<p><strong>ಬಾಗಲಕೋಟೆ</strong>: ಸಕ್ಕರೆ ಉತ್ಪಾದನೆಯಲ್ಲಿ ಹೆಸರು ಮಾಡಿರುವಂತೆ ಜಿಲ್ಲೆಯು ಬೆಲ್ಲದ ಉತ್ಪಾದನೆಯಲ್ಲಿಯೂ ಹೆಸರು ಮಾಡಿದೆ. ಸಾವಯವ ಬೆಲ್ಲ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2013ರಲ್ಲಿ ಮುಧೋಳದಲ್ಲಿ ಆರಂಭಗೊಂಡಿದ್ದ ಸಾವಯವ ಬೆಲ್ಲ ತಂತ್ರಜ್ಞಾನ ಸಂಸ್ಥೆ (ಜಾಗರಿ ಪಾರ್ಕ್) ಸ್ಥಗಿತಗೊಂಡಿದೆ.</p>.<p>2013ರಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ₹8 ಕೋಟಿ ವೆಚ್ಚ ಮಾಡಿ ವರ್ಷಕ್ಕೆ 3,000 ಟನ್ ಬೆಲ್ಲ ಉತ್ಪಾದನೆಯ ಜಾಗರಿ ಪಾರ್ಕ್ ಆರಂಭಿಸಲಾಗಿತ್ತು. ಧಾರವಾಡದ ಕೃಷಿ ವಿಶ್ವವಿದ್ಯಾಲಯ ಇದರ ಉಸ್ತುವಾರಿ ವಹಿಸಿಕೊಂಡಿತ್ತು. ಗುತ್ತಿಗೆ ಪಡೆದಿದ್ದ ಕಂಪನಿ ನಷ್ಟವಾಗುತ್ತಿದೆ ಎಂದು ಹಿಂದೆ ಸರಿದಿದ್ದರಿಂದ ಪಾರ್ಕ್ ಬಂದ್ ಆಗಿದೆ.</p>.<p>ಐದು ವರ್ಷಗಳ ಹಿಂದೆ ಮುಧೋಳದ ರೈತ ಉತ್ಪಾದನಾ ಸಂಸ್ಥೆ ಜಾಗರಿ ಪಾರ್ಕ್ ಅನ್ನು ಲೀಸ್ ಪಡೆದಿತ್ತು. ಕೃವಿವಿ ಹಾಗೂ ಸಂಸ್ಥೆ ನಡುವೆ ಆಗಿದ್ದ ಒಪ್ಪಂದದಂತೆ ಪ್ರತಿ ಟನ್ಗೆ ₹452 ಪಾವತಿಸಬೇಕಿತ್ತು. ನಷ್ಟವಾಗಿರುವುದರಿಂದ ವಿಶ್ವವಿದ್ಯಾಲಯಕ್ಕೆ ಪಾವತಿಸಬೇಕಿದ್ದ ₹35 ಲಕ್ಷ ಪಾವತಿಸಲಾಗುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.</p>.<p>ಎರಡು ವರ್ಷಗಳಿಂದ ಪಾರ್ಕ್ ಕಾರ್ಯ ನಿರ್ವಹಿಸುತ್ತಿಲ್ಲ. ಅದರಲ್ಲಿದ್ದ ಯಂತ್ರಗಳು ದೂಳು ಹಿಡಿದಿವೆ. ಜಾಗರಿ ಪಾರ್ಕ್ ಸ್ಥಾಪನೆಯಿಂದ ಕಬ್ಬಿಗೆ ಉತ್ತಮ ಬೆಲೆ ಸಿಗಬಹುದು ಎಂದುಕೊಂಡಿದ್ದ ರೈತರೂ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಮಹಾಲಿಂಗಪುರದ ಬೆಲ್ಲದ ಮಾರುಕಟ್ಟೆ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ. ವಿವಿಧ ರಾಜ್ಯಗಳಿಗೆ ಇಲ್ಲಿಂದಲೇ ಬೆಲ್ಲ ಹೋಗುತ್ತದೆ. ಹಲವಾರು ರೈತರು, ರೈತ ಉತ್ಪಾದಕ ಸಂಸ್ಥೆಗಳು ಸಾವಯವ ಬೆಲ್ಲದ ಉತ್ಪಾದನೆ ಮಾಡುತ್ತಿವೆ. ಉತ್ತಮ ಮಾರುಕಟ್ಟೆಯನ್ನು ಹೊಂದಿವೆ. ಆದರೆ, ಸರ್ಕಾರಿ ಸಂಸ್ಥೆಯೊಂದು ಸಂಕಷ್ಟಕ್ಕೆ ಸಿಲುಕಿದೆ.</p>.<p>ಸಾವಯವ ಉತ್ಪನ್ನದ ಬಗ್ಗೆ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಮಾತನಾಡುತ್ತಿರುತ್ತಾರೆ. ಆದರೆ, ಸಾವಯವ ಬೆಲ್ಲದ ಪಾರ್ಕ್ ಎರಡು ವರ್ಷಗಳಿಂದ ಬಂದ್ ಆಗಿದ್ದರೂ ಆರಂಭಿಸುವತ್ತ ಲಕ್ಷ್ಯ ಹರಿಸಿಲ್ಲ. ಮಾರುಕಟ್ಟೆಯಿಲ್ಲದೇ ಸಾವಯವ ಕಬ್ಬು ಬೆಳೆದ ರೈತರೂ ಅನಿವಾರ್ಯವಾಗಿ ಕಾರ್ಖಾನೆಗೆ ಕಬ್ಬು ಸಾಗಿಸಬೇಕಾದ ಸ್ಥಿತಿ ಎದುರಾಗಿದೆ.</p>.<div><blockquote>ಯಾವುದೇ ಸಂಸ್ಥೆ ಮುಂದೆ ಬರದಿದ್ದರೆ ವಿಶ್ವವಿದ್ಯಾಲಯದಿಂದ ಆರಂಭಿಸುವ ಯೋಚನೆ ನಡೆದಿದೆ. ಅಗತ್ಯ ಸಿಬ್ಬಂದಿಯ ಅವಶ್ಯವಿದೆ </blockquote><span class="attribution">ಪಿ.ಎಲ್. ಪಾಟೀಲ ಕುಲಪತಿ ಕೃಷಿ ವಿಶ್ವವಿದ್ಯಾಲಯ ಧಾರವಾಡ</span></div>.<p> ಟೆಂಡರ್ ಕರೆದರೆ ಯಾರೂ ಭಾಗವಹಿಸಿಲ್ಲ ಜಾಗರಿ ಪಾರ್ಕ್ ಪಡೆದಿದ್ದ ಸಂಸ್ಥೆಯ ಗುತ್ತಿಗೆಯ ಐದು ವರ್ಷ ಪೂರ್ಣಗೊಂಡಿದೆ. ಟೆಂಡರ್ ಕರೆದರೂ ಯಾವ ಸಂಸ್ಥೆಯೂ ಭಾಗವಹಿಸದ್ದರಿಂದ ಪಾರ್ಕ್ ಆರಂಭ ನನೆಗುದಿಗೆ ಬಿದ್ದಿದೆ. ‘ಹಿಂದೆ ಗುತ್ತಿಗೆ ಪಡೆದಿದ್ದ ಸಂಸ್ಥೆ ಕೃವಿವಿಗೆ ₹30 ಲಕ್ಷ ಪಾವತಿಸಬೇಕಿದೆ. ನಷ್ಟವಾಗಿದ್ದರಿಂದ ಮನ್ನಾ ಮಾಡುವಂತೆ ಮನವಿ ಮಾಡಿಕೊಂಡಿದ್ದು ಈ ಕುರಿತು ಕಾನೂನು ಸಲಹೆ ಕೇಳಲಾಗಿದೆ’ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಿ.ಬಿ. ಬಿರಾದಾರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಸಕ್ಕರೆ ಉತ್ಪಾದನೆಯಲ್ಲಿ ಹೆಸರು ಮಾಡಿರುವಂತೆ ಜಿಲ್ಲೆಯು ಬೆಲ್ಲದ ಉತ್ಪಾದನೆಯಲ್ಲಿಯೂ ಹೆಸರು ಮಾಡಿದೆ. ಸಾವಯವ ಬೆಲ್ಲ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2013ರಲ್ಲಿ ಮುಧೋಳದಲ್ಲಿ ಆರಂಭಗೊಂಡಿದ್ದ ಸಾವಯವ ಬೆಲ್ಲ ತಂತ್ರಜ್ಞಾನ ಸಂಸ್ಥೆ (ಜಾಗರಿ ಪಾರ್ಕ್) ಸ್ಥಗಿತಗೊಂಡಿದೆ.</p>.<p>2013ರಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ₹8 ಕೋಟಿ ವೆಚ್ಚ ಮಾಡಿ ವರ್ಷಕ್ಕೆ 3,000 ಟನ್ ಬೆಲ್ಲ ಉತ್ಪಾದನೆಯ ಜಾಗರಿ ಪಾರ್ಕ್ ಆರಂಭಿಸಲಾಗಿತ್ತು. ಧಾರವಾಡದ ಕೃಷಿ ವಿಶ್ವವಿದ್ಯಾಲಯ ಇದರ ಉಸ್ತುವಾರಿ ವಹಿಸಿಕೊಂಡಿತ್ತು. ಗುತ್ತಿಗೆ ಪಡೆದಿದ್ದ ಕಂಪನಿ ನಷ್ಟವಾಗುತ್ತಿದೆ ಎಂದು ಹಿಂದೆ ಸರಿದಿದ್ದರಿಂದ ಪಾರ್ಕ್ ಬಂದ್ ಆಗಿದೆ.</p>.<p>ಐದು ವರ್ಷಗಳ ಹಿಂದೆ ಮುಧೋಳದ ರೈತ ಉತ್ಪಾದನಾ ಸಂಸ್ಥೆ ಜಾಗರಿ ಪಾರ್ಕ್ ಅನ್ನು ಲೀಸ್ ಪಡೆದಿತ್ತು. ಕೃವಿವಿ ಹಾಗೂ ಸಂಸ್ಥೆ ನಡುವೆ ಆಗಿದ್ದ ಒಪ್ಪಂದದಂತೆ ಪ್ರತಿ ಟನ್ಗೆ ₹452 ಪಾವತಿಸಬೇಕಿತ್ತು. ನಷ್ಟವಾಗಿರುವುದರಿಂದ ವಿಶ್ವವಿದ್ಯಾಲಯಕ್ಕೆ ಪಾವತಿಸಬೇಕಿದ್ದ ₹35 ಲಕ್ಷ ಪಾವತಿಸಲಾಗುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.</p>.<p>ಎರಡು ವರ್ಷಗಳಿಂದ ಪಾರ್ಕ್ ಕಾರ್ಯ ನಿರ್ವಹಿಸುತ್ತಿಲ್ಲ. ಅದರಲ್ಲಿದ್ದ ಯಂತ್ರಗಳು ದೂಳು ಹಿಡಿದಿವೆ. ಜಾಗರಿ ಪಾರ್ಕ್ ಸ್ಥಾಪನೆಯಿಂದ ಕಬ್ಬಿಗೆ ಉತ್ತಮ ಬೆಲೆ ಸಿಗಬಹುದು ಎಂದುಕೊಂಡಿದ್ದ ರೈತರೂ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಮಹಾಲಿಂಗಪುರದ ಬೆಲ್ಲದ ಮಾರುಕಟ್ಟೆ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ. ವಿವಿಧ ರಾಜ್ಯಗಳಿಗೆ ಇಲ್ಲಿಂದಲೇ ಬೆಲ್ಲ ಹೋಗುತ್ತದೆ. ಹಲವಾರು ರೈತರು, ರೈತ ಉತ್ಪಾದಕ ಸಂಸ್ಥೆಗಳು ಸಾವಯವ ಬೆಲ್ಲದ ಉತ್ಪಾದನೆ ಮಾಡುತ್ತಿವೆ. ಉತ್ತಮ ಮಾರುಕಟ್ಟೆಯನ್ನು ಹೊಂದಿವೆ. ಆದರೆ, ಸರ್ಕಾರಿ ಸಂಸ್ಥೆಯೊಂದು ಸಂಕಷ್ಟಕ್ಕೆ ಸಿಲುಕಿದೆ.</p>.<p>ಸಾವಯವ ಉತ್ಪನ್ನದ ಬಗ್ಗೆ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಮಾತನಾಡುತ್ತಿರುತ್ತಾರೆ. ಆದರೆ, ಸಾವಯವ ಬೆಲ್ಲದ ಪಾರ್ಕ್ ಎರಡು ವರ್ಷಗಳಿಂದ ಬಂದ್ ಆಗಿದ್ದರೂ ಆರಂಭಿಸುವತ್ತ ಲಕ್ಷ್ಯ ಹರಿಸಿಲ್ಲ. ಮಾರುಕಟ್ಟೆಯಿಲ್ಲದೇ ಸಾವಯವ ಕಬ್ಬು ಬೆಳೆದ ರೈತರೂ ಅನಿವಾರ್ಯವಾಗಿ ಕಾರ್ಖಾನೆಗೆ ಕಬ್ಬು ಸಾಗಿಸಬೇಕಾದ ಸ್ಥಿತಿ ಎದುರಾಗಿದೆ.</p>.<div><blockquote>ಯಾವುದೇ ಸಂಸ್ಥೆ ಮುಂದೆ ಬರದಿದ್ದರೆ ವಿಶ್ವವಿದ್ಯಾಲಯದಿಂದ ಆರಂಭಿಸುವ ಯೋಚನೆ ನಡೆದಿದೆ. ಅಗತ್ಯ ಸಿಬ್ಬಂದಿಯ ಅವಶ್ಯವಿದೆ </blockquote><span class="attribution">ಪಿ.ಎಲ್. ಪಾಟೀಲ ಕುಲಪತಿ ಕೃಷಿ ವಿಶ್ವವಿದ್ಯಾಲಯ ಧಾರವಾಡ</span></div>.<p> ಟೆಂಡರ್ ಕರೆದರೆ ಯಾರೂ ಭಾಗವಹಿಸಿಲ್ಲ ಜಾಗರಿ ಪಾರ್ಕ್ ಪಡೆದಿದ್ದ ಸಂಸ್ಥೆಯ ಗುತ್ತಿಗೆಯ ಐದು ವರ್ಷ ಪೂರ್ಣಗೊಂಡಿದೆ. ಟೆಂಡರ್ ಕರೆದರೂ ಯಾವ ಸಂಸ್ಥೆಯೂ ಭಾಗವಹಿಸದ್ದರಿಂದ ಪಾರ್ಕ್ ಆರಂಭ ನನೆಗುದಿಗೆ ಬಿದ್ದಿದೆ. ‘ಹಿಂದೆ ಗುತ್ತಿಗೆ ಪಡೆದಿದ್ದ ಸಂಸ್ಥೆ ಕೃವಿವಿಗೆ ₹30 ಲಕ್ಷ ಪಾವತಿಸಬೇಕಿದೆ. ನಷ್ಟವಾಗಿದ್ದರಿಂದ ಮನ್ನಾ ಮಾಡುವಂತೆ ಮನವಿ ಮಾಡಿಕೊಂಡಿದ್ದು ಈ ಕುರಿತು ಕಾನೂನು ಸಲಹೆ ಕೇಳಲಾಗಿದೆ’ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಿ.ಬಿ. ಬಿರಾದಾರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>