<p><strong>ಬಾಗಲಕೋಟೆ</strong>: ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ಮೂರನೇ ಹಂತದ ಯೋಜನೆಯಲ್ಲಿ ಸ್ವಾಧೀನವಾದ ಭೂಮಿಗೆ ಪರಿಹಾರ ನಿಗದಿ ಮಾಡಲಾಗಿದೆ. ಆದರೆ, ಯೋಜನೆಗೆ ಬೇಕಾದ 1,04,301 ಎಕರೆ ಸ್ವಾಧೀನ ಮಾಡಿಕೊಳ್ಳಬೇಕಾದ ಪುನರ್ವಸತಿ, ಪುನರ್ನಿರ್ಮಾಣ ಮತ್ತು ಭೂಸ್ವಾಧೀನ ಕಚೇರಿಯು ಸಿಬ್ಬಂದಿ ಕೊರತೆ ಎದುರಿಸುತ್ತಿದೆ.</p>.<p>ಬಾಗಲಕೋಟೆ ನವನಗರದಲ್ಲಿರುವ ಯುಕೆಪಿ ಕಚೇರಿಗೆ 835 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 349 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, 486 ಹುದ್ದೆಗಳು ಖಾಲಿ ಇವೆ.</p>.<p>ಐವರು ಪುನರ್ವಸತಿ ಅಧಿಕಾರಿಗಳ ಪೈಕಿ ನಾಲ್ಕು, 11 ವಿಶೇಷ ಭೂಸ್ವಾಧೀನಾಧಿಕಾರಿಗಳ ಪೈಕಿ ಐದು, 16 ವಿಶೇಷ ತಹಶೀಲ್ದಾರ್ (ಗ್ರೇಡ್ 2) ಪೈಕಿ 14 ಹುದ್ದೆಗಳು ಖಾಲಿ ಇವೆ. ಮೂರು–ನಾಲ್ಕು ಜನರ ಕೆಲಸವನ್ನು ಒಬ್ಬರೇ ಮಾಡಬೇಕಾದ ಸ್ಥಿತಿ ಇದೆ.</p>.<p>ಮುಳುಗಡೆ ಆಗುವ 75,563 ಎಕರೆಯಲ್ಲಿ ಕೇವಲ 2,543 ಎಕರೆ ಮಾತ್ರ ಸ್ವಾಧೀನವಾಗಿದೆ. ಕಾಲುವೆ ನಿರ್ಮಾಣಕ್ಕೆ 51,837 ಎಕರೆ ಭೂಮಿ ಮತ್ತು ಫುನರ್ವಸತಿ ಕೇಂದ್ರಗಳಿಗೆ 2,700 ಎಕರೆ ಭೂಸ್ವಾಧೀನ ಆಗಬೇಕಿದೆ.</p>.<p><strong>ಪ್ರಭಾರಿಗಳೇ ಗತಿ</strong>: ಕಚೇರಿಯ ಪ್ರಮುಖ ಹುದ್ದೆಗಳಾದ ಆಯುಕ್ತ, ಮಹಾ ವ್ಯವಸ್ಥಾಪಕ, ಉಪ ಮಹಾವ್ಯವಸ್ಥಾಪಕ ಹುದ್ದೆಗಳಿಗೆ ಪ್ರಭಾರಿ ಅಧಿಕಾರಿಗಳಿದ್ದಾರೆ. </p>.<p>ಕೃಷ್ಣ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮೋಹನರಾಜ್ ಕೆ.ಪಿ, ಆಯುಕ್ತರಾಗಿದ್ದಾರೆ. ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ, ಮಹಾ ವ್ಯವಸ್ಥಾಪಕರಾಗಿದ್ದರೆ, ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಸಚಿವ ಮಹಾದೇವ ಮುರಗಿ ಉಪ ಮಹಾವ್ಯವಸ್ಥಾಪಕರು.</p>.<p>1995 ರಿಂದ 2006ರವರೆಗೆ 11 ವರ್ಷ ಎಸ್.ಎಂ. ಜಾಮದಾರ ಆಯುಕ್ತರಾಗಿದ್ದರು. ನಂತರ 2006 ರಿಂದ ಈವರೆಗಿನ 19 ವರ್ಷಗಳಲ್ಲಿ 28 ಅಧಿಕಾರಿಗಳು ಬದಲಾಗಿದ್ದಾರೆ. ಅದರಲ್ಲಿ ಬಹುತೇಕರು ಬೇರೆ ಹುದ್ದೆಯೊಂದಿಗೆ ಈ ಹುದ್ದೆಯಲ್ಲಿ ಪ್ರಭಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.</p>.<p><strong>ಜಪ್ತಿಗೆ ಬೆದರಿದ ಸಿಬ್ಬಂದಿ</strong>: ಸ್ವಾಧೀನವಾಗಿರುವ ಭೂಮಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ರೈತರು ನ್ಯಾಯಾಲಯಕ್ಕೆ ಹೋಗಿರುವ ಪ್ರಕರಣಗಳ ಸಂಖ್ಯೆ 25 ಸಾವಿರಕ್ಕೂ ಹೆಚ್ಚಿದೆ. ಕೋರ್ಟ್ಗೆ ಹಾಜರಾಗುವುದು, ಉತ್ತರ ಸಿದ್ಧಪಡಿಸುವುದೇ ಸಿಬ್ಬಂದಿಯ ಕೆಲಸವಾಗಿದೆ.</p>.<p>‘ವಾರದಲ್ಲಿ ಒಂದಿಲ್ಲೊಂದು ಪ್ರಕರಣದಲ್ಲಿ ಹಣ ಪಾವತಿಸದ ಕಾರಣಕ್ಕೆ ಕಚೇರಿಯ ವಸ್ತುಗಳ ಜಪ್ತಿಗೆ ನ್ಯಾಯಾಲಯಗಳು ಆದೇಶ ನೀಡುತ್ತವೆ. ಕುರ್ಚಿ, ಕಂಪ್ಯೂಟರ್, ಟೇಬಲ್ಗಳನ್ನು ಜಪ್ತಿ ಮಾಡಲಾಗುತ್ತದೆ. ಕಂಪ್ಯೂಟರ್ನಲ್ಲೇ ಸಾಕಷ್ಟು ದಾಖಲೆಗಳು ಇರುವುದರಿಂದ ಆಗಾಗ ಕೆಲಸಕ್ಕೆ ಅಡ್ಡಿಯಾಗುತ್ತಲೇ ಇರುತ್ತದೆ’ ಎಂದು ಕಚೇರಿಯ ಸಿಬ್ಬಂದಿ ದೂರಿದರು.</p>.<div><blockquote>ಪ್ರಾಧಿಕಾರ ರಚಿಸಿ ವಿಶೇಷ ಆಯುಕ್ತರ ನೇಮಕ ಮಾಡಲು ನಿರ್ಧರಿಸಲಾಗಿದೆ. ಉಳಿದ ಸಿಬ್ಬಂದಿಯ ನೇಮಕಾತಿಯೂ ಆಗಲಿದೆ.</blockquote><span class="attribution">– ಆರ್.ಬಿ. ತಿಮ್ಮಾಪುರ, ಜಿಲ್ಲಾ ಉಸ್ತುವಾರಿ ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ಮೂರನೇ ಹಂತದ ಯೋಜನೆಯಲ್ಲಿ ಸ್ವಾಧೀನವಾದ ಭೂಮಿಗೆ ಪರಿಹಾರ ನಿಗದಿ ಮಾಡಲಾಗಿದೆ. ಆದರೆ, ಯೋಜನೆಗೆ ಬೇಕಾದ 1,04,301 ಎಕರೆ ಸ್ವಾಧೀನ ಮಾಡಿಕೊಳ್ಳಬೇಕಾದ ಪುನರ್ವಸತಿ, ಪುನರ್ನಿರ್ಮಾಣ ಮತ್ತು ಭೂಸ್ವಾಧೀನ ಕಚೇರಿಯು ಸಿಬ್ಬಂದಿ ಕೊರತೆ ಎದುರಿಸುತ್ತಿದೆ.</p>.<p>ಬಾಗಲಕೋಟೆ ನವನಗರದಲ್ಲಿರುವ ಯುಕೆಪಿ ಕಚೇರಿಗೆ 835 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 349 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, 486 ಹುದ್ದೆಗಳು ಖಾಲಿ ಇವೆ.</p>.<p>ಐವರು ಪುನರ್ವಸತಿ ಅಧಿಕಾರಿಗಳ ಪೈಕಿ ನಾಲ್ಕು, 11 ವಿಶೇಷ ಭೂಸ್ವಾಧೀನಾಧಿಕಾರಿಗಳ ಪೈಕಿ ಐದು, 16 ವಿಶೇಷ ತಹಶೀಲ್ದಾರ್ (ಗ್ರೇಡ್ 2) ಪೈಕಿ 14 ಹುದ್ದೆಗಳು ಖಾಲಿ ಇವೆ. ಮೂರು–ನಾಲ್ಕು ಜನರ ಕೆಲಸವನ್ನು ಒಬ್ಬರೇ ಮಾಡಬೇಕಾದ ಸ್ಥಿತಿ ಇದೆ.</p>.<p>ಮುಳುಗಡೆ ಆಗುವ 75,563 ಎಕರೆಯಲ್ಲಿ ಕೇವಲ 2,543 ಎಕರೆ ಮಾತ್ರ ಸ್ವಾಧೀನವಾಗಿದೆ. ಕಾಲುವೆ ನಿರ್ಮಾಣಕ್ಕೆ 51,837 ಎಕರೆ ಭೂಮಿ ಮತ್ತು ಫುನರ್ವಸತಿ ಕೇಂದ್ರಗಳಿಗೆ 2,700 ಎಕರೆ ಭೂಸ್ವಾಧೀನ ಆಗಬೇಕಿದೆ.</p>.<p><strong>ಪ್ರಭಾರಿಗಳೇ ಗತಿ</strong>: ಕಚೇರಿಯ ಪ್ರಮುಖ ಹುದ್ದೆಗಳಾದ ಆಯುಕ್ತ, ಮಹಾ ವ್ಯವಸ್ಥಾಪಕ, ಉಪ ಮಹಾವ್ಯವಸ್ಥಾಪಕ ಹುದ್ದೆಗಳಿಗೆ ಪ್ರಭಾರಿ ಅಧಿಕಾರಿಗಳಿದ್ದಾರೆ. </p>.<p>ಕೃಷ್ಣ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮೋಹನರಾಜ್ ಕೆ.ಪಿ, ಆಯುಕ್ತರಾಗಿದ್ದಾರೆ. ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ, ಮಹಾ ವ್ಯವಸ್ಥಾಪಕರಾಗಿದ್ದರೆ, ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಸಚಿವ ಮಹಾದೇವ ಮುರಗಿ ಉಪ ಮಹಾವ್ಯವಸ್ಥಾಪಕರು.</p>.<p>1995 ರಿಂದ 2006ರವರೆಗೆ 11 ವರ್ಷ ಎಸ್.ಎಂ. ಜಾಮದಾರ ಆಯುಕ್ತರಾಗಿದ್ದರು. ನಂತರ 2006 ರಿಂದ ಈವರೆಗಿನ 19 ವರ್ಷಗಳಲ್ಲಿ 28 ಅಧಿಕಾರಿಗಳು ಬದಲಾಗಿದ್ದಾರೆ. ಅದರಲ್ಲಿ ಬಹುತೇಕರು ಬೇರೆ ಹುದ್ದೆಯೊಂದಿಗೆ ಈ ಹುದ್ದೆಯಲ್ಲಿ ಪ್ರಭಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.</p>.<p><strong>ಜಪ್ತಿಗೆ ಬೆದರಿದ ಸಿಬ್ಬಂದಿ</strong>: ಸ್ವಾಧೀನವಾಗಿರುವ ಭೂಮಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ರೈತರು ನ್ಯಾಯಾಲಯಕ್ಕೆ ಹೋಗಿರುವ ಪ್ರಕರಣಗಳ ಸಂಖ್ಯೆ 25 ಸಾವಿರಕ್ಕೂ ಹೆಚ್ಚಿದೆ. ಕೋರ್ಟ್ಗೆ ಹಾಜರಾಗುವುದು, ಉತ್ತರ ಸಿದ್ಧಪಡಿಸುವುದೇ ಸಿಬ್ಬಂದಿಯ ಕೆಲಸವಾಗಿದೆ.</p>.<p>‘ವಾರದಲ್ಲಿ ಒಂದಿಲ್ಲೊಂದು ಪ್ರಕರಣದಲ್ಲಿ ಹಣ ಪಾವತಿಸದ ಕಾರಣಕ್ಕೆ ಕಚೇರಿಯ ವಸ್ತುಗಳ ಜಪ್ತಿಗೆ ನ್ಯಾಯಾಲಯಗಳು ಆದೇಶ ನೀಡುತ್ತವೆ. ಕುರ್ಚಿ, ಕಂಪ್ಯೂಟರ್, ಟೇಬಲ್ಗಳನ್ನು ಜಪ್ತಿ ಮಾಡಲಾಗುತ್ತದೆ. ಕಂಪ್ಯೂಟರ್ನಲ್ಲೇ ಸಾಕಷ್ಟು ದಾಖಲೆಗಳು ಇರುವುದರಿಂದ ಆಗಾಗ ಕೆಲಸಕ್ಕೆ ಅಡ್ಡಿಯಾಗುತ್ತಲೇ ಇರುತ್ತದೆ’ ಎಂದು ಕಚೇರಿಯ ಸಿಬ್ಬಂದಿ ದೂರಿದರು.</p>.<div><blockquote>ಪ್ರಾಧಿಕಾರ ರಚಿಸಿ ವಿಶೇಷ ಆಯುಕ್ತರ ನೇಮಕ ಮಾಡಲು ನಿರ್ಧರಿಸಲಾಗಿದೆ. ಉಳಿದ ಸಿಬ್ಬಂದಿಯ ನೇಮಕಾತಿಯೂ ಆಗಲಿದೆ.</blockquote><span class="attribution">– ಆರ್.ಬಿ. ತಿಮ್ಮಾಪುರ, ಜಿಲ್ಲಾ ಉಸ್ತುವಾರಿ ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>