<p><strong>ಕುಳಗೇರಿ ಕ್ರಾಸ್: </strong>ಕುಳಗೇರಿ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಕುರಿ ಸಾಕಣೆ ಮಾಡಿ ಜೀವನ ಸಾಗಿಸುತ್ತಿವೆ. ಕುರಿ ಮತ್ತು ಮೇಕೆಗಳಿಗೆ ಈಗ ಕಾಲುಬೇನೆ ಹಾಗೂ ಬಾಯಿಬೇನೆ ರೋಗ ಕಾಣಿಸಿಕೊಂಡಿದ್ದು, ಕುರಿಗಾಹಿ ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿದೆ.</p>.<p>ಕುಳಗೇರಿ ಹೋಬಳಿಯ ಖಾನಾಪೂರ ಎಸ್.ಕೆ, ಕುಳಗೇರಿ, ಚಿರ್ಲಕೊಪ್ಪ, ಚಿಮ್ಮನಕಟ್ಟಿ, ಕಾಕನೂರ, ಸೋಮನಕೊಪ್ಪ, ತಪ್ಪಸಕಟ್ಟಿ, ಕಲ್ಲಾಪೂರ, ಮಮಟಗೇರಿ, ಹನಮಸಾಗರ, ನೀಲಗುಂದ, ತಿಮ್ಮಾಪೂರ ಎಸ್.ಎನ್, ನರಸಾಪೂರ, ವಡವಟ್ಟಿ, ಬಂಕನೇರಿ, ಬೆಳವಲಕೊಪ್ಪ, ಆಲದಕಟ್ಟಿ , ಕರಡಿಗುಡ್ಡ ಎಸ್.ಎನ್, ಕಿತ್ತಲಿ, ಸುಳ್ಳ, ಹೆಬ್ಬಳ್ಳಿ, ಕಳಸ, ಗೋವನಕೊಪ್ಪ, ಬೀರನೂರ, ತಳಕವಾಡ, ಆಲೂರು ಎಸ್.ಕೆ, ಹಾಗನೂರ ಮತ್ತು ಕರ್ಲಕೊಪ್ಪ ಗ್ರಾಮಗಳಲ್ಲಿ ಅಂದಾಜು 1,200 ಕುರಿ ಹಿಂಡಿದೆ. ಅಂದಾಜು 1.60 ಲಕ್ಷ ಕುರಿಗಳಿವೆ ಎಂದು ಸೋಮನಕೊಪ್ಪ ಗ್ರಾಮದ ಕುರಿಗಾಹಿ ರಮೇಶ ಜಂಗನ್ನವರ ತಿಳಿಸಿದರು.</p>.<p>ಈ ಭಾರಿ ಕುರಿ ಮತ್ತು ಮೇಕೆಗಳಿಗೆ ಕಾಲುಬೇನೆ ಹಾಗೂ ಬಾಯಿಬೇನೆ ತಗುಲಿ ಕುರಿಗಳು ಸಾವನ್ನಪ್ಪಿವೆ. ಪ್ರತಿ ಕುರಿಗಾಹಿಯ 30ರಿಂದ 40 ಕುರಿಗಳು ಮೃತಪಟ್ಟಿವೆ. ಪರಿಣಾಮ ಕುರಿಗಾಹಿಗಳ ಬದುಕು ಬಹಳ ಕಷ್ಟಕರವಾಗಿದೆ ಎಂದು ಖಾನಾಪೂರ ಎಸ್.ಕೆ ಗ್ರಾಮದ ಕುರಿಗಾರ ಮರ್ಚಪ್ಪ ಗುಳೆದಗುಡ್ಡ ತಿಳಿಸಿದರು.</p>.<p>ಕಳೆದ ಎರಡ್ಮೂರು ತಿಂಗಳುಗಳಿಂದ ನಿರಂತರವಾಗಿ ಮಳೆಯಲ್ಲಿ ಆಹಾರಕ್ಕಾಗಿ ಅಲೆದಾಟ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ರೋಗ ಬಂದಿದೆ. ಚಿಕಿತ್ಸೆ ಕೊಡಿಸಿದರೂ ಪ್ರಯೋಜನಾ ಆಗಿಲ್ಲ. ರೋಗ ನಿಯಂತ್ರಣಕ್ಕೆ ಬಾರದೆ ಇರುವುದಕ್ಕೆ ಕುರಿಗಾಹಿ ಕುಟುಂಬಗಳಿಗೆ ದಿಕ್ಕೆ ತೋಚದಂತಾಗಿದೆ. ಕಲಬುರ್ಗಿ, ಬೆಳಗಾವಿ, ಧಾರವಾಡ, ಹಾವೇರಿ, ರಾಯಚೂರ, ಬಳ್ಳಾರಿ, ಜಿಲ್ಲೆಗಳಿಂದ ಸಹ ಔಷಧ ತಂದು ತಿನ್ನಿಸಿದರೂ ವಾಸಿಯಾಗಿಲ್ಲ ಎಂದು ತಿಳಿಸಿದರು.</p>.<p>ರಾಜ್ಯ ಸರ್ಕಾರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಕುಳಗೇರಿ ಹೋಬಳಿಯ ಕುರಿಗಾಹಿಗಳು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಳಗೇರಿ ಕ್ರಾಸ್: </strong>ಕುಳಗೇರಿ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಕುರಿ ಸಾಕಣೆ ಮಾಡಿ ಜೀವನ ಸಾಗಿಸುತ್ತಿವೆ. ಕುರಿ ಮತ್ತು ಮೇಕೆಗಳಿಗೆ ಈಗ ಕಾಲುಬೇನೆ ಹಾಗೂ ಬಾಯಿಬೇನೆ ರೋಗ ಕಾಣಿಸಿಕೊಂಡಿದ್ದು, ಕುರಿಗಾಹಿ ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿದೆ.</p>.<p>ಕುಳಗೇರಿ ಹೋಬಳಿಯ ಖಾನಾಪೂರ ಎಸ್.ಕೆ, ಕುಳಗೇರಿ, ಚಿರ್ಲಕೊಪ್ಪ, ಚಿಮ್ಮನಕಟ್ಟಿ, ಕಾಕನೂರ, ಸೋಮನಕೊಪ್ಪ, ತಪ್ಪಸಕಟ್ಟಿ, ಕಲ್ಲಾಪೂರ, ಮಮಟಗೇರಿ, ಹನಮಸಾಗರ, ನೀಲಗುಂದ, ತಿಮ್ಮಾಪೂರ ಎಸ್.ಎನ್, ನರಸಾಪೂರ, ವಡವಟ್ಟಿ, ಬಂಕನೇರಿ, ಬೆಳವಲಕೊಪ್ಪ, ಆಲದಕಟ್ಟಿ , ಕರಡಿಗುಡ್ಡ ಎಸ್.ಎನ್, ಕಿತ್ತಲಿ, ಸುಳ್ಳ, ಹೆಬ್ಬಳ್ಳಿ, ಕಳಸ, ಗೋವನಕೊಪ್ಪ, ಬೀರನೂರ, ತಳಕವಾಡ, ಆಲೂರು ಎಸ್.ಕೆ, ಹಾಗನೂರ ಮತ್ತು ಕರ್ಲಕೊಪ್ಪ ಗ್ರಾಮಗಳಲ್ಲಿ ಅಂದಾಜು 1,200 ಕುರಿ ಹಿಂಡಿದೆ. ಅಂದಾಜು 1.60 ಲಕ್ಷ ಕುರಿಗಳಿವೆ ಎಂದು ಸೋಮನಕೊಪ್ಪ ಗ್ರಾಮದ ಕುರಿಗಾಹಿ ರಮೇಶ ಜಂಗನ್ನವರ ತಿಳಿಸಿದರು.</p>.<p>ಈ ಭಾರಿ ಕುರಿ ಮತ್ತು ಮೇಕೆಗಳಿಗೆ ಕಾಲುಬೇನೆ ಹಾಗೂ ಬಾಯಿಬೇನೆ ತಗುಲಿ ಕುರಿಗಳು ಸಾವನ್ನಪ್ಪಿವೆ. ಪ್ರತಿ ಕುರಿಗಾಹಿಯ 30ರಿಂದ 40 ಕುರಿಗಳು ಮೃತಪಟ್ಟಿವೆ. ಪರಿಣಾಮ ಕುರಿಗಾಹಿಗಳ ಬದುಕು ಬಹಳ ಕಷ್ಟಕರವಾಗಿದೆ ಎಂದು ಖಾನಾಪೂರ ಎಸ್.ಕೆ ಗ್ರಾಮದ ಕುರಿಗಾರ ಮರ್ಚಪ್ಪ ಗುಳೆದಗುಡ್ಡ ತಿಳಿಸಿದರು.</p>.<p>ಕಳೆದ ಎರಡ್ಮೂರು ತಿಂಗಳುಗಳಿಂದ ನಿರಂತರವಾಗಿ ಮಳೆಯಲ್ಲಿ ಆಹಾರಕ್ಕಾಗಿ ಅಲೆದಾಟ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ರೋಗ ಬಂದಿದೆ. ಚಿಕಿತ್ಸೆ ಕೊಡಿಸಿದರೂ ಪ್ರಯೋಜನಾ ಆಗಿಲ್ಲ. ರೋಗ ನಿಯಂತ್ರಣಕ್ಕೆ ಬಾರದೆ ಇರುವುದಕ್ಕೆ ಕುರಿಗಾಹಿ ಕುಟುಂಬಗಳಿಗೆ ದಿಕ್ಕೆ ತೋಚದಂತಾಗಿದೆ. ಕಲಬುರ್ಗಿ, ಬೆಳಗಾವಿ, ಧಾರವಾಡ, ಹಾವೇರಿ, ರಾಯಚೂರ, ಬಳ್ಳಾರಿ, ಜಿಲ್ಲೆಗಳಿಂದ ಸಹ ಔಷಧ ತಂದು ತಿನ್ನಿಸಿದರೂ ವಾಸಿಯಾಗಿಲ್ಲ ಎಂದು ತಿಳಿಸಿದರು.</p>.<p>ರಾಜ್ಯ ಸರ್ಕಾರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಕುಳಗೇರಿ ಹೋಬಳಿಯ ಕುರಿಗಾಹಿಗಳು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>