<p><strong>ಬಾಗಲಕೋಟೆ</strong>: ನಗರದ ಶಾಲಾ–ಕಾಲೇಜುಗಳಲ್ಲಿ ಶನಿವಾರ ಶಿಕ್ಷಕರ ದಿನ ಆಚರಿಸಲಾಯಿತು.</p>.<p>ಶಿಕ್ಷಕರ ಅಮೂಲ್ಯವಾದ ಆಲೋಚನೆಗಳು ನಮಗೆ ಹೊಸ ಜೀವನ ಮಾರ್ಗ ತೋರಿಸುತ್ತವೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣ ತಜ್ಞರಾಗಿ ದೇಶಕ್ಕೆ ಅತ್ಯಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ಡಾ. ತಪಸ್ಬ್ರತ ತ್ರಿಪಾಠಿ ಹೇಳಿದರು.</p>.<p>ನಗರದ ಎಂ.ಆರ್.ಎನ್ ಆಯುರ್ವೇದ ಮೆಡಿಕಲ್ ಕಾಲೇಜಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಧಾಕೃಷ್ಣನ್ ವಾಗ್ಮಿ, ವಿದ್ವಾಂಸ, ತತ್ವಜ್ಞಾನಿ, ಶಿಕ್ಷಣ, ರಾಜನೀತಿ ತಜ್ಞರಾಗಿದ್ದರು ಎಂದರು.</p>.<p>ಡಾ. ಮುರಳಿಧರ ಬಡಿಗೇರ ಮಾತನಾಡಿ, ಜ್ಞಾನವು ಶಕ್ತಿ ನೀಡುತ್ತದೆ. ರಾಧಾಕೃಷ್ಣನ್ ಅವರ ಆದರ್ಶಗಳನ್ನು ಅಳವಡಿಸಿಕೋಳ್ಳಬೇಕು ಎಂದು ಹೇಳಿದರು.</p>.<p>ಡೀನ್ ಡಾ.ಶಿವಕುಮಾರ್ ಗಂಗಲ್, ಪ್ರಾಚಾರ್ಯ ಡಾ. ಪ್ರಹ್ಲಾದ್ ಗಂಗಾವತಿ, ಪ್ರಾಧ್ಯಾಪಕರಾದ ದೀಪಾ ಗಂಗಲ್, ಮಹಾತೇಂಶ ಹೀರಮಠ, ಶಶಿಕಾಲ್ ಕುರಬೇಟ್, ಈಶ್ವರ ಪಾಟೀಲ್, ವೆಂಕಟೇಶ ಗೌಡರ ಭಾಗವಹಿಸಿದ್ದರು.</p>.<p>ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ತಂತ್ರಜ್ಞಾನ ಕಾಲದಲ್ಲಿರುವ ಮಕ್ಕಳಿಗೆ ಸಾಮಾಜಿಕ ಮೌಲ್ಯಗಳನ್ನು ಕಲಿಸುವ ಶಿಕ್ಷಣದ ಅವಶ್ಯಕತೆ ಇದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ವೀರೇಶ ಬಡಿಗೇರ ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಅರುಣಕುಮಾರ ಗಾಳಿ ಮಾತನಾಡಿ, ಜೀವನ ಪೂರ್ತಿ ಗುರುವಿನ ಋಣ ತಿರಿಸಲು ಸಾಧ್ಯವಿಲ್ಲ. ಶಿಕ್ಷಣ ಮಾನವನಿಗೆ ಉತ್ತಮ ಮೌಲ್ಯ, ಕೌಶಲ ಕಲಿಸುತ್ತದೆ ಎಂದರು.</p>.<p>ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಕಾಲೇಜು: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.</p>.<p>ವಿದ್ಯಾರ್ಥಿಗಳಾದ ಎಸ್.ಎಂ.ಜಲಗೇರಿ, ಎಸ್.ಟಿ.ನಿಂಬಲಗುಂದಿ, ಪಿ.ಎಸ್.ಸಂಗಮದ, ಎಸ್.ಬಿ.ಲಮಾಣಿ, ಎಸ್.ಎಸ್.ಬಾಸುತ್ಕರ್, ಕೆ.ಜಿ.ಲಮಾಣಿ, ಮಂಜುಳಾ ಗೌಡರ ಮಾತನಾಡಿದರು.</p>.<p>ಎಸ್.ಎಸ್.ಹಂಗರಗಿ, ಎನ್ಎಸ್ಎಸ್ ಅಧಿಕಾರಿಗಳಾದ ಎಸ್.ವೈ. ಬೊಮ್ಮಣ್ಣವರ, ಎಸ್.ಎಂ ಹಡಪದ ಉಪಸ್ಥಿತರಿದ್ದರು.</p>.<p>ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜು: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಧ್ಯಯನದ ಜೊತೆಗೆ ಬದುಕಿನ ನೈತಿಕ ಮೌಲ್ಯಗಳಿಂದ ದೇಶದ ಉತ್ತಮ ಪ್ರಜೆಯನ್ನಾಗಿಸುವ ಕರ್ತವ್ಯ ಶಿಕ್ಷಕರದು ಎಂದು ಪ್ರಾಚಾರ್ಯ ಎಸ್.ಎಂ. ಒಡೆಯರ ಹೇಳಿದರು.</p>.<p>ಜಿ.ಐ. ನಂದಿಕೋಲಮಠ ಮಾತನಾಡಿದರು. ಎನ್.ಎಸ್.ಎಸ್. ಅಧಿಕಾರಿ ಎಂ.ವಿ. ಭಾಜಪ್ಪನವರ್, ಎ.ಆರ್. ಬಡಿಗೇರ, ಪೂಜಾ ಅರ್ಕಸಾಲಿ ಇದ್ದರು.</p>.<p>ವಿದ್ಯಾಗಿರಿಯ ಸೆಂಟ್ ಆನ್ಸ್ ಕಾನ್ವೆಂಟ್ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು: ಪ್ರಾಚಾರ್ಯರಾದ ಸಿಸ್ಟರ್ ಮೇರಿ ಜಾಕೋಬ್, ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು.</p>.<p>ಶಿಕ್ಷಕರಾದ ಸಿದ್ದಯ್ಯ ಹಿರೇಮಠ, ಶ್ವೇತಾ ಮಿರ್ಜಿ, ಶೀಲಾ ಹದ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ನಗರದ ಶಾಲಾ–ಕಾಲೇಜುಗಳಲ್ಲಿ ಶನಿವಾರ ಶಿಕ್ಷಕರ ದಿನ ಆಚರಿಸಲಾಯಿತು.</p>.<p>ಶಿಕ್ಷಕರ ಅಮೂಲ್ಯವಾದ ಆಲೋಚನೆಗಳು ನಮಗೆ ಹೊಸ ಜೀವನ ಮಾರ್ಗ ತೋರಿಸುತ್ತವೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣ ತಜ್ಞರಾಗಿ ದೇಶಕ್ಕೆ ಅತ್ಯಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ಡಾ. ತಪಸ್ಬ್ರತ ತ್ರಿಪಾಠಿ ಹೇಳಿದರು.</p>.<p>ನಗರದ ಎಂ.ಆರ್.ಎನ್ ಆಯುರ್ವೇದ ಮೆಡಿಕಲ್ ಕಾಲೇಜಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಧಾಕೃಷ್ಣನ್ ವಾಗ್ಮಿ, ವಿದ್ವಾಂಸ, ತತ್ವಜ್ಞಾನಿ, ಶಿಕ್ಷಣ, ರಾಜನೀತಿ ತಜ್ಞರಾಗಿದ್ದರು ಎಂದರು.</p>.<p>ಡಾ. ಮುರಳಿಧರ ಬಡಿಗೇರ ಮಾತನಾಡಿ, ಜ್ಞಾನವು ಶಕ್ತಿ ನೀಡುತ್ತದೆ. ರಾಧಾಕೃಷ್ಣನ್ ಅವರ ಆದರ್ಶಗಳನ್ನು ಅಳವಡಿಸಿಕೋಳ್ಳಬೇಕು ಎಂದು ಹೇಳಿದರು.</p>.<p>ಡೀನ್ ಡಾ.ಶಿವಕುಮಾರ್ ಗಂಗಲ್, ಪ್ರಾಚಾರ್ಯ ಡಾ. ಪ್ರಹ್ಲಾದ್ ಗಂಗಾವತಿ, ಪ್ರಾಧ್ಯಾಪಕರಾದ ದೀಪಾ ಗಂಗಲ್, ಮಹಾತೇಂಶ ಹೀರಮಠ, ಶಶಿಕಾಲ್ ಕುರಬೇಟ್, ಈಶ್ವರ ಪಾಟೀಲ್, ವೆಂಕಟೇಶ ಗೌಡರ ಭಾಗವಹಿಸಿದ್ದರು.</p>.<p>ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ತಂತ್ರಜ್ಞಾನ ಕಾಲದಲ್ಲಿರುವ ಮಕ್ಕಳಿಗೆ ಸಾಮಾಜಿಕ ಮೌಲ್ಯಗಳನ್ನು ಕಲಿಸುವ ಶಿಕ್ಷಣದ ಅವಶ್ಯಕತೆ ಇದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ವೀರೇಶ ಬಡಿಗೇರ ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಅರುಣಕುಮಾರ ಗಾಳಿ ಮಾತನಾಡಿ, ಜೀವನ ಪೂರ್ತಿ ಗುರುವಿನ ಋಣ ತಿರಿಸಲು ಸಾಧ್ಯವಿಲ್ಲ. ಶಿಕ್ಷಣ ಮಾನವನಿಗೆ ಉತ್ತಮ ಮೌಲ್ಯ, ಕೌಶಲ ಕಲಿಸುತ್ತದೆ ಎಂದರು.</p>.<p>ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಕಾಲೇಜು: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.</p>.<p>ವಿದ್ಯಾರ್ಥಿಗಳಾದ ಎಸ್.ಎಂ.ಜಲಗೇರಿ, ಎಸ್.ಟಿ.ನಿಂಬಲಗುಂದಿ, ಪಿ.ಎಸ್.ಸಂಗಮದ, ಎಸ್.ಬಿ.ಲಮಾಣಿ, ಎಸ್.ಎಸ್.ಬಾಸುತ್ಕರ್, ಕೆ.ಜಿ.ಲಮಾಣಿ, ಮಂಜುಳಾ ಗೌಡರ ಮಾತನಾಡಿದರು.</p>.<p>ಎಸ್.ಎಸ್.ಹಂಗರಗಿ, ಎನ್ಎಸ್ಎಸ್ ಅಧಿಕಾರಿಗಳಾದ ಎಸ್.ವೈ. ಬೊಮ್ಮಣ್ಣವರ, ಎಸ್.ಎಂ ಹಡಪದ ಉಪಸ್ಥಿತರಿದ್ದರು.</p>.<p>ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜು: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಧ್ಯಯನದ ಜೊತೆಗೆ ಬದುಕಿನ ನೈತಿಕ ಮೌಲ್ಯಗಳಿಂದ ದೇಶದ ಉತ್ತಮ ಪ್ರಜೆಯನ್ನಾಗಿಸುವ ಕರ್ತವ್ಯ ಶಿಕ್ಷಕರದು ಎಂದು ಪ್ರಾಚಾರ್ಯ ಎಸ್.ಎಂ. ಒಡೆಯರ ಹೇಳಿದರು.</p>.<p>ಜಿ.ಐ. ನಂದಿಕೋಲಮಠ ಮಾತನಾಡಿದರು. ಎನ್.ಎಸ್.ಎಸ್. ಅಧಿಕಾರಿ ಎಂ.ವಿ. ಭಾಜಪ್ಪನವರ್, ಎ.ಆರ್. ಬಡಿಗೇರ, ಪೂಜಾ ಅರ್ಕಸಾಲಿ ಇದ್ದರು.</p>.<p>ವಿದ್ಯಾಗಿರಿಯ ಸೆಂಟ್ ಆನ್ಸ್ ಕಾನ್ವೆಂಟ್ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು: ಪ್ರಾಚಾರ್ಯರಾದ ಸಿಸ್ಟರ್ ಮೇರಿ ಜಾಕೋಬ್, ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು.</p>.<p>ಶಿಕ್ಷಕರಾದ ಸಿದ್ದಯ್ಯ ಹಿರೇಮಠ, ಶ್ವೇತಾ ಮಿರ್ಜಿ, ಶೀಲಾ ಹದ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>