<p><strong>ಬಾಗಲಕೋಟೆ</strong>: ಕರ್ನಾಟಕ ಬಯಲಾಟ ಅಕಾಡೆಮಿ ರಾಜ್ಯದ ವಿವಿಧ ಜಿಲ್ಲೆಗಳ ಬಯಲಾಟ ಕಲೆಗಳ ಅಧ್ಯಯನ ಹಾಗೂ ಪರಿಚಯಕ್ಕಾಗಿ ಜಿಲ್ಲಾವಾರು ಬಯಲಾಟ ಪರಿಚಯ ಪುಸ್ತಕ ಪ್ರಕಟಿಸಲು ಯೋಜನೆ ರೂಪಿಸಿದೆ. ಪುಸ್ತಕ ರಚನೆಗೆ ಸಂಬಂಧಿಸಿದಂತೆ ಅಧ್ಯಯನಕ್ಕೆ ಯುವ ಸಂಶೋಧಕರಿಂದ ಅರ್ಜಿ ಆಹ್ವಾನಿಸಲಾಗಿದೆ.</p>.<p>ಅರ್ಜಿದಾರರು ಕನ್ನಡ, ಜಾನಪದ, ಭಾಷಾವಿಜ್ಞಾನ, ಸಮಾಜವಿಜ್ಞಾನ, ರಾಜ್ಯಶಾಸ್ತ್ರ ಅಥವಾ ಮಾನವ ಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿರಬೇಕು. ಡಾಕ್ಟರೇಟ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.</p>.<p>ಆಯ್ಕೆಯಾದರು ತಮ್ಮ ಆಯ್ದ ಜಿಲ್ಲೆ ಬಯಲಾಟಗಳ ಕುರಿತು ಕನಿಷ್ಠ 100 ರಿಂದ ಗರಿಷ್ಠ 150 ಪುಟಗಳ ಎ4 ಗಾತ್ರದ ಪುಸ್ತಕವನ್ನು ಮೂರು ತಿಂಗಳೊಳಗೆ ರಚಿಸಬೇಕು. ಲೇಖಕರಿಗೆ ₹10,000 ಗೌರವ ಧನ ಹಾಗೂ 50 ಮುದ್ರಿತ ಪುಸ್ತಕ ನೀಡಲಾಗುವುದು.</p>.<p>ಪುಸ್ತಕದಲ್ಲಿ ಜಿಲ್ಲೆಯ ಭೌಗೋಳಿಕ, ಸಾಂಸ್ಕೃತಿಕ ಹಿನ್ನಲೆ, ಬಯಲಾಟ ಪ್ರಕಾರಗಳು, ಹಸ್ತಪ್ರತಿಗಳ ಶೋಧನೆ, ಕಲಾವಿದರು, ಜಾತ್ರೆ-ಹಬ್ಬಗಳ ಕಾಲದ ಪ್ರದರ್ಶನಗಳು ಸೇರಿದಂತೆ ವಿವಿಧ ಅಂಶ ಒಳಗೊಂಡಿರಬೇಕು. ಬಹುಪಾಲ ಮಾಹಿತಿ ಕ್ಷೇತ್ರ ಕಾರ್ಯದ ಆಧಾರಿತವಾಗಿರಬೇಕು. ಛಾಯಾಚಿತ್ರಗಳೂ ಅವಶ್ಯಕವಾಗಿವೆ.</p>.<p>ರಿಜಿಸ್ಟ್ರಾರ್, ಕರ್ನಾಟಕ ಬಯಲಾಟ ಅಕಾಡೆಮಿ, ಕಲಾಭವನ, ಸಾಂಸ್ಕೃತಿಕ ಸಂಕೀರ್ಣ, ಸೆಕ್ಟರ್-19, 6ನೇ ರಸ್ತೆ, ನವನಗರ, ಬಾಗಲಕೋಟೆ ಇಲ್ಲಿಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ 08354-235070 / 8970678147 ಸಂಪರ್ಕಿಸಬಹುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ಕಸ್ತೂರಿ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಕರ್ನಾಟಕ ಬಯಲಾಟ ಅಕಾಡೆಮಿ ರಾಜ್ಯದ ವಿವಿಧ ಜಿಲ್ಲೆಗಳ ಬಯಲಾಟ ಕಲೆಗಳ ಅಧ್ಯಯನ ಹಾಗೂ ಪರಿಚಯಕ್ಕಾಗಿ ಜಿಲ್ಲಾವಾರು ಬಯಲಾಟ ಪರಿಚಯ ಪುಸ್ತಕ ಪ್ರಕಟಿಸಲು ಯೋಜನೆ ರೂಪಿಸಿದೆ. ಪುಸ್ತಕ ರಚನೆಗೆ ಸಂಬಂಧಿಸಿದಂತೆ ಅಧ್ಯಯನಕ್ಕೆ ಯುವ ಸಂಶೋಧಕರಿಂದ ಅರ್ಜಿ ಆಹ್ವಾನಿಸಲಾಗಿದೆ.</p>.<p>ಅರ್ಜಿದಾರರು ಕನ್ನಡ, ಜಾನಪದ, ಭಾಷಾವಿಜ್ಞಾನ, ಸಮಾಜವಿಜ್ಞಾನ, ರಾಜ್ಯಶಾಸ್ತ್ರ ಅಥವಾ ಮಾನವ ಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿರಬೇಕು. ಡಾಕ್ಟರೇಟ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.</p>.<p>ಆಯ್ಕೆಯಾದರು ತಮ್ಮ ಆಯ್ದ ಜಿಲ್ಲೆ ಬಯಲಾಟಗಳ ಕುರಿತು ಕನಿಷ್ಠ 100 ರಿಂದ ಗರಿಷ್ಠ 150 ಪುಟಗಳ ಎ4 ಗಾತ್ರದ ಪುಸ್ತಕವನ್ನು ಮೂರು ತಿಂಗಳೊಳಗೆ ರಚಿಸಬೇಕು. ಲೇಖಕರಿಗೆ ₹10,000 ಗೌರವ ಧನ ಹಾಗೂ 50 ಮುದ್ರಿತ ಪುಸ್ತಕ ನೀಡಲಾಗುವುದು.</p>.<p>ಪುಸ್ತಕದಲ್ಲಿ ಜಿಲ್ಲೆಯ ಭೌಗೋಳಿಕ, ಸಾಂಸ್ಕೃತಿಕ ಹಿನ್ನಲೆ, ಬಯಲಾಟ ಪ್ರಕಾರಗಳು, ಹಸ್ತಪ್ರತಿಗಳ ಶೋಧನೆ, ಕಲಾವಿದರು, ಜಾತ್ರೆ-ಹಬ್ಬಗಳ ಕಾಲದ ಪ್ರದರ್ಶನಗಳು ಸೇರಿದಂತೆ ವಿವಿಧ ಅಂಶ ಒಳಗೊಂಡಿರಬೇಕು. ಬಹುಪಾಲ ಮಾಹಿತಿ ಕ್ಷೇತ್ರ ಕಾರ್ಯದ ಆಧಾರಿತವಾಗಿರಬೇಕು. ಛಾಯಾಚಿತ್ರಗಳೂ ಅವಶ್ಯಕವಾಗಿವೆ.</p>.<p>ರಿಜಿಸ್ಟ್ರಾರ್, ಕರ್ನಾಟಕ ಬಯಲಾಟ ಅಕಾಡೆಮಿ, ಕಲಾಭವನ, ಸಾಂಸ್ಕೃತಿಕ ಸಂಕೀರ್ಣ, ಸೆಕ್ಟರ್-19, 6ನೇ ರಸ್ತೆ, ನವನಗರ, ಬಾಗಲಕೋಟೆ ಇಲ್ಲಿಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ 08354-235070 / 8970678147 ಸಂಪರ್ಕಿಸಬಹುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ಕಸ್ತೂರಿ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>