<p><strong>ಬಾಗಲಕೋಟೆ</strong>: ಜಿಲ್ಲೆಯ ಜಮಖಂಡಿ ಗೀತಾಬಾಯಿ ಸೋಮನಿಂಗ ಶಿವಗದ್ದಗಿ ಅವರಿಗೆ ಶೇ6 ಬಡ್ಡಿ ಸಮೇತ ₹5ಲಕ್ಷ ಅಲ್ಲದೆ ಮಾನಸಿಕ ವ್ಯಥೆಗೆ ₹10, ದಾವಾ ವೆಚ್ಚ ₹5 ಸಾವಿರ ಕೊಡುವಂತೆ ಯುನೈಟೆಡ್ ಇನ್ಶ್ಯೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.</p><p><strong>ಘಟನೆ ವಿವರ</strong> : ಗೀತಾಬಾಯಿ ಅವರ ಪತಿ ಸೋಮನಿಂಗ ಅವರು ವಿಜಯಪುರದ ಡಿಎಆರ್ನಲ್ಲಿ ಹೆಡ್ ಕಾನ್ಸ್ಟೆಬಲ್ ಎಂದು ಸೇವೆ ಸಲ್ಲಿಸುತ್ತಿದ್ದು. ಸೈನಿಕ ಸ್ಕೂಲ್ ಎಸ್.ಬಿ.ಐ. ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಪಿಎಸ್ಪಿ ಸಿಲ್ವರ್ ಪ್ಯಾಕೇಜ್ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿಯ ಸದಸ್ಯರೂ ಆಗಿದ್ದರು.</p><p>2020ರಲ್ಲಿ ಬೈಕ್ ಮೇಲೆ ಜಮಖಂಡಿಗೆ ಹೋಗುತ್ತಿದ್ದಾಗ ಮಹೇಂದ್ರ ಪಿಕ್ ಅಪ್ ವ್ಯಾನ್ ಹಾಯ್ದು ವಿಜಯಪುರ ಆಸ್ಪತ್ರೆಯಲ್ಲಿ ನಿಧನರಾದರು.</p><p>ಪಿಎಸ್ಪಿ ಸಿಲ್ವರ್ ಪ್ಯಾಕೇಜ್ ಪಾಲಿಸಿ ನಾಮಿನಿ ಆಗಿದ್ದ ಮೃತರ ಪತ್ನಿ ಗೀತಾಬಾಯಿ ಅಗತ್ಯ ದಾಖಲೆಗಳ ಸಮೇತ ಯುನೈಟೆಡ್ ಇನ್ಶ್ಯೂರೆನ್ಸ್ ಕಂಪನಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಪರಿಹಾರ ನೀಡದಿದ್ದಾಗ ಗೀತಾಬಾಯಿ ಅವರು ವಿಮಾ ಕಂಪನಿ ವಿರುದ್ಧ ಆಯೋಗದಲ್ಲಿ ದೂರು ದಾಖಲಿಸಿದ್ದರು.</p><p>ವಿಚಾರಣೆಯಲ್ಲಿ ಹಾಜರಾದ ವಿಮಾ ಕಂಪನಿಯ ಪ್ರತಿನಿಧಿಗಳು ಎಸ್ಬಿಐ ಬ್ಯಾಂಕಿನವರು ಪಾಲಿಸಿ ಮಾಡಿದ್ದು, ಅವರ ವಿರುದ್ಧವೂ ದೂರು ದಾಖಲಿಸಬೇಕಿತ್ತು ಎಂದರು. </p><p>ಆಗ ವಿಚಾರಣೆಗೆ ಹಾಜಗಾರ ಎಸ್ಬಿಐ ಬ್ಯಾಂಕಿನವರು ತಮ್ಮ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು, ಯುನೈಟೆಡ್ ಇನ್ಶ್ಯೂರೆನ್ಸ್ ಕಂಪನಿಯವರು ಪಾಲಿಸಿ ನೀಡಿದ್ದರ ಬಗ್ಗೆ ದಾಖಲೆಗಳನ್ನು ಸಲ್ಲಿಸಿದರು. <br>ಎಲ್ಲ ದಾಖಲೆ ಹಾಗೂ ಸಾಕ್ಷಿಗಳನ್ನು ಪರಿಸೀಲಿಸಿದ ಆಯೋಗದ ಅಧ್ಯಕ್ಷ ವಿಜಯಕುಮಾರ ಪಾವಲೆ, ಸದಸ್ಯರಾದ ರಂಗನಗೌಡ ದಂಡಣ್ಣವರ ಹಾಗೂ ಸಿ.ಎಚ್. ಸಮಿವುನ್ನೀಸಾ ಅಬ್ರಾರ ವಿಮಾ ಕಂಪನಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಜಿಲ್ಲೆಯ ಜಮಖಂಡಿ ಗೀತಾಬಾಯಿ ಸೋಮನಿಂಗ ಶಿವಗದ್ದಗಿ ಅವರಿಗೆ ಶೇ6 ಬಡ್ಡಿ ಸಮೇತ ₹5ಲಕ್ಷ ಅಲ್ಲದೆ ಮಾನಸಿಕ ವ್ಯಥೆಗೆ ₹10, ದಾವಾ ವೆಚ್ಚ ₹5 ಸಾವಿರ ಕೊಡುವಂತೆ ಯುನೈಟೆಡ್ ಇನ್ಶ್ಯೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.</p><p><strong>ಘಟನೆ ವಿವರ</strong> : ಗೀತಾಬಾಯಿ ಅವರ ಪತಿ ಸೋಮನಿಂಗ ಅವರು ವಿಜಯಪುರದ ಡಿಎಆರ್ನಲ್ಲಿ ಹೆಡ್ ಕಾನ್ಸ್ಟೆಬಲ್ ಎಂದು ಸೇವೆ ಸಲ್ಲಿಸುತ್ತಿದ್ದು. ಸೈನಿಕ ಸ್ಕೂಲ್ ಎಸ್.ಬಿ.ಐ. ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಪಿಎಸ್ಪಿ ಸಿಲ್ವರ್ ಪ್ಯಾಕೇಜ್ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿಯ ಸದಸ್ಯರೂ ಆಗಿದ್ದರು.</p><p>2020ರಲ್ಲಿ ಬೈಕ್ ಮೇಲೆ ಜಮಖಂಡಿಗೆ ಹೋಗುತ್ತಿದ್ದಾಗ ಮಹೇಂದ್ರ ಪಿಕ್ ಅಪ್ ವ್ಯಾನ್ ಹಾಯ್ದು ವಿಜಯಪುರ ಆಸ್ಪತ್ರೆಯಲ್ಲಿ ನಿಧನರಾದರು.</p><p>ಪಿಎಸ್ಪಿ ಸಿಲ್ವರ್ ಪ್ಯಾಕೇಜ್ ಪಾಲಿಸಿ ನಾಮಿನಿ ಆಗಿದ್ದ ಮೃತರ ಪತ್ನಿ ಗೀತಾಬಾಯಿ ಅಗತ್ಯ ದಾಖಲೆಗಳ ಸಮೇತ ಯುನೈಟೆಡ್ ಇನ್ಶ್ಯೂರೆನ್ಸ್ ಕಂಪನಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಪರಿಹಾರ ನೀಡದಿದ್ದಾಗ ಗೀತಾಬಾಯಿ ಅವರು ವಿಮಾ ಕಂಪನಿ ವಿರುದ್ಧ ಆಯೋಗದಲ್ಲಿ ದೂರು ದಾಖಲಿಸಿದ್ದರು.</p><p>ವಿಚಾರಣೆಯಲ್ಲಿ ಹಾಜರಾದ ವಿಮಾ ಕಂಪನಿಯ ಪ್ರತಿನಿಧಿಗಳು ಎಸ್ಬಿಐ ಬ್ಯಾಂಕಿನವರು ಪಾಲಿಸಿ ಮಾಡಿದ್ದು, ಅವರ ವಿರುದ್ಧವೂ ದೂರು ದಾಖಲಿಸಬೇಕಿತ್ತು ಎಂದರು. </p><p>ಆಗ ವಿಚಾರಣೆಗೆ ಹಾಜಗಾರ ಎಸ್ಬಿಐ ಬ್ಯಾಂಕಿನವರು ತಮ್ಮ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು, ಯುನೈಟೆಡ್ ಇನ್ಶ್ಯೂರೆನ್ಸ್ ಕಂಪನಿಯವರು ಪಾಲಿಸಿ ನೀಡಿದ್ದರ ಬಗ್ಗೆ ದಾಖಲೆಗಳನ್ನು ಸಲ್ಲಿಸಿದರು. <br>ಎಲ್ಲ ದಾಖಲೆ ಹಾಗೂ ಸಾಕ್ಷಿಗಳನ್ನು ಪರಿಸೀಲಿಸಿದ ಆಯೋಗದ ಅಧ್ಯಕ್ಷ ವಿಜಯಕುಮಾರ ಪಾವಲೆ, ಸದಸ್ಯರಾದ ರಂಗನಗೌಡ ದಂಡಣ್ಣವರ ಹಾಗೂ ಸಿ.ಎಚ್. ಸಮಿವುನ್ನೀಸಾ ಅಬ್ರಾರ ವಿಮಾ ಕಂಪನಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>