ಪ್ರತಿ ವರ್ಷ ಮಕರ ಸಂಕ್ರಮಣದಂದು ಮಲ್ಲಯ್ಯ ಅಜ್ಜನವರ ಹೇಳಿಕೆ ನಡೆಯುತ್ತದೆ ಮಳೆ– ಬೆಳೆ ವ್ಯಾಪಾರ ರಾಜಕೀಯ ಲೋಕದ ಕಲ್ಯಾಣ ಕುರಿತು ಭವಿಷ್ಯವಾಣಿ ನುಡಿಯಲಾಗುತ್ತದೆ. ಪ್ರತಿ ಅಮಾವಾಸ್ಯೆಯಂದು ಮಠದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಬೇರೆ ಬೇರೆ ಊರುಗಳಿಂದ ಬಂದ ಭಕ್ತರಿಗೆ ಅನ್ನಪ್ರಸಾದ ನಡೆಯುತ್ತದೆ. ಸ್ಥಳೀಯ ಮಠದ ಪೂಜ್ಯರಾದ ಶಿವಯ್ಯ ಬಸಯ್ಯ ಹಿರೇಮಠ ಇವರ ನೇತೃತ್ವದಲ್ಲಿ ಮಠದ ಕಾರ್ಯಕಲಾಪಗಳು ನಡೆಯುತ್ತವೆ.