<p><strong>ಬಾಗಲಕೋಟೆ:</strong> ಜಿಲ್ಲೆಯೂ ಸೇರಿ ರಾಜ್ಯದ ನೇಕಾರರ ಬಳಿ 10 ಲಕ್ಷ ಸೀರೆಗಳು ಮಾರಾಟವಾಗದೇ ಉಳಿದಿವೆ. ಜಿಲ್ಲೆಯ ರಬಕವಿಯಲ್ಲಿ 14 ಮಂದಿ ಸೀರೆ ಉತ್ಪಾದಕರ ಬಳಿ ₹2.90 ಕೋಟಿ ಮೌಲ್ಯದ 65,200 ಸೀರೆಗಳು, ಬನಹಟ್ಟಿಯ 10 ಮಂದಿ ಸೀರೆ ಉತ್ಪಾದಕರ ಬಳಿ ₹3.89 ಕೋಟಿ ಮೌಲ್ಯದ 93 ಸಾವಿರ ಸೀರೆಗಳು ಮಾರಾಟವಾಗಿಲ್ಲ. ಇದರ ಪರಿಣಾಮ ನೇಕಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕೂಲಿ ನೀಡಲು, ಮಳಿಗೆಗಳ ಬಾಡಿಗೆ ಕಟ್ಟಲು ಆಗುತ್ತಿಲ್ಲ.</p>.<p>‘ಕಚ್ಚಾ ವಸ್ತುಗಳ ಬೆಲೆ ಏರಿಕೆ, ಅನಿಶ್ಚಿತ ಮಾರುಕಟ್ಟೆ, ಆರ್ಥಿಕ ಸಂಕಷ್ಟ ಸೇರಿ ವಿವಿಧ ಕಾರಣಗಳಿಂದ 5 ವರ್ಷಗಳಲ್ಲಿ 51 ನೇಕಾರರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾರಾಟಕ್ಕೆ ಸರ್ಕಾರ ವ್ಯವಸ್ಥೆ ಮಾಡದಿದ್ದರೆ, ಆತ್ಮಹತ್ಯೆಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ’ ಎಂದು ಹೇಳಿದರು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ.</p>.<p>‘ಸಾಲ ಮಾಡಿ ಹೂಡಿಕೆ ಮಾಡಿದ ಬಂಡವಾಳ ಎಲ್ಲವೂ ಸೀರೆ ರೂಪದಲ್ಲಿ ಗೋದಾಮುಗಳಲ್ಲಿದೆ. ಸಾಲದ ಬಡ್ಡಿ ಕಟ್ಟಲು ಆಗುತ್ತಿಲ್ಲ. ರಾಜ್ಯದಲ್ಲಿ ₹50 ಕೋಟಿ ಮೌಲ್ಯದ 10 ಲಕ್ಷಕ್ಕೂ ಹೆಚ್ಚು ಸೀರೆಗಳು ಮಾರಾಟವಾಗದೇ ಉಳಿದಿವೆ. ಸೀರೆಗಳ ಬೆಲೆ ₹300 ರಿಂದ ₹500 ಇದೆ. ರಾಜ್ಯ ಸರ್ಕಾರವು ಪರ್ಯಾಯ ಯೋಜನೆಗಳ ಮೂಲಕ ನೇಕಾರರ ನೆರವಿಗೆ ಬರಬೇಕು’ ಎಂದು ತೇರದಾಳ ಶಾಸಕ ಸಿದ್ದು ಸವದಿ ತಿಳಿಸಿದರು.</p>.<p><strong>ಕಚ್ಚಾ ವಸ್ತುಗಳ ಬೆಲೆ ಏರಿಕೆ:</strong> ಕಚ್ಚಾ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಸಂಕಷ್ಟ ಹೆಚ್ಚಾಗಿದೆ. ನೂಲಿನ ದರ ₹450 ರಿಂದ 485 ಹೆಚ್ಚಳವಾಗಿದ್ದರೆ, ಚಮಕಾ (ಆರ್ಟ್ ಸಿಲ್ಕ್) ಬೆಲೆ ಪ್ರತಿ ಕೆಜಿಗೆ ₹585 ರಿಂದ ₹605ಕ್ಕೆ ಹೆಚ್ಚಾಗಿದೆ. ಆದರೆ, ಸೀರೆಗಳ ಬೆಲೆ ಮಾತ್ರ ಏರಿಕೆಯಾಗದೇ ಯಥಾಸ್ಥಿತಿ ಇದೆ.</p>.<p>‘ಮನೆಯಲ್ಲಿ ₹30 ಲಕ್ಷ ಮೌಲ್ಯದ ಸೀರೆ ಉಳಿದಿವೆ. ಇಷ್ಟೇ ಮೊತ್ತ ಉದ್ರಿ ಬಿದ್ದಿದೆ. ವಿದ್ಯುತ್ ಉಚಿತ ನೀಡಿದ್ದಾರೆ. ಆದರೆ, ಮಾರುಕಟ್ಟೆ ವ್ಯವಸ್ಥೆ ಇಲ್ಲ. ಜವಳಿ ಪಾರ್ಕ್ ಬೇಕು’ ಎಂದು ಬನಹಟ್ಟಿಯ ನೇಕಾರ ಶಂಕರ ಜುಂಜಪ್ಪನವರ ಹೇಳಿದರು.</p>.<p>‘ನೇಕಾರರ ಕೂಲಿ, ಸೀರೆಗಳ ಬೆಲೆ ಹೊರತುಪಡಿಸಿ ಸೀರೆ ಉತ್ಪಾದನೆಗೆ ಬೇಕಾದ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ. ಸೂರತ್, ಮುಂಬೈನಿಂದ ಬರುವ ಸೀರೆಗಳಿಂದ ಮಾರುಕಟ್ಟೆಯಲ್ಲಿ ಸ್ಥಳೀಯ ಸೀರೆಗಳ ಬೇಡಿಕೆ ಕುಸಿದಿದೆ’ ಎಂದು ನೇಕಾರ ಶ್ರೀಶೈಲ ಬೀಳಗಿ ಹೇಳಿದರು.</p>.<div><blockquote>ರಬಕವಿ–ಬನಹಟ್ಟಿ ನೇಕಾರರ ಸೀರೆ ಉಳಿದಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಸರ್ಕಾರದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು </blockquote><span class="attribution">-ಬಿ.ಎ. ಪೀರಜಾದೆ, ಉಪನಿರ್ದೇಶಕ ಕೈಮಗ್ಗ ಮತ್ತು ಜವಳಿ ಇಲಾಖೆ</span></div>.<div><blockquote>ಸೂರತ್ ಸೀರೆಗಳಿಂದ ಸ್ಥಳೀಯ ನೇಕಾರರ ಸೀರೆಗಳಿಗೆ ಬೇಡಿಕೆ ಕುಸಿದಿದೆ. ಈ ಹಿಂದೆ ಮಹಾರಾಷ್ಟ್ರ ತಮಿಳುನಾಡಿಗೆ ಇಲ್ಲಿನ ಸೀರೆಗಳನ್ನು ಕಳುಹಿಸಲಾಗುತ್ತಿತ್ತು. ಈಗ ಅದೂ ನಿಂತಿದೆ. </blockquote><span class="attribution">-ಸಿದ್ದು ಸವದಿ, ಶಾಸಕ ತೇರದಾಳ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಜಿಲ್ಲೆಯೂ ಸೇರಿ ರಾಜ್ಯದ ನೇಕಾರರ ಬಳಿ 10 ಲಕ್ಷ ಸೀರೆಗಳು ಮಾರಾಟವಾಗದೇ ಉಳಿದಿವೆ. ಜಿಲ್ಲೆಯ ರಬಕವಿಯಲ್ಲಿ 14 ಮಂದಿ ಸೀರೆ ಉತ್ಪಾದಕರ ಬಳಿ ₹2.90 ಕೋಟಿ ಮೌಲ್ಯದ 65,200 ಸೀರೆಗಳು, ಬನಹಟ್ಟಿಯ 10 ಮಂದಿ ಸೀರೆ ಉತ್ಪಾದಕರ ಬಳಿ ₹3.89 ಕೋಟಿ ಮೌಲ್ಯದ 93 ಸಾವಿರ ಸೀರೆಗಳು ಮಾರಾಟವಾಗಿಲ್ಲ. ಇದರ ಪರಿಣಾಮ ನೇಕಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕೂಲಿ ನೀಡಲು, ಮಳಿಗೆಗಳ ಬಾಡಿಗೆ ಕಟ್ಟಲು ಆಗುತ್ತಿಲ್ಲ.</p>.<p>‘ಕಚ್ಚಾ ವಸ್ತುಗಳ ಬೆಲೆ ಏರಿಕೆ, ಅನಿಶ್ಚಿತ ಮಾರುಕಟ್ಟೆ, ಆರ್ಥಿಕ ಸಂಕಷ್ಟ ಸೇರಿ ವಿವಿಧ ಕಾರಣಗಳಿಂದ 5 ವರ್ಷಗಳಲ್ಲಿ 51 ನೇಕಾರರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾರಾಟಕ್ಕೆ ಸರ್ಕಾರ ವ್ಯವಸ್ಥೆ ಮಾಡದಿದ್ದರೆ, ಆತ್ಮಹತ್ಯೆಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ’ ಎಂದು ಹೇಳಿದರು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ.</p>.<p>‘ಸಾಲ ಮಾಡಿ ಹೂಡಿಕೆ ಮಾಡಿದ ಬಂಡವಾಳ ಎಲ್ಲವೂ ಸೀರೆ ರೂಪದಲ್ಲಿ ಗೋದಾಮುಗಳಲ್ಲಿದೆ. ಸಾಲದ ಬಡ್ಡಿ ಕಟ್ಟಲು ಆಗುತ್ತಿಲ್ಲ. ರಾಜ್ಯದಲ್ಲಿ ₹50 ಕೋಟಿ ಮೌಲ್ಯದ 10 ಲಕ್ಷಕ್ಕೂ ಹೆಚ್ಚು ಸೀರೆಗಳು ಮಾರಾಟವಾಗದೇ ಉಳಿದಿವೆ. ಸೀರೆಗಳ ಬೆಲೆ ₹300 ರಿಂದ ₹500 ಇದೆ. ರಾಜ್ಯ ಸರ್ಕಾರವು ಪರ್ಯಾಯ ಯೋಜನೆಗಳ ಮೂಲಕ ನೇಕಾರರ ನೆರವಿಗೆ ಬರಬೇಕು’ ಎಂದು ತೇರದಾಳ ಶಾಸಕ ಸಿದ್ದು ಸವದಿ ತಿಳಿಸಿದರು.</p>.<p><strong>ಕಚ್ಚಾ ವಸ್ತುಗಳ ಬೆಲೆ ಏರಿಕೆ:</strong> ಕಚ್ಚಾ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಸಂಕಷ್ಟ ಹೆಚ್ಚಾಗಿದೆ. ನೂಲಿನ ದರ ₹450 ರಿಂದ 485 ಹೆಚ್ಚಳವಾಗಿದ್ದರೆ, ಚಮಕಾ (ಆರ್ಟ್ ಸಿಲ್ಕ್) ಬೆಲೆ ಪ್ರತಿ ಕೆಜಿಗೆ ₹585 ರಿಂದ ₹605ಕ್ಕೆ ಹೆಚ್ಚಾಗಿದೆ. ಆದರೆ, ಸೀರೆಗಳ ಬೆಲೆ ಮಾತ್ರ ಏರಿಕೆಯಾಗದೇ ಯಥಾಸ್ಥಿತಿ ಇದೆ.</p>.<p>‘ಮನೆಯಲ್ಲಿ ₹30 ಲಕ್ಷ ಮೌಲ್ಯದ ಸೀರೆ ಉಳಿದಿವೆ. ಇಷ್ಟೇ ಮೊತ್ತ ಉದ್ರಿ ಬಿದ್ದಿದೆ. ವಿದ್ಯುತ್ ಉಚಿತ ನೀಡಿದ್ದಾರೆ. ಆದರೆ, ಮಾರುಕಟ್ಟೆ ವ್ಯವಸ್ಥೆ ಇಲ್ಲ. ಜವಳಿ ಪಾರ್ಕ್ ಬೇಕು’ ಎಂದು ಬನಹಟ್ಟಿಯ ನೇಕಾರ ಶಂಕರ ಜುಂಜಪ್ಪನವರ ಹೇಳಿದರು.</p>.<p>‘ನೇಕಾರರ ಕೂಲಿ, ಸೀರೆಗಳ ಬೆಲೆ ಹೊರತುಪಡಿಸಿ ಸೀರೆ ಉತ್ಪಾದನೆಗೆ ಬೇಕಾದ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ. ಸೂರತ್, ಮುಂಬೈನಿಂದ ಬರುವ ಸೀರೆಗಳಿಂದ ಮಾರುಕಟ್ಟೆಯಲ್ಲಿ ಸ್ಥಳೀಯ ಸೀರೆಗಳ ಬೇಡಿಕೆ ಕುಸಿದಿದೆ’ ಎಂದು ನೇಕಾರ ಶ್ರೀಶೈಲ ಬೀಳಗಿ ಹೇಳಿದರು.</p>.<div><blockquote>ರಬಕವಿ–ಬನಹಟ್ಟಿ ನೇಕಾರರ ಸೀರೆ ಉಳಿದಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಸರ್ಕಾರದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು </blockquote><span class="attribution">-ಬಿ.ಎ. ಪೀರಜಾದೆ, ಉಪನಿರ್ದೇಶಕ ಕೈಮಗ್ಗ ಮತ್ತು ಜವಳಿ ಇಲಾಖೆ</span></div>.<div><blockquote>ಸೂರತ್ ಸೀರೆಗಳಿಂದ ಸ್ಥಳೀಯ ನೇಕಾರರ ಸೀರೆಗಳಿಗೆ ಬೇಡಿಕೆ ಕುಸಿದಿದೆ. ಈ ಹಿಂದೆ ಮಹಾರಾಷ್ಟ್ರ ತಮಿಳುನಾಡಿಗೆ ಇಲ್ಲಿನ ಸೀರೆಗಳನ್ನು ಕಳುಹಿಸಲಾಗುತ್ತಿತ್ತು. ಈಗ ಅದೂ ನಿಂತಿದೆ. </blockquote><span class="attribution">-ಸಿದ್ದು ಸವದಿ, ಶಾಸಕ ತೇರದಾಳ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>