ತೇರದಾಳ: ಲೋಕಸಭಾ ಚುನಾವಣೆ ದಿನಾಂಕ ನಿಗದಿ ಹಾಗೂ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಪುರಸಭೆ ಪೌರಕಾರ್ಮಿಕರು ಪಟ್ಟಣದಲ್ಲಿ ಅಳವಡಿಸಲಾಗಿದ್ದ ಬ್ಯಾನರ್, ಕಟೌಟ್ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿರುವ ಅನೇಕ ಪ್ರಚಾರ ಸಾಮಗ್ರಿಗಳನ್ನು ಶನಿವಾರ ತೆರವುಗೊಳಿಸಿದರು.
ರಾಜಕೀಯ ಪಕ್ಷಗಳ ವಿವಿಧ ಕಾರ್ಯಕ್ರಮಗಳ ಪ್ರಚಾರದ ಭಿತ್ತಿ ಚಿತ್ರಗಳುಳ್ಳ ಗೊಡೆಬರಹಗಳಿಗೂ ಬಣ್ಣ ಬಳಿಯಲಾಯಿತು. ನಗರದಲ್ಲೀಗ ಸ್ವಚ್ಛ ವಾತಾವರಣ ಕಾಣುವಂತಾಗಿದೆ.
ಮುಖ್ಯಾಧಿಕಾರಿ ಮಾಲಿನಿ, ‘ಚುನಾವಣೆ ಹಿನ್ನಲೆಯಲ್ಲಿ ಮೇಲಾಧಿಕಾರಿಗಳ ಸಭೆಯಲ್ಲಿ ಸೂಚಿಸಿದಂತೆ ಬ್ಯಾನರ್ ಸೇರಿದಂತೆ ವಿವಿಧ ವಸ್ತುಗಳ ತೆರವು ಕಾರ್ಯ ನಡೆಯುತ್ತಿದೆ’ ಎಂದರು.