ಸಾನ್ನಿಧ್ಯ ವಹಿಸಿದ್ದ ಗುರುಮಹಾಂತ ಶ್ರೀಗಳು ಮಾತನಾಡಿದರು. ಶರಣ ಸಾಹಿತಿ ಪ್ರೊ.ಸಿದ್ದಣ್ಣ ಲಂಗೋಟಿ ರಚಿಸಿದ ‘ಬಸವ ಜ್ಯೋತಿ ಮಹಾಂತ ಶಿವಯೋಗಿಗಳು’ ಪುಸ್ತಕ ಬಿಡುಗಡೆಯಾಯಿತು. ಶಿರೂರಿನ ಡಾ. ಬಸವಲಿಂಗ ಶ್ರೀಗಳು, ಲಿಂಗಸ್ಗೂರಿನ ಸಿದ್ದಲಿಂಗ ಶ್ರೀಗಳು, ಸಿದ್ದಯ್ಯನಕೋಟೆಯ ಬಸವಲಿಂಗ ಶ್ರೀಗಳು, ಬಸವ ಬೆಳವಿಯ ಶರಣಬಸವ ಶ್ರೀಗಳು, ಮರೆಗುದ್ದಿಯ ಗುರು ಮಹಾಂತಶ್ರೀಗಳು ನಗರಸಭೆ ಅಧ್ಯಕ್ಷೆ ಶೋಭಾ ಆಮದಿಹಾಳ, ಉಪಾಧ್ಯಕ್ಷೆ ಸವಿತಾ ಆರಿ, ವಿಜಯಮಹಾಂತೇಶ ವಿದ್ಯಾವರ್ಧಕ ಸಂಘದ ಚೇರಮನ್ ಎಂ.ವಿ. ಪಾಟೀಲ, ಶರಣಪ್ಪ ಅಕ್ಕಿ, ಜಿ.ಎಸ್. ಗೌಡರ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಎ. ಹನುಮ ನರಸಯ್ಯ ಉಪಸ್ಥಿತರಿದ್ದರು.