<p><strong>ಇಳಕಲ್ :</strong> 'ಇಳಕಲ್ ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರು ಗದಗ-ನರೇಗಲ್- ಗಜೇಂದ್ರಗಡ- ಇಳಕಲ್- ಲಿಂಗಸಗೂರು- ವಾಡಿ ರೈಲು ಮಾರ್ಗದ ಬಗ್ಗೆ ಬಲವಾಗಿ ಹಕ್ಕೊತ್ತಾಯ ಮಾಡಬೇಕಾಗಿದೆ. ಅಗತ್ಯಬಿದ್ದರೇ ಹೋರಾಟಕ್ಕೂ ಸಿದ್ಧರಾಗಬೇಕು' ಎಂದು ಉದ್ಯಮಿ ವಿರೇಶ ಸೊನ್ನದ ಅವರು ಅಭಿಪ್ರಾಯಪಟ್ಟಿದ್ದಾರೆ. ಅವರು ಭಾನುವಾರ ಇಲ್ಲಿಯ ಅನುಭವ ಮಂಟಪದಲ್ಲಿ ನಡೆದ ಗದಗ- ಇಳಕಲ್- ವಾಡಿ ರೈಲ್ವೆ ಹೋರಾಟ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.</p>.<p>ಇಳಕಲ್ ನಗರ ಅತಿ ಮಹತ್ವ ರೈಲ್ವೆ ಯೋಜನೆಗಳಿಂದ ವಂಚಿತವಾಗಿದೆ. ಈ ಬಗ್ಗೆ ಇಳಕಲ್ ಜನ ಎಚ್ಚೆತ್ತುಕೊಳ್ಳಬೇಕು. ನಮ್ಮ ಸಂಸದರ ನಿರ್ಲಕ್ಷ್ಯದಿಂದ ನ್ಯಾಯ ಸಮ್ಮತವಾಗಿ ಆಗಲೇಬೇಕಾಗಿದ್ದ ಮೂಲ ಯೋಜನೆಗಳಿಂದ ವಂಚಿತರಾಗಿದ್ದೇವೆ. ರಾಜಕಾರಣಿಗಳ ಬಣ್ಣದ ಮಾತಿಗೆ ಮರುಳಾಗದೇ ಕೈತಪ್ಪಿ ಹೋಗಿರುವ ಯೋಜನೆಯನ್ನು ಮರಳಿ ಪಡೆಯಲು ಹೋರಾಟದ ಅಗತ್ಯವಿದೆ' ಎಂದು ಸೊನ್ನದ ತಿಳಿಸಿದರು.</p>.<p>ಗದಗ- ಇಳಕಲ್ - ವಾಡಿ ಮಾತ್ರವಲ್ಲದೇ ಸೀತಿಮನಿ- ಇಳಕಲ್- ಹೊಸಪೇಟೆ- ಚಿತ್ರದುರ್ಗ ಮತ್ತು ಬೆಳಗಾವಿ- ಬಾಗಲಕೋಟೆ- ಇಳಕಲ್- ಹೈದರಾಬಾದ್ ಮಾರ್ಗದ ಯೋಜನೆಗಳು ಕಾರ್ಯಗತವಾಗಿ ಇಳಕಲ್ ನಗರ ಎಷ್ಟೋ ದಶಕಗಳ ಹಿಂದೆಯೇ ಬೃಹತ್ ರೈಲ್ವೆ ಜಾಲದ ಜಂಕ್ಷನ್ ಆಗಬೇಕಾಗಿತ್ತು. ಆದರೆ ನಮ್ಮ ಭಾಗದ ಎಲ್ಲ ಸಂಸದರ ನಿರ್ಲಕ್ಷದ ಫಲವಾಗಿ ಎಲ್ಲವೂ ಕೈತಪ್ಪಿ ಹೋಗಿವೆ. ಗದಗ- ಇಳಕಲ್ - ವಾಡಿ ರೈಲ್ವೆ ಯೋಜನೆ ಜಾರಿಗಾಗಿ ಕೊಪ್ಪಳ, ಗದಗ ಜಿಲ್ಲೆಯವರ ಹೋರಾಟಕ್ಕೆ ಇಳಕಲ್ ನಗರದಿಂದ ಸಂಪೂರ್ಣ ಬೆಂಬಲ, ಸಹಕಾರ ಸಿಗಲಿದೆ ಎಂದು ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಭರವಸೆ ನೀಡಿದರು.<br />ಗದಗ- ಇಳಕಲ್- ವಾಡಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕಾಂತಿಲಾಲ ಜೈನ್ ಮಾತನಾಡಿ, 'ಬ್ರಿಟಿಷರು- ಹೈದರಾಬಾದ್ ನವಾಬರ ಆಡಳಿತಾವಧಿಯಲ್ಲೇ ಗದಗ- ಗಜೇಂದ್ರಗಡ- ಇಳಕಲ್- ಲಿಂಗಸಗೂರು- ವಾಡಿ ರೈಲು ಮಾರ್ಗ ಯೋಜನೆ ಸಿದ್ಧವಾಗಿತ್ತು. ಈ ಸದರಿ ಯೋಜನೆಯನ್ನು ಪರಿವರ್ತನೆ ಮಾಡಲಾಗಿದ್ದು, ಗಜೇಂದ್ರಗಡ, ಇಳಕಲ್ ಮೂಲಕ ಹಾಯ್ದು ಹೋಗಬೇಕಿದ್ದ ಮಾರ್ಗವನ್ನು ಮಾರ್ಪಡಿಸಿ ಅನ್ಯಾಯ ಎಸಗಲಾಗಿದೆ. ನಾವೆಲ್ಲಾ ಒಗ್ಗಟ್ಟಿನಿಂದ ಫಲಿತಾಂಶ ಆಧಾರಿತ ಹೋರಾಟಕ್ಕೆ ಸಿದ್ಧರಾಗಲೇಬೇಕು ಎಂದರು.</p>.<p>ಮನೋಜಕುಮಾರ ಬಡಿಗೇರ ರೇಲ್ವೆ ಮೂಲಕ ಯೋಜನೆಯ ವಿವರಗಳನ್ನು ತಿಳಿಸಿದರು. ಸಭೆಯಲ್ಲಿ ಹೋರಾಟ ಸಮಿತಿಯ ಗಣೇಶಸಿಂಗ್ ಬ್ಯಾಳಿ, ಅಶೋಕ ಬೇವಿನಕಟ್ಟಿ, ಬಸವರಾಜ ವಂಕಲಕುಂಟಿ, ಶಿವಾನಂದ ಬಡಿಗೇರ, ಎಂ.ಆರ್. ಪಾಟೀಲ ಮಾತನಾಡಿದರು.<br />ಸಿ. ಸಿ. ಚಂದ್ರಾಪಟ್ಟಣ, ಸಿರಾಜ್ ಖಾಜಿ, ಕಾಸೀಮಸಾ ಕಂದಗಲ್, ಸಂಧ್ಯಾ ಗುಂಡಿ, ವಿಲಿಯಂ ಗುಂಡೀಗೆರಿ, ದಾವಲಸಾಬ ಮೋಮಿನ ಮತ್ತಿತರರು ಸಭೆಯಲ್ಲಿದ್ದರು. ಜಗದೀಶ ಸರಾಫ ವಂದನಾರ್ಪಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಳಕಲ್ :</strong> 'ಇಳಕಲ್ ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರು ಗದಗ-ನರೇಗಲ್- ಗಜೇಂದ್ರಗಡ- ಇಳಕಲ್- ಲಿಂಗಸಗೂರು- ವಾಡಿ ರೈಲು ಮಾರ್ಗದ ಬಗ್ಗೆ ಬಲವಾಗಿ ಹಕ್ಕೊತ್ತಾಯ ಮಾಡಬೇಕಾಗಿದೆ. ಅಗತ್ಯಬಿದ್ದರೇ ಹೋರಾಟಕ್ಕೂ ಸಿದ್ಧರಾಗಬೇಕು' ಎಂದು ಉದ್ಯಮಿ ವಿರೇಶ ಸೊನ್ನದ ಅವರು ಅಭಿಪ್ರಾಯಪಟ್ಟಿದ್ದಾರೆ. ಅವರು ಭಾನುವಾರ ಇಲ್ಲಿಯ ಅನುಭವ ಮಂಟಪದಲ್ಲಿ ನಡೆದ ಗದಗ- ಇಳಕಲ್- ವಾಡಿ ರೈಲ್ವೆ ಹೋರಾಟ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.</p>.<p>ಇಳಕಲ್ ನಗರ ಅತಿ ಮಹತ್ವ ರೈಲ್ವೆ ಯೋಜನೆಗಳಿಂದ ವಂಚಿತವಾಗಿದೆ. ಈ ಬಗ್ಗೆ ಇಳಕಲ್ ಜನ ಎಚ್ಚೆತ್ತುಕೊಳ್ಳಬೇಕು. ನಮ್ಮ ಸಂಸದರ ನಿರ್ಲಕ್ಷ್ಯದಿಂದ ನ್ಯಾಯ ಸಮ್ಮತವಾಗಿ ಆಗಲೇಬೇಕಾಗಿದ್ದ ಮೂಲ ಯೋಜನೆಗಳಿಂದ ವಂಚಿತರಾಗಿದ್ದೇವೆ. ರಾಜಕಾರಣಿಗಳ ಬಣ್ಣದ ಮಾತಿಗೆ ಮರುಳಾಗದೇ ಕೈತಪ್ಪಿ ಹೋಗಿರುವ ಯೋಜನೆಯನ್ನು ಮರಳಿ ಪಡೆಯಲು ಹೋರಾಟದ ಅಗತ್ಯವಿದೆ' ಎಂದು ಸೊನ್ನದ ತಿಳಿಸಿದರು.</p>.<p>ಗದಗ- ಇಳಕಲ್ - ವಾಡಿ ಮಾತ್ರವಲ್ಲದೇ ಸೀತಿಮನಿ- ಇಳಕಲ್- ಹೊಸಪೇಟೆ- ಚಿತ್ರದುರ್ಗ ಮತ್ತು ಬೆಳಗಾವಿ- ಬಾಗಲಕೋಟೆ- ಇಳಕಲ್- ಹೈದರಾಬಾದ್ ಮಾರ್ಗದ ಯೋಜನೆಗಳು ಕಾರ್ಯಗತವಾಗಿ ಇಳಕಲ್ ನಗರ ಎಷ್ಟೋ ದಶಕಗಳ ಹಿಂದೆಯೇ ಬೃಹತ್ ರೈಲ್ವೆ ಜಾಲದ ಜಂಕ್ಷನ್ ಆಗಬೇಕಾಗಿತ್ತು. ಆದರೆ ನಮ್ಮ ಭಾಗದ ಎಲ್ಲ ಸಂಸದರ ನಿರ್ಲಕ್ಷದ ಫಲವಾಗಿ ಎಲ್ಲವೂ ಕೈತಪ್ಪಿ ಹೋಗಿವೆ. ಗದಗ- ಇಳಕಲ್ - ವಾಡಿ ರೈಲ್ವೆ ಯೋಜನೆ ಜಾರಿಗಾಗಿ ಕೊಪ್ಪಳ, ಗದಗ ಜಿಲ್ಲೆಯವರ ಹೋರಾಟಕ್ಕೆ ಇಳಕಲ್ ನಗರದಿಂದ ಸಂಪೂರ್ಣ ಬೆಂಬಲ, ಸಹಕಾರ ಸಿಗಲಿದೆ ಎಂದು ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಭರವಸೆ ನೀಡಿದರು.<br />ಗದಗ- ಇಳಕಲ್- ವಾಡಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕಾಂತಿಲಾಲ ಜೈನ್ ಮಾತನಾಡಿ, 'ಬ್ರಿಟಿಷರು- ಹೈದರಾಬಾದ್ ನವಾಬರ ಆಡಳಿತಾವಧಿಯಲ್ಲೇ ಗದಗ- ಗಜೇಂದ್ರಗಡ- ಇಳಕಲ್- ಲಿಂಗಸಗೂರು- ವಾಡಿ ರೈಲು ಮಾರ್ಗ ಯೋಜನೆ ಸಿದ್ಧವಾಗಿತ್ತು. ಈ ಸದರಿ ಯೋಜನೆಯನ್ನು ಪರಿವರ್ತನೆ ಮಾಡಲಾಗಿದ್ದು, ಗಜೇಂದ್ರಗಡ, ಇಳಕಲ್ ಮೂಲಕ ಹಾಯ್ದು ಹೋಗಬೇಕಿದ್ದ ಮಾರ್ಗವನ್ನು ಮಾರ್ಪಡಿಸಿ ಅನ್ಯಾಯ ಎಸಗಲಾಗಿದೆ. ನಾವೆಲ್ಲಾ ಒಗ್ಗಟ್ಟಿನಿಂದ ಫಲಿತಾಂಶ ಆಧಾರಿತ ಹೋರಾಟಕ್ಕೆ ಸಿದ್ಧರಾಗಲೇಬೇಕು ಎಂದರು.</p>.<p>ಮನೋಜಕುಮಾರ ಬಡಿಗೇರ ರೇಲ್ವೆ ಮೂಲಕ ಯೋಜನೆಯ ವಿವರಗಳನ್ನು ತಿಳಿಸಿದರು. ಸಭೆಯಲ್ಲಿ ಹೋರಾಟ ಸಮಿತಿಯ ಗಣೇಶಸಿಂಗ್ ಬ್ಯಾಳಿ, ಅಶೋಕ ಬೇವಿನಕಟ್ಟಿ, ಬಸವರಾಜ ವಂಕಲಕುಂಟಿ, ಶಿವಾನಂದ ಬಡಿಗೇರ, ಎಂ.ಆರ್. ಪಾಟೀಲ ಮಾತನಾಡಿದರು.<br />ಸಿ. ಸಿ. ಚಂದ್ರಾಪಟ್ಟಣ, ಸಿರಾಜ್ ಖಾಜಿ, ಕಾಸೀಮಸಾ ಕಂದಗಲ್, ಸಂಧ್ಯಾ ಗುಂಡಿ, ವಿಲಿಯಂ ಗುಂಡೀಗೆರಿ, ದಾವಲಸಾಬ ಮೋಮಿನ ಮತ್ತಿತರರು ಸಭೆಯಲ್ಲಿದ್ದರು. ಜಗದೀಶ ಸರಾಫ ವಂದನಾರ್ಪಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>