<p><strong>ಕೂಡಲಸಂಗಮ</strong>: ಸ್ಥಳೀಯ ಕ್ಷೇತ್ರಾಧಿಪತಿ ಸಂಗಮೇಶ್ವರ ಕಾರ್ತಿಕೋತ್ಸವ ಸೋಮವಾರ ಸಂಭ್ರಮದಿಂದ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 30 ಸಾವಿರಕ್ಕೂ ಅಧಿಕ ಭಕ್ತರು ಸಂಗಮೇಶ್ವರನಿಗೆ ಕಾರ್ತಿಕ ದೀಪ ಹಚ್ಚಿ ಸಂಭ್ರಮಿಸಿದರು.</p>.<p>ಸಂಗಮನಾಥನ ದರ್ಶನ ಪಡೆಯಲು ಭಕ್ತರು ಬೆಳಗ್ಗೆಯಿಂದ ರಾತ್ರಿಯವರೆಗೆ ಸರದಿಯ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹನದ ನಂತರ ಭಕ್ತರ ಸಂಖ್ಯೆ ಅಧಿಕಗೊಂಡಿತ್ತು.</p>.<p>ಕುಟುಂಬ ಸಮೇತ ಆಗಮಿಸಿದ ಬಹುತೇಕ ಭಕ್ತರು ದೇವಾಲಯ ಆವರಣದಲ್ಲಿ ಸಿಹಿ ತಿಂಡಿ, ಭೋಜನ ಸವೆದು, ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಸಂಗಮೇಶ್ವರನಿಗೆ ಕಾರ್ತಿಕ ದೀಪ ಹಚ್ಚಿ ಸಂಭ್ರಮಿಸಿದರು.</p>.<p>ವಿಶೇಷ ಅಲಂಕಾರ: ಕಾರ್ತಿಕೋತ್ಸವದ ನಿಮಿತ್ಯ ಸಂಗಮೇಶ್ವರನಿಗೆ ವಿಶೇಷ ಅಲಂಕಾರ ಮಾಡಿದ್ದರು. ಭಕ್ತರು ಪೂಜೆ, ಅಭಿಷೇಕ ಮಾಡಿಸಿದರು. ಸಂಗಮೇಶ್ವರ ದೇವಾಲಯ, ಪ್ರವೇಶ ದ್ವಾರ, ಕಮಾನುಗಳಿಗೆ ವಿದ್ಯುತ್ ದ್ವೀಪಗಳ ಅಲಂಕಾರ ಎಲ್ಲ ಭಕ್ತರನ್ನು ಆಕರ್ಷಿಸಿತು.</p>.<p>ವಾಹನ ದಟ್ಟನೆ: ದೇವಸ್ಥಾನಕ್ಕೆ ಹೊಗುವ ಎರಡು ರಸ್ತೆಯಲ್ಲಿ ವಾಹನಗಳು ಎದುರು ಬದರು ಚಲಿಸಿದ್ದರಿಂದ ದರ್ಶನ ಪಡೆಯಲು ಬಂದ ಭಕ್ತರು ತೊಂದರೆ ಅನುಭವಿಸಿದರು. ರಸ್ತೆಯ ಬದಿಯಲ್ಲಿ, ಮಾಹಿತಿ ಕೇಂದ್ರ ಮುಂದೆ ವಾಹನಗಳು ಅಧಿಕವಾಗಿ ನಿಂತಿದ್ದರಿಂದ ದೇವಸ್ಥಾನಕ್ಕೆ ಸಂಚರಿಸಲು ಭಕ್ತರಿಗೆ ತೊಂದರೆ ಉಂಟಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡಲಸಂಗಮ</strong>: ಸ್ಥಳೀಯ ಕ್ಷೇತ್ರಾಧಿಪತಿ ಸಂಗಮೇಶ್ವರ ಕಾರ್ತಿಕೋತ್ಸವ ಸೋಮವಾರ ಸಂಭ್ರಮದಿಂದ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 30 ಸಾವಿರಕ್ಕೂ ಅಧಿಕ ಭಕ್ತರು ಸಂಗಮೇಶ್ವರನಿಗೆ ಕಾರ್ತಿಕ ದೀಪ ಹಚ್ಚಿ ಸಂಭ್ರಮಿಸಿದರು.</p>.<p>ಸಂಗಮನಾಥನ ದರ್ಶನ ಪಡೆಯಲು ಭಕ್ತರು ಬೆಳಗ್ಗೆಯಿಂದ ರಾತ್ರಿಯವರೆಗೆ ಸರದಿಯ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹನದ ನಂತರ ಭಕ್ತರ ಸಂಖ್ಯೆ ಅಧಿಕಗೊಂಡಿತ್ತು.</p>.<p>ಕುಟುಂಬ ಸಮೇತ ಆಗಮಿಸಿದ ಬಹುತೇಕ ಭಕ್ತರು ದೇವಾಲಯ ಆವರಣದಲ್ಲಿ ಸಿಹಿ ತಿಂಡಿ, ಭೋಜನ ಸವೆದು, ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಸಂಗಮೇಶ್ವರನಿಗೆ ಕಾರ್ತಿಕ ದೀಪ ಹಚ್ಚಿ ಸಂಭ್ರಮಿಸಿದರು.</p>.<p>ವಿಶೇಷ ಅಲಂಕಾರ: ಕಾರ್ತಿಕೋತ್ಸವದ ನಿಮಿತ್ಯ ಸಂಗಮೇಶ್ವರನಿಗೆ ವಿಶೇಷ ಅಲಂಕಾರ ಮಾಡಿದ್ದರು. ಭಕ್ತರು ಪೂಜೆ, ಅಭಿಷೇಕ ಮಾಡಿಸಿದರು. ಸಂಗಮೇಶ್ವರ ದೇವಾಲಯ, ಪ್ರವೇಶ ದ್ವಾರ, ಕಮಾನುಗಳಿಗೆ ವಿದ್ಯುತ್ ದ್ವೀಪಗಳ ಅಲಂಕಾರ ಎಲ್ಲ ಭಕ್ತರನ್ನು ಆಕರ್ಷಿಸಿತು.</p>.<p>ವಾಹನ ದಟ್ಟನೆ: ದೇವಸ್ಥಾನಕ್ಕೆ ಹೊಗುವ ಎರಡು ರಸ್ತೆಯಲ್ಲಿ ವಾಹನಗಳು ಎದುರು ಬದರು ಚಲಿಸಿದ್ದರಿಂದ ದರ್ಶನ ಪಡೆಯಲು ಬಂದ ಭಕ್ತರು ತೊಂದರೆ ಅನುಭವಿಸಿದರು. ರಸ್ತೆಯ ಬದಿಯಲ್ಲಿ, ಮಾಹಿತಿ ಕೇಂದ್ರ ಮುಂದೆ ವಾಹನಗಳು ಅಧಿಕವಾಗಿ ನಿಂತಿದ್ದರಿಂದ ದೇವಸ್ಥಾನಕ್ಕೆ ಸಂಚರಿಸಲು ಭಕ್ತರಿಗೆ ತೊಂದರೆ ಉಂಟಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>