<p><strong>ರಬಕವಿ ಬನಹಟ್ಟಿ:</strong> ನವರಾತ್ರಿ ಉತ್ಸವದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಉತ್ತಮ ಚಿಂತನೆಗಳನ್ನು, ವಿಚಾರ ಮತ್ತು ನಡತೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಇಂದ್ರೀಯಗಳನ್ನು ಹತೋಟೆಯಲ್ಲಿಟ್ಟುಕೊಳ್ಳುವುದರ ಮೂಲಕ ತಮ್ಮ ಬದುಕನ್ನು ಬಂಗಾರವನ್ನಾಗಿಸಿಕೊಳ್ಳಬೇಕು ಎಂದು ಕಲಬುರಗಿಯ ಮಾತೋಶ್ರೀ ವೇದಮಯಿ ಅಮ್ಮನವರು ತಿಳಿಸಿದರು.</p>.<p>ಸ್ಥಳೀಯ ಅಕ್ಕಲಕೋಟ ಶರಣರು ಸ್ಥಾಪಿಸಿದ ಸಿದ್ಧಾರೂಢ ಮಠದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ದೇವಿ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ನಮ್ಮಲ್ಲಿರುವ ದ್ವೇಷ ದೂರು ಮಾಡಿಕೊಳ್ಳಬೇಕು. ಮತ್ತೊಬ್ಬರನ್ನು ಕ್ಷಮಿಸುವ ಗುಣ ನಮ್ಮದಾಗಬೇಕು. ಮತ್ತೊಬ್ಬರ ಏಳ್ಗೆಯ ಕುರಿತು ನಾವು ಹೆಮ್ಮೆ ಪಡಬೇಕು. ಇದು ನಮ್ಮ ದೊಡ್ಡತ ತೋರಿಸುತ್ತದೆ. ನವರಾತ್ರಿ ಉತ್ಸವದಲ್ಲಿ ದೇವಿಯ ಪೂಜೆಯಿಂದ ನಾವು ಜೀವನದಲ್ಲಿ ನೆಮ್ಮದಿ ಕಾಣುತ್ತೇವೆ ಎಂದು ತಿಳಿಸಿದರು.</p>.<p>ಬುದ್ನಿ ಶರಣರು, ಮಹಾಲಿಂಗಪ್ಪ ಶೀಲವಂತ, ದಾನಪ್ಪ ಕೊಣ್ಣೂರ, ರಮೇಶ ಕೊಣ್ಣೂರ, ರಮೇಶ ಸುಲ್ತಾನಪುರ, ಮಲ್ಲು ಕಿತ್ತೂರ, ಡಾ.ಸೋಮನಾಥ ಬಡೇಮಿ, ರವಿ ಕೊಣ್ಣೂರ, ಮಹಾನಂದ ಕುಳ್ಳಿ, ಶೈಲಜಾ ನುಚ್ಚಿಮ ಮಹಾದೇವಿ ಗಸ್ತಿ, ಮಹಾದೇವಿ ಸುಟ್ಟಟ್ಟಿ, ಡಾ.ಕಾವೇರಿ ಹಳ್ಯಾಳ, ಪಾರ್ವತಿ ಪೂಜಾರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಬಕವಿ ಬನಹಟ್ಟಿ:</strong> ನವರಾತ್ರಿ ಉತ್ಸವದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಉತ್ತಮ ಚಿಂತನೆಗಳನ್ನು, ವಿಚಾರ ಮತ್ತು ನಡತೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಇಂದ್ರೀಯಗಳನ್ನು ಹತೋಟೆಯಲ್ಲಿಟ್ಟುಕೊಳ್ಳುವುದರ ಮೂಲಕ ತಮ್ಮ ಬದುಕನ್ನು ಬಂಗಾರವನ್ನಾಗಿಸಿಕೊಳ್ಳಬೇಕು ಎಂದು ಕಲಬುರಗಿಯ ಮಾತೋಶ್ರೀ ವೇದಮಯಿ ಅಮ್ಮನವರು ತಿಳಿಸಿದರು.</p>.<p>ಸ್ಥಳೀಯ ಅಕ್ಕಲಕೋಟ ಶರಣರು ಸ್ಥಾಪಿಸಿದ ಸಿದ್ಧಾರೂಢ ಮಠದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ದೇವಿ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ನಮ್ಮಲ್ಲಿರುವ ದ್ವೇಷ ದೂರು ಮಾಡಿಕೊಳ್ಳಬೇಕು. ಮತ್ತೊಬ್ಬರನ್ನು ಕ್ಷಮಿಸುವ ಗುಣ ನಮ್ಮದಾಗಬೇಕು. ಮತ್ತೊಬ್ಬರ ಏಳ್ಗೆಯ ಕುರಿತು ನಾವು ಹೆಮ್ಮೆ ಪಡಬೇಕು. ಇದು ನಮ್ಮ ದೊಡ್ಡತ ತೋರಿಸುತ್ತದೆ. ನವರಾತ್ರಿ ಉತ್ಸವದಲ್ಲಿ ದೇವಿಯ ಪೂಜೆಯಿಂದ ನಾವು ಜೀವನದಲ್ಲಿ ನೆಮ್ಮದಿ ಕಾಣುತ್ತೇವೆ ಎಂದು ತಿಳಿಸಿದರು.</p>.<p>ಬುದ್ನಿ ಶರಣರು, ಮಹಾಲಿಂಗಪ್ಪ ಶೀಲವಂತ, ದಾನಪ್ಪ ಕೊಣ್ಣೂರ, ರಮೇಶ ಕೊಣ್ಣೂರ, ರಮೇಶ ಸುಲ್ತಾನಪುರ, ಮಲ್ಲು ಕಿತ್ತೂರ, ಡಾ.ಸೋಮನಾಥ ಬಡೇಮಿ, ರವಿ ಕೊಣ್ಣೂರ, ಮಹಾನಂದ ಕುಳ್ಳಿ, ಶೈಲಜಾ ನುಚ್ಚಿಮ ಮಹಾದೇವಿ ಗಸ್ತಿ, ಮಹಾದೇವಿ ಸುಟ್ಟಟ್ಟಿ, ಡಾ.ಕಾವೇರಿ ಹಳ್ಯಾಳ, ಪಾರ್ವತಿ ಪೂಜಾರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>