ಬಾಗಲಕೋಟೆಯ ನವನಗರದ ನಿವಾಸಿಗಳಾದ ಸಂಗಮೇಶ ಮೇತ್ರಿ (20) ಹಾಗೂ ಸ್ನೇಹಿತ ಹನುಮಂತ ಅಂಬಿಗೇರ ಬೈಕ್ನಲ್ಲಿ ಹೊರಟಿದ್ದು, ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಸಂಗಮೇಶ ಮೇತ್ರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಜ್ಞಾಹೀನರಾಗಿದ್ದ ಹನುಮಂತ ಅವರನ್ನು ಸ್ಥಳೀಯರು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ.