<p><strong>ಬಾಗಲಕೋಟೆ:</strong> ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ 1,800 ಮಂದಿ ಖಾಸಗಿ ಪರವಾನಗಿ ಹೊಂದಿದ ಭೂಮಾಪಕರು ಕಳೆದ ನಾಲ್ಕು ತಿಂಗಳಿನಿಂದ ಸಂಭಾವನೆ ಸಿಗದೆ ಪರದಾಡುತ್ತಿದ್ದಾರೆ.</p>.<p>ಸರ್ವೆಗೆ ಸಂಬಂಧಿಸಿದ ಕನಿಷ್ಠ 30 ಕಡತಗಳ ವಿಲೇವಾರಿ ಹೊಣೆಯನ್ನು ಭೂಮಾಪನ ಇಲಾಖೆ, ಭೂಮಾಪಕರಿಗೆ ಪ್ರತಿ ತಿಂಗಳು ನೀಡುತ್ತದೆ. ಪ್ರತಿ ಕಡತಕ್ಕೆ ಸರ್ಕಾರ ₹800 ಸಂಭಾವನೆ ಕೊಡುತ್ತಿದೆ. ಒಬ್ಬೊಬ್ಬರು ಕನಿಷ್ಠ 40ರಿಂದ ಗರಿಷ್ಠ 70 ಕಡತಗಳ ವಿಲೇವಾರಿ ಮಾಡುತ್ತಾರೆ. ಆದರೆ ವಿಲೇವಾರಿಯಾದ ಕಡತಗಳಿಗೆ ಸೆಪ್ಟೆಂಬರ್ ತಿಂಗಳಿಂದ ಸಂಭಾವನೆ ಪಾವತಿಸಿಲ್ಲ.</p>.<p>‘ಭೂಮಾಪನಕ್ಕೆ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ವಿಚಾರದಲ್ಲಿ ಆಂಧ್ರಪ್ರದೇಶ ಬಿಟ್ಟರೆ ಕರ್ನಾಟಕವೇ ಮುಂದಿದೆ. ಈ ಗರಿಮೆಗೆ ಖಾಸಗಿಪರವಾನಗಿ ಹೊಂದಿದ ಭೂಮಾಪಕರ ಕೊಡುಗೆ ಅಪಾರ. ಆದರೆ ತಾಂತ್ರಿಕ ಸಮಸ್ಯೆಗಳ ನೆಪವೊಡ್ಡಿ ಇಲಾಖೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ನಮಗೆ ದಿನ ನಿತ್ಯದ ಬದುಕೇ ದುಸ್ತರವಾಗಿದೆ’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಭೂಮಾಪಕರೊಬ್ಬರು ಅಳಲು ತೋಡಿಕೊಳ್ಳುತ್ತಾರೆ.</p>.<p>‘ಸ್ವಂತ ಖರ್ಚಿನಲ್ಲಿ ಹಳ್ಳಿಗಳಿಗೆ ಹೋಗಬೇಕಿದೆ. ಚೈನ್ ಹಿಡಿಯಲು ನಮ್ಮೊಡನೆ ಕರೆದೊಯ್ಯುವ ಸಹಾಯಕನಿಗೆ ₹200 ಕೂಲಿ ಜೇಬಿನಿಂದಲೇ ಕೊಡುತ್ತೇವೆ.ನಿಗದಿತ ಗುರಿ ತಲುಪದಿದ್ದರೆ ಮೇಲಧಿಕಾರಿಗಳು ನೋಟಿಸ್ ಕೊಡುತ್ತಾರೆ. ಮಾಡಿದ ಕೆಲಸಕ್ಕೆ ಹಣ ಕೊಡದೇ ಬರೀ ಕೆಲಸದಲ್ಲಿ ಪ್ರಗತಿ ಕೇಳಿದರೆ ಹೇಗೆ? ಆ ಬಗ್ಗೆ ಪ್ರಶ್ನಿಸಿದರೆಅಶಿಸ್ತು ಎಂದು ಪರಿಗಣಿಸಿ ಬೇರೆ ತಾಲ್ಲೂಕಿಗೆ ನಿಯೋಜಿಸುತ್ತಾರೆ’ ಎಂದು ಅವರು ಹೇಳಿದರು.</p>.<p><strong>ಎರಡೂವರೆ ವರ್ಷದಿಂದ ಹಣ ಇಲ್ಲ:</strong> ‘ರೈತರ ಜಮೀನುಗಳನ್ನು ಉಚಿತವಾಗಿ ಪೋಡಿ ಮಾಡಿಕೊಡಲು ಆರಂಭಿಸಿದ್ದ ಪೋಡಿಮುಕ್ತ ಯೋಜನೆಯಡಿ ಮೊದಲ ಹಂತದಲ್ಲಿ ಮಾಡಿದ್ದ ಸರ್ವೆ ಕೆಲಸಕ್ಕೆ ಎರಡೂವರೆ ವರ್ಷಗಳಾದರೂ ಸರ್ಕಾರ ಹಣ ಕೊಟ್ಟಿಲ್ಲ. ಆಗ ಪ್ರತಿಯೊಬ್ಬರಿಗೂ ತಲಾ 10 ಹಳ್ಳಿಗಳ ಗುರಿ ನೀಡಲಾಗಿತ್ತು. ಒಬ್ಬೊಬ್ಬರಿಗೆ ₹50 ಸಾವಿರದಿಂದ 1 ಲಕ್ಷದವರೆಗೆ ಬರಬೇಕಿದೆ’ ಎಂದು ಭೂಮಾಪಕರೊಬ್ಬರು ಹೇಳುತ್ತಾರೆ.</p>.<p><strong>ಎಂ.ಟೆಕ್ ಪದವೀಧರರೂ ಭೂಮಾಪಕರು...</strong><br />ಜೆಒಸಿ ಓದಿದವರು ಭೂಮಾಪಕರ ಕೆಲಸಕ್ಕೆ ಸೇರುತ್ತಿದ್ದರು. ಆದರೆ, ಈಗ ಡಿಪ್ಲೊಮಾ, ಬಿ.ಇ ಪದವೀಧರರು ನೇಮಕಗೊಂಡಿದ್ದಾರೆ. ಮೂವರು ಎಂ.ಟೆಕ್ ಮುಗಿಸಿದವರೂ ಇದ್ದಾರೆ. ‘ಕೆಲಸ ಕಾಯಂ ಆಗಬಹುದು ಎಂಬ ಆಶಾಭಾವನೆಯೇ ನಮ್ಮನ್ನು ಈ ಕೆಲಸಕ್ಕೆ ಪ್ರೇರೇಪಿಸಿದೆ. ಕೆಲಸಕ್ಕೆ ಮಾತ್ರ ತಪ್ಪದೇ ಬನ್ನಿ, ಕೂಲಿ ಕೇಳಬೇಡಿ ಎಂಬ ಧೋರಣೆ ತಾಳಿದರೆ ನಾವು ಬದುಕುವುದು ಹೇಗೆ’ ಎಂದು ಭೂಮಾಪಕರೊಬ್ಬರು ಪ್ರಶ್ನಿಸುತ್ತಾರೆ.</p>.<p>*<br />ಭೂಮಾಪಕರ ಸಮಸ್ಯೆ ಈಗ ಗೊತ್ತಾಗಿದೆ. ಆಯುಕ್ತರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲಿದ್ದೇನೆ.<br /><em><strong>-ಗೋಪಾಲ್ ಮಾಲಗಿತ್ತಿ, ಡಿಡಿಎಲ್ಆರ್, ಬಾಗಲಕೋಟೆ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ 1,800 ಮಂದಿ ಖಾಸಗಿ ಪರವಾನಗಿ ಹೊಂದಿದ ಭೂಮಾಪಕರು ಕಳೆದ ನಾಲ್ಕು ತಿಂಗಳಿನಿಂದ ಸಂಭಾವನೆ ಸಿಗದೆ ಪರದಾಡುತ್ತಿದ್ದಾರೆ.</p>.<p>ಸರ್ವೆಗೆ ಸಂಬಂಧಿಸಿದ ಕನಿಷ್ಠ 30 ಕಡತಗಳ ವಿಲೇವಾರಿ ಹೊಣೆಯನ್ನು ಭೂಮಾಪನ ಇಲಾಖೆ, ಭೂಮಾಪಕರಿಗೆ ಪ್ರತಿ ತಿಂಗಳು ನೀಡುತ್ತದೆ. ಪ್ರತಿ ಕಡತಕ್ಕೆ ಸರ್ಕಾರ ₹800 ಸಂಭಾವನೆ ಕೊಡುತ್ತಿದೆ. ಒಬ್ಬೊಬ್ಬರು ಕನಿಷ್ಠ 40ರಿಂದ ಗರಿಷ್ಠ 70 ಕಡತಗಳ ವಿಲೇವಾರಿ ಮಾಡುತ್ತಾರೆ. ಆದರೆ ವಿಲೇವಾರಿಯಾದ ಕಡತಗಳಿಗೆ ಸೆಪ್ಟೆಂಬರ್ ತಿಂಗಳಿಂದ ಸಂಭಾವನೆ ಪಾವತಿಸಿಲ್ಲ.</p>.<p>‘ಭೂಮಾಪನಕ್ಕೆ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ವಿಚಾರದಲ್ಲಿ ಆಂಧ್ರಪ್ರದೇಶ ಬಿಟ್ಟರೆ ಕರ್ನಾಟಕವೇ ಮುಂದಿದೆ. ಈ ಗರಿಮೆಗೆ ಖಾಸಗಿಪರವಾನಗಿ ಹೊಂದಿದ ಭೂಮಾಪಕರ ಕೊಡುಗೆ ಅಪಾರ. ಆದರೆ ತಾಂತ್ರಿಕ ಸಮಸ್ಯೆಗಳ ನೆಪವೊಡ್ಡಿ ಇಲಾಖೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ನಮಗೆ ದಿನ ನಿತ್ಯದ ಬದುಕೇ ದುಸ್ತರವಾಗಿದೆ’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಭೂಮಾಪಕರೊಬ್ಬರು ಅಳಲು ತೋಡಿಕೊಳ್ಳುತ್ತಾರೆ.</p>.<p>‘ಸ್ವಂತ ಖರ್ಚಿನಲ್ಲಿ ಹಳ್ಳಿಗಳಿಗೆ ಹೋಗಬೇಕಿದೆ. ಚೈನ್ ಹಿಡಿಯಲು ನಮ್ಮೊಡನೆ ಕರೆದೊಯ್ಯುವ ಸಹಾಯಕನಿಗೆ ₹200 ಕೂಲಿ ಜೇಬಿನಿಂದಲೇ ಕೊಡುತ್ತೇವೆ.ನಿಗದಿತ ಗುರಿ ತಲುಪದಿದ್ದರೆ ಮೇಲಧಿಕಾರಿಗಳು ನೋಟಿಸ್ ಕೊಡುತ್ತಾರೆ. ಮಾಡಿದ ಕೆಲಸಕ್ಕೆ ಹಣ ಕೊಡದೇ ಬರೀ ಕೆಲಸದಲ್ಲಿ ಪ್ರಗತಿ ಕೇಳಿದರೆ ಹೇಗೆ? ಆ ಬಗ್ಗೆ ಪ್ರಶ್ನಿಸಿದರೆಅಶಿಸ್ತು ಎಂದು ಪರಿಗಣಿಸಿ ಬೇರೆ ತಾಲ್ಲೂಕಿಗೆ ನಿಯೋಜಿಸುತ್ತಾರೆ’ ಎಂದು ಅವರು ಹೇಳಿದರು.</p>.<p><strong>ಎರಡೂವರೆ ವರ್ಷದಿಂದ ಹಣ ಇಲ್ಲ:</strong> ‘ರೈತರ ಜಮೀನುಗಳನ್ನು ಉಚಿತವಾಗಿ ಪೋಡಿ ಮಾಡಿಕೊಡಲು ಆರಂಭಿಸಿದ್ದ ಪೋಡಿಮುಕ್ತ ಯೋಜನೆಯಡಿ ಮೊದಲ ಹಂತದಲ್ಲಿ ಮಾಡಿದ್ದ ಸರ್ವೆ ಕೆಲಸಕ್ಕೆ ಎರಡೂವರೆ ವರ್ಷಗಳಾದರೂ ಸರ್ಕಾರ ಹಣ ಕೊಟ್ಟಿಲ್ಲ. ಆಗ ಪ್ರತಿಯೊಬ್ಬರಿಗೂ ತಲಾ 10 ಹಳ್ಳಿಗಳ ಗುರಿ ನೀಡಲಾಗಿತ್ತು. ಒಬ್ಬೊಬ್ಬರಿಗೆ ₹50 ಸಾವಿರದಿಂದ 1 ಲಕ್ಷದವರೆಗೆ ಬರಬೇಕಿದೆ’ ಎಂದು ಭೂಮಾಪಕರೊಬ್ಬರು ಹೇಳುತ್ತಾರೆ.</p>.<p><strong>ಎಂ.ಟೆಕ್ ಪದವೀಧರರೂ ಭೂಮಾಪಕರು...</strong><br />ಜೆಒಸಿ ಓದಿದವರು ಭೂಮಾಪಕರ ಕೆಲಸಕ್ಕೆ ಸೇರುತ್ತಿದ್ದರು. ಆದರೆ, ಈಗ ಡಿಪ್ಲೊಮಾ, ಬಿ.ಇ ಪದವೀಧರರು ನೇಮಕಗೊಂಡಿದ್ದಾರೆ. ಮೂವರು ಎಂ.ಟೆಕ್ ಮುಗಿಸಿದವರೂ ಇದ್ದಾರೆ. ‘ಕೆಲಸ ಕಾಯಂ ಆಗಬಹುದು ಎಂಬ ಆಶಾಭಾವನೆಯೇ ನಮ್ಮನ್ನು ಈ ಕೆಲಸಕ್ಕೆ ಪ್ರೇರೇಪಿಸಿದೆ. ಕೆಲಸಕ್ಕೆ ಮಾತ್ರ ತಪ್ಪದೇ ಬನ್ನಿ, ಕೂಲಿ ಕೇಳಬೇಡಿ ಎಂಬ ಧೋರಣೆ ತಾಳಿದರೆ ನಾವು ಬದುಕುವುದು ಹೇಗೆ’ ಎಂದು ಭೂಮಾಪಕರೊಬ್ಬರು ಪ್ರಶ್ನಿಸುತ್ತಾರೆ.</p>.<p>*<br />ಭೂಮಾಪಕರ ಸಮಸ್ಯೆ ಈಗ ಗೊತ್ತಾಗಿದೆ. ಆಯುಕ್ತರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲಿದ್ದೇನೆ.<br /><em><strong>-ಗೋಪಾಲ್ ಮಾಲಗಿತ್ತಿ, ಡಿಡಿಎಲ್ಆರ್, ಬಾಗಲಕೋಟೆ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>