<p><strong>ಬಾಗಲಕೋಟೆ</strong>: ಈ ಬಾರಿಜಿಲ್ಲೆಯಲ್ಲಿ ಬಿಟ್ಟೂಬಿಡದೆ ಕಾಡುತ್ತಿರುವ ಮಳೆಯ ಆರ್ಭಟಕ್ಕೆ ಹೊಲದಲ್ಲಿಯೇ ಈರುಳ್ಳಿ ಬೆಳೆ ನಾಶವಾಗಿದೆ. ಇದು ಬೆಳೆಗಾರ ಹಾಗೂ ಗ್ರಾಹಕ ಇಬ್ಬರಲ್ಲೂ ಕಣ್ಣೀರು ತರಿಸಿದೆ.</p>.<p>ಬಾಗಲಕೋಟೆ ಎಪಿಎಂಸಿಯಲ್ಲಿ ಈರುಳ್ಳಿ ಕ್ವಿಂಟಲ್ಗೆ ಈಗ ಗರಿಷ್ಠ ₹4000 ಬೆಲೆ ಇದೆ. ಉತ್ತರ ಕರ್ನಾಟಕದ ಅತಿದೊಡ್ಡ ಮಾರುಕಟ್ಟೆ ಎನಿಸಿದ ಹುಬ್ಬಳ್ಳಿ ಎಪಿಎಂಸಿಯಲ್ಲಿ ಗರಿಷ್ಠ ₹9000ಕ್ಕೆ ಆವಕ ಆಗಿದೆ. ಮಾರುಕಟ್ಟೆಗೆ ಒಯ್ದು ಮಾರಾಟ ಮಾಡಿ ಒಂದಷ್ಟು ರೊಕ್ಕ ಎಣಿಸಿಕೊಳ್ಳೋಣ ಎಂದರೆ ರೈತನ ಬಳಿ ಈರುಳ್ಳಿಯೇ ಇಲ್ಲ. ಇತ್ತ ಚಿಲ್ಲರೆ ಮಾರುಕಟ್ಟೆಯಲ್ಲಿ ಕಿಲೋಗೆ ₹80 ಇದ್ದು, ಈರುಳ್ಳಿ ಕೊಳ್ಳಲಾಗದೇ ಗ್ರಾಹಕರು ಏದುಸಿರುಬಿಡುತ್ತಿದ್ದಾರೆ.</p>.<p class="Subhead">ಶೇ 100ರಷ್ಟು ನಾಶ:10 ವರ್ಷಗಳಲ್ಲಿ ಮೊದಲ ಬಾರಿಗೆ ಬಿತ್ತನೆ ಮಾಡಿದ ಶೇ100 ರಷ್ಟುಬೆಳೆ ನಾಶವಾಗಿದೆ. ಈ ಹಿಂದೆ ಅತಿವೃಷ್ಟಿ, ರೋಗ, ಮಳೆ ಕೊರತೆ<br />ಯಿಂದ ಒಂದಷ್ಟು ಭಾಗ ಫಸಲು ನಾಶ<br />ವಾಗುತ್ತಿತ್ತು. ಆದರೆ ಈ ಬಾರಿ ಏನೂ ಉಳಿದಿಲ್ಲ ಎಂದುಬಾಗಲಕೋಟೆ ತೋಟಗಾರಿಕೆ ಇಲಾಖೆ ಉಪ<br />ನಿರ್ದೇಶಕ ರಾಹುಲ್ ಬಾವಿದೊಡ್ಡಿ ಹೇಳುತ್ತಾರೆ.</p>.<p>ನಿರಂತರ ಮಳೆ ಈರುಳ್ಳಿ<br />ಕೀಳಲು ಅವಕಾಶ ಮಾಡಿ<br />ಕೊಡಲಿಲ್ಲ. ಹೊಲಗಳಲ್ಲಿ ನೀರು ನಿಂತು ಗಡ್ಡೆ ಸಂಪೂರ್ಣ ಕೊಳೆತು ಹೋಗಿದೆ. ಫಸಲು ಕಿತ್ತವರು ಅದನ್ನು ಒಕ್ಕಲು ಸಾಧ್ಯವಾಗದೇ ಹೊಲದಲ್ಲಿಯೇ ಬಿಡಬೇಕಾಯಿತು. ಅಲ್ಲಿಯೇ ಮೊಳಕೆ ಬಂದು ಹಾಳಾಗಿವೆ.</p>.<p>’ಈ ಹಿಂದೆ ಸ್ಥಳೀಯವಾಗಿ ಈರುಳ್ಳಿ ಪೂರೈಕೆ ಕಡಿಮೆ ಆದಾಗ ಮಹಾರಾಷ್ಟ್ರದಿಂದ ಬರುವ ಫಸಲು ಇಲ್ಲಿನ ಬೇಡಿಕೆ ಪೂರೈಸುತ್ತಿತ್ತು. ಈ ವರ್ಷ ಅಲ್ಲಿಯೂ ಮಳೆಗೆ ಈರುಳ್ಳಿ ಹಾಳಾಗಿದೆ. ಹೀಗಾಗಿ ಗ್ರಾಹಕರು ಹಣ ಕೊಟ್ಟರೂ ಈರುಳ್ಳಿ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ‘ ಎಂದು ಬಾಗಲಕೋಟೆಯ ನವನಗರದ ಈರುಳ್ಳಿ ವ್ಯಾಪಾರಿಲಾಲ್ಸಾಬ್ ಬಾಗವಾನ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಈ ಬಾರಿಜಿಲ್ಲೆಯಲ್ಲಿ ಬಿಟ್ಟೂಬಿಡದೆ ಕಾಡುತ್ತಿರುವ ಮಳೆಯ ಆರ್ಭಟಕ್ಕೆ ಹೊಲದಲ್ಲಿಯೇ ಈರುಳ್ಳಿ ಬೆಳೆ ನಾಶವಾಗಿದೆ. ಇದು ಬೆಳೆಗಾರ ಹಾಗೂ ಗ್ರಾಹಕ ಇಬ್ಬರಲ್ಲೂ ಕಣ್ಣೀರು ತರಿಸಿದೆ.</p>.<p>ಬಾಗಲಕೋಟೆ ಎಪಿಎಂಸಿಯಲ್ಲಿ ಈರುಳ್ಳಿ ಕ್ವಿಂಟಲ್ಗೆ ಈಗ ಗರಿಷ್ಠ ₹4000 ಬೆಲೆ ಇದೆ. ಉತ್ತರ ಕರ್ನಾಟಕದ ಅತಿದೊಡ್ಡ ಮಾರುಕಟ್ಟೆ ಎನಿಸಿದ ಹುಬ್ಬಳ್ಳಿ ಎಪಿಎಂಸಿಯಲ್ಲಿ ಗರಿಷ್ಠ ₹9000ಕ್ಕೆ ಆವಕ ಆಗಿದೆ. ಮಾರುಕಟ್ಟೆಗೆ ಒಯ್ದು ಮಾರಾಟ ಮಾಡಿ ಒಂದಷ್ಟು ರೊಕ್ಕ ಎಣಿಸಿಕೊಳ್ಳೋಣ ಎಂದರೆ ರೈತನ ಬಳಿ ಈರುಳ್ಳಿಯೇ ಇಲ್ಲ. ಇತ್ತ ಚಿಲ್ಲರೆ ಮಾರುಕಟ್ಟೆಯಲ್ಲಿ ಕಿಲೋಗೆ ₹80 ಇದ್ದು, ಈರುಳ್ಳಿ ಕೊಳ್ಳಲಾಗದೇ ಗ್ರಾಹಕರು ಏದುಸಿರುಬಿಡುತ್ತಿದ್ದಾರೆ.</p>.<p class="Subhead">ಶೇ 100ರಷ್ಟು ನಾಶ:10 ವರ್ಷಗಳಲ್ಲಿ ಮೊದಲ ಬಾರಿಗೆ ಬಿತ್ತನೆ ಮಾಡಿದ ಶೇ100 ರಷ್ಟುಬೆಳೆ ನಾಶವಾಗಿದೆ. ಈ ಹಿಂದೆ ಅತಿವೃಷ್ಟಿ, ರೋಗ, ಮಳೆ ಕೊರತೆ<br />ಯಿಂದ ಒಂದಷ್ಟು ಭಾಗ ಫಸಲು ನಾಶ<br />ವಾಗುತ್ತಿತ್ತು. ಆದರೆ ಈ ಬಾರಿ ಏನೂ ಉಳಿದಿಲ್ಲ ಎಂದುಬಾಗಲಕೋಟೆ ತೋಟಗಾರಿಕೆ ಇಲಾಖೆ ಉಪ<br />ನಿರ್ದೇಶಕ ರಾಹುಲ್ ಬಾವಿದೊಡ್ಡಿ ಹೇಳುತ್ತಾರೆ.</p>.<p>ನಿರಂತರ ಮಳೆ ಈರುಳ್ಳಿ<br />ಕೀಳಲು ಅವಕಾಶ ಮಾಡಿ<br />ಕೊಡಲಿಲ್ಲ. ಹೊಲಗಳಲ್ಲಿ ನೀರು ನಿಂತು ಗಡ್ಡೆ ಸಂಪೂರ್ಣ ಕೊಳೆತು ಹೋಗಿದೆ. ಫಸಲು ಕಿತ್ತವರು ಅದನ್ನು ಒಕ್ಕಲು ಸಾಧ್ಯವಾಗದೇ ಹೊಲದಲ್ಲಿಯೇ ಬಿಡಬೇಕಾಯಿತು. ಅಲ್ಲಿಯೇ ಮೊಳಕೆ ಬಂದು ಹಾಳಾಗಿವೆ.</p>.<p>’ಈ ಹಿಂದೆ ಸ್ಥಳೀಯವಾಗಿ ಈರುಳ್ಳಿ ಪೂರೈಕೆ ಕಡಿಮೆ ಆದಾಗ ಮಹಾರಾಷ್ಟ್ರದಿಂದ ಬರುವ ಫಸಲು ಇಲ್ಲಿನ ಬೇಡಿಕೆ ಪೂರೈಸುತ್ತಿತ್ತು. ಈ ವರ್ಷ ಅಲ್ಲಿಯೂ ಮಳೆಗೆ ಈರುಳ್ಳಿ ಹಾಳಾಗಿದೆ. ಹೀಗಾಗಿ ಗ್ರಾಹಕರು ಹಣ ಕೊಟ್ಟರೂ ಈರುಳ್ಳಿ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ‘ ಎಂದು ಬಾಗಲಕೋಟೆಯ ನವನಗರದ ಈರುಳ್ಳಿ ವ್ಯಾಪಾರಿಲಾಲ್ಸಾಬ್ ಬಾಗವಾನ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>