<p><strong>ಬಾಗಲಕೋಟೆ:</strong> ‘ಗ್ರಾಮೀಣ ಸಮಾಜ ಕತೆಗಳ ಆಗರವೇ ಆಗಿದ್ದು, ಬಹಳಷ್ಟು ಕತೆಗಾರರು ಗ್ರಾಮೀಣ ಸಮಾಜವನ್ನಿಟ್ಟುಕೊಂಡು ಕತೆ ಬರೆದಿದ್ದಾರೆ. ಅದು ಮುಗಿಯದ ಕತೆಗಳ ಕಣಜ’ ಎಂದು ಸಾಹಿತಿ ಪ್ರಕಾಶ ಖಾಡೆ ಹೇಳಿದರು.</p>.<p>ಬಾಗಲಕೋಟೆಯ ಪತ್ರಿಕಾ ಭವನದಲ್ಲಿ ಗುರುವಾರ ಹಸನಡೋಂಗ್ರಿ ಬೇಪಾರಿ ಅವರ ‘ಅಮ್ಮ ಎಂಬ ಕಡಲು’ ಕಥಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ನೆಲಮೂಲ ಸಂಸ್ಕೃತಿಯಿಂದಲೇ ಬಹಳಷ್ಟು ಸಾಹಿತಿಗಳು ಬಂದಿದ್ದಾರೆ. ಅಲ್ಲಿಯೇ ದಟ್ಟವಾದ ಅನುಭವ ದೊರೆಯುತ್ತದೆ’ ಎಂದರು.</p>.<p>‘ಬೇಪಾರಿ ಅವರು ಕತೆಗಳಲ್ಲಿ ಪಾತ್ರಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಹೊಸ, ಹೊಸ ಓದುಗರನ್ನು ಸೃಷ್ಟಿಸುವುದು ಇಂದಿನ ಅಗತ್ಯವಾಗಿದೆ’ ಎಂದು ಹೇಳಿದರು.</p>.<p>ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷೆ ಲಲಿತಾ ಹೊಸಪ್ಯಾಟಿ ಮಾತನಾಡಿ, ‘ಕಥೆಯಲ್ಲಿ ನಿರೂಪಣಾ ಶೈಲಿ ಇರಬೇಕು. ಪಾತ್ರಗಳನ್ನು ಕಟ್ಟಿಕೊಡಬೇಕು. ಭಾವ ತುಂಬಬೇಕು. ಕಥೆಗಾರರು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಬೇಕು’ ಎಂದರು.</p>.<p>‘ಸೃಜನಶೀಲರಾಗಿ ಬರೆಯುವುದು ಕಲೆ. ಸತ್ಯವನ್ನು ಒಳಗಣ್ಣಿನಿಂದ ನೋಡಬೇಕು. ಸಮಾಜದಲ್ಲಿ ಎದುರಾಗುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಡೊಂಗ್ರಿ ಅವರನ್ನು ಕಥೆ ಬಳಸಿಕೊಂಡಿದ್ದಾರೆ. ಸಂಕಲನದಲ್ಲಿ ಗಮನ ಸೆಳೆಯುವ ಕಥೆಗಳಿವೆ’ ಎಂದರು.</p>.<p>ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ ಆರ್.ಜಿ. ಸನ್ನಿ ಮಾತನಾಡಿ, ‘ಪತ್ರಕರ್ತರಾಗಿಯೂ ಸಾಹಿತ್ಯ ರಚನೆ ಮಾಡಿದ್ದಾರೆ. ಅವರಿಂದ ಹೆಚ್ಚು, ಹೆಚ್ಚು ಸಾಹಿತ್ಯ ಕೃತಿಗಳು ಬರಲಿ’ ಎಂದರು.</p>.<p>ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ, ಸಾಹಿತಿ ಎಂ.ಬಿ. ಒಂಟಿ, ಪತ್ರಕರ್ತ ಶ್ರೀಶೈಲ ಬಿರಾದಾರ, ಕತೆಗಾರ ಹಸನಡೋಂಗ್ರಿ ಬೇಪಾರಿ ಇದ್ದರು.</p>.<p><strong>ಕೃತಿ ಪರಿಚಯ:</strong></p><p><strong>ಕೃತಿ:</strong> ಅಮ್ಮ ಎಂಬ ಕಡಲು </p><p><strong>ಲೇಖಕರು:</strong> ಹಸನಡೋಂಗ್ರಿ ಬೇಪಾರಿ </p><p><strong>ಪ್ರಕಾಶನ:</strong> ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ </p><p><strong>ಬೆಲೆ:</strong> ₹150</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ‘ಗ್ರಾಮೀಣ ಸಮಾಜ ಕತೆಗಳ ಆಗರವೇ ಆಗಿದ್ದು, ಬಹಳಷ್ಟು ಕತೆಗಾರರು ಗ್ರಾಮೀಣ ಸಮಾಜವನ್ನಿಟ್ಟುಕೊಂಡು ಕತೆ ಬರೆದಿದ್ದಾರೆ. ಅದು ಮುಗಿಯದ ಕತೆಗಳ ಕಣಜ’ ಎಂದು ಸಾಹಿತಿ ಪ್ರಕಾಶ ಖಾಡೆ ಹೇಳಿದರು.</p>.<p>ಬಾಗಲಕೋಟೆಯ ಪತ್ರಿಕಾ ಭವನದಲ್ಲಿ ಗುರುವಾರ ಹಸನಡೋಂಗ್ರಿ ಬೇಪಾರಿ ಅವರ ‘ಅಮ್ಮ ಎಂಬ ಕಡಲು’ ಕಥಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ನೆಲಮೂಲ ಸಂಸ್ಕೃತಿಯಿಂದಲೇ ಬಹಳಷ್ಟು ಸಾಹಿತಿಗಳು ಬಂದಿದ್ದಾರೆ. ಅಲ್ಲಿಯೇ ದಟ್ಟವಾದ ಅನುಭವ ದೊರೆಯುತ್ತದೆ’ ಎಂದರು.</p>.<p>‘ಬೇಪಾರಿ ಅವರು ಕತೆಗಳಲ್ಲಿ ಪಾತ್ರಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಹೊಸ, ಹೊಸ ಓದುಗರನ್ನು ಸೃಷ್ಟಿಸುವುದು ಇಂದಿನ ಅಗತ್ಯವಾಗಿದೆ’ ಎಂದು ಹೇಳಿದರು.</p>.<p>ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷೆ ಲಲಿತಾ ಹೊಸಪ್ಯಾಟಿ ಮಾತನಾಡಿ, ‘ಕಥೆಯಲ್ಲಿ ನಿರೂಪಣಾ ಶೈಲಿ ಇರಬೇಕು. ಪಾತ್ರಗಳನ್ನು ಕಟ್ಟಿಕೊಡಬೇಕು. ಭಾವ ತುಂಬಬೇಕು. ಕಥೆಗಾರರು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಬೇಕು’ ಎಂದರು.</p>.<p>‘ಸೃಜನಶೀಲರಾಗಿ ಬರೆಯುವುದು ಕಲೆ. ಸತ್ಯವನ್ನು ಒಳಗಣ್ಣಿನಿಂದ ನೋಡಬೇಕು. ಸಮಾಜದಲ್ಲಿ ಎದುರಾಗುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಡೊಂಗ್ರಿ ಅವರನ್ನು ಕಥೆ ಬಳಸಿಕೊಂಡಿದ್ದಾರೆ. ಸಂಕಲನದಲ್ಲಿ ಗಮನ ಸೆಳೆಯುವ ಕಥೆಗಳಿವೆ’ ಎಂದರು.</p>.<p>ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ ಆರ್.ಜಿ. ಸನ್ನಿ ಮಾತನಾಡಿ, ‘ಪತ್ರಕರ್ತರಾಗಿಯೂ ಸಾಹಿತ್ಯ ರಚನೆ ಮಾಡಿದ್ದಾರೆ. ಅವರಿಂದ ಹೆಚ್ಚು, ಹೆಚ್ಚು ಸಾಹಿತ್ಯ ಕೃತಿಗಳು ಬರಲಿ’ ಎಂದರು.</p>.<p>ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ, ಸಾಹಿತಿ ಎಂ.ಬಿ. ಒಂಟಿ, ಪತ್ರಕರ್ತ ಶ್ರೀಶೈಲ ಬಿರಾದಾರ, ಕತೆಗಾರ ಹಸನಡೋಂಗ್ರಿ ಬೇಪಾರಿ ಇದ್ದರು.</p>.<p><strong>ಕೃತಿ ಪರಿಚಯ:</strong></p><p><strong>ಕೃತಿ:</strong> ಅಮ್ಮ ಎಂಬ ಕಡಲು </p><p><strong>ಲೇಖಕರು:</strong> ಹಸನಡೋಂಗ್ರಿ ಬೇಪಾರಿ </p><p><strong>ಪ್ರಕಾಶನ:</strong> ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ </p><p><strong>ಬೆಲೆ:</strong> ₹150</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>