<p><strong>ಬಾದಾಮಿ:</strong> ‘ಸೂಫಿ ಸಂತರು, ಶರಣರು ಮತ್ತು ದಾರ್ಶನಿಕರ ಬದುಕು ಸೌಹಾರ್ದಮಯವಾಗಿತ್ತು. ಅವರು ತಮ್ಮ ತಪಸ್ಸಿನ ಶಕ್ತಿಯ ಮೂಲಕ ಜನರ ಸಂಕಷ್ಟಗಳಿಗೆ ಪರಿಹಾರ ನೀಡಿ ಸಾಮಾಜಿಕ ಸೇವೆ ಮಾಡಿದರು’ ಎಂದು ಭೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.</p>.<p>ಇಲ್ಲಿನ ಉತ್ತರ ಬೆಟ್ಟದಲ್ಲಿ ಹಜರತ್ ಸೈಯದ್ ಸಾದಾತ ದರ್ಗಾ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಗುರುವಾರ ನಡೆದ ಹಜರತ್ ಸೈಯದ್ ಬಾದಷಾ ಉರುಸು ಮತ್ತು ಶರಣ ಶಿವಪ್ಪಯ್ಯಜ್ಜನ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.</p>.<p>‘16ನೇ ಶತಮಾನದಲ್ಲಿ ಸೈಯದ್ ಬಾದಷಾ ಮತ್ತು ಶರಣ ಶಿವಪ್ಪಯ್ಯ ಸಮಕಾಲಿನ ಶರಣರಾಗಿದ್ದರು. ಸಮಾಜ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟರು’ ಎಂದು ವಿಜಯಪುರ ಆಲಿಅಲಿ ದರ್ಗಾದ ಹಜರತ್ ಸೈಯದ್ ಮಹ್ಮದ್ ಗೇಸುದರಾಜ್ ಹುಸೇನಿ ತಿಳಿಸಿದರು.</p>.<p>ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಹಿಂದೂ-ಮುಸಲ್ಮಾನ ಭಕ್ತರು ಹಜರತ್ ಸೈಯದ್ ಬಾದಷಾ ದರ್ಗಾ ಮತ್ತು ಶಿವಪ್ಪಯ್ಯಜ್ಜನ ಗದ್ದುಗೆಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.</p>.<p>ಶರಣಬಸವ ಸ್ವಾಮೀಜಿ, ಶಿವಪೂಜಾ ಸ್ವಾಮೀಜಿ, ಮಂಜುನಾಥ ಸ್ವಾಮೀಜಿ, ಸೈಯದ್ ಮುಬಾರಕ ಬಾದಷಾ, ದಸ್ತಗೀರ ಮುಲ್ಲಾ, ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ, ಮಹೇಶ ಹೊಸಗೌಡ್ರ, ಮಂಜು ಹೊಸಮನಿ, ಆರ್.ಎಫ್. ಬಾಗವಾನ, ಜಮೀಲ ನಾಯಕ, ರಾಚಪ್ಪ ಪಟ್ಟಣದ ಮೆಹಬೂಬಸಾಬ್ ಮುಲ್ಲಾ, ಎಂ.ಐ. ಬಾರಾವಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ‘ಸೂಫಿ ಸಂತರು, ಶರಣರು ಮತ್ತು ದಾರ್ಶನಿಕರ ಬದುಕು ಸೌಹಾರ್ದಮಯವಾಗಿತ್ತು. ಅವರು ತಮ್ಮ ತಪಸ್ಸಿನ ಶಕ್ತಿಯ ಮೂಲಕ ಜನರ ಸಂಕಷ್ಟಗಳಿಗೆ ಪರಿಹಾರ ನೀಡಿ ಸಾಮಾಜಿಕ ಸೇವೆ ಮಾಡಿದರು’ ಎಂದು ಭೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.</p>.<p>ಇಲ್ಲಿನ ಉತ್ತರ ಬೆಟ್ಟದಲ್ಲಿ ಹಜರತ್ ಸೈಯದ್ ಸಾದಾತ ದರ್ಗಾ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಗುರುವಾರ ನಡೆದ ಹಜರತ್ ಸೈಯದ್ ಬಾದಷಾ ಉರುಸು ಮತ್ತು ಶರಣ ಶಿವಪ್ಪಯ್ಯಜ್ಜನ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.</p>.<p>‘16ನೇ ಶತಮಾನದಲ್ಲಿ ಸೈಯದ್ ಬಾದಷಾ ಮತ್ತು ಶರಣ ಶಿವಪ್ಪಯ್ಯ ಸಮಕಾಲಿನ ಶರಣರಾಗಿದ್ದರು. ಸಮಾಜ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟರು’ ಎಂದು ವಿಜಯಪುರ ಆಲಿಅಲಿ ದರ್ಗಾದ ಹಜರತ್ ಸೈಯದ್ ಮಹ್ಮದ್ ಗೇಸುದರಾಜ್ ಹುಸೇನಿ ತಿಳಿಸಿದರು.</p>.<p>ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಹಿಂದೂ-ಮುಸಲ್ಮಾನ ಭಕ್ತರು ಹಜರತ್ ಸೈಯದ್ ಬಾದಷಾ ದರ್ಗಾ ಮತ್ತು ಶಿವಪ್ಪಯ್ಯಜ್ಜನ ಗದ್ದುಗೆಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.</p>.<p>ಶರಣಬಸವ ಸ್ವಾಮೀಜಿ, ಶಿವಪೂಜಾ ಸ್ವಾಮೀಜಿ, ಮಂಜುನಾಥ ಸ್ವಾಮೀಜಿ, ಸೈಯದ್ ಮುಬಾರಕ ಬಾದಷಾ, ದಸ್ತಗೀರ ಮುಲ್ಲಾ, ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ, ಮಹೇಶ ಹೊಸಗೌಡ್ರ, ಮಂಜು ಹೊಸಮನಿ, ಆರ್.ಎಫ್. ಬಾಗವಾನ, ಜಮೀಲ ನಾಯಕ, ರಾಚಪ್ಪ ಪಟ್ಟಣದ ಮೆಹಬೂಬಸಾಬ್ ಮುಲ್ಲಾ, ಎಂ.ಐ. ಬಾರಾವಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>