<p><strong>ರಬಕವಿ ಬನಹಟ್ಟಿ</strong>: ನಗರಸಭೆಯಿಂದ ಉತಾರೆಗಳನ್ನು ಮತ್ತು ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಗರಸಭೆಯ ಮೇಲೆ ಸಾಕಷ್ಟು ಆರೋಪಗಳಿವೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಅಧಿಕಾರಿಗಳು ಗಮನ ನೀಡಬೇಕು. ನಗರಸಭೆಯು ಜನಸ್ನೇಹಿಯಾಗಿರಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.</p>.<p>ರಬಕವಿ ಬನಹಟ್ಟಿ ನಗರಸಭೆಯ ಸಭಾಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.</p>.<p>ಎಸ್ಎಫ್ಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗ ಹಾಗೂ 15ನೇ ಹಣಕಾಸು ಯೋಜನೆಯಲ್ಲಿ ಉಳಿತಾಯವಾಗಿರುವ ₹62.80 ಲಕ್ಷ ಹಣದ ಬಳಕೆಗೆ ಸಭೆಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಯಿತು. ನಂತರ ಉಳಿತಾಯದ ಮೊತ್ತವನ್ನು ನಗರಸಭೆಯ 31 ವಾರ್ಡ್ ಗಳಿಗೂ ಬಳಕೆ ಮಾಡುವಂತೆ ನಿರ್ಧಾರ ಕೈಗೊಳ್ಳಲಾಯಿತು.</p>.<p>ನಗರಸಭೆಯ ಪರವಾಣಿಗೆ ಇಲ್ಲದೆ ನಗರಸಭೆಯ ವ್ಯಾಪ್ತಿಯಲ್ಲಿ 250ಕ್ಕೂ ಹೆಚ್ಚು ಅಂಗಡಿಗಳು ಕಾರ್ಯ ಮಾಡುತ್ತಿವೆ. ಇವರು ನಗರಸಭೆಯಿಂದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ನಗರಸಭೆಗೆ ಸಾಕಷ್ಟು ಹಾನಿಯಾಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯ ಬಸವರಾಜ ಗುಡೋಡಗಿ ತಿಳಿಸಿದರು.</p>.<p>ರಬಕವಿ ಬನಹಟ್ಟಿ ನಗರಸಭೆಯ ತೆರಿಗೆ ವಸೂಲಾತಿ ಶೂನ್ಯವಾಗಿದ್ದು, ನಗರಸಭೆಯ ವ್ಯಾಪ್ತಿಯಲ್ಲಿ ಇನ್ನೂ ಸಾಕಷ್ಟು ಶ್ರೀಮಂತರು ತೆರಿಗೆಯನ್ನು ಪಾವತಿಸಿಲ್ಲ. ಅಂಥವರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಲಾಯಿತು. </p>.<p>ಸಿಬ್ಬಂದಿ ಕೊರತೆ: ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಕಾರ್ಯಗಳು ವಿಳಂಬವಾಗುತ್ತಿವೆ. ಮುಖ್ಯವಾಗಿ ನಗರಸಭೆಗೆ ಬೇಕಾಗಿರುವ ಎಂಜಿನಿಯರ್ ಇಲ್ಲದೆ ಇರುವುದರಿಂದ ತಾಂತ್ರಿಕ ಕಾರ್ಯಗಳು ವಿಳಂಬವಾಗುತ್ತಿವೆ ಎಂದು ಸದಸ್ಯರು ತಿಳಿಸಿದರು.</p>.<p>ನಗರಸಭೆಯಿಂದ ಖರೀದಿ ಮಾಡಲಾದ ಹಿತಾಚಿ ವಾಹನ ಬಳೆಯಾಗದೆ ಇರುವುದರ ಬಗ್ಗೆ ಶಾಸಕ ಸಿದ್ದು ಸವದಿ ಬೇಸರ ವ್ಯಕ್ತ ಪಡಿಸಿದರು.</p>.<p>ಶಾಸಕ ಸಿದ್ದು ಸವದಿ ಮಾತನಾಡಿ, ರಬಕವಿ ಬನಹಟ್ಟಿ ನಗರಸಭೆಗೆ ಖಾಯಂ ಎಂಜಿನಿಯರ್ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ತಿಳಿಸಿದರು. ತಾವು ಕೂಡಾ ಜಿಲ್ಲಾಧಿಕಾರಿ ಜೊತೆಗೆ ಚರ್ಚೆ ಮಾಡುವುದಾಗಿ ತಿಳಿಸಿದರು.</p>.<p>ಸಭೆಯಲ್ಲಿ ಹಲವಾರು ವಿಷಯಗಳಿಗೆ ದೃಢೀಕರಣವನ್ನು ನೀಡುವುದರ ಜೊತೆಗೆ ವಿವಿಧ ಯೋಜನೆಗಳಿಗೆ ಅನುಮತಿಯನ್ನು ಕೂಡಾ ನೀಡಲಾಯಿತು.</p>.<p>ಬನಹಟ್ಟಿ ನಗರದ ಎಸ್ ಬಿ ಐ ಮುಂಭಾಗದಲ್ಲಿರುವ ವೃತ್ತಕ್ಕೆ ಜೇಡರ ದಾಸಿಮಯ್ಯ ನಾಮಕರಣ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.</p>.<p>ಸಭೆಯಲ್ಲಿ ಯಲ್ಲಪ್ಪ ಕಟಗಿ, ಶಿವಾನಂದ ಬುದ್ನಿ, ಅರುಣ ಬುದ್ನಿ, ಸಂಜಯ ತೆಗ್ಗಿ ಯುನಿಸ್ ಚೌಗಲಾ, ಪ್ರಭಾಕರ ಮುಳೆದ, ಗೌರಿ ಮಿಳ್ಳಿ ಮಾತನಾಡಿದರು.</p>.<p>ಇದೇ ಸಂದರ್ಭದಲ್ಲಿ ನಗರಸಭೆಯ ಸದಸ್ಯರು ಇಂಧೋರ ನಗರದ ಅಧ್ಯಯನ ಪ್ರವಾಸದ ಪ್ರಮುಖ ಮಾಹಿತಿಗಳನ್ನು ಸಭೆಯಲ್ಲಿ ಹಂಚಿಕೊಂಡರು.</p>.<p>ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ, ಪೌರಾಯುಕ್ತ ರಮೇಶ ಜಾಧವ, ಬಾಬುರಾವ ಕಮತಗಿ, ಸುನೀಲ ಬಬಲಾದಿ, ಮುಖೇಶ ಬನಹಟ್ಟಿ, ಶೋಭಾ ಹೊಸಮನಿ, ಶಾರೂಕಖಾನ ಖಲೀಫಾ, ಮಹಾವೀರ ದೈಗೊಂಡ ಸೇರಿದಂತೆ ಅನೇಕರು ಇದ್ದರು.</p>
<p><strong>ರಬಕವಿ ಬನಹಟ್ಟಿ</strong>: ನಗರಸಭೆಯಿಂದ ಉತಾರೆಗಳನ್ನು ಮತ್ತು ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಗರಸಭೆಯ ಮೇಲೆ ಸಾಕಷ್ಟು ಆರೋಪಗಳಿವೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಅಧಿಕಾರಿಗಳು ಗಮನ ನೀಡಬೇಕು. ನಗರಸಭೆಯು ಜನಸ್ನೇಹಿಯಾಗಿರಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.</p>.<p>ರಬಕವಿ ಬನಹಟ್ಟಿ ನಗರಸಭೆಯ ಸಭಾಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.</p>.<p>ಎಸ್ಎಫ್ಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗ ಹಾಗೂ 15ನೇ ಹಣಕಾಸು ಯೋಜನೆಯಲ್ಲಿ ಉಳಿತಾಯವಾಗಿರುವ ₹62.80 ಲಕ್ಷ ಹಣದ ಬಳಕೆಗೆ ಸಭೆಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಯಿತು. ನಂತರ ಉಳಿತಾಯದ ಮೊತ್ತವನ್ನು ನಗರಸಭೆಯ 31 ವಾರ್ಡ್ ಗಳಿಗೂ ಬಳಕೆ ಮಾಡುವಂತೆ ನಿರ್ಧಾರ ಕೈಗೊಳ್ಳಲಾಯಿತು.</p>.<p>ನಗರಸಭೆಯ ಪರವಾಣಿಗೆ ಇಲ್ಲದೆ ನಗರಸಭೆಯ ವ್ಯಾಪ್ತಿಯಲ್ಲಿ 250ಕ್ಕೂ ಹೆಚ್ಚು ಅಂಗಡಿಗಳು ಕಾರ್ಯ ಮಾಡುತ್ತಿವೆ. ಇವರು ನಗರಸಭೆಯಿಂದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ನಗರಸಭೆಗೆ ಸಾಕಷ್ಟು ಹಾನಿಯಾಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯ ಬಸವರಾಜ ಗುಡೋಡಗಿ ತಿಳಿಸಿದರು.</p>.<p>ರಬಕವಿ ಬನಹಟ್ಟಿ ನಗರಸಭೆಯ ತೆರಿಗೆ ವಸೂಲಾತಿ ಶೂನ್ಯವಾಗಿದ್ದು, ನಗರಸಭೆಯ ವ್ಯಾಪ್ತಿಯಲ್ಲಿ ಇನ್ನೂ ಸಾಕಷ್ಟು ಶ್ರೀಮಂತರು ತೆರಿಗೆಯನ್ನು ಪಾವತಿಸಿಲ್ಲ. ಅಂಥವರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಲಾಯಿತು. </p>.<p>ಸಿಬ್ಬಂದಿ ಕೊರತೆ: ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಕಾರ್ಯಗಳು ವಿಳಂಬವಾಗುತ್ತಿವೆ. ಮುಖ್ಯವಾಗಿ ನಗರಸಭೆಗೆ ಬೇಕಾಗಿರುವ ಎಂಜಿನಿಯರ್ ಇಲ್ಲದೆ ಇರುವುದರಿಂದ ತಾಂತ್ರಿಕ ಕಾರ್ಯಗಳು ವಿಳಂಬವಾಗುತ್ತಿವೆ ಎಂದು ಸದಸ್ಯರು ತಿಳಿಸಿದರು.</p>.<p>ನಗರಸಭೆಯಿಂದ ಖರೀದಿ ಮಾಡಲಾದ ಹಿತಾಚಿ ವಾಹನ ಬಳೆಯಾಗದೆ ಇರುವುದರ ಬಗ್ಗೆ ಶಾಸಕ ಸಿದ್ದು ಸವದಿ ಬೇಸರ ವ್ಯಕ್ತ ಪಡಿಸಿದರು.</p>.<p>ಶಾಸಕ ಸಿದ್ದು ಸವದಿ ಮಾತನಾಡಿ, ರಬಕವಿ ಬನಹಟ್ಟಿ ನಗರಸಭೆಗೆ ಖಾಯಂ ಎಂಜಿನಿಯರ್ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ತಿಳಿಸಿದರು. ತಾವು ಕೂಡಾ ಜಿಲ್ಲಾಧಿಕಾರಿ ಜೊತೆಗೆ ಚರ್ಚೆ ಮಾಡುವುದಾಗಿ ತಿಳಿಸಿದರು.</p>.<p>ಸಭೆಯಲ್ಲಿ ಹಲವಾರು ವಿಷಯಗಳಿಗೆ ದೃಢೀಕರಣವನ್ನು ನೀಡುವುದರ ಜೊತೆಗೆ ವಿವಿಧ ಯೋಜನೆಗಳಿಗೆ ಅನುಮತಿಯನ್ನು ಕೂಡಾ ನೀಡಲಾಯಿತು.</p>.<p>ಬನಹಟ್ಟಿ ನಗರದ ಎಸ್ ಬಿ ಐ ಮುಂಭಾಗದಲ್ಲಿರುವ ವೃತ್ತಕ್ಕೆ ಜೇಡರ ದಾಸಿಮಯ್ಯ ನಾಮಕರಣ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.</p>.<p>ಸಭೆಯಲ್ಲಿ ಯಲ್ಲಪ್ಪ ಕಟಗಿ, ಶಿವಾನಂದ ಬುದ್ನಿ, ಅರುಣ ಬುದ್ನಿ, ಸಂಜಯ ತೆಗ್ಗಿ ಯುನಿಸ್ ಚೌಗಲಾ, ಪ್ರಭಾಕರ ಮುಳೆದ, ಗೌರಿ ಮಿಳ್ಳಿ ಮಾತನಾಡಿದರು.</p>.<p>ಇದೇ ಸಂದರ್ಭದಲ್ಲಿ ನಗರಸಭೆಯ ಸದಸ್ಯರು ಇಂಧೋರ ನಗರದ ಅಧ್ಯಯನ ಪ್ರವಾಸದ ಪ್ರಮುಖ ಮಾಹಿತಿಗಳನ್ನು ಸಭೆಯಲ್ಲಿ ಹಂಚಿಕೊಂಡರು.</p>.<p>ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ, ಪೌರಾಯುಕ್ತ ರಮೇಶ ಜಾಧವ, ಬಾಬುರಾವ ಕಮತಗಿ, ಸುನೀಲ ಬಬಲಾದಿ, ಮುಖೇಶ ಬನಹಟ್ಟಿ, ಶೋಭಾ ಹೊಸಮನಿ, ಶಾರೂಕಖಾನ ಖಲೀಫಾ, ಮಹಾವೀರ ದೈಗೊಂಡ ಸೇರಿದಂತೆ ಅನೇಕರು ಇದ್ದರು.</p>