ಖಚಿತ ಮಾಹಿತಿ ಮೇರೆಗೆ ಮಕ್ಕಳ ಸಹಾಯವಾಣಿ ಸದಸ್ಯರಾದ ಶಾರವ್ವ ಪೂಜಾರ, ಕೆ. ಎಸ್. ನಾಯಕ, ವಿ. ಬಿ. ಭಗವತಿ, ಬಿ.ಬಿ. ಕುಬಕಡ್ಡಿ ಗ್ರಾಮಕ್ಕೆ ತೆರಳಿ ಬಾಲಕಿಯ ಕುಟುಂಬದವರಿಗೆ ಅರಿವು ಮೂಡಿಸಿದರು. 18 ವರ್ಷ ತುಂಬುವವರೆಗೆ ವಿವಾಹ ಮಾಡುವುದಿಲ್ಲ. ಬದಲಿಗೆ ಶಾಲೆಗೆ ಕಳುಹಿಸಲಾಗುವುದು ಎಂದು ಮುಚ್ಚಳಿಕೆ ಪತ್ರ ಬರೆಸಿಕೊಂಡರು.