<p><strong>ಇಳಕಲ್</strong> : ‘ಜಗತ್ತಿನ ವಿವಿಧ ಭಾಷೆಗಳ ಸಾಹಿತ್ಯದಲ್ಲಿ ಅಭಿವ್ಯಕ್ತಿಗೊಂಡಿರುವ ರೈತರ, ಕೂಲಿಕಾರರ ಬದುಕಿನ ಸಾಮ್ಯತೆಯು ಈ ವರ್ಗ ಜಗತ್ತಿನಾದ್ಯಾಂತ ಸಂಕಷ್ಟದಲ್ಲಿರುವುದಕ್ಕೆ ನಿದರ್ಶನವಾಗಿದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ.ಎ.ಬನ್ನಟ್ಟಿ ಹೇಳಿದರು.</p>.<p> ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅಕ್ಷರ ಸಂಗಾತ’ ಸಾಹಿತ್ಯಿಕ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳ ಓದು ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಡ್ವಿನ್ ಮಾರ್ಕಹ್ಯಾಮ್ ಅವರ ‘ದ ಮ್ಯಾನ್ ವಿಥ್ ದ ಹ್ಯುಯಿ’ ಕಥೆಯ ತಮ್ಮ ಕನ್ನಡ ಅನುವಾದ ‘ಗುದ್ದಲಿಯ ಸಂಗಾತಿ’ ಕವನ ವಾಚಿಸಿ ಮಾತನಾಡಿದರು.</p>.<p>ಅಮೆರಿಕಾದ ಕವಯತ್ರಿ ಸಾರಾ ಟಿಸಾಲ್ಡ್ಳ ಕವನಗಳನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದ ಎಸ್.ವಿ.ಎಂ ಪದವಿ ಕಾಲೇಜಿನ ಪ್ರಾಧ್ಯಾಪಕ ವಸಂತಕುಮಾರ ಕಡ್ಲಿಮಟ್ಟಿ ಮಾತನಾಡಿ, ‘ನಿಸರ್ಗ, ಪ್ರೇಮ, ಏಕಾಂಗಿತನ ಹಾಗೂ ಸಾವಿನೊಂದಿಗೆ ಮುಖಾಮುಖಿಯಾಗುವ ವಸ್ತುಗಳನ್ನಿಟ್ಟುಕೊಂಡು ಸಾರಾ ಕಾವ್ಯ ಬರೆದಿದ್ದಾರೆ’ ಎಂದರು.</p>.<p>ನಿವೃತ್ತ ಪ್ರಾಧ್ಯಾಪಕ ಹೇಮಂತ ಭೂತನಾಳ ಮಾತನಾಡಿ, ‘ಅವಸರದ ಬದುಕಿನಲ್ಲಿ ದೇಹದ ಭಾಷೆಯನ್ನು ಹಾಗೂ ಆಹಾರವೂ ಔಷಧ ಎನ್ನುವುದನ್ನು ಅರ್ಥಮಾಡಕೊಳ್ಳದೇ, ವಿಷಯುಕ್ತ ಆಹಾರ ಸೇವಿಸುತ್ತಿದ್ದೇವೆ. ಆಹಾರದಷ್ಟೇ ಔಷಧ ಸೇವಿಸುವವರೂ ಇದ್ದಾರೆ’ ಎಂದು ತಿಳಿಸಿದರು.</p>.<p>ನಿವೃತ್ತ ಪ್ರಾಧ್ಯಾಪಕ ಮಹೇಶ ತಿಪ್ಪಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ, ಕವಿ ಆರಿಫ್ ರಾಜಾ, ಅಕ್ಷರ ಸಂಗಾತ ಪತ್ರಿಕೆಯ ಸಂಪಾದಕ, ಲೇಖಕ ಟಿ.ಎಸ್.ಗೊರವರ ಮಾತನಾಡಿದರು.</p>.<p>ಸಂವಾದದಲ್ಲಿ ಲೇಖಕಿ ಲಲಿತಾ ಹೊಸಪ್ಯಾಟಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ, ಪ್ರಾಧ್ಯಾಪಕ ತಿಪ್ಪೆಸ್ವಾಮಿ, ಗಾಯತ್ರಿ ದಾದ್ಮಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಕಂಬಾಗಿ, ಪದವಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಳಕಲ್</strong> : ‘ಜಗತ್ತಿನ ವಿವಿಧ ಭಾಷೆಗಳ ಸಾಹಿತ್ಯದಲ್ಲಿ ಅಭಿವ್ಯಕ್ತಿಗೊಂಡಿರುವ ರೈತರ, ಕೂಲಿಕಾರರ ಬದುಕಿನ ಸಾಮ್ಯತೆಯು ಈ ವರ್ಗ ಜಗತ್ತಿನಾದ್ಯಾಂತ ಸಂಕಷ್ಟದಲ್ಲಿರುವುದಕ್ಕೆ ನಿದರ್ಶನವಾಗಿದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ.ಎ.ಬನ್ನಟ್ಟಿ ಹೇಳಿದರು.</p>.<p> ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅಕ್ಷರ ಸಂಗಾತ’ ಸಾಹಿತ್ಯಿಕ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳ ಓದು ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಡ್ವಿನ್ ಮಾರ್ಕಹ್ಯಾಮ್ ಅವರ ‘ದ ಮ್ಯಾನ್ ವಿಥ್ ದ ಹ್ಯುಯಿ’ ಕಥೆಯ ತಮ್ಮ ಕನ್ನಡ ಅನುವಾದ ‘ಗುದ್ದಲಿಯ ಸಂಗಾತಿ’ ಕವನ ವಾಚಿಸಿ ಮಾತನಾಡಿದರು.</p>.<p>ಅಮೆರಿಕಾದ ಕವಯತ್ರಿ ಸಾರಾ ಟಿಸಾಲ್ಡ್ಳ ಕವನಗಳನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದ ಎಸ್.ವಿ.ಎಂ ಪದವಿ ಕಾಲೇಜಿನ ಪ್ರಾಧ್ಯಾಪಕ ವಸಂತಕುಮಾರ ಕಡ್ಲಿಮಟ್ಟಿ ಮಾತನಾಡಿ, ‘ನಿಸರ್ಗ, ಪ್ರೇಮ, ಏಕಾಂಗಿತನ ಹಾಗೂ ಸಾವಿನೊಂದಿಗೆ ಮುಖಾಮುಖಿಯಾಗುವ ವಸ್ತುಗಳನ್ನಿಟ್ಟುಕೊಂಡು ಸಾರಾ ಕಾವ್ಯ ಬರೆದಿದ್ದಾರೆ’ ಎಂದರು.</p>.<p>ನಿವೃತ್ತ ಪ್ರಾಧ್ಯಾಪಕ ಹೇಮಂತ ಭೂತನಾಳ ಮಾತನಾಡಿ, ‘ಅವಸರದ ಬದುಕಿನಲ್ಲಿ ದೇಹದ ಭಾಷೆಯನ್ನು ಹಾಗೂ ಆಹಾರವೂ ಔಷಧ ಎನ್ನುವುದನ್ನು ಅರ್ಥಮಾಡಕೊಳ್ಳದೇ, ವಿಷಯುಕ್ತ ಆಹಾರ ಸೇವಿಸುತ್ತಿದ್ದೇವೆ. ಆಹಾರದಷ್ಟೇ ಔಷಧ ಸೇವಿಸುವವರೂ ಇದ್ದಾರೆ’ ಎಂದು ತಿಳಿಸಿದರು.</p>.<p>ನಿವೃತ್ತ ಪ್ರಾಧ್ಯಾಪಕ ಮಹೇಶ ತಿಪ್ಪಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ, ಕವಿ ಆರಿಫ್ ರಾಜಾ, ಅಕ್ಷರ ಸಂಗಾತ ಪತ್ರಿಕೆಯ ಸಂಪಾದಕ, ಲೇಖಕ ಟಿ.ಎಸ್.ಗೊರವರ ಮಾತನಾಡಿದರು.</p>.<p>ಸಂವಾದದಲ್ಲಿ ಲೇಖಕಿ ಲಲಿತಾ ಹೊಸಪ್ಯಾಟಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ, ಪ್ರಾಧ್ಯಾಪಕ ತಿಪ್ಪೆಸ್ವಾಮಿ, ಗಾಯತ್ರಿ ದಾದ್ಮಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಕಂಬಾಗಿ, ಪದವಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>