<p><strong>ಕೂಡಲಸಂಗಮ (ಬಾಗಲಕೋಟೆ):</strong> ಇಲ್ಲಿನ ಪಂಚಮಸಾಲಿ ಪೀಠಕ್ಕೆ ಮಂಗಳವಾರ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿ ನೀಡಿ, ಭಕ್ತರೊಂದಿಗೆ ಸಭೆ ನಡೆಸಿದರು. ಅವರ ಬರುವಿಕೆಗೂ ಮೊದಲೇ ಪೀಠದ ಕಟ್ಟಡದ ಗೇಟ್ ಬೀಗ ತೆರೆಯಲಾಗಿತ್ತು. </p>.<p>ಇದಕ್ಕೆ ಮುನ್ನ ಹುನಗುಂದದಲ್ಲಿ ಮಾತನಾಡಿದ ಅವರು, ‘ಪೀಠದ ಬಗ್ಗೆ ಅಪಪ್ರಚಾರ ನಿಲ್ಲಲಿ. ಮಠಕ್ಕೆ ಬೀಗ ಪರಿಹಾರವಲ್ಲ. ಭಕ್ತರ ಮನೆಗಳೇ ನನ್ನ ಪೀಠ. ನಾಲ್ಕು ಗೋಡೆಗಳ ಮಠ ಕಟ್ಟಿರುವೆ. ಅಲ್ಲೇ ನನ್ನ ಉಳಿವು, ಅಳಿವು. ಅಂತ್ಯವೂ ಅಲ್ಲಿಯೇ ಆಗಲಿ’ ಎಂದು ಹೇಳಿದರು. </p>.<p>‘ಸಮಾಜದ ಯಾವುದೇ ವ್ಯಕ್ತಿಗೆ ಅನ್ಯಾಯ ಆದರೂ ಹೋರಾಟ ಮಾಡಿದ್ದೇನೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ₹1 ಕೋಟಿ, ಸದಾನಂದಗೌಡ ₹50 ಲಕ್ಷ ನೀಡಿದ್ದಾರೆ. ಸಂಘಟನೆ ಫಲ ಅಜ್ಞಾನ ವ್ಯಕ್ತಿಗಳ ಪಾಲಾಗಬಾರದು. ದುಡಿಯುವ ಕಟ್ಟಕಡೆಯ ವ್ಯಕ್ತಿಗೆ ಸೇರಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡಲಸಂಗಮ (ಬಾಗಲಕೋಟೆ):</strong> ಇಲ್ಲಿನ ಪಂಚಮಸಾಲಿ ಪೀಠಕ್ಕೆ ಮಂಗಳವಾರ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿ ನೀಡಿ, ಭಕ್ತರೊಂದಿಗೆ ಸಭೆ ನಡೆಸಿದರು. ಅವರ ಬರುವಿಕೆಗೂ ಮೊದಲೇ ಪೀಠದ ಕಟ್ಟಡದ ಗೇಟ್ ಬೀಗ ತೆರೆಯಲಾಗಿತ್ತು. </p>.<p>ಇದಕ್ಕೆ ಮುನ್ನ ಹುನಗುಂದದಲ್ಲಿ ಮಾತನಾಡಿದ ಅವರು, ‘ಪೀಠದ ಬಗ್ಗೆ ಅಪಪ್ರಚಾರ ನಿಲ್ಲಲಿ. ಮಠಕ್ಕೆ ಬೀಗ ಪರಿಹಾರವಲ್ಲ. ಭಕ್ತರ ಮನೆಗಳೇ ನನ್ನ ಪೀಠ. ನಾಲ್ಕು ಗೋಡೆಗಳ ಮಠ ಕಟ್ಟಿರುವೆ. ಅಲ್ಲೇ ನನ್ನ ಉಳಿವು, ಅಳಿವು. ಅಂತ್ಯವೂ ಅಲ್ಲಿಯೇ ಆಗಲಿ’ ಎಂದು ಹೇಳಿದರು. </p>.<p>‘ಸಮಾಜದ ಯಾವುದೇ ವ್ಯಕ್ತಿಗೆ ಅನ್ಯಾಯ ಆದರೂ ಹೋರಾಟ ಮಾಡಿದ್ದೇನೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ₹1 ಕೋಟಿ, ಸದಾನಂದಗೌಡ ₹50 ಲಕ್ಷ ನೀಡಿದ್ದಾರೆ. ಸಂಘಟನೆ ಫಲ ಅಜ್ಞಾನ ವ್ಯಕ್ತಿಗಳ ಪಾಲಾಗಬಾರದು. ದುಡಿಯುವ ಕಟ್ಟಕಡೆಯ ವ್ಯಕ್ತಿಗೆ ಸೇರಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>