<p>ರಾಗಂ ವಿಜೃಂಭಯತಿ ಸಂಶ್ರಯತೇ ಪ್ರಮಾದಂ</p>.<p><strong>ದೋಷಾನ್ ನ ಚಿಂತಯತಿ ಸಾಹಸಮಭ್ಯುಪೈತಿ ।</strong></p>.<p><strong>ಸ್ವಚ್ಛಂದತೋ ವ್ರಜತಿ ನೇಚ್ಛತಿ ನೀತಿಮಾರ್ಗಂ</strong></p>.<p><strong>ಬುದ್ಧಿಂ ಶುಭಾಂ ಸುವಿದುಷಾಮವಶೀಕರೋತಿ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಯೌವನವು ಕಾಮವನ್ನು ಹೆಚ್ಚಿಸುವಂತೆ ಮಾಡುತ್ತದೆ; ತಪ್ಪುಗಳನ್ನು ಅಡಿಗಡಿಗೆ ಮಾಡಿಸುತ್ತದೆ; ಜಾಗರೂಕತೆಯೇ ಇರುವುದಿಲ್ಲ; ಅಪಾಯದ ಕೆಲಸಗಳನ್ನು ಮಾಡಲು ಅದು ಪ್ರೇರಿಸುತ್ತದೆ; ಸ್ವೇಚ್ಛೆಯಾಗಿ ನಡೆಯುವಂತೆ ಮಾಡುತ್ತದೆ; ನೀತಿಯನ್ನೂ ಗಮನಿಸುವುದೇ ಇಲ್ಲ; ಎಷ್ಟೇ ವಿದ್ಯಾಂಸನಾಗಿದ್ದರೂ ಅವನ ಒಳ್ಳೆಯ ಬುದ್ಧಿಯನ್ನು ಕೂಡ ಅದು ಹದ್ದು ಮೀರುವಂತೆ ಮಾಡುತ್ತದೆ.’</p>.<p>ಯೌವನ ಎಂದರೆ ನಮ್ಮ ಆಯುಸ್ಸಿನ ಪ್ರಮುಖ ಘಟ್ಟ; ಅತ್ಯಂತ ಶಕ್ತಿಶಾಲಿಯಾದ ಘಟ್ಟ. ಈ ಶಕ್ತಿಯ ಉಪಯೋಗ ಸರಿಯಾಗಿ ಆಗದಿದ್ದರೆ ಆಗ ಅನಾಹುತಗಳ ಸರಣಿಯೇ ಸಂಭವಿಸುವುದು ಎಂದು ಸುಭಾಷಿತ ಹೇಳುತ್ತಿದೆ.</p>.<p>ಯೌವನ ಎನ್ನುವುದು ಇತ್ತ ಬಾಲ್ಯವೂ ಅಲ್ಲ, ಅತ್ತ ಮುಪ್ಪು ಅಲ್ಲ; ಎರಡರ ನಡುವಿನ ಕಾಲ. ಬಾಲ್ಯದ ಉತ್ಸಾಹ ಮತ್ತು ಪ್ರೌಢವಾಸ್ಥೆಯ ವಿವೇಕ – ಎರಡೂ ಸೇರಿರುವ ಅವಸ್ಥೆ. ಆದರೆ ಈ ಎರಡೂ ಎಚ್ಚರವಾಗಿರದಿದ್ದರೆ ಆಗ ನಮ್ಮ ಜೀವನ ತೊಂದರೆಗಳಿಗೆ ಒಳಗಾಗುತ್ತದೆ. ಇಂಥ ತೊಂದರೆಗಳ ಪಟ್ಟಿಯನ್ನೇ ಸುಭಾಷಿತ ಇಲ್ಲಿ ನೀಡಿದೆ.</p>.<p>ಯೌವನ ಎಂಬುದು ಕಾಮನನ್ನು ಸ್ವಾಗತಿಸುವ ಸಂಭ್ರಮದ ಸಮಯ. ಈ ಸಂಭ್ರಮವನ್ನು ಸಂಯಮದಿಂದ ಸ್ವೀಕರಿಸದಿದ್ದರೆ ಆಗ ಅದರಿಂದ ತೊಂದರೆಗಳು ಎದುರಾಗುವುದು ಸಹಜ. ಶಕ್ತಿಯೇ ಯೌವನದ ಮೂಲಮಂತ್ರವಾಗಿರುತ್ತದೆ. ಶಕ್ತಿಯ ಮದ ನಮ್ಮಿಂದ ತಪ್ಪುಗಳನ್ನು ಮಾಡಲು ಪ್ರಚೋದಿಸುತ್ತದೆ; ಅದೂ ಮತ್ತೆ ಮತ್ತೆ ತಪ್ಪುಗಳು.</p>.<p>ತಪ್ಪುಗಳು ಯಾಕೆ ನಡೆಯುತ್ತವೆ? ಕಾಮದ ಉನ್ಮಾದವೂ ಅದಕ್ಕೆ ಒಂದು ಕಾರಣ. ಈ ಉನ್ಮಾದದಿಂದಾಗಿ ಜಾಗರೂಕತೆಯನ್ನು ಮನಸ್ಸು ಕಳೆದುಕೊಂಡಿರುತ್ತದೆ. ಜಾಗರೂಕತೆ ಮಾಯವಾಗಿದೆ; ತಪ್ಪುಗಳನ್ನು ಮಾಡಲೂ ಮನಸ್ಸು ಸಿದ್ಧವಾಗಿದೆ. ಇಂಥ ಮೈಮರೆವು ಇದ್ದಾಗ ಅಪಾಯದ ಕೆಲಸಗಳನ್ನು ಸಾಹಸದ ಕೆಲಸಗಳು ಎಂದು ಅದರಲ್ಲಿ ತೊಡಗುವುದು ಸಹಜವೇ ಆಗುತ್ತದೆ. ಅಪಾಯದ ಕೆಲಸಗಳನ್ನು ಮಾಡಬೇಕು ಎಂದರೆ ಸ್ವೇಚ್ಛೆ ಮುಖ್ಯವಾಗುತ್ತದೆ; ಸ್ವೇಚ್ಛಾಚಾರವೇ ಅಪಾಯವನ್ನು ಲೆಕ್ಕಿಸದಂತೆ ಮಾಡುವಂಥದ್ದು.</p>.<p>ಅಪಾಯಕ್ಕೂ ಸಿದ್ಧ; ಸ್ವೇಚ್ಛಾಚರವೂ ಸಿದ್ಧಿಸಿದೆ. ಅಂಥ ಸಂದರ್ಭದಲ್ಲಿ ನೀತಿ–ನಿಯಮಗಳ ಲಕ್ಷ್ಯವಾದರೂ ಏಕಿದ್ದೀತು? ಅಪಾಯಕ್ಕೆ ಸಿದ್ಧ; ಸ್ವೇಚ್ಛಾಚಾರವೂ ಸಿದ್ಧ; ನೀತಿ–ನಿಯಮಗಳ ಗೊಡವೆ ಇಲ್ಲ. ಇಂಥ ಹಾದಿತಪ್ಪಿದ ಸಮಯದಲ್ಲಿ ಎಂಥ ವಿದ್ಯಾವಂತನಾದರೂ ಏನು ಪ್ರಯೋಜನ? ಅವನಲ್ಲಿ ವಿವೇಕ ಇಲ್ಲವಾಗಿರುವುದರಿಂದಲೇ ಇಷ್ಟೆಲ್ಲ ತಪ್ಪಿದ ತಾಳಗಳಿಗೆ ಅವಕಾಶ ಒದಗಿರುವುದು.</p>.<p>ಸುಭಾಷಿತ ಹೇಳುತ್ತಿರುವುದು ಏನೆಂದರೆ, ನಮಗಿರುವ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳುವ ಬುದ್ಧಿ ನಮ್ಮಲ್ಲಿ ಇಲ್ಲದಿದ್ದರೆ ಆಗ ನಮ್ಮ ಬಲವೇ ನಮಗೆ ಶತ್ರುವಾಗುತ್ತದೆ ಎಂದು. ಪ್ರಜಾಪ್ರಭುತ್ವವನ್ನು ಸರಿಯಾಗಿ ಬಳಸಿಕೊಳ್ಳುವ, ಉಳಿಸಿಕೊಳ್ಳುವ ಮಾರ್ಗವೂ ನಮಗೆ ಗೊತ್ತಿರಬೇಕು; ಇಲ್ಲವಾದಲ್ಲಿ ಅದೇ ಪ್ರಜೆಗಳ ಹಿಂಸೆಗೂ ಕಾರಣವಾಗಬಲ್ಲದು, ಅಲ್ಲವೆ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಗಂ ವಿಜೃಂಭಯತಿ ಸಂಶ್ರಯತೇ ಪ್ರಮಾದಂ</p>.<p><strong>ದೋಷಾನ್ ನ ಚಿಂತಯತಿ ಸಾಹಸಮಭ್ಯುಪೈತಿ ।</strong></p>.<p><strong>ಸ್ವಚ್ಛಂದತೋ ವ್ರಜತಿ ನೇಚ್ಛತಿ ನೀತಿಮಾರ್ಗಂ</strong></p>.<p><strong>ಬುದ್ಧಿಂ ಶುಭಾಂ ಸುವಿದುಷಾಮವಶೀಕರೋತಿ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಯೌವನವು ಕಾಮವನ್ನು ಹೆಚ್ಚಿಸುವಂತೆ ಮಾಡುತ್ತದೆ; ತಪ್ಪುಗಳನ್ನು ಅಡಿಗಡಿಗೆ ಮಾಡಿಸುತ್ತದೆ; ಜಾಗರೂಕತೆಯೇ ಇರುವುದಿಲ್ಲ; ಅಪಾಯದ ಕೆಲಸಗಳನ್ನು ಮಾಡಲು ಅದು ಪ್ರೇರಿಸುತ್ತದೆ; ಸ್ವೇಚ್ಛೆಯಾಗಿ ನಡೆಯುವಂತೆ ಮಾಡುತ್ತದೆ; ನೀತಿಯನ್ನೂ ಗಮನಿಸುವುದೇ ಇಲ್ಲ; ಎಷ್ಟೇ ವಿದ್ಯಾಂಸನಾಗಿದ್ದರೂ ಅವನ ಒಳ್ಳೆಯ ಬುದ್ಧಿಯನ್ನು ಕೂಡ ಅದು ಹದ್ದು ಮೀರುವಂತೆ ಮಾಡುತ್ತದೆ.’</p>.<p>ಯೌವನ ಎಂದರೆ ನಮ್ಮ ಆಯುಸ್ಸಿನ ಪ್ರಮುಖ ಘಟ್ಟ; ಅತ್ಯಂತ ಶಕ್ತಿಶಾಲಿಯಾದ ಘಟ್ಟ. ಈ ಶಕ್ತಿಯ ಉಪಯೋಗ ಸರಿಯಾಗಿ ಆಗದಿದ್ದರೆ ಆಗ ಅನಾಹುತಗಳ ಸರಣಿಯೇ ಸಂಭವಿಸುವುದು ಎಂದು ಸುಭಾಷಿತ ಹೇಳುತ್ತಿದೆ.</p>.<p>ಯೌವನ ಎನ್ನುವುದು ಇತ್ತ ಬಾಲ್ಯವೂ ಅಲ್ಲ, ಅತ್ತ ಮುಪ್ಪು ಅಲ್ಲ; ಎರಡರ ನಡುವಿನ ಕಾಲ. ಬಾಲ್ಯದ ಉತ್ಸಾಹ ಮತ್ತು ಪ್ರೌಢವಾಸ್ಥೆಯ ವಿವೇಕ – ಎರಡೂ ಸೇರಿರುವ ಅವಸ್ಥೆ. ಆದರೆ ಈ ಎರಡೂ ಎಚ್ಚರವಾಗಿರದಿದ್ದರೆ ಆಗ ನಮ್ಮ ಜೀವನ ತೊಂದರೆಗಳಿಗೆ ಒಳಗಾಗುತ್ತದೆ. ಇಂಥ ತೊಂದರೆಗಳ ಪಟ್ಟಿಯನ್ನೇ ಸುಭಾಷಿತ ಇಲ್ಲಿ ನೀಡಿದೆ.</p>.<p>ಯೌವನ ಎಂಬುದು ಕಾಮನನ್ನು ಸ್ವಾಗತಿಸುವ ಸಂಭ್ರಮದ ಸಮಯ. ಈ ಸಂಭ್ರಮವನ್ನು ಸಂಯಮದಿಂದ ಸ್ವೀಕರಿಸದಿದ್ದರೆ ಆಗ ಅದರಿಂದ ತೊಂದರೆಗಳು ಎದುರಾಗುವುದು ಸಹಜ. ಶಕ್ತಿಯೇ ಯೌವನದ ಮೂಲಮಂತ್ರವಾಗಿರುತ್ತದೆ. ಶಕ್ತಿಯ ಮದ ನಮ್ಮಿಂದ ತಪ್ಪುಗಳನ್ನು ಮಾಡಲು ಪ್ರಚೋದಿಸುತ್ತದೆ; ಅದೂ ಮತ್ತೆ ಮತ್ತೆ ತಪ್ಪುಗಳು.</p>.<p>ತಪ್ಪುಗಳು ಯಾಕೆ ನಡೆಯುತ್ತವೆ? ಕಾಮದ ಉನ್ಮಾದವೂ ಅದಕ್ಕೆ ಒಂದು ಕಾರಣ. ಈ ಉನ್ಮಾದದಿಂದಾಗಿ ಜಾಗರೂಕತೆಯನ್ನು ಮನಸ್ಸು ಕಳೆದುಕೊಂಡಿರುತ್ತದೆ. ಜಾಗರೂಕತೆ ಮಾಯವಾಗಿದೆ; ತಪ್ಪುಗಳನ್ನು ಮಾಡಲೂ ಮನಸ್ಸು ಸಿದ್ಧವಾಗಿದೆ. ಇಂಥ ಮೈಮರೆವು ಇದ್ದಾಗ ಅಪಾಯದ ಕೆಲಸಗಳನ್ನು ಸಾಹಸದ ಕೆಲಸಗಳು ಎಂದು ಅದರಲ್ಲಿ ತೊಡಗುವುದು ಸಹಜವೇ ಆಗುತ್ತದೆ. ಅಪಾಯದ ಕೆಲಸಗಳನ್ನು ಮಾಡಬೇಕು ಎಂದರೆ ಸ್ವೇಚ್ಛೆ ಮುಖ್ಯವಾಗುತ್ತದೆ; ಸ್ವೇಚ್ಛಾಚಾರವೇ ಅಪಾಯವನ್ನು ಲೆಕ್ಕಿಸದಂತೆ ಮಾಡುವಂಥದ್ದು.</p>.<p>ಅಪಾಯಕ್ಕೂ ಸಿದ್ಧ; ಸ್ವೇಚ್ಛಾಚರವೂ ಸಿದ್ಧಿಸಿದೆ. ಅಂಥ ಸಂದರ್ಭದಲ್ಲಿ ನೀತಿ–ನಿಯಮಗಳ ಲಕ್ಷ್ಯವಾದರೂ ಏಕಿದ್ದೀತು? ಅಪಾಯಕ್ಕೆ ಸಿದ್ಧ; ಸ್ವೇಚ್ಛಾಚಾರವೂ ಸಿದ್ಧ; ನೀತಿ–ನಿಯಮಗಳ ಗೊಡವೆ ಇಲ್ಲ. ಇಂಥ ಹಾದಿತಪ್ಪಿದ ಸಮಯದಲ್ಲಿ ಎಂಥ ವಿದ್ಯಾವಂತನಾದರೂ ಏನು ಪ್ರಯೋಜನ? ಅವನಲ್ಲಿ ವಿವೇಕ ಇಲ್ಲವಾಗಿರುವುದರಿಂದಲೇ ಇಷ್ಟೆಲ್ಲ ತಪ್ಪಿದ ತಾಳಗಳಿಗೆ ಅವಕಾಶ ಒದಗಿರುವುದು.</p>.<p>ಸುಭಾಷಿತ ಹೇಳುತ್ತಿರುವುದು ಏನೆಂದರೆ, ನಮಗಿರುವ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳುವ ಬುದ್ಧಿ ನಮ್ಮಲ್ಲಿ ಇಲ್ಲದಿದ್ದರೆ ಆಗ ನಮ್ಮ ಬಲವೇ ನಮಗೆ ಶತ್ರುವಾಗುತ್ತದೆ ಎಂದು. ಪ್ರಜಾಪ್ರಭುತ್ವವನ್ನು ಸರಿಯಾಗಿ ಬಳಸಿಕೊಳ್ಳುವ, ಉಳಿಸಿಕೊಳ್ಳುವ ಮಾರ್ಗವೂ ನಮಗೆ ಗೊತ್ತಿರಬೇಕು; ಇಲ್ಲವಾದಲ್ಲಿ ಅದೇ ಪ್ರಜೆಗಳ ಹಿಂಸೆಗೂ ಕಾರಣವಾಗಬಲ್ಲದು, ಅಲ್ಲವೆ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>