ಬರಗಾಲ ನಿರ್ವಹಣೆಗೆ ಸಿದ್ಧತೆ: ಪ್ರಕೃತಿ ವಿಕೋಪದಿಂದ ಕಳೆದ ಬಾರಿ ಮಳೆ ಪ್ರಮಾಣ ಕಡಿಮೆ ಆದ ಕಾರಣ ನೀರಿನ ಅಭಾವ ಹೆಚ್ಚಾಗುತ್ತಿದೆ. ಸರ್ಕಾರದಿಂದ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ನಗರದ ಬೈಪಾಸ್ ರಸ್ತೆಗೆ ₹10 ಕೋಟಿ, ನಗರದ ಉದ್ಯಾನ ಅಭಿವೃಧ್ಧಿಗಾಗಿ ₹5 ಕೋಟಿ, ಕುಡಿಯುವ ನೀರಿಗೆ ₹1.5 ಕೋಟಿ, ಹೀಗೆ ವಿವಿಧ ಗ್ರಾಮಗಳ ಅಭಿವೃದ್ಧಿಗಾಗಿ ಒಟ್ಟು ₹36 ಕೋಟಿ ಅನುದಾನ ಬಿಡುಗಡೆ ಆಗಿದೆ. ಅಭಿವೃಧ್ಧಿ ಕಾಮಗಾರಿಗಳಿಗೂ ಹಣದ ಕೊರತೆ ಇಲ್ಲ ಎಂದು ಹೇಳಿದರು.