<p><strong>ಬಾದಾಮಿ</strong>: ದಸರಾ ಹಬ್ಬದ ಪ್ರಯುಕ್ತ ಪಟ್ಟಣದ ಪ್ರಾಚೀನ ಐತಿಹಾಸಿಕ ವೆಂಕಟೇಶ್ವರ ದೇವಾಲಯದಲ್ಲಿ ಅ. 3ರಿಂದ ಅ. 12ರ ವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಭಾಗವತ, ಕಾರ್ಯದರ್ಶಿ ಎಸ್.ಜಿ. ಕುಲಕರ್ಣಿ ತಿಳಿಸಿದ್ದಾರೆ.</p>.<p>ಅ. 3 ರಂದು ಬೆಳಿಗ್ಗೆ 11 ಗಂಟೆಗೆ ಗರುಡ ಪಟಾರೋಹಣದೊಂದಿಗೆ ಘಟಸ್ಥಾಪನೆ ನಡೆಯಲಿದೆ. ನಿತ್ಯ ಹೋಮ-ಹವನ ಮತ್ತು ವೆಂಕಟೇಶ ಪುರಾಣ ಹಾಗೂ ರಾತ್ರಿ 7 ಕ್ಕೆ ಪಲ್ಲಕ್ಕಿಸೇವೆ ಮತ್ತು ವಾಹನೋತ್ಸವ ಹಮ್ಮಿಕೊಳ್ಳಲಾಗಿದೆ.</p>.<p>ಅ. 7 ರಂದು ಗರುಡ ಪಂಚಮಿ, ಅ. 10 ರಂದು ತ್ರಿ ರಾತ್ರೋತ್ಸವ/ಸರಸ್ವತಿ ಪೂಜಾ, ಅ. 11 ರಂದು ವಿಕರಾರೋತ್ಸವ ದುರ್ಗಷ್ಟಮಿ, ಆಯುಧ ಪೂಜೆ, ಅ. 12 ರಂದು ವೆಂಕಟೇಶ ಪುರಾಣ ಮಂಗಲ, ಬೆಳಿಗ್ಗೆ 9 ಕ್ಕೆ ರಥಾಂಗ ಹೋಮ, ಮಧ್ಯಾಹ್ನ 12 ಕ್ಕೆ ರಥೋತ್ಸವ ಮತ್ತು ಸಂಜೆ 6.30 ಕ್ಕೆ ದತ್ತಾತ್ರೇಯ ದೇವಸ್ಥಾನದಲ್ಲಿ ಶಮೀಪೂಜೆ ಬನ್ನಿಮುಡಿಯುವ ಕಾರ್ಯಕ್ರಮ ನಡೆಯಲಿದೆ. ಭಕ್ತರು ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಲು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ</strong>: ದಸರಾ ಹಬ್ಬದ ಪ್ರಯುಕ್ತ ಪಟ್ಟಣದ ಪ್ರಾಚೀನ ಐತಿಹಾಸಿಕ ವೆಂಕಟೇಶ್ವರ ದೇವಾಲಯದಲ್ಲಿ ಅ. 3ರಿಂದ ಅ. 12ರ ವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಭಾಗವತ, ಕಾರ್ಯದರ್ಶಿ ಎಸ್.ಜಿ. ಕುಲಕರ್ಣಿ ತಿಳಿಸಿದ್ದಾರೆ.</p>.<p>ಅ. 3 ರಂದು ಬೆಳಿಗ್ಗೆ 11 ಗಂಟೆಗೆ ಗರುಡ ಪಟಾರೋಹಣದೊಂದಿಗೆ ಘಟಸ್ಥಾಪನೆ ನಡೆಯಲಿದೆ. ನಿತ್ಯ ಹೋಮ-ಹವನ ಮತ್ತು ವೆಂಕಟೇಶ ಪುರಾಣ ಹಾಗೂ ರಾತ್ರಿ 7 ಕ್ಕೆ ಪಲ್ಲಕ್ಕಿಸೇವೆ ಮತ್ತು ವಾಹನೋತ್ಸವ ಹಮ್ಮಿಕೊಳ್ಳಲಾಗಿದೆ.</p>.<p>ಅ. 7 ರಂದು ಗರುಡ ಪಂಚಮಿ, ಅ. 10 ರಂದು ತ್ರಿ ರಾತ್ರೋತ್ಸವ/ಸರಸ್ವತಿ ಪೂಜಾ, ಅ. 11 ರಂದು ವಿಕರಾರೋತ್ಸವ ದುರ್ಗಷ್ಟಮಿ, ಆಯುಧ ಪೂಜೆ, ಅ. 12 ರಂದು ವೆಂಕಟೇಶ ಪುರಾಣ ಮಂಗಲ, ಬೆಳಿಗ್ಗೆ 9 ಕ್ಕೆ ರಥಾಂಗ ಹೋಮ, ಮಧ್ಯಾಹ್ನ 12 ಕ್ಕೆ ರಥೋತ್ಸವ ಮತ್ತು ಸಂಜೆ 6.30 ಕ್ಕೆ ದತ್ತಾತ್ರೇಯ ದೇವಸ್ಥಾನದಲ್ಲಿ ಶಮೀಪೂಜೆ ಬನ್ನಿಮುಡಿಯುವ ಕಾರ್ಯಕ್ರಮ ನಡೆಯಲಿದೆ. ಭಕ್ತರು ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಲು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>