<p><strong>ಕೂಡಲಸಂಗಮ: </strong>ಕೊರೊನಾ ಎರಡನೇ ಅಲೆ ಭೀತಿ ವೇಳೆ 76 ದಿನಗಳ ಕಾಲ ಬಂದ್ ಆಗಿದ್ದ ಪ್ರವಾಸಿ, ಧಾರ್ಮಿಕ ತಾಣ ಕೂಡಲಸಂಗಮ ಕಳೆದ ಒಂದು ವಾರದಿಂದ ತೆರೆದುಕೊಂಡಿದ್ದರಿಂದ ಪ್ರವಾಸಿಗರಿಂದ ಮತ್ತೆ ಕಂಗೊಳಿಸುತ್ತಿದೆ.</p>.<p>ಸರ್ಕಾರದ ನಿರ್ದೇಶನದಂತೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಏಪ್ರಿಲ್ 19 ರಿಂದ ದೇವಾಲಯ ಪ್ರವೇಶ ನಿಷೇಧಿಸಿ ಬೀಗ ಹಾಕಿತ್ತು. ಜುಲೈ 5 ರಿಂದ ಸಂಗಮೇಶ್ವರ ದೇವಾಲಯ, ಬಸವಣ್ಣನ ಐಕ್ಯಸ್ಥಳ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರಿಂದ ನಿತ್ಯ ಸಾವಿರಾರು ಭಕ್ತರು ದರ್ಶನಕ್ಕೆ ಬರುತ್ತಿದ್ದಾರೆ.</p>.<p>ಕಳೆದ ಒಂದು ವಾರದಲ್ಲಿ 20 ಸಾವಿರಕ್ಕೂ ಅಧಿಕ ಭಕ್ತರು ಕ್ಷೇತ್ರದ ದರ್ಶನ ಪಡೆದಿದ್ದಾರೆ. ಶನಿವಾರ, ಭಾನುವಾರ, ಸೋಮವಾರ ಅಧಿಕ ಭಕ್ತರು ಭೇಟಿ ನೀಡುವರು.</p>.<p>ಬಹುತೇಕ ಭಕ್ತರು ಕೋವಿಡ್ ನಿಯಮ ಪಾಲನೆ ಮಾಡದೆ ಇರುವುದು ಪ್ರಜ್ಞಾವಂತ ಜನರಲ್ಲಿ ಆತಂಕ ಉಂಟುಮಾಡಿದೆ.</p>.<p>ಐಹೊಳೆ, ಪಟ್ಟದಕಲ್ಲು, ಮುಂತಾದ ಐತಿಹಾಸಿಕ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇದ್ದು, ಧಾರ್ಮಿಕ ತಾಣಗಳಾದ ಕೂಡಲ ಸಂಗಮ, ಬಾದಾಮಿ, ಶಿವಯೋಗ ಮಂದಿರ, ಯಲಗೂರು ಮನರಂಜನಾ ತಾಣವಾದ ಆಲಮಟ್ಟಿಯಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಿದೆ.</p>.<p>ಕೂಡಲಸಂಗಮಕ್ಕೆ ಆಗಮಿಸುವ ಬಹುತೇಕ ಪ್ರವಾಸಿಗರು, ಭಕ್ತರು ಸುತ್ತಲ್ಲಿನ ಜಿಲ್ಲೆಯವರಾಗಿದ್ದು, ಸಂಗಮನಾಥ, ಬಸವಣ್ಣನ ಐಕ್ಯ ಸ್ಥಳದ ದರ್ಶನ ಪಡೆಯುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡಲಸಂಗಮ: </strong>ಕೊರೊನಾ ಎರಡನೇ ಅಲೆ ಭೀತಿ ವೇಳೆ 76 ದಿನಗಳ ಕಾಲ ಬಂದ್ ಆಗಿದ್ದ ಪ್ರವಾಸಿ, ಧಾರ್ಮಿಕ ತಾಣ ಕೂಡಲಸಂಗಮ ಕಳೆದ ಒಂದು ವಾರದಿಂದ ತೆರೆದುಕೊಂಡಿದ್ದರಿಂದ ಪ್ರವಾಸಿಗರಿಂದ ಮತ್ತೆ ಕಂಗೊಳಿಸುತ್ತಿದೆ.</p>.<p>ಸರ್ಕಾರದ ನಿರ್ದೇಶನದಂತೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಏಪ್ರಿಲ್ 19 ರಿಂದ ದೇವಾಲಯ ಪ್ರವೇಶ ನಿಷೇಧಿಸಿ ಬೀಗ ಹಾಕಿತ್ತು. ಜುಲೈ 5 ರಿಂದ ಸಂಗಮೇಶ್ವರ ದೇವಾಲಯ, ಬಸವಣ್ಣನ ಐಕ್ಯಸ್ಥಳ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರಿಂದ ನಿತ್ಯ ಸಾವಿರಾರು ಭಕ್ತರು ದರ್ಶನಕ್ಕೆ ಬರುತ್ತಿದ್ದಾರೆ.</p>.<p>ಕಳೆದ ಒಂದು ವಾರದಲ್ಲಿ 20 ಸಾವಿರಕ್ಕೂ ಅಧಿಕ ಭಕ್ತರು ಕ್ಷೇತ್ರದ ದರ್ಶನ ಪಡೆದಿದ್ದಾರೆ. ಶನಿವಾರ, ಭಾನುವಾರ, ಸೋಮವಾರ ಅಧಿಕ ಭಕ್ತರು ಭೇಟಿ ನೀಡುವರು.</p>.<p>ಬಹುತೇಕ ಭಕ್ತರು ಕೋವಿಡ್ ನಿಯಮ ಪಾಲನೆ ಮಾಡದೆ ಇರುವುದು ಪ್ರಜ್ಞಾವಂತ ಜನರಲ್ಲಿ ಆತಂಕ ಉಂಟುಮಾಡಿದೆ.</p>.<p>ಐಹೊಳೆ, ಪಟ್ಟದಕಲ್ಲು, ಮುಂತಾದ ಐತಿಹಾಸಿಕ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇದ್ದು, ಧಾರ್ಮಿಕ ತಾಣಗಳಾದ ಕೂಡಲ ಸಂಗಮ, ಬಾದಾಮಿ, ಶಿವಯೋಗ ಮಂದಿರ, ಯಲಗೂರು ಮನರಂಜನಾ ತಾಣವಾದ ಆಲಮಟ್ಟಿಯಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಿದೆ.</p>.<p>ಕೂಡಲಸಂಗಮಕ್ಕೆ ಆಗಮಿಸುವ ಬಹುತೇಕ ಪ್ರವಾಸಿಗರು, ಭಕ್ತರು ಸುತ್ತಲ್ಲಿನ ಜಿಲ್ಲೆಯವರಾಗಿದ್ದು, ಸಂಗಮನಾಥ, ಬಸವಣ್ಣನ ಐಕ್ಯ ಸ್ಥಳದ ದರ್ಶನ ಪಡೆಯುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>