<p><strong>ಬಾಗಲಕೋಟೆ:</strong> ಬಾದಾಮಿಯ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.</p>.<p>ಈ ವೇಳೆ ವೇದಿಕೆಯಲ್ಲಿ ಕುಳಿತೇ ಸಭೆಯ ನಡುವೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಕರೆ ಮಾಡಿ ಸಾರಿಗೆ ನೌಕರರ ಮುಷ್ಕರದ ಬಗ್ಗೆ ಸಿದ್ದರಾಮಯ್ಯ ಚರ್ಚಿಸಿದರು. ಕೂಡಲೇ ಸಮಸ್ಯೆ ಪರಿಹರಿಸುವಂತೆ ಹೇಳಿದರು.</p>.<p>‘ಸವದಿ ಕೆಎಸ್ಆರ್ಟಿಸಿ ನೌಕರರನ್ನು ಕರೆದು ಸಮಸ್ಯೆ ಇತ್ಯರ್ಥ ಮಾಡಪ್ಪಾ.. ಏಯ್, ಜನಗಳಿಗೆ ತೊಂದ್ರೆಯಾಗುತ್ತೆ..ಅಲ್ಟಿಮೇಟ್ ನಿನ್ನ ಬೈತಾರೆ’ ಎಂದು ತಮ್ಮ ಎಂದಿನ ಶೈಲಿಯಲ್ಲಿ ಸಚಿವರಿಗೆ ಕಿವಿಮಾತು ಹೇಳಿದರು.</p>.<p>‘ಸವದಿ ನಿನ್ನ ಕಷ್ಟ ನನ್ಗೆ ಗೊತ್ತಿದೆ. ಕುಳಿತು ಮಾತನಾಡಿ, ಮುಷ್ಕರ ಕೈಬಿಡುವಂತೆ ಮಾಡಿ’ ಎಂದು ಸಲಹೆ ನೀಡಿದರು.</p>.<p>ಹಾಂ.. ನಾನು ಬಾದಾಮಿಯಲ್ಲಿದ್ದೇನೆ. ನಾಡಿದು ಬೆಂಗಳೂರಿಗೆ ಬರುತ್ತೇನೆ. ಸಾರಿಗೆ ನೌಕರರನ್ನು ತಕ್ಷಣ ಕರೆದು ಸಮಸ್ಯೆ ಬಗೆಹರಿಸಿ. ಹಳ್ಳಿ ಜನರಿಗೆ ತೊಂದರೆ ಆಗುತ್ತಿದೆ ಎಂದು ಫೋನ್ ಸಂಭಾಷಣೆಯ ವೇಳೆ ಸಲಹೆ ನೀಡಿದರು.</p>.<p><strong>ಇದನ್ನೂ ಓದಿ... <a href="https://www.prajavani.net/district/bagalkot/former-cm-siddaramaiah-talked-about-cow-slaughtering-ban-bill-bs-yediyurappa-bjp-rss-786536.html" target="_blank">ಗೋಹತ್ಯೆ ನಿಷೇಧ ಸಿಎಂ ಕಾರ್ಯಕ್ರಮವಲ್ಲ, ಆರ್ಎಸ್ಎಸ್ನದ್ದು: ಸಿದ್ದರಾಮಯ್ಯ ಆರೋಪ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಬಾದಾಮಿಯ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.</p>.<p>ಈ ವೇಳೆ ವೇದಿಕೆಯಲ್ಲಿ ಕುಳಿತೇ ಸಭೆಯ ನಡುವೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಕರೆ ಮಾಡಿ ಸಾರಿಗೆ ನೌಕರರ ಮುಷ್ಕರದ ಬಗ್ಗೆ ಸಿದ್ದರಾಮಯ್ಯ ಚರ್ಚಿಸಿದರು. ಕೂಡಲೇ ಸಮಸ್ಯೆ ಪರಿಹರಿಸುವಂತೆ ಹೇಳಿದರು.</p>.<p>‘ಸವದಿ ಕೆಎಸ್ಆರ್ಟಿಸಿ ನೌಕರರನ್ನು ಕರೆದು ಸಮಸ್ಯೆ ಇತ್ಯರ್ಥ ಮಾಡಪ್ಪಾ.. ಏಯ್, ಜನಗಳಿಗೆ ತೊಂದ್ರೆಯಾಗುತ್ತೆ..ಅಲ್ಟಿಮೇಟ್ ನಿನ್ನ ಬೈತಾರೆ’ ಎಂದು ತಮ್ಮ ಎಂದಿನ ಶೈಲಿಯಲ್ಲಿ ಸಚಿವರಿಗೆ ಕಿವಿಮಾತು ಹೇಳಿದರು.</p>.<p>‘ಸವದಿ ನಿನ್ನ ಕಷ್ಟ ನನ್ಗೆ ಗೊತ್ತಿದೆ. ಕುಳಿತು ಮಾತನಾಡಿ, ಮುಷ್ಕರ ಕೈಬಿಡುವಂತೆ ಮಾಡಿ’ ಎಂದು ಸಲಹೆ ನೀಡಿದರು.</p>.<p>ಹಾಂ.. ನಾನು ಬಾದಾಮಿಯಲ್ಲಿದ್ದೇನೆ. ನಾಡಿದು ಬೆಂಗಳೂರಿಗೆ ಬರುತ್ತೇನೆ. ಸಾರಿಗೆ ನೌಕರರನ್ನು ತಕ್ಷಣ ಕರೆದು ಸಮಸ್ಯೆ ಬಗೆಹರಿಸಿ. ಹಳ್ಳಿ ಜನರಿಗೆ ತೊಂದರೆ ಆಗುತ್ತಿದೆ ಎಂದು ಫೋನ್ ಸಂಭಾಷಣೆಯ ವೇಳೆ ಸಲಹೆ ನೀಡಿದರು.</p>.<p><strong>ಇದನ್ನೂ ಓದಿ... <a href="https://www.prajavani.net/district/bagalkot/former-cm-siddaramaiah-talked-about-cow-slaughtering-ban-bill-bs-yediyurappa-bjp-rss-786536.html" target="_blank">ಗೋಹತ್ಯೆ ನಿಷೇಧ ಸಿಎಂ ಕಾರ್ಯಕ್ರಮವಲ್ಲ, ಆರ್ಎಸ್ಎಸ್ನದ್ದು: ಸಿದ್ದರಾಮಯ್ಯ ಆರೋಪ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>