ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಮುತ್ತೂರು ಹಾಗೂ ಕಂಕಣವಾಡಿ ಕೃಷ್ಣಾ ನದಿಯ ಪ್ರವಾಹದ ನೀರಿನಿಂದ ಜಲಾವೃತವಾಗಿ ನಡುಗಡ್ಡೆಯಾಗಿ ಬದಲಾಗಿವೆ.
ನದಿಯಲ್ಲಿ ಪ್ರತೀ ಗಂಟೆಗೂ ನೀರಿನ ಮಟ್ಟ ಹೆಚ್ಚಳವಾಗುತ್ತಿರುವ ಕಾರಣ ಮುಂಜಾಗರೂಕತಾ ಕ್ರಮವಾಗಿ ಅಲ್ಲಿನ ನಿವಾಸಿಗಳನ್ನು ಜಾನುವಾರುಗಳೊಂದಿಗೆ ಶನಿವಾರ ಸಮೀಪದ ಮುತ್ತೂರು ಪುನರ್ವಸತಿ ಕೇಂದ್ರದಲ್ಲಿ ತೆರೆಯಲಾಗಿರುವ ಪುನರ್ವಸತಿ ಕೇಂದ್ರಕ್ಕೆ ಬೋಟ್ ನಲ್ಲಿ ಕಳುಹಿಸಲಾಯಿತು.