<p><strong>ಬಾಗಲಕೋಟೆ</strong>: ಇಲ್ಲಿನ ಮುಧೋಳ ತಾಲ್ಲೂಕು ಮಾಚಕನೂರು ಹಾಗೂ ರಬಕವಿ–ಬನಹಟ್ಟಿ ತಾಲ್ಲೂಕಿನ ಢವಳೇಶ್ವರ ಬಳಿಯ ಘಟಪ್ರಭಾ ನದಿಯಲ್ಲಿ ನಾಲ್ಕು ದಿನಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿವೆ.</p>.<p>ನದಿಯ ನೀರು ಕೆಂಬಣ್ಣಕ್ಕೆ ತಿರುಗಿದೆ. ಮೀಸಿ, ಬಾಳೆ, ಹಾವು, ಕೀಚ್ ಸೇರಿದಂತೆ ಬೇರೆ ಬೇರೆ ಜಾತಿಯ ಮೀನುಗಳು ಸಾವಿಗೀಡಾಗಿವೆ. ನದಿಯ ದಂಡೆಯಲ್ಲಿ ದುರ್ವಾಸನೆ ಬರುತ್ತಿದೆ.</p>.<p><strong>ವಿಚಿತ್ರ ಸಂಕಟ:</strong> ಮೀನುಗಳು ನೀರಿನಿಂದ ಹೊರಗೆ ಮುಖ ಮಾಡಿ ಏದುಸಿರು ಬಿಡುತ್ತಾ, ಸಂಕಟಪಡುತ್ತಾ ಒದ್ದಾಡಿ ಜೀವ ಬಿಡುವುದು ಮಾಚಕನೂರು ಸೇತುವೆ ಬಳಿಯ ನದಿ ದಡಕ್ಕೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ ಕಂಡುಬಂದಿತು.</p>.<p><strong>ಡಂಗುರ ಹೊಡೆಸಿದ್ದೇವೆ:</strong> 'ನದಿಯಲ್ಲಿ ಹಿಡಿದ ಮೀನು ಯಾರೂ ತಿನ್ನದಂತೆಊರಿನಲ್ಲಿ ಡಂಗುರ ಹೊಡೆಸಿದ್ದೇವೆ. ಇಲ್ಲಿನ ನೀರು ಕುಡಿದ ದನಗಳಿಗೂ ಭೇದಿ ಆಗಿದೆ' ಎಂದು ಗ್ರಾಮದ ಹಿರಿಯರಾದ ದುಂಡಪ್ಪ ದಾಸರಡ್ಡಿ ಹೇಳಿದರು.</p>.<p>'ಬೆಳಗಾವಿ ಜಿಲ್ಲೆ ಗೋಕಾಕ ಹಾಗೂ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಘಟಪ್ರಭಾ ನದಿ ದಂಡೆಯಲ್ಲಿ ಸಕ್ಕರೆ, ಸಿಮೆಂಟ್ ಉದ್ದಿಮೆ ನೆಲೆ ನಿಂತಿವೆ. ಕೆಲವು ಕಾರ್ಖಾನೆಯವರು ಕಲುಷಿತ ನೀರನ್ನು ಶುದ್ಧೀಕರಿಸದೇ ನೇರವಾಗಿ ನದಿಗೆ ಬಿಡುತ್ತಾರೆ. ಆ ನೀರು ಕುಡಿಯುವ ಜಲಚರಗಳು ಸಾವಿಗೀಡಾಗುತ್ತಿವೆ. ಹೊಲಕ್ಕೆ ಹಾಯಿಸಿದರೆ ಪೈರು ಸುಟ್ಟಂತೆ ಆಗುತ್ತವೆ ‘ ಎಂದು ದುಂಡಪ್ಪ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಇಲ್ಲಿನ ಮುಧೋಳ ತಾಲ್ಲೂಕು ಮಾಚಕನೂರು ಹಾಗೂ ರಬಕವಿ–ಬನಹಟ್ಟಿ ತಾಲ್ಲೂಕಿನ ಢವಳೇಶ್ವರ ಬಳಿಯ ಘಟಪ್ರಭಾ ನದಿಯಲ್ಲಿ ನಾಲ್ಕು ದಿನಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿವೆ.</p>.<p>ನದಿಯ ನೀರು ಕೆಂಬಣ್ಣಕ್ಕೆ ತಿರುಗಿದೆ. ಮೀಸಿ, ಬಾಳೆ, ಹಾವು, ಕೀಚ್ ಸೇರಿದಂತೆ ಬೇರೆ ಬೇರೆ ಜಾತಿಯ ಮೀನುಗಳು ಸಾವಿಗೀಡಾಗಿವೆ. ನದಿಯ ದಂಡೆಯಲ್ಲಿ ದುರ್ವಾಸನೆ ಬರುತ್ತಿದೆ.</p>.<p><strong>ವಿಚಿತ್ರ ಸಂಕಟ:</strong> ಮೀನುಗಳು ನೀರಿನಿಂದ ಹೊರಗೆ ಮುಖ ಮಾಡಿ ಏದುಸಿರು ಬಿಡುತ್ತಾ, ಸಂಕಟಪಡುತ್ತಾ ಒದ್ದಾಡಿ ಜೀವ ಬಿಡುವುದು ಮಾಚಕನೂರು ಸೇತುವೆ ಬಳಿಯ ನದಿ ದಡಕ್ಕೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ ಕಂಡುಬಂದಿತು.</p>.<p><strong>ಡಂಗುರ ಹೊಡೆಸಿದ್ದೇವೆ:</strong> 'ನದಿಯಲ್ಲಿ ಹಿಡಿದ ಮೀನು ಯಾರೂ ತಿನ್ನದಂತೆಊರಿನಲ್ಲಿ ಡಂಗುರ ಹೊಡೆಸಿದ್ದೇವೆ. ಇಲ್ಲಿನ ನೀರು ಕುಡಿದ ದನಗಳಿಗೂ ಭೇದಿ ಆಗಿದೆ' ಎಂದು ಗ್ರಾಮದ ಹಿರಿಯರಾದ ದುಂಡಪ್ಪ ದಾಸರಡ್ಡಿ ಹೇಳಿದರು.</p>.<p>'ಬೆಳಗಾವಿ ಜಿಲ್ಲೆ ಗೋಕಾಕ ಹಾಗೂ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಘಟಪ್ರಭಾ ನದಿ ದಂಡೆಯಲ್ಲಿ ಸಕ್ಕರೆ, ಸಿಮೆಂಟ್ ಉದ್ದಿಮೆ ನೆಲೆ ನಿಂತಿವೆ. ಕೆಲವು ಕಾರ್ಖಾನೆಯವರು ಕಲುಷಿತ ನೀರನ್ನು ಶುದ್ಧೀಕರಿಸದೇ ನೇರವಾಗಿ ನದಿಗೆ ಬಿಡುತ್ತಾರೆ. ಆ ನೀರು ಕುಡಿಯುವ ಜಲಚರಗಳು ಸಾವಿಗೀಡಾಗುತ್ತಿವೆ. ಹೊಲಕ್ಕೆ ಹಾಯಿಸಿದರೆ ಪೈರು ಸುಟ್ಟಂತೆ ಆಗುತ್ತವೆ ‘ ಎಂದು ದುಂಡಪ್ಪ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>