<p><strong>ಹುನಗುಂದ</strong>: ಜಮೀನು ಹಕ್ಕು ವರ್ಗಾವಣೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಅಡಿಹಾಳ–ಧನ್ನೂರ ಗ್ರಾಮ ಲೆಕ್ಕಾಧಿಕಾರಿ ವಿಜಯ ಶಹಾಪುರಕರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.</p>.<p>ತಾಲ್ಲೂಕಿನ ಇದ್ದಲಗಿ ಗ್ರಾಮದ ಸಂಗಪ್ಪ ಶಿವಪ್ಪ ಗೌಡರ ಅವರು ತಮ್ಮ ಮಗ ಶರಣಪ್ಪ ಗೌಡರ ಹೆರಿಗೆ ಅಡಿಹಾಳ ಗ್ರಾಮದ ಸರ್ವೆ ನಂ. 35/45 ರಲ್ಲಿನ 3.15 ಎಕರೆ ಜಮೀನು ಹಕ್ಕು ವರ್ಗಾವಣೆ ಮಾಡಿಕೊಡಲು ಗ್ರಾಮಲೆಕ್ಕಾಧಿಕಾರಿಗೆ ಮನವಿ ಮಾಡಿದ್ದರು. ಇದಕ್ಕೆ ಗ್ರಾಮ ಲೆಕ್ಕಾಧಿಕಾರಿ ಶಹಾಪುರಕರ್ ₹20ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಚೌಕಾಸಿ ಮಾಡಿದ ನಂತರ ₹15 ಸಾವಿರ ನೀಡಲು ಮಾತುಕತೆಯಾಗಿತ್ತು.</p>.<p>ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಡಿಯೋ ಸಂಭಾಷಣೆಯನ್ನು ರೈತ ಸಂಗಪ್ಪ ಶಿವಪ್ಪ ಗೌಡರ ಅವರು ಎಸಿಬಿಗೆ ನೀಡಿದ್ದರು. ಬುಧವಾರ ಪಟ್ಟಣದ ಚಿತ್ತವಾಡಗಿ ರಸ್ತೆಯ ಕಚೇರಿಯಲ್ಲಿ ₹7 ಸಾವಿರ ಲಂಚ ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದರು.</p>.<p>ಎಸಿಬಿ ಡಿ.ಎಸ್.ಪಿ. ವಿಜಯಕುಮಾರ ಬಿಸನಹಳ್ಳಿ, ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ, ಚಂದ್ರಶೇಖರ ಮಠಪತಿ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುನಗುಂದ</strong>: ಜಮೀನು ಹಕ್ಕು ವರ್ಗಾವಣೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಅಡಿಹಾಳ–ಧನ್ನೂರ ಗ್ರಾಮ ಲೆಕ್ಕಾಧಿಕಾರಿ ವಿಜಯ ಶಹಾಪುರಕರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.</p>.<p>ತಾಲ್ಲೂಕಿನ ಇದ್ದಲಗಿ ಗ್ರಾಮದ ಸಂಗಪ್ಪ ಶಿವಪ್ಪ ಗೌಡರ ಅವರು ತಮ್ಮ ಮಗ ಶರಣಪ್ಪ ಗೌಡರ ಹೆರಿಗೆ ಅಡಿಹಾಳ ಗ್ರಾಮದ ಸರ್ವೆ ನಂ. 35/45 ರಲ್ಲಿನ 3.15 ಎಕರೆ ಜಮೀನು ಹಕ್ಕು ವರ್ಗಾವಣೆ ಮಾಡಿಕೊಡಲು ಗ್ರಾಮಲೆಕ್ಕಾಧಿಕಾರಿಗೆ ಮನವಿ ಮಾಡಿದ್ದರು. ಇದಕ್ಕೆ ಗ್ರಾಮ ಲೆಕ್ಕಾಧಿಕಾರಿ ಶಹಾಪುರಕರ್ ₹20ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಚೌಕಾಸಿ ಮಾಡಿದ ನಂತರ ₹15 ಸಾವಿರ ನೀಡಲು ಮಾತುಕತೆಯಾಗಿತ್ತು.</p>.<p>ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಡಿಯೋ ಸಂಭಾಷಣೆಯನ್ನು ರೈತ ಸಂಗಪ್ಪ ಶಿವಪ್ಪ ಗೌಡರ ಅವರು ಎಸಿಬಿಗೆ ನೀಡಿದ್ದರು. ಬುಧವಾರ ಪಟ್ಟಣದ ಚಿತ್ತವಾಡಗಿ ರಸ್ತೆಯ ಕಚೇರಿಯಲ್ಲಿ ₹7 ಸಾವಿರ ಲಂಚ ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದರು.</p>.<p>ಎಸಿಬಿ ಡಿ.ಎಸ್.ಪಿ. ವಿಜಯಕುಮಾರ ಬಿಸನಹಳ್ಳಿ, ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ, ಚಂದ್ರಶೇಖರ ಮಠಪತಿ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>