಿನ ಕುರಿತು ಚರ್ಚೆಯಾಗುತ್ತದೆ. ಸಂಗಾತಿಯಿಂದ ಸಾಕಷ್ಟು ಸಮಾಧಾನದ ಮಾತುಗಳು ಕೇಳಿಬರುತ್ತವೆ. ಮಕ್ಕಳಿಗಾಗಿ ಮನೆಯಲ್ಲಿ ಪುಷ್ಕಳ ಭೋಜನದ ತಯಾರಿ ನಡೆಯುತ್ತದೆ. ಕಾರ್ಮಿಕರನ್ನು ಒದಗಿಸುವ ಸಂಸ್ಥೆಗಳಿಗೆ ವ್ಯವಹಾರ ವಿಸ್ತರಣೆಯಾಗುತ್ತದೆ. ವೈದ್ಯರುಗಳಿಗೆ ಹೆಚ್ಚಿನ ಗೌರವ ದೊರೆಯುವ ಸಾಧ್ಯತೆಗಳಿವೆ. ಕಳೆದುಹೋಗಿದ್ದ ಸಂಬಂಧಗಳು ಪುನಹ ಸ್ಥಾಪನೆಯಾಗುವುದು. ಕೃಷಿ ಉತ್ಪನ್ನಗಳನ್ನು ಮಾರುವವರಿಗೆ ವ್ಯವಹಾರದ ವಿಸ್ತರಣೆ ಇದೆ. ಸ್ವಯಂ ಉದ್ಯೋಗ ಮಾಡುವವರಿಗೆ ಸಹಾಯಧನಗಳು ದೊರೆತು ಹೆಚ್ಚು ಉತ್ಪಾದನೆಗೆ ಅನುಕೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT