ಗುರುಗಳ ಅಣತಿಯಂತೆ ಮಹಾಲಿಂಗೇಶ್ವರರು ನರಗಟ್ಟಿ ಗ್ರಾಮಕ್ಕೆ ಬಂದಾಗ ಶಿವಭಕ್ತೆ ಸಿದ್ದಾಯಿ ತಾಯಿ ಬರಮಾಡಿಕೊಳ್ಳುತ್ತಾಳೆ. ನಂತರ ಅಲ್ಲಿಯೇ ನೆಲೆ ನಿಂತು ಅನೇಕ ಪವಾಡಗಳನ್ನು ಮಹಾಲಿಂಗೇಶ್ವರರು ಮಾಡುತ್ತಾರೆ. ಮುಂದೆ ಅವರ ಹೆಸರಿನಿಂದಲೇ ಊರು ನಾಮಾಂಕಿತವಾಗುತ್ತದೆ. ಚನ್ನಗಿರೇಶ್ವರ ದೇವಾಲಯ ಕೃಷ್ಣಾ ನದಿ ಇಬ್ಭಾಗವಾಗಿ ದಾರಿ ನೀಡಿದ್ದು ರುದ್ರಮ್ಮ ಎಂಬ ಹುಟ್ಟು ಕುರುಡಿಗೆ ಭಕ್ತಿದಾನ ಮಡಿದ ಮಗುವಿಗೆ ಪುನರ್ಜನ್ಮ ಶಿವಭಕ್ತನಿಗೆ ನೇತ್ರದಾನ ಮಡಿದ ರಾಜನಿಗೆ ಪ್ರಾಣದಾನ ಮುಂತಾದ ಪವಾಡಗಳನ್ನು ಮಾಡಿದ ಮಹಾಲಿಂಗೇಶ್ವರರು ಸಮಾಜ ಸುಧಾರಣೆಗಾಗಿ ಮಾಡಿದ ಸಾಧನೆ ಅಭೂತಪೂರ್ವವಾದುದು. ಮಹಾಲಿಂಗೇಶ್ವರರು ತಪಗೈದ ಚನ್ನಗಿರಿಯಲ್ಲಿ ರಾಮಲಿಂಗ ಎಂಬ ಪವಿತ್ರ ಲಿಂಗದ ಗೌರವಾರ್ಥ ಚನ್ನಗಿರೇಶ್ವರ ದೇವಾಲಯ ನಿರ್ಮಾಣವಾಗಿದೆ.