<p><strong>ಕೆರೂರ</strong>: ‘ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಅಧಿಕಾರಿ ಹಿಡಿಯುವಲ್ಲಿ ವಿಫಲವಾಗಿದ್ದು ಎಲ್ಲಿ ಎಂದು ಆತ್ಮಾಅವಲೋಕನ ಮಾಡಿಕೊಳ್ಳಬೇಕು’ ಎಂದು ರಾಜಕೀಯ ಮುಖಂಡ ಮಾಹಾಂತೇಶ ಮೇಣಸಗಿ ಹೇಳಿದರು.</p>.<p>ಪಟ್ಟಣದ ಹಳಪೇಟಿ ಬಡಾವಣೆಯ ಅಭಿಮಾನಿ ಬಳಗದವರು ಪ.ಪಂ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಿಗೆ ಭಾನುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಸರ್ಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಆದೇಶ ಹೊರಡಿಸಿದ ಮೇಲೆ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗಳು ದಿನಕ್ಕೊಂದು ತಿರುವು ಪಡೆದುಕೊಂಡವು. ಸದಸ್ಯರನ್ನು ಸವಾಲಿಗಿಟ್ಟ ಸಂದರ್ಭದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗಿ, ಬಂಡಾಯ ಅಭ್ಯರ್ಥಿಯಾಗಿ ಗೆಲ್ಲುವಂತಹ ಸ್ಥಿತಿ ನಿರ್ಮಾಣವಾಯಿತು’ ಎಂದರು.</p>.<p>‘ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಉಚ್ಚಾಟನೆ ಮಾಡುತ್ತಾ ಹೋದರೆ ಮುಂದೆ ನಿಮಗೆ ಓಟು ಹಾಕವವರು ಯಾರು? ಮೊದಲು ನೀವು ವಾಸ್ತವವನ್ನು ಅರಿತುಕೊಳ್ಳಿ’ ಎಂದು ಹೇಳಿದರು.</p>.<p>ನೂತನ ಅಧ್ಯಕ್ಷೆ ನಿರ್ಮಲಾ ಮದಿ ಮಾತನಾಡಿ, ‘ಅಧಿಕಾರ ಶಾಶ್ವತವಲ್ಲ ನಾವು ಮಾಡುವ ಸೇವೆ ಶಾಶ್ವತ. ಪಟ್ಟಣ ಅಬಿವೃದ್ದಿ ಹೊಂದಲು ಪ್ರತಿಯೊಬ್ಬರ ಸಹಕಾರ ಅಗತ್ಯ’ ಎಂದು ಹೇಳಿದರು.</p>.<p>ನಿವೃತ್ತ ಶಿಕ್ಷಕ ಬಿ.ಎಂ.ಬಂತಿ ಮಾತನಾಡಿದರು, ಸಾನ್ನಿಧ್ಯ ವಹಿಸಿದ್ದ ಶಿವುಕುಮಾರ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿದರು.</p>.<p>ಪ.ಪಂ ಉಪಾಧ್ಯಕ್ಷ ಮೋದಿನಸಾಬ್ ಚಿಕ್ಕೂರ, ಪ.ಪಂ ಸದಸ್ಯ ಪರಶುರಾಮ ಮಲ್ಲಾಡದ, ಸದಾನಂದ ಮದಿ, ಬಸವರಾಜ ಹುಂಡೇಕಾರ, ಮಾಂತೇಶ ಕತ್ತಿ, ನಿಂಗಪ್ಪ ಬಡಿಗೇರ, ಧನಂಜಯ ಕಂದಕೂರ, ಬಸವರಾಜ ಮಠಪತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆರೂರ</strong>: ‘ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಅಧಿಕಾರಿ ಹಿಡಿಯುವಲ್ಲಿ ವಿಫಲವಾಗಿದ್ದು ಎಲ್ಲಿ ಎಂದು ಆತ್ಮಾಅವಲೋಕನ ಮಾಡಿಕೊಳ್ಳಬೇಕು’ ಎಂದು ರಾಜಕೀಯ ಮುಖಂಡ ಮಾಹಾಂತೇಶ ಮೇಣಸಗಿ ಹೇಳಿದರು.</p>.<p>ಪಟ್ಟಣದ ಹಳಪೇಟಿ ಬಡಾವಣೆಯ ಅಭಿಮಾನಿ ಬಳಗದವರು ಪ.ಪಂ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಿಗೆ ಭಾನುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಸರ್ಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಆದೇಶ ಹೊರಡಿಸಿದ ಮೇಲೆ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗಳು ದಿನಕ್ಕೊಂದು ತಿರುವು ಪಡೆದುಕೊಂಡವು. ಸದಸ್ಯರನ್ನು ಸವಾಲಿಗಿಟ್ಟ ಸಂದರ್ಭದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗಿ, ಬಂಡಾಯ ಅಭ್ಯರ್ಥಿಯಾಗಿ ಗೆಲ್ಲುವಂತಹ ಸ್ಥಿತಿ ನಿರ್ಮಾಣವಾಯಿತು’ ಎಂದರು.</p>.<p>‘ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಉಚ್ಚಾಟನೆ ಮಾಡುತ್ತಾ ಹೋದರೆ ಮುಂದೆ ನಿಮಗೆ ಓಟು ಹಾಕವವರು ಯಾರು? ಮೊದಲು ನೀವು ವಾಸ್ತವವನ್ನು ಅರಿತುಕೊಳ್ಳಿ’ ಎಂದು ಹೇಳಿದರು.</p>.<p>ನೂತನ ಅಧ್ಯಕ್ಷೆ ನಿರ್ಮಲಾ ಮದಿ ಮಾತನಾಡಿ, ‘ಅಧಿಕಾರ ಶಾಶ್ವತವಲ್ಲ ನಾವು ಮಾಡುವ ಸೇವೆ ಶಾಶ್ವತ. ಪಟ್ಟಣ ಅಬಿವೃದ್ದಿ ಹೊಂದಲು ಪ್ರತಿಯೊಬ್ಬರ ಸಹಕಾರ ಅಗತ್ಯ’ ಎಂದು ಹೇಳಿದರು.</p>.<p>ನಿವೃತ್ತ ಶಿಕ್ಷಕ ಬಿ.ಎಂ.ಬಂತಿ ಮಾತನಾಡಿದರು, ಸಾನ್ನಿಧ್ಯ ವಹಿಸಿದ್ದ ಶಿವುಕುಮಾರ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿದರು.</p>.<p>ಪ.ಪಂ ಉಪಾಧ್ಯಕ್ಷ ಮೋದಿನಸಾಬ್ ಚಿಕ್ಕೂರ, ಪ.ಪಂ ಸದಸ್ಯ ಪರಶುರಾಮ ಮಲ್ಲಾಡದ, ಸದಾನಂದ ಮದಿ, ಬಸವರಾಜ ಹುಂಡೇಕಾರ, ಮಾಂತೇಶ ಕತ್ತಿ, ನಿಂಗಪ್ಪ ಬಡಿಗೇರ, ಧನಂಜಯ ಕಂದಕೂರ, ಬಸವರಾಜ ಮಠಪತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>