ದಂಧೆಕೋರರು ಈ ಮೊದಲು ಕಳ್ಳಬಟ್ಟಿ ಕಾಯಿಸಲು ತಾಂಡಾದ ಸುತ್ತಲಿನ ಅರಣ್ಯಪ್ರದೇಶ, ಗುಡ್ಡಗಾಡಿನ ನಿರ್ಜನ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಕಳೆದ 10 ತಿಂಗಳಿನಿಂದ ಇಲಾಖೆ ಅಧಿಕಾರಿಗಳಿಂದ ನಡೆಯುತ್ತಿರುವ ನಿರಂತರ ದಾಳಿಯಿಂದ ಕಂಗೆಟ್ಟ ಅವರು ಈ ಬಾರಿ ಕಳ್ಳಬಟ್ಟಿ ಕೊಳೆ ಅಡಗಿಸಿ ಇಡಲು ವಿಭಿನ್ನ ಮಾರ್ಗ ಕಂಡುಕೊಂಡು ಅದಕ್ಕೆ ಅಮೀನಗಡ ಕೆರೆಯನ್ನೇ ಬಳಸಿಕೊಂಡಿದ್ದಾರೆ.